ಆ್ಯಪ್ನಗರ

ಬಿಗ್‌ ಬಾಸ್‌ನಿಂದ ಸಿಸಿಬಿವರೆಗೆ ಅಕುಲ್ ಬಾಲಾಜಿ ಮಾಡಿಕೊಂಡ ವಿವಾದ ಒಂದಾ ಎರಡಾ? ಇಲ್ಲಿದೆ ಡಿಟೇಲ್ಸ್‌!

ಸ್ಯಾಂಡಲ್‌ವುಡ್‌ ಡ್ರಗ್‌ ಮಾಫಿಯಾಗೆ ಸಂಬಂಧಿಸಿದಂತೆ ನಟ-ನಿರೂಪಕ ಅಕುಲ್‌ ಬಾಲಾಜಿ ವಿಚಾರಣೆ ಎದುರಿಸುತ್ತಿದ್ದಾರೆ. ಈ ಹಿಂದೆಯೂ ಅವರು ಕೆಲವು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ಅವುಗಳ ಬಗ್ಗೆ ಇಲ್ಲಿದೆ ಮಾಹಿತಿ..

Vijaya Karnataka Web 22 Sep 2020, 3:07 pm
ಮೂಲತಃ ಆಂಧ್ರದವರಾದರೂ ನಟ-ನಿರೂಪಕ ಸೆಟ್ಲ್‌ ಆಗಿರುವುದು ಕರ್ನಾಟಕದಲ್ಲಿ. ಕನ್ನಡ ಕಿರುತೆರೆ ಮತ್ತು ಸಿನಿಮಾ ಲೋಕ ಅವರ ಕೈ ಹಿಡಿದಿದೆ. ರಿಯಾಲಿಟಿ ಶೋಗಳನ್ನು ನಿರೂಪಣೆ ಮಾಡಿರುವುದು ಮಾತ್ರವಲ್ಲದೆ, ಸ್ವತಃ ಸ್ಪರ್ಧಿಯಾಗಿಯೂ ಅವರು ಜನರ ಗಮನ ಸೆಳೆದಿದ್ದರು. ಈ ನಡುವೆ ಕೆಲವು ಕಿರಿಕ್‌ಗಳನ್ನೂ ಮಾಡಿಕೊಂಡರು. ಅಕುಲ್‌ ಹೆಸರಿನಲ್ಲಿ ಆದ ಪ್ರಮುಖ ವಿವಾದಗಳನ್ನು ಮೆಲುಕು ಹಾಕುವುದಾದರೆ...
Vijaya Karnataka Web ಅಕುಲ್ ಬಾಲಾಜಿ


ವಿವಾದ 1: ಪ್ಯಾಟೆ ಹುಡ್ಗೀರ್‌ ಕಿರಿಕ್‌
'ಪ್ಯಾಟೆ ಹುಡ್ಗೀರ್‌ ಹಳ್ಳಿ ಲೈಫ್‌' ಎರಡನೇ ಸೀಸನ್‌ನಲ್ಲಿ ಸ್ಪರ್ಧಿಯಾಗಿದ್ದ ಅಕ್ಷತಾ ಅವರು ಅಕುಲ್‌ ವಿರುದ್ಧ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿದ್ದರು. ಆ ಕಾರ್ಯಕ್ರಮಕ್ಕೆ ಅಕುಲ್‌ ನಿರೂಪಕ ಆಗಿದ್ದರು. ತಮಗೆ ಮಾನಸಿಕವಾಗಿ ಹಿಂಸೆ ಕೊಡಲಾಗಿದೆ. ಪಕ್ಷಪಾತದ ವಿರುದ್ಧ ಧ್ವನಿ ಎತ್ತಿದ್ದಕ್ಕಾಗಿ ತಮಗೆ ಈ ರೀತಿ ಮಾಡಲಾಗುತ್ತಿದೆ ಎಂದು ಅಕ್ಷತಾ ವಿವಾದ ಎಬ್ಬಿಸಿದ್ದರು.

ವಿವಾದ 2: ಬಿಗ್‌ ಬಾಸ್‌ ಮನೆಯೊಳಗೆ ಜಗಳ
'ಬಿಗ್‌ ಬಾಸ್‌' ಕನ್ನಡ ಎರಡನೇ ಸೀಸನ್‌ನಲ್ಲಿ ಅಕುಲ್‌ ಬಾಲಾಜಿ ಸ್ಪರ್ಧಿಸಿದ್ದರು. ಆಗ ಅವರು ಅನೇಕ ಕಾರಣಗಳಿಗಾಗಿ ಸುದ್ದಿ ಆಗುತ್ತಿದ್ದರು. ದೊಡ್ಮನೆಯೊಳಗೆ ಇದ್ದಾಗ ನಟಿ ನೀತು ಜೊತೆ ಅವರು ಕಿರಿಕ್ ಮಾಡಿಕೊಂಡಿದ್ದರು. ತಮಗೆ ಅಕುಲ್‌ ಅಗೌರವ ತೋರುತ್ತಾರೆ ಮತ್ತು ಅಪಹಾಸ್ಯ ಮಾಡುತ್ತಾರೆ ಎಂದು ನೀತು ಆರೋಪಿಸಿದ್ದರು. ಬಳಿಕ ಅಕುಲ್‌ ತಮ್ಮ ತಪ್ಪು ತಿದ್ದಿಕೊಂಡಿದ್ದರು.

also read: ಸರಕಾರಿ ಶಾಲೆ ದತ್ತು ಪಡೆದ ಟಿವಿ ನಿರೂಪಕ ಅಕುಲ್ ಬಾಲಾಜಿ

ವಿವಾದ 3: ಆಡಂ ಪಾಶಗೆ ಅಪಹಾಸ್ಯ?
ಅಕುಲ್‌ ಬಾಲಾಜಿ ನಿರೂಪಿಸುತ್ತಿದ್ದ 'ತಕಧಿಮಿಥಾ' ಡ್ಯಾನ್ಸ್‌ ರಿಯಾಲಿಟಿ ಶೋ ಆರಂಭ ಆದ ಎರಡೇ ವಾರಕ್ಕೆ ವಿವಾದ ಭುಗಿಲೆದ್ದಿತ್ತು. ಲಿಂಗ ತಾರತಮ್ಯ ಮಾಡಲಾಗುತ್ತಿದೆ ಎಂದು ಆರೋಪಿಸಿ ಆಡಂ ಪಾಶ ಈ ಶೋನಿಂದ ಹೊರ ಹೋಗಲು ನಿರ್ಧರಿಸಿದ್ದರು. ಅಕುಲ್ ಬಾಲಾಜಿ ವಿರುದ್ಧ ದೂರು ದಾಖಲಿಸುವುದಾಗಿಯೂ ಅವರು ಹೇಳಿದ್ದರು. ಆಡಂ ಅವರ ಬಗ್ಗೆ ಅಕುಲ್‌ ಅಪಹಾಸ್ಯ ಮಾಡಿದ್ದರು ಎಂಬ ಮಾತು ಕೇಳಿಬಂದಿತ್ತು.

also read: ಲಾಕ್‌ ಡೌನ್ ಆದೇಶ ಉಲ್ಲಂಘನೆ ಮಾಡಿದ ನಿರೂಪಕ ಅಕುಲ್ ಬಾಲಾಜಿ ವಿರುದ್ಧ ದೂರು ದಾಖಲು; ಇವರು ಮಾಡಿದ ತಪ್ಪೇನು?

ವಿವಾದ 4: ಲಾಕ್‌ಡೌನ್‌ ನಿಮಯ ಉಲ್ಲಂಘನೆ
ಕೊರೊನಾ ವೈರಸ್‌ ಕಾರಣದಿಂದ ದೇಶಾದ್ಯಂತ ಲಾಕ್‌ಡೌನ್‌ ಜಾರಿಯಾಗಿದ್ದ ಸಂದರ್ಭದಲ್ಲಿ ಅಕುಲ್‌ ಬಾಲಾಜಿಗೆ ಸೇರಿದ ರೆಸಾರ್ಟ್‌ನಲ್ಲಿ ಮದುವೆ ಸಮಾರಂಭ ಮಾಡಲಾಯಿತು ಎಂಬ ಆರೋಪ ಕೇಳಿಬಂತು. ಈ ಸಂಬಂಧ ದೊಡ್ಡಬಳ್ಳಾಪುರ ಪೊಲೀಸರು ದೂರು ದಾಖಲಿಸಿದ್ದರು. 20ಕ್ಕೂ ಅಧಿಕ ಜನರು ಮಧ್ಯರಾತ್ರಿ ಆ ರೆಸಾರ್ಟ್‌ಗೆ ಬರುತ್ತಿರುವುದನ್ನು ಗಮನಿಸಿದ ಗ್ರಾಮಸ್ಥರು ಪೊಲೀಸರಿಗೆ ಮಾಹಿತಿ ನೀಡಿದ್ದರು ಎಂದು ವರದಿ ಆಗಿತ್ತು.

also read: ಡ್ರಗ್ಸ್‌ ಮಾಫಿಯಾ: ಸಿಸಿಬಿ ಕಚೇರಿಯಲ್ಲಿ ವಿಚಾರಣೆಗೆ ಹಾಜರಾದ ಅಕುಲ್‌ ಬಾಲಾಜಿ, ನಟ ಸಂತೋಷ್‌ ಕುಮಾರ್‌!

ವಿವಾದ 5: ಸಿಸಿಬಿ ಕಚೇರಿ ಮೆಟ್ಟಿಲೇರಿದ ಅಕುಲ್‌
ಮಾದಕ ವಸ್ತು ಜಾಲಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್‌ನ ಅನೇಕರಿಗೆ ಸಿಸಿಬಿ ಅಧಿಕಾರಿಗಳು ನೋಟಿಸ್‌ ನೀಡಿದರು. ಅದರಲ್ಲಿ ಅಕುಲ್‌ ಬಾಲಾಜಿ ಹೆಸರು ಕೂಡ ಇತ್ತು. ನಿಗದಿತ ಸಮಯಕ್ಕೆ ಸರಿಯಾಗಿ ಸಿಸಿಬಿ ಕಚೇರಿಗೆ ಆಗಮಿಸಿದ ಅಕುಲ್‌ ಅವರು ಅಧಿಕಾರಿಗಳು ಕೇಳಿದ ಪ್ರಶ್ನೆಗೆ ಉತ್ತರಿಸಿದರು. 7 ಗಂಟೆಗಳಿಗೂ ಹೆಚ್ಚು ಕಾಲ ಅಧಿಕಾರಿಗಳು ಅವರನ್ನು ವಿಚಾರಣೆಗೆ ಒಳಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ