ಆ್ಯಪ್ನಗರ

ನಟ ನೀನಾಸಂ ಅಶ್ವತ್ಥ್ ವಿರುದ್ಧ ದೂರು ದಾಖಲು; ಕಾರಣವೇನು?

ಕನ್ನಡ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ನಟಿಸಿರುವ ನಟ ನೀನಾಸಂ ಅಶ್ವತ್ಥ ವಿರುದ್ಧ ಮೈಸೂರಿನ ಬನ್ನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.

Authored byಟೀನಾ | Vijaya Karnataka Web 23 Feb 2021, 11:38 am

ಹೈಲೈಟ್ಸ್‌:

  • ಕನ್ನಡ ಸಿನಿಮಾ, ಧಾರಾವಾಹಿಗಳಲ್ಲಿ ನೀನಾಸಂ ಅಶ್ವತ್ಥ್ ನಟಿಸಿದ್ದಾರೆ
  • ಮೈಸೂರಿನ ಬನ್ನೂರು ಪೊಲೀಸ್ ಠಾಣೆಯಲ್ಲಿ ನೀನಾಸಂ ಅಶ್ವತ್ಥ್ ವಿರುದ್ಧ ದೂರು ದಾಖಲಾಗಿದೆ
  • ಈ ಹಿಂದೆಯೂ ನೀನಾಸಂ ಅಶ್ವತ್ಥ್ ವಿರುದ್ಧ ಕೆಲ ಆರೋಪ ಕೇಳಿಬಂದಿತ್ತು
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web fir filed against geetha serial actor neenasam ashwath
ನಟ ನೀನಾಸಂ ಅಶ್ವತ್ಥ್ ವಿರುದ್ಧ ದೂರು ದಾಖಲು; ಕಾರಣವೇನು?
ಮೈಸೂರು: ಅವಾಚ್ಯ ಶಬ್ದಗಳಿಂದ ಬೈಯ್ದು ಕೊಲೆ ಬೆದರಿಕೆ ಹಾಕಿದ ಆರೋಪದ ಮೇಲೆ ನಟ ನೀನಾಸಂ ಅಶ್ವತ್ಥ ವಿರುದ್ಧ ಮೈಸೂರಿನ ಬನ್ನೂರು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬನ್ನೂರು ಬಳಿಯಿರುವ ಯಾಚೇನಹಳ್ಳಿಯಲ್ಲಿರುವ ನೀನಾಸಂ ಅಶ್ವತ್ಥ ಅವರ ಫಾರ್ಮ್‌ ಹೌಸ್‌ನಿಂದ ಅಕ್ಷಯ ಕಲ್ಪಫುಡ್‌ ಕಂಪನಿಗೆ ಸರಬರಾಜು ಮಾಡುತ್ತಿರುವ ಹಾಲಿನ ಗುಣಮಟ್ಟ ಸರಿಯಿಲ್ಲ. ಅದು ಕಳೆಪೆಯದ್ದಾಗಿದೆ ಎಂದು ಕಂಪನಿಯ ಏರಿಯಾ ಇನ್‌ಚಾರ್ಜ್‌ ಅಧಿಕಾರಿ ಲೋಕೇಶ್‌ ಹಾಲನ್ನು ಕೆಲ ದಿನಗಳ ಹಿಂದಷ್ಟೇ ತಿರಸ್ಕರಿಸಿದ್ದರು. ಈ ಕಾರಣಕ್ಕೆ ಖುದ್ದು ನೀನಾಸಂ ಅಶ್ವತ್ಥ್ ಹಾಗೂ ಇವರ ಸ್ನೇಹಿತ ಅಶೋಕ್‌ ಕುಲಕರ್ಣಿ ಅವರು ಕಂಪನಿಯ ನಾಗೇಶ್‌ ಎಂಬುವವರಿಗೆ ಕರೆ ಮಾಡಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಕೊಲೆ ಬೆದರಿಕೆ ಒಡ್ಡಿದ್ದಾರೆ ಎನ್ನಲಾಗಿದೆ.

ಈ ಪ್ರಕರಣದ ಕುರಿತು ಲೋಕೇಶ್‌ ದೂರು ದಾಖಲಿಸಿದ್ದಾಗಿ ಬನ್ನೂರು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಕೆಲ ದಿನಗಳ ಹಿಂದೆ ಅಸ್ವತ್ಥ್ ಅವರ ಬಳಿ ಕೆಲಸ ಮಾಡುತ್ತಿದ್ದವರು ಕೂಡ ಅಶ್ವತ್ಥ್ ವಿರುದ್ದ ಮನೆಗೆ ಹೋಗಲು ರಜೆ ಕೊಡುತ್ತಿಲ್ಲ ಎಂದು ಆರೋಪ ಮಾಡಿದ್ದರು. ಮಂಡ್ಯ ಜಿಲ್ಲೆಯ ಯಾಚನಹಳ್ಳಿ ಫಾರ್ಮ್‌ಹೌಸ್‌ನಲ್ಲಿ ಕೆಲಸ ಮಾಡುತ್ತಿರುವ ಎರಡು ಕುಟುಂಬಗಳು ಅಶ್ವತ್ಥ್ ವಿರುದ್ಧ ಆರೋಪ ಮಾಡಿದ್ದವು.

Also Read-ಈ ವಾರ ಬಿಡುಗಡೆಯಾಗುತ್ತಿರುವ ಕನ್ನಡ ಸಿನಿಮಾ

2018ರಲ್ಲಿ ಸ್ನೇಹಿತನಿಗೆ 18 ಲಕ್ಷ ರೂಪಾಯಿ ವಂಚನೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿತ್ತು. ಪ್ರಸ್ತುತ ಅವರು 'ಗೀತಾ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

Also Read-ಬೈಕ್ ಸುತ್ತ ಪ್ರೀತಿ ಪ್ರೇಮ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ