ಆ್ಯಪ್ನಗರ

ಗಟ್ಟಿಮೇಳ ಧಾರಾವಾಹಿ: ಅಮ್ಮನಿಗಾಗಿ ಅಮೂಲ್ಯ ಬಿಟ್ಟು ಸಾಹಿತ್ಯಾಳ ಜೊತೆ ವೇದಾಂತ್ ಮದುವೆ?

'ಗಟ್ಟಿಮೇಳ' ಧಾರಾವಾಹಿಯಲ್ಲಿ ವೇದಾಂತ್ ಮದುವೆ ಸಾಹಿತ್ಯ ಜೊತೆ ಫಿಕ್ಸ್ ಆಗಿದೆ. ಹಾಗಾದರೆ ವೇದಾಂತ್‌ ಅಮೂಲ್ಯಳನ್ನು ಮದುವೆಯಾಗುತ್ತಾನಾ? ಅಮ್ಮನ ಒತ್ತಾಯಕ್ಕೆ ಸಾಹಿತ್ಯಳನ್ನು ಮದುವೆಯಾಗ್ತಾನಾ? ಎಂಬ ಪ್ರಶ್ನೆಗೆ ಇಲ್ಲಿದೆ ಮಾಹಿತಿ

Vijaya Karnataka Web 22 Jul 2020, 2:49 pm
ಹಲವು ತಿಂಗಳುಗಳಿಂದ 'ಗಟ್ಟಿಮೇಳ' ಧಾರಾವಾಹಿ ಟಿಆರ್‌ಪಿಯಲ್ಲಿ ಮಾತ್ರ ಯಾವುದೇ ರಾಜಿ ಮಾಡಿಕೊಳ್ಳದೆ, ನಂಬರ್ 1 ಸ್ಥಾನದಲ್ಲಿದ್ದುಕೊಂಡು ಬೀಗುತ್ತಿದೆ. ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್ ನೀಡುತ್ತ, ಪ್ರೇಕ್ಷಕರಲ್ಲಿ ಇದು ಕುತೂಹಲವನ್ನು ಹೆಚ್ಚಿಸುತ್ತಿದೆ. ಈಗ ವೇದಾಂತ್ ಮದುವೆಯಾಗುವ ಸಮಯ ಬಂದಿದೆ.
Vijaya Karnataka Web gattimela kannada serial 23 july 2020 written updates vedanth weds amulya or sahitya
ಗಟ್ಟಿಮೇಳ ಧಾರಾವಾಹಿ: ಅಮ್ಮನಿಗಾಗಿ ಅಮೂಲ್ಯ ಬಿಟ್ಟು ಸಾಹಿತ್ಯಾಳ ಜೊತೆ ವೇದಾಂತ್ ಮದುವೆ?


ಅಮೂಲ್ಯಗೆ ಪ್ರೇಮ ನಿವೇದನೆ ಮಾಡುವ ಧೈರ್ಯ ವೇದಾಂತ್‌ಗಿಲ್ಲ!
ಇಷ್ಟುದಿನ ಅಮೂಲ್ಯ ಮಾತ್ರ ವೇದಾಂತ್‌ನನ್ನು ಪ್ರೀತಿ ಮಾಡುತ್ತಿದ್ದಳು. ಅವನಿಗೆ ಈ ವಿಚಾರ ಒಮ್ಮೆ ಹೇಳಿ ಸುಮ್ಮನಾಗಿದ್ದಳೇ ವಿನಃ ಮತ್ತೆ ತನ್ನ ಪ್ರೀತಿಯನ್ನು ಆತನಿಗೆ ಅರ್ಥ ಮಾಡಿಸುವ ಗೋಜಿಗೆ ಅವಳು ಹೋಗಿರಲಿಲ್ಲ. ಆದರೆ ವೇದಾಂತ್ ಕೂಡ ಅರಿಯದೆ ಅಮೂಲ್ಯಳನ್ನು ಪ್ರೀತಿ ಮಾಡುತ್ತಿದ್ದಾನೆ. ಆದರೆ ಇಷ್ಟುದಿನ ಈ ವಿಚಾರ ಅವನಿಗೆ ಅರ್ಥವಾಗಿರಲಿಲ್ಲ. ಈಗ ಅಮೂಲ್ಯಳನ್ನು ಪ್ರೀತಿ ಮಾಡುತ್ತಿರುವ ವಿಷಯ ಈಗ ಮನವರಿಕೆ ಆದರೂ ಕೂಡ ಅಮೂಲ್ಯಗೆ ಮಾತ್ರ ಪ್ರೇಮ ನಿವೇದನೆ ಮಾಡುವ ಧೈರ್ಯ ಅವನಿಗಿಲ್ಲ. ಹೀಗಾದರೆ ಈ ಜೋಡಿ ಒಂದಾಗೋದು ಹೇಗೆ?

ಅಮ್ಮು ಬಿಟ್ಟು ಸಾಹಿತ್ಯ ಜೊತೆ ವೇದಾಂತ್ ಮದುವೆ?

ವೇದಾಂತ್ ತಾಯಿ, ಸಾಹಿತ್ಯಾ ಹೊರತುಪಡಿಸಿ ಉಳಿದವರೆಲ್ಲರಿಗೂ ಅಮೂಲ್ಯ ಮತ್ತು ವೇದಾಂತ್ ಮದುವೆ ಆಗೋದು ಇಷ್ಟವೇ. ಆದರೆ ವೇದಾಂತ್, ಅಮೂಲ್ಯಳನ್ನು ಮದುವೆಯಾಗುವ ಧೈರ್ಯ ಮಾಡಲಿ ಎಂದು ಅವರು ಬಯಸುತ್ತಿದ್ದಾರೆ. ಇಷ್ಟುದಿನ ಸಾಹಿತ್ಯ ಮತ್ತು ತನ್ನ ನಡುವೆ ನಡೆದ ಗರ್ಲ್‌ಫ್ರೆಂಡ್ ಡೀಲ್ ಬಗ್ಗೆ ವೇದಾಂತ್‌ ಎಲ್ಲರ ಮುಂದೆ ಆತ ಹೇಳುವ ಸಾಧ್ಯತೆಯಿದೆ. ಅಮೂಲ್ಯಳನ್ನು ಬಿಟ್ಟು ಉಳಿದವರನ್ನು ಯಾರನ್ನೂ ನಾನು ಮದುವೆಯಾಗಲು ಸಾಧ್ಯವಿಲ್ಲ ಎಂಬುದು ಕೂಡ ವೇದಾಂತ್‌ಗೆ ಅರ್ಥವಾಗಿದೆ. ಹೀಗಾಗಿ ಈ ಜೋಡಿಯ ಪ್ರೀತಿಗೆ ತಿರುವು ಸಿಗುವ ಕಾಲ ಬಂದಾಯ್ತು ಎಂದು ಹೇಳಬಹುದು.

Also Read-ಗಟ್ಟಿಮೇಳ ಧಾರಾವಾಹಿ: ವೇದಾಂತ್ ಬಳಿ ಅಮೂಲ್ಯ ಪ್ರೇಮ ನಿವೇದನೆ ಮಾಡಿದ್ದು ನಿಜವೇ? ಅಮೂಲ್ಯ ಪ್ರೀತಿ ಗೆಲ್ಲುತ್ತಾ?

ಧ್ರುವ ಮತ್ತು ವೇದಾಂತ್ ಮಧ್ಯದ ಜಗಳ ಸರಿ ಮಾಡ್ತಾಳಾ ಅಮೂಲ್ಯ?
ಧ್ರುವ, ಅಮೂಲ್ಯ ಮನೆಯಲ್ಲಿಯೇ ಇದ್ದಾನೆ ಎಂಬ ವಿಚಾರ ವೇದಾಂತ್‌ಗೆ ಇನ್ನೂ ಗೊತ್ತಾಗಿಲ್ಲ. ಒಂದು ವೇಳೆ ಈ ವಿಚಾರ ಗೊತ್ತಾದರೆ ಏನಾಗಬಹುದು? ಧ್ರುವನ ಮೇಲೆ ವೇದಾಂತ್ ಯಾಕೆ ಕೋಪ ಮಾಡಿಕೊಂಡಿದ್ದಾನೆ? ಏನು ಇದರೊಳಗಿನ ಗುಟ್ಟು ಎಂದು ತಿಳಿದು ಈ ಸಹೋದರರನ್ನು ಅಮೂಲ್ಯ ಒಂದು ಮಾಡಲೂ ಮಾಡಬಹುದು. ತಾಯಿಯನ್ನು ಒಪ್ಪಿಸಿ ವೇದಾಂತ್‌, ಅಮೂಲ್ಯಳನ್ನು ಮದುವೆಯಾಗಬಹುದು. ಆದರೆ ಅಮೂಲ್ಯ, ವೇದಾಂತ್ ಮಡದಿಯಾದಮೇಲೆ ಎಲ್ಲವೂ ಚೆನ್ನಾಗಿರುತ್ತದೆ ಎಂದು ಹೇಳಲಾಗುವುದಿಲ್ಲ.

Also Read-ಗಟ್ಟಿಮೇಳ ಧಾರಾವಾಹಿ: ವಿಕ್ರಾಂತ್-ಸಾರಿಕಾ ಮದುವೆ ನಡೆದೇಹೋಯ್ತಾ? ಆರತಿ ಪ್ರಾಣದ ಕಥೆಯೇನು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ