ಆ್ಯಪ್ನಗರ

ಕಾಮಿಡಿ ಕಿಲಾಡಿಗಳು ಶೋನಲ್ಲಿ ಗಂಗಾವತಿ ಪ್ರಾಣೇಶ್

ಖ್ಯಾತ ಹಾಸ್ಯ ಕಲಾವಿದ, ನಗೆಗಾರ ಗಂಗಾವತಿ ಪ್ರಾಣೇಶ್ ಈ ವಾರದ ಕಾಮಿಡಿ ಕಿಲಾಡಿಗಳು ಚಾಂಪಿಯನ್‍ಶಿಪ್‌ನಲ್ಲಿ ಭಾಗಿಯಾಗುತ್ತಿದ್ದಾರೆ. ಇದೇ ಶನಿವಾರ (ಜು.21) ಮತ್ತು ಭಾನುವಾರ (ಜು.22) ರಾತ್ರಿ 9ಕ್ಕೆ ಪ್ರಸಾರವಾಗುವ ಎಪಿಸೋಡ್‌ನಲ್ಲಿ ಕಿರುತೆರೆ ವೀಕ್ಷಕರನ್ನು ಹೊಟ್ಟೆ ತುಂಬ ನಗಿಸಲಿದ್ದಾರೆ.

TIMESOFINDIA.COM 19 Jul 2018, 5:47 pm
ಖ್ಯಾತ ಹಾಸ್ಯ ಕಲಾವಿದ, ನಗೆಗಾರ ಗಂಗಾವತಿ ಪ್ರಾಣೇಶ್ ಈ ವಾರದ ಕಾಮಿಡಿ ಕಿಲಾಡಿಗಳು ಚಾಂಪಿಯನ್‍ಶಿಪ್‌ನಲ್ಲಿ ಭಾಗಿಯಾಗುತ್ತಿದ್ದಾರೆ. ಇದೇ ಶನಿವಾರ (ಜು.21) ಮತ್ತು ಭಾನುವಾರ (ಜು.22) ರಾತ್ರಿ 9ಕ್ಕೆ ಪ್ರಸಾರವಾಗುವ ಎಪಿಸೋಡ್‌ನಲ್ಲಿ ಕಿರುತೆರೆ ವೀಕ್ಷಕರನ್ನು ಹೊಟ್ಟೆ ತುಂಬ ನಗಿಸಲಿದ್ದಾರೆ.
Vijaya Karnataka Web gangavati-pranesh


ಗಂಗಾವತಿ ಪ್ರಾಣೇಶ್ ಅವರನ್ನು ಶೋನ ತೀರ್ಪುಗಾರರು ಹಾಗೂ ಸ್ಪರ್ಧಿಗಳು ಆದರಿಂದ ಬರಮಾಡಿಕೊಂಡಿದ್ದು, ಗಂಡ ಹೆಂಡತಿ ಬಗ್ಗೆ ಹಾಸ್ಯ ಚಟಾಕಿಗಳನ್ನು ಸಿಡಿಸಿ ಎಲ್ಲರನ್ನೂ ನಕ್ಕುನಲಿಸಿದ್ದಾರೆ. ಕುಟುಂಬ ಸಮೇತ ಪ್ರಾಣೇಶ್ ಅವರ ಕಾಮಿಡಿ ಝಲಕ್ ಈ ವಾರಾಂತ್ಯ ಸವಿಯಬಹುದು.

ರಕ್ಷಿತಾ, ಜಗ್ಗೇಶ್ ಮತ್ತು ಯೋಗರಾಜ್ ಭಟ್ ಈ ಶೋನ ತೀರ್ಪುಗಾರರಾಗಿದ್ದು, ಮಾಸ್ಟರ್ ಆನಂದ್ ನಿರೂಪಣೆ ಇದೆ. ಈ ಹಿಂದಿನ ಎಡಿಷನ್ ಸ್ಪರ್ಧಿಗಳಾದ ಕೆ ಆರ್ ಪೇಟೆ ಶಿವರಾಜ್, ನಯನಾ, ಸೂರಜ್ ಮತ್ತು ಅಪ್ಪಣ್ಣ ಸಹ ಕೆಲವು ತಂಡಗಳಲ್ಲಿ ಕಾಣಿಸಿಕೊಂಡಿದ್ದಾರೆ.

'ಕಾಮಿಡಿ ಕಿಲಾಡಿಗಳಿಗೆ ಕೇವಲ ಕರ್ನಾಟಕದಲ್ಲಿ ಅಷ್ಟೇ ಅಲ್ಲ, ದೇಶ ವಿದೇಶಗಳಲ್ಲೂ ಪ್ರೇಕ್ಷಕರು ಇದ್ದಾರೆ. ಎಲ್ಲರಿಗೂ ಅರ್ಥವಾಗುವ ಸರಳ ಭಾಷೆಯೆಂದರೆ ಅದು ನಗು. ಅದಕ್ಕೆ ಕೊನೆಯೇ ಇಲ್ಲ ಎಂಬ ಸೂತ್ರವನ್ನಿಟ್ಟುಕೊಂಡು ಶೋ ಡಿಸೈನ್‌ ಮಾಡಲಾಗಿದೆ. ಈ ಬಾರಿ ಮತ್ತಷ್ಟು ವಿಶೇಷತೆಗಳೊಂದಿಗೆ ಕಿಲಾಡಿಗಳು ನಗಿಸಲು ಸಿದ್ಧರಾಗಿದ್ದಾರೆ. ವೀಕೆಂಡ್‌ನಲ್ಲಿ ಕಾಮಿಡಿ ಹಬ್ಬವೇ ಇರಲಿದೆ' ಎನ್ನುವುದು ಜೀ ಕನ್ನಡ ವಾಹಿನಿಯ ಮುಖ್ಯಸ್ಥ ರಾಘವೇಂದ್ರ ಹುಣಸೂರು ಮಾತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ