ಆ್ಯಪ್ನಗರ

ಆ ಒಂದು ವಿಚಾರಣೆಯಿಂದಾಗಿ ಸಿನಿಮಾ ಅವಕಾಶ ಕಳೆದುಕೊಂಡ್ರಾ 'ಗಟ್ಟಿಮೇಳ' ನಟ ಅಭಿಷೇಕ್‌ ದಾಸ್‌?

ಸ್ಯಾಂಡಲ್‌ವುಡ್‌ನ ಕೆಲ ಸೆಲೆಬ್ರಿಟಿಗಳನ್ನು ಡ್ರಗ್ ಕೇಸ್‌ಗೆ ಸಂಬಂಧಿಸಿದಂತೆ ಅಧಿಕಾರಿಗಳು ವಿಚಾರಣೆಗೆ ಕರೆಸಿಕೊಂಡಿದ್ದಾರೆ. 'ಗಟ್ಟಿಮೇಳ' ಧಾರಾವಾಹಿ ನಟ ಅಭಿಷೇಕ್ ದಾಸ್‌ ಕೂಡ ಹಾಜರಾಗಿದ್ದರು. ಇದೀಗ ಅವರಿಗೆ ಸಿನಿಮಾ ಅವಕಾಶವೊಂದು ಕೈತಪ್ಪಿದೆ.

Vijaya Karnataka Web 1 Oct 2020, 10:18 am
ಈಚೆಗಷ್ಟೇ ಡ್ರಗ್‌ ಮಾಫಿಯಾ ತನಿಖೆಗೆ ಸಂಬಂಧಿಸಿದಂತೆ ಸ್ಯಾಂಡಲ್‌ವುಡ್‌ನ ಕೆಲ ಸೆಲೆಬ್ರಿಟಿಗಳನ್ನು ವಿಚಾರಣೆ ಮಾಡಲಾಗಿದೆ. ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಐಎಸ್‌ಡಿ ಇಲಾಖೆಯಿಂದ 'ಗಟ್ಟಿಮೇಳ' ಧಾರಾವಾಹಿ ನಟ ಅಭಿಷೇಕ್‌ ದಾಸ್ ಅವರನ್ನು ಸತತ ಎರಡು ಗಂಟೆಗಳ ವಿಚಾರಣೆ ಮಾಡಲಾಗಿತ್ತು. ಆದರೆ, ಇದರಿಂದಾಗಿ ಅಭಿಷೇಕ್‌ಗೆ ಸಿನಿಮಾ ಅವಕಾಶವೊಂದು ಕೈತಪ್ಪಿದೆ. ಈ ಬಗ್ಗೆ ಬೇಸರ ವ್ಯಕ್ತಪಡಿಸಿರುವ ಅವರು, ಸಿನಿಮಾ ಕೈತಪ್ಪಿದ್ದರ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
Vijaya Karnataka Web Abhishek Das


ಅಭಿಷೇಕ್‌ ಜೊತೆಗೆ ಸಿನಿಮಾ ಮಾಡುತ್ತೇನೆ ಎಂದು ನಿರ್ಮಾಪಕರೊಬ್ಬರು ಕಮಿಟ್ ಆಗಿದ್ದರಂತೆ. ಆದರೆ, ಆಗಿರುವ ಬೆಳವಣಿಗೆಗಳಿಂದಾಗಿ ಅವರು ಸಿನಿಮಾ ಮಾಡುವುದಿಲ್ಲ ಎಂದು ಹಿಂದೆ ಸರಿದಿದ್ದಾರಂತೆ. 'ನಾನು ಅವರನ್ನು ಕನ್ವಿನ್ಸ್ ಮಾಡಲು ಸಾಕಷ್ಟು ಪ್ರಯತ್ನ ಮಾಡಿದೆ. ಇದೊಂದು ಸಣ್ಣ ವಿಚಾರಣೆ ಅಷ್ಟೇ, ಬೇರೇನೂ ಇಲ್ಲ ತುಂಬ ಹೇಳಿದೆ. ಆದರೆ, ಅವರಿಗೆ ನನ್ನ ಸಿನಿಮಾಕ್ಕೆ ಹಣ ಹಾಕಲು ಇಷ್ಟವಿರಲಿಲ್ಲ. ಹಾಗಾಗಿ, ಸಿನಿಮಾವನ್ನು ಕ್ಯಾನ್ಸಲ್ ಮಾಡಿದರು' ಎಂದು ಹೇಳುವ ಅಭಿಷೇಕ್‌, ನಾನು ವಿಚಾರಣೆಗೆ ಹೋದಾಗ ಅದನ್ನು ತುಂಬ ನೆಗೆಟಿವ್ ಆಗಿ ಮಾಧ್ಯಮಗಳಲ್ಲಿ ತೋರಿಸಲಾಯಿತು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಇನ್ನು, ವಿಚಾರಣೆಯಲ್ಲಿ ಅಧಿಕಾರಿಗಳ ಮುಂದೆ, 'ಒಂದು ಕಾರ್ಯಕ್ರಮದಲ್ಲಿ ನಾನು ಯೋಗಿ ಅವರನ್ನು ಒಮ್ಮೆ ಭೇಟಿಯಾಗಿದ್ದೇನೆ. ಇನ್ನು, ಅನುಶ್ರೀ ನನಗೆ ಪರಿಚಯ ಇದ್ದಾರೆ. ನಾನೊಂದು ರಿಯಾಲಿಟಿ ಶೋನಲ್ಲಿ ಸ್ಪರ್ಧಿಯಾಗಿದ್ದೆ. ಅದಕ್ಕವರು ನಿರೂಪಕಿ ಆಗಿದ್ದರು ಎಂದು ಅಧಿಕಾರಿಗಳಿಗೆ ಹೇಳಿದ್ದೇನೆ. ಅವರು ನನ್ನ ಕರೆ ಮತ್ತು ಕಾಲ್‌ ಲಿಸ್ಟ್ ಚೆಕ್ ಮಾಡಿ, ಕಳುಹಿಸಿದರು' ಎಂದು ಮಾಧ್ಯಮಗಳಿಗೆ ಅಭಿಷೇಕ್ ಹೇಳಿಕೊಂಡಿದ್ದಾರೆ. ಸದ್ಯ ಜನಪ್ರಿಯ ಧಾರಾವಾಹಿ 'ಗಟ್ಟಿಮೇಳ'ದಲ್ಲಿ ವಿಕ್ರಾಂತ್ ವಸಿಷ್ಠ ಎಂಬ ಪಾತ್ರವನ್ನು ಅಭಿಷೇಕ್‌ ನಿಭಾಯಿಸುತ್ತಿದ್ದಾರೆ. ವಸಿಷ್ಠ ಕುಟುಂಬದ ಕೊನೆಯ ಮುದ್ದಿನ ಮಗನಾಗಿ ಅವರು ಕಾಣಿಸಿಕೊಂಡಿದ್ದಾರೆ. ಈ ಧಾರಾವಾಹಿ ಸಾಕಷ್ಟು ಜನಮೆಚ್ಚುಗೆ ಪಡೆದು ಮುನ್ನುಗ್ಗುತ್ತಿದೆ. ಜತೆಗೆ ಅಭಿಷೇಕ್‌ಗೂ ಈ ಧಾರಾವಾಹಿಯಿಂದ ಜನಪ್ರಿಯತೆ ಹೆಚ್ಚಾಗಿದೆ.

'ಪ್ರೀತಿಯ ಅಂಬಿ ಅಂಕಲ್, ನನ್ನನ್ನು ಆಶೀರ್ವದಿಸಿ' ಎಂದ 'ಗಟ್ಟಿಮೇಳ' ಧಾರಾವಾಹಿ ನಟ ಅಭಿಷೇಕ್

ಈ ಹಿಂದೆ ವಿಚಾರಣೆಗೆ ಹಾಜರಾದಾಗಲೂ ಪ್ರತಿಕ್ರಿಯೆ ನೀಡಿದ್ದ ಅಭಿಷೇಕ್‌, ಮಾಧ್ಯಮಗಳ ಮೇಲೆ ಬೇಸರ ವ್ಯಕ್ತಪಡಿಸಿದ್ದರು. 'ವಿಚಾರಣೆಗೆಂದು ನನ್ನನ್ನು ಕರೆಸಿಕೊಂಡಿದ್ದರು ಅಷ್ಟೇ. ಆದರೆ, ಧಾರಾವಾಹಿ ಲೋಕದಲ್ಲಿ ಡ್ರಗ್ಸ್‌ ಇದೆ ಎಂದು ಮಾಧ್ಯಮಗಳಲ್ಲಿ ತೋರಿಸಲಾಗುತ್ತಿದೆ. ನನ್ನನ್ನು ಆರೋಪಿಯಂತೆ ಬಿಂಬಿಸಲಾಗುತ್ತಿದೆ. ಇಂತಹ ಸುದ್ದಿಗಳಿಂದ ನನ್ನ ವೃತ್ತಿಜೀವನಕ್ಕೆ ದೊಡ್ಡ ತೊಂದರೆ ಆಗಲಿದೆ. ಜೊತೆಗೆ ನನ್ನ ಕುಟುಂಬದವರಿಗೂ ಇದರಿಂದ ನೋವು ಆಗಲಿದೆ. ನನ್ನ ಗೌರವ ಹಾಳಾಗಲಿದೆ' ಎಂದು ಅವರು ಹೇಳಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ