ಆ್ಯಪ್ನಗರ

ಗಟ್ಟಿಮೇಳ ಧಾರಾವಾಹಿ: ಆರತಿ-ವಿಕ್ರಾಂತ್ ಮದುವೆ ಆದರೆ ಏನಂತೇ? ಮುಂದೈತೆ ಮಾರಿಹಬ್ಬ!

'ಗಟ್ಟಿಮೇಳ' ಧಾರಾವಾಹಿಯಲ್ಲಿ ಕೊನೆಗೂ ಆರತಿ ಮತ್ತು ವಿಕ್ರಾಂತ್ ಮದುವೆ ನಡೆದಿದೆ. ಆದರೆ ಇದೇ ದೊಡ್ಡ ಮಿರಾಕಲ್ ಎಂದು ನೀವಂದುಕೊಂಡಿದ್ದರೆ ತಪ್ಪು. ಇನ್ನು ರೋಚಕವಾದ ಎಪಿಸೋಡ್‌ಗಳು ಪ್ರಸಾರವಾಗಲಿದ್ದು, ಮುಂದಿನ ಸಂಚಿಕೆಗಳ ಸಂಕ್ಷಿಪ್ತ ವಿವರ ಇಲ್ಲಿದೆ ನೋಡಿ.

Vijaya Karnataka Web 25 Mar 2020, 3:34 pm
'ಗಟ್ಟಿಮೇಳ' ಧಾರಾವಾಹಿಯಲ್ಲಿ ಮದುವೆ ಸಂಭ್ರಮ ಮುಗಿದಿದೆ. ಕುತಂತ್ರಿ ಸಾರಿಕಾ ಪ್ಲ್ಯಾನ್ ಪ್ಲಾಪ್ ಆಗಿದ್ದು, ವಿಕ್ರಾಂತ್ ಮತ್ತು ಆರತಿ ಕೊನೆಗೂ ಸಪ್ತಪದಿ ತುಳಿದಿದ್ದಾರೆ. ಇವರಿಬ್ಬರ ಮದುವೆ ಮಾಡಬೇಕೆಂದು ವೇದಾಂತ್ ಮತ್ತು ಅಮೂಲ್ಯ ಹರಸಾಹಸ ಮಾಡಿದ್ದರು. ಕೊನೆಗೂ ಇವರ ಪರಿಶ್ರಮಕ್ಕೆ ಒಳ್ಳೆಯ ಫಲ ಸಿಕ್ಕಿದೆ.
---------------------------------------------------------------------------------------
Vijaya Karnataka Web gattimela kannada serial 26 march 2020 written update amulya and vedanth love story
ಗಟ್ಟಿಮೇಳ ಧಾರಾವಾಹಿ: ಆರತಿ-ವಿಕ್ರಾಂತ್ ಮದುವೆ ಆದರೆ ಏನಂತೇ? ಮುಂದೈತೆ ಮಾರಿಹಬ್ಬ!

ಸಾರಿಕಾ ಮಾತ್ರ ಬದಲಾಗೋದಿಲ್ಲ
ಎಲ್ಲರಿಂದ ಕಪಾಳಮೋಕ್ಷ ಅನುಭವಿಸಿದ್ದ ಸಾರಿಕಾಗೆ ಏನೇ ಮಾಡಿದ್ರೂ ಬುದ್ಧಿ ಬರೋದಿಲ್ಲ. ಅವಳು ಆರತಿ-ವಿಕ್ರಾಂತ್ ಜೀವನವನ್ನು ಹಾಳು ಮಾಡಲು ಟ್ರೈ ಮಾಡುತ್ತಾಳೆ. ಆದರೆ ಅಮೂಲ್ಯ ಮತ್ತು ವೇದಾಂತ್‌ ಇದಕ್ಕೆ ಆಸ್ಪದ ಕೊಡೋದಿಲ್ಲ.
----------------------------------------------------------------------------------------

ಆರತಿಗೆ ಗಂಡನ ಮನೆಯಲ್ಲಿ ನರಕ ತೋರಿಸ್ತಾಳೆ ಸುಹಾಸಿನಿ
ಆರತಿ, ವಿಕ್ರಾಂತ್‌ನನ್ನು ಮದುವೆಯಾಗೋದು ಸುಹಾಸಿನಿಗೆ ಇಷ್ಟವಿರಲಿಲ್ಲ. ಹೀಗಾಗಿ ಸುಹಾಸಿನಿಯೇ ಸಾರಿಕಾಗೆ ಈ ಪ್ಲ್ಯಾನ್ ಹೇಳಿಕೊಟ್ಟಿದ್ದು. ಏನೇ ಮಾಡಿದರೂ ಈ ಜೋಡಿಯ ಮದುವೆ ತಪ್ಪಿಸಲಾಗಿಲ್ಲ. ಹೀಗಾಗಿ ಆರತಿಗೆ ಗಂಡನಮನೆಯಲ್ಲಿ ನರಕ ತೋರಿಸುವ ಪ್ಲ್ಯಾನ್ ಮಾಡಿದ್ದಾಳೆ ಸುಹಾಸಿನಿ. ಇದನ್ನೆಲ್ಲ ಆರತಿ ಹೇಗೆ ಎದುರಿಸುತ್ತಾಳೋ, ದೇವರೇ ಬಲ್ಲ!
----------------------------------------------------------------------------------
ವೇದಾಂತ್ ಮತ್ತು ಸಾಹಿತ್ಯ ಮದುವೆ ಮಾಡಿಸ್ತಾಳಾ ಸುಹಾಸಿನಿ?
ವೇದಾಂತ್ ಮತ್ತು ಸಾಹಿತ್ಯ ಮದುವೆ ಮಾಡುತ್ತೇನೆ ಎಂದು ಸುಹಾಸಿನಿ, ಸಾಹಿತ್ಯಗೆ ವಚನ ಕೊಟ್ಟಿದ್ದಾಳೆ. ಈಗಾಗಲೇ ನಿಶ್ಚಿತಾರ್ಥ ಆಗಿರುವ ಈ ಜೋಡಿಗೆ ಮದುವೆ ಮಾಡಿಸೋದು ದೊಡ್ಡ ವಿಚಾರವಲ್ಲ. ಆದರೆ ಇದನ್ನು ವೇದಾಂತ್ ಒಪ್ಪೋದಿಲ್ಲ. ಹೀಗಾಗಿ ಇವರಿಬ್ಬರ ಮದುವೆ ಮಾತ್ರ ನಡೆಯೋದಿಲ್ಲ.
-----------------------------------------------------------------------------------

ಅಮೂಲ್ಯ ಮನಸ್ಸನ್ನು ಅರಿತುಕೊಳ್ಳುತ್ತಾನಾ ವೇದಾಂತ್?

ಅಮೂಲ್ಯ ಮನಸ್ಸಿನೊಳಗೆ ಏನೋ ಇದೆ ಅನ್ನೋದು ವೇದಾಂತ್‌ಗೆ ಅರ್ಥವಾಗಿದೆ. ಅದನ್ನು ಅಮೂಲ್ಯ ಅವನ ಬಳಿ ಹೇಳಿಕೊಳ್ಳಬೇಕಷ್ಟೇ. ಮುಂದಿನ ದಿನಗಳಲ್ಲಿ ಅಮೂಲ್ಯ ತನ್ನನ್ನು ಪ್ರೀತಿ ಮಾಡುತ್ತಿರುವ ವಿಚಾರ ವೇದಾಂತ್‌ಗೆ ಅರಿವಾಗಬಹುದು. ಆಮೇಲೆ ಆತ ಕೂಡ ಅವಳನ್ನು ಒಪ್ಪಿ, ಮನೆಯವರನ್ನೆಲ್ಲ ಒಪ್ಪಿಸಿ ಮದುವೆಯಾಗಬಹುದು.
---------------------------------------------------------------------------------------
ಧಾರಾವಾಹಿ ಶೂಟಿಂಗ್ ಬಂದ್ ಆಯ್ತು! ಕಲಾವಿದರು, ತಂತ್ರಜ್ಞರ ಹೊಟ್ಟೆಪಾಡಿನ ಕಥೆಯೇನು?

ಅಮೂಲ್ಯಾಗೆ ಬೇರೆ ಮದುವೆ?
ಈಗಾಗಲೇ ಆರತಿ ಮದುವೆಯಾಗಿ ಗಂಡನ ಮನೆಗೆ ಹೋಗಿದ್ದಾಳೆ. ಆರತಿ ನಂತರ ಇರೋಳು ಅಮೂಲ್ಯ. ಇವಳಿಗೂ ಕೂಡ ಪರಿಮಳಾ ಮತ್ತು ಮಂಜುನಾಥ್ ಬೇರೆ ಸಂಬಂಧ ಹುಡುಕಿ ಮದುವೆ ಮಾಡಲು ಪ್ರಯತ್ನಪಡುತ್ತಾರೆ. ಬೇರೆ ಹುಡುಗನ ಜೊತೆ ಅಮೂಲ್ಯಳನ್ನು ನೋಡಲು ಇಷ್ಟಪಡದ ವೇದಾಂತ್‌ಗೆ ಆಗ ತಾನು ಅಮೂಲ್ಯಳನ್ನು ಪ್ರೀತಿ ಮಾಡುತ್ತಿದ್ದೇನೆ ಎಂದು ಅರಿವಾಗಬಹುದು. ಆಗ ಆತ ಅಮೂಲ್ಯಾಗೆ ಪ್ರೇಮ ನಿವೇದನೆ ಮಾಡಬಹುದು.
'ನನಗೆ ರಜೆಗಳು ಬೇಕಿತ್ತು, ಆದರೆ ಈ ರೀತಿಯ ದಿಗ್ಬಂಧನ ಅಲ್ಲ' : 'ಗಟ್ಟಿಮೇಳ' ಧಾರಾವಾಹಿ ಸಾಹಿತ್ಯ ಖ್ಯಾತಿಯ ಶರಣ್ಯಾ ಶೆಟ್ಟಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ