ಆ್ಯಪ್ನಗರ

Gicchi GiliGili: 'ಗಿಚ್ಚಿ ಗಿಲಿಗಿಲಿ' ಟ್ರೋಫಿ ಪಡೆದ ವಂಶಿಕಾ ಅಂಜನಿ ಕಶ್ಯಪ, ಶಿವು; ನಿವೇದಿತಾ ಗೌಡ, ವಿನೋದ್ ರನ್ನರ್ ಅಪ್

Gicchi GiliGili Show: ನಟಿ ಶ್ರುತಿ, ಸಾಧು ಕೋಕಿಲ ನಿರ್ಣಾಯಕರಾಗಿರುವ, ನಿರಂಜನ್ ದೇಶಪಾಂಡೆ ನಿರೂಪಣೆಯ 'ಗಿಚ್ಚಿ ಗಿಲಿಗಿಲಿ ಶೋ' ಮುಕ್ತಾಯವಾಗಿದೆ. ವಂಶಿಕಾ ಅಂಜನಿ ಕಶ್ಯಪ ಹಾಗೂ ಶಿವು ಈ ಶೋನ ವಿಜೇತರಾಗಿ ಹೊರಹೊಮ್ಮಿದ್ದಾರೆ. ವಿನೋದ್ ಗೊಬ್ರಗಾಲ್, ನಿವೇದಿಯಾ ಗೌಡ ಈ ಶೋನ ರನ್ನರ್ ಅಪ್ ಆಗಿದ್ದಾರೆ. ಈ ಕುರಿತು ಸಂಕ್ಷಿಪ್ತ ಮಾಹಿತಿ ಇಲ್ಲಿದೆ.

Authored byಪದ್ಮಶ್ರೀ ಭಟ್ | Vijaya Karnataka Web 19 Sep 2022, 4:37 pm

ಹೈಲೈಟ್ಸ್‌:

  • ಗಿಚ್ಚಿ ಗಿಲಿಗಿಲಿ ಶೋ ಪ್ರಶಸ್ತಿ ಪಡೆದ ವಂಶಿಕಾ ಅಂಜನಿ ಕಶ್ಯಪ, ಶಿವು
  • ಗಿಚ್ಚಿ ಗಿಲಿಗಿಲಿ ಶೋ ರನ್ನರ್ ಅಪ್ ಪ್ರಶಸ್ತಿ ಪಡೆದ ನಿವೇದಿತಾ ಗೌಡ, ವಿನೋದ್ ಗೋಬ್ರಗಾಲ್
  • ಗಿಚ್ಚಿ ಗಿಲಿಗಿಲಿ ಶೋ ಯಶಸ್ವಿಯಾಗಿ ಮುಕ್ತಾಯವಾಗಿದ್ದು, ನಟಿ ಶ್ರುತಿ, ಸಾಧು ಕೋಕಿಲ ಧನ್ಯವಾದ ತಿಳಿಸಿದ್ದಾರೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web gichi giligili
ಕಲರ್ಸ್ ಕನ್ನಡ ವಾಹಿನಿಯ 'ಗಿಚ್ಚಿ ಗಿಲಿಗಿಲಿ' ಶೋ ( Gicchi GiliGili ) ಯಶಸ್ವಿಯಾಗಿ ಅಂತ್ಯವಾಗಿದೆ. ವಿಜೇತರ ಹೆಸರನ್ನು ಘೋಷಿಸುವುದರ ಜೊತೆ ಈ ಶೋ ಮುಕ್ತಾಯವಾಗಿದೆ. ವಂಶಿಕಾ ಅಂಜನಿ ಕಶ್ಯಪ ಹಾಗೂ ಶಿವು ಈ ಶೋನ ವಿಜೇತರಾಗಿ ಹೊರಹೊಮ್ಮಿದ್ದಾರೆ. ವಿನೋದ್ ಗೊಬ್ರಗಾಲ್, ನಿವೇದಿಯಾ ಗೌಡ ಈ ಶೋನ ರನ್ನರ್ ಅಪ್ ಆಗಿದ್ದಾರೆ.
ಅದ್ಭುತ ನಟನೆ, ಸೂಪರ್ ಡೈಲಾಗ್, ಮುದ್ದಾದ ಮಾತುಗಳು, ನೃತ್ಯದಿಂದ 'ನನ್ನಮ್ಮ ಸೂಪರ್‌ಸ್ಟಾರ್' ಶೋನ ಟ್ರೋಫಿ ಗೆದ್ದಿರುವ ವಂಶಿಕಾ ಅಂಜನಿ ಕಶ್ಯಪ ಈಗ 'ಗಿಚ್ಚಿ ಗಿಲಿಗಿಲಿ ಶೋ' ಟ್ರೋಫಿಯನ್ನು ಮುಡಿಗೇರಿಸಿಕೊಂಡಿದ್ದಾರೆ. 'ಗಿಚ್ಚಿ ಗಿಲಿಗಿಲಿ ಶೋ'ನಲ್ಲಿ ಫುಲ್ ಟೈ ಸ್ಕಿಟ್‌ನಲ್ಲಿ ನಟಿಸಿದ ವಂಶಿಕಾ ಸಾಕಷ್ಟು ಬಾರಿ ತನ್ನ ಅದ್ಭುತವಾದ ನಟನೆಯಿಂದ ಪ್ರೇಕ್ಷಕರನ್ನು ನಗಿಸಿದ್ದಾಳೆ, ಅಳಿಸಿದ್ದಾಳೆ. ವಂಶಿಕಾ ನಟನೆಗೆ ಶಿವು ಸಾಥ್ ಕೊಟ್ಟಿದ್ದನ್ನು ಮರೆಯುವಂತಿಲ್ಲ.

ನಟನೆಯನ್ನು ಅರಿದು ಕುಡಿದವರು, ನಟನೆಯ ಗಂಧಗಾಳಿ ಇಲ್ಲದವರು ಈ ಶೋನಲ್ಲಿ ಜೋಡಿಯಾಗಿ ಭಾಗವಹಿಸಿದ್ದರು. 10 ಜೋಡಿಗಳು ಈ ಶೋನಲ್ಲಿ ಭಾಗವಹಿಸಿದ್ದರು. ಯಾವುದೇ ಎಲಿಮಿನೇಶನ್ ಇಲ್ಲದೆ ಕೊನೆಯಲ್ಲಿ ವಿಜೇತರು, ರನ್ನರ್ ಅಪ್ ಹೆಸರನ್ನು ಘೋಷಣೆ ಮಾಡಲಾಗಿದೆ.

'ಗಿಚ್ಚಿ ಗಿಲಿಗಿಲಿ' ಗ್ರ್ಯಾಂಡ್ ಫಿನಾಲೆಯಲ್ಲಿ ನಟಿ ಶ್ರುತಿ, ಸಾಧುಕೋಕಿಲ, ಮಾಲಾಶ್ರೀ ಸಮಾಗಮ

ಮಜಾ ಭಾರತ ಶೋ ಖ್ಯಾತಿಯ ಕಾರ್ತಿಕ್, ರಾಘವೇಂದ್ರ, ಶಿವು, ವಿನೋದ್ ಗೊಬ್ಬರಗಾಲ, ಚಂದ್ರಪ್ರಭ, ಚಿಲ್ಲರ್ ಮಂಜು, ಪಿ.ಕೆ., ಸುಷ್ಮಿತಾ, ಮಾನಸ ಮತ್ತು ಜಗ್ಗಪ್ಪ ಹಾಗೂ 'ರಾಜಾ ರಾಣಿ' ಶೋ ಖ್ಯಾತಿಯ ಅಯ್ಯಪ್ಪ, ಶ್ರೀಕಾಂತ್, ನಿವೇದಿತಾ ಗೌಡ, ವಂಶಿಕಾ ಅಂಜನಿ ಕಶ್ಯಪ್, ಸೌಮ್ಯಾ, ಪ್ರಶಾಂತ್, ಖ್ಯಾತ ಹಿನ್ನೆಲೆ ಗಾಯಕಿ ಜೋಗಿ ಸುನೀತಾ, ಎದೆ ತುಂಬಿ ಹಾಡುವೆನು ನಿರೂಪಕಿ ಅಂಕಿತಾ ಅಮರ್ ಅವರ ತಂಗಿ ಅನನ್ಯಾ ಅಮರ್, ನಿರೂಪಕ ನಿರಂಜನ್ ದೇಶಪಾಂಡೆ ಪತ್ನಿ ಯಶಸ್ವಿನಿ ದೇಶಪಾಂಡೆ ಈ ಶೋನಲ್ಲಿ ಸ್ಪರ್ಧಿಗಳಾಗಿದ್ದರು.

ಗಿಚ್ಚಿ ಗಿಲಿಗಿಲಿ ಶೋನಲ್ಲಿ ಶ್ರುತಿ ಪಕ್ಕ ಕೂತಿದ್ದು ಇಷ್ಟ ಆಯ್ತು, ಸಾಧುಕೋಕಿಲ ನಮ್ಮ ಕುಟುಂಬಕ್ಕೆ ತುಂಬ ಆತ್ಮೀಯರು: ನಟಿ ಮಾಲಾಶ್ರೀ

ಈ ಶೋನ ಗ್ರ್ಯಾಂಡ್ ಫಿನಾಲೆಗೆ 'ಕನಸಿನ ರಾಣಿ' ಮಾಲಾಶ್ರೀ ಅವರು ಅತಿಥಿಯಾಗಿ ಆಗಮಿಸಿದ್ದರು. ನಟ, ನಿರೂಪಕ ಸೃಜನ್ ಲೋಕೇಶ್, ಸಾಧು ಕೋಕಿಲ, ಶ್ರುತಿ ಈ ಶೋನಲ್ಲಿದ್ದಾರೆ. ಆರಂಭದಲ್ಲಿ ಮಂಜು ಪಾವಗಡ, ರೀನಾ ಡಿಸೋಜ ಈ ಶೋವನ್ನು ನಿರೂಪಣೆ ಮಾಡುತ್ತಿದ್ದರು. ಅದಾದ ನಂತರದಲ್ಲಿ ನಿರಂಜನ್ ದೇಶಪಾಂಡೆ ಈ ಶೋನ ನಿರೂಪಣೆ ಮಾಡಿದರು. ಈ ಬಗ್ಗೆ ಮಾತನಾಡಿದ್ದ ನಿರಂಜನ್, "ಆರಂಭದಲ್ಲಿ ಈ ಶೋ ನಿರೂಪಣೆ ಮಾಡಲು ನನಗೆ ಹೇಳಲಾಗಿತ್ತು. ಬೇರೆ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದುದಕ್ಕೆ ನನಗೆ ಬರಲಾಗಲಿಲ್ಲ. ಹೀಗಾಗಿ ಬೇರೆಯವರು ಈ ಶೋ ನಿರೂಪಣೆ ಮಾಡಿದರು. ಆಮೇಲೆ ನಾನೇ ಈ ಶೋಗೆ ಬಂದೆ ಅಷ್ಟೇ" ಎಂದು ಹೇಳಿದ್ದರು.
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ