ಆ್ಯಪ್ನಗರ

ಕನ್ನಡತಿ ಧಾರಾವಾಹಿ: ಹರ್ಷ, ಸಾನಿಯಾರನ್ನು ಸಾಯಿಸಿ ತಾನೂ ಸಾಯುವ ಪ್ಲ್ಯಾನ್‌ನಲ್ಲಿ ವರೂಧಿನಿ!

ಕನ್ನಡತಿ ಧಾರಾವಾಹಿಯಲ್ಲಿ ತ್ರಿಕೋನ ಪ್ರೇಮಕಥೆಯಿದೆ. ಹರ್ಷನನ್ನು ಪಡೆಯಲೇಬೇಕು ಎಂಬ ಹುಚ್ಚು ಹಠ ವರೂಧಿನಿಗಿದೆ. ಆದರೆ ಈಗ ಅವಳು ಹೀರೋ, ಸಾನಿಯಾಳನ್ನು ಸಾಯಿಸಿ ತಾನೂ ಸಾಯುವ ಪ್ಲ್ಯಾನ್ ಮಾಡಿದ್ದಾಳೆ. ಯಾಕಂತೆ?

Authored byಟೀನಾ | Vijaya Karnataka Web 21 Feb 2021, 11:53 am
'ಕನ್ನಡತಿ' ಧಾರಾವಾಹಿ ಅನೇಕ ಕಾರಣಕ್ಕೆ ಜನರಿಗೆ ಇಷ್ಟವಾಗಿದೆ. ಈಗಾಗಲೇ ಊಹೆಗೂ ಮೀರಿದ ಟ್ವಿಸ್ಟ್‌ಗಳು ಅದರಲ್ಲಿ ಎದುರಾಗಿವೆ, ಅಂತೆಯೇ ಇನ್ನೊಂದು ಆಶ್ಚರ್ಯಕರವಾದ ಬೆಳವಣಿಗೆ ನಡೆಯಲಿದೆ. ಏನದು?
Vijaya Karnataka Web famous kannadathi serial harsha marriage with bhuvi or varudhini
ಕನ್ನಡತಿ ಧಾರಾವಾಹಿ: ಹರ್ಷ, ಸಾನಿಯಾರನ್ನು ಸಾಯಿಸಿ ತಾನೂ ಸಾಯುವ ಪ್ಲ್ಯಾನ್‌ನಲ್ಲಿ ವರೂಧಿನಿ!


ಹರ್ಷನನ್ನು ವರೂಧಿನಿ ತುಂಬ ಪ್ರೀತಿ ಮಾಡುತ್ತಾಳೆ. ಅವಳದು ಅಂತಿಂಥ ಪ್ರೀತಿಯಲ್ಲ, ತನಗೇ ಬೇಕು ಎನ್ನುವ ಹುಚ್ಚು ಪ್ರೀತಿ. ಇನ್ನು ಈ ವಿಚಾರ ಸಾನಿಯಾ, ಭುವಿಗೆ ಮಾತ್ರ ಗೊತ್ತಿದೆ. ಭುವಿಗೆ ಹರ್ಷ ಅಂದರೆ ತುಂಬ ಇಷ್ಟ, ಹರ್ಷನಿಗೂ ಭುವಿ ಅಂದರೆ ಪ್ರೀತಿ. ಈ ತ್ರಿಕೋನ ಪ್ರೇಮಕಥೆಯಲ್ಲಿ ಹರ್ಷ ಯಾರ ಪಾಲಾಗುತ್ತಾನೆ ಎಂಬುದೇ ಮಿಲಿಯನ್ ಡಾಲರ್ ಪ್ರಶ್ನೆ.

ವರೂಧಿನಿ ಜೈಲಿನಿಂದ ಹೊರಗಡೆ ಬಂದಿದ್ದಾಳೆ. ಸಾನಿಯಾ ಮೇಲೆ ಸೇಡು ತೀರಿಸಿಕೊಳ್ಳಲು ಅವಳು ರೆಡಿಯಾಗಿದ್ದಾಳೆ. ಈಗಾಗಲೇ ಒಂದು ಝಲಕ್ ಕೂಡ ತೋರಿಸಿದ್ದಾಳೆ. ಆದರೆ ಇಷ್ಟಕ್ಕೆ ಇದೆಲ್ಲ ಮುಗಿದಿಲ್ಲ. ತನ್ನ ಪ್ರೀತಿ ತನಗೆ ಮಾತ್ರ ಸಿಗಬೇಕು ಎನ್ನುವ ವರೂಧಿನಿ ಪ್ರೀತಿಗಾಗಿ ಏನು ಬೇಕಾದರೂ ಮಾಡುತ್ತಾಳೆ. ಅದು ಸಾಯಿಸುವ ಮಟ್ಟಿಗೆ ಅಂದರೆ ಏನು ಅನ್ನೋಣ? ಹರ್ಷ ಹಾಗೂ ಭುವಿ ಹೊರಗಡೆ ಹೋಗಿದ್ದಾರೆ. 'ಪ್ರೇಮಿಗಳ ದಿನ'ದಂದೇ ಇವರಿಬ್ಬರೂ ರೆಸ್ಟೋರೆಂಟ್‌ಗೆ ಹೋಗಿದ್ದಾರೆ. ಆದರೆ ಪ್ರೀತಿ ಮಾತು ಹಂಚಿಕೊಂಡಿಲ್ಲ. ಮನದಲ್ಲಿನ ಪ್ರೀತಿ ಅವರಿಬ್ಬರ ಗಂಟಲಲ್ಲಿಯೇ ಉಳಿದುಹೋಗಿದೆ. ಹರ್ಷ ಅಂತೂ ತುಂಬ ಖುಷಿಯಾಗಿದ್ದಾನೆ, ಭುವಿಗೆ ಮುಜುಗರ.

Also Read-ರಿಯಲ್ ಲೈಫ್‌ ಅಮ್ಮನ ಭಾವುಕ ಪತ್ರ ಓದಿದ 'ಕನ್ನಡತಿ' ಧಾರಾವಾಹಿ ನಟ ಕಿರಣ್ ರಾಜ್ ಕಣ್ಣಾಲೆ ಒದ್ದೆ!

ವರೂಧಿನಿ ಮೂರು ಕೊಲೆ ಮಾಡೋದಾಗಿ ಭುವಿಗೆ ಹೇಳಿದ್ದಾಳೆ. ಯಾಕೆ? 'ಪ್ರೇಮಿಗಳ ದಿನ'ದಂದು ತನ್ನ ಹೀರೋ ಏನೂ ಉಡುಗೊರೆ ನೀಡಿಲ್ಲ, ಭೇಟಿ ಮಾಡಿಲ್ಲ ಎಂಬ ಕಾರಣಕ್ಕೆ ವರೂಧಿನಿ, ಸಾನಿಯಾ, ಹೀರೋನನ್ನು ಸಾಯಿಸಿ ತಾನೂ ಸಾಯುವ ಆಲೋಚನೆ ಮಾಡಿದ್ದಾಳೆ. ತನ್ನನ್ನು ಜೈಲಿಗೆ ಕಳಿಸಿದ ಸಾನಿಯಾ ಸಾಯಬೇಕು, ತನ್ನ ಹೀರೋ ತನಗೆ ಸಿಗಲ್ಲ ಅಂದರೆ ಬೇರೆಯವರಿಗೆ ಸಿಗಬಾರದು ಎಂಬ ಸ್ಥಾರ್ಥ ಪ್ರೀತಿ ವರೂಧಿನಿಗಿದೆ. ಹೀಗಾಗಿ ಇವರಿಬ್ಬರನ್ನೂ ಸಾಯಿಸಿ ತಾನು ಸಾಯುವ ಆಲೋಚನೆ ವರೂಧಿನಿಗೆ ಬಂದಿರಬಹುದು. ಮುಂದಿನ ಎಪಿಸೋಡ್‌ನಲ್ಲಿ ಈ ಬಗ್ಗೆ ಪ್ರಸಾರ ಇರಲಿದೆ.

Also Read-'ಕನ್ನಡತಿ'ಗೆ ಒಂದು ವರ್ಷ; ವಿಶೇಷ ಸೋಶಿಯಲ್ ಮೀಡಿಯಾ ಪೋಸ್ಟ್ ಹಾಕಿದ ನಟಿ ಚಿತ್ಕಲಾ ಬಿರಾದಾರ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ