ಆ್ಯಪ್ನಗರ

ಅಳಿಯ ಅನಿರುದ್ಧ್ ಹುಟ್ಟುಹಬ್ಬಕ್ಕೆ ಭರ್ಜರಿ ಸ್ಟೆಪ್ ಹಾಕಿದ್ರು ಭಾರತಿ ವಿಷ್ಣುವರ್ಧನ್ ; ಬರ್ತಡೇ ಪಾರ್ಟಿಯಲ್ಲಿ ಪುನೀತ್, ಗಣೇಶ್ ಪತ್ನಿ ಭಾಗಿ

ಫೆಬ್ರವರಿ 16ರಂದು ನಟ ದರ್ಶನ್ ಅವರ ಹುಟ್ಟುಹಬ್ಬವಿತ್ತು. ಅದರ ಜೊತೆಗೆ 'ಜೊತೆ ಜೊತೆಯಲಿ' ಧಾರಾವಾಹಿ ಖ್ಯಾತಿಯ ನಟ ಅನಿರುದ್ಧ್ ಹುಟ್ಟುಹಬ್ಬ ಕೂಡ ಇತ್ತು. ಅಭಿಮಾನಿಗಳು, ಕುಟುಂಬ, ಆತ್ಮೀಯರ ಜೊತೆ ಅನಿರುದ್ಧ್ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಆ ವೇಳೆ ಅನಿರುದ್ಧ್ ಅವರ ಅತ್ತೆ ಭಾರತಿ ವಿಷ್ಣುವರ್ಧನ್ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಈಗಾಗಲೇ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದರ ಜೊತೆಗೆ ಅನಿರುದ್ಧ್ ಅವರು ಕೆಲ ಸಾಮಾಜಿಕ ಕೆಲಸಗಳನ್ನು ಕೂಡ ಮಾಡಿದ್ದಾರೆ. ಅನಿರುದ್ಧ್ ಬರ್ತಡೇ ಪಾರ್ಟಿಗೆ ಸ್ಯಾಂಡಲ್‌ವುಡ್‌ನ ಅನೇಕ ಕಲಾವಿದರು ಆಗಮಿಸಿದ್ದರು.

Vijaya Karnataka Web 18 Feb 2020, 6:24 pm
ಫೆಬ್ರವರಿ 16ರಂದು ನಟ ದರ್ಶನ್ ಅವರ ಹುಟ್ಟುಹಬ್ಬವಿತ್ತು. ಅದರ ಜೊತೆಗೆ 'ಜೊತೆ ಜೊತೆಯಲಿ' ಧಾರಾವಾಹಿ ಖ್ಯಾತಿಯ ನಟ ಅನಿರುದ್ಧ್ ಹುಟ್ಟುಹಬ್ಬ ಕೂಡ ಇತ್ತು. ಅಭಿಮಾನಿಗಳು, ಕುಟುಂಬ, ಆತ್ಮೀಯರ ಜೊತೆ ಅನಿರುದ್ಧ್ ತಮ್ಮ ಜನ್ಮದಿನವನ್ನು ಆಚರಿಸಿಕೊಂಡಿದ್ದಾರೆ. ಆ ವೇಳೆ ಅನಿರುದ್ಧ್ ಅವರ ಅತ್ತೆ ಭಾರತಿ ವಿಷ್ಣುವರ್ಧನ್ ಹೆಜ್ಜೆ ಹಾಕಿದ್ದಾರೆ. ಈ ವಿಡಿಯೋ ಈಗಾಗಲೇ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಅದರ ಜೊತೆಗೆ ಅನಿರುದ್ಧ್ ಅವರು ಕೆಲ ಸಾಮಾಜಿಕ ಕೆಲಸಗಳನ್ನು ಕೂಡ ಮಾಡಿದ್ದಾರೆ. ಅನಿರುದ್ಧ್ ಬರ್ತಡೇ ಪಾರ್ಟಿಗೆ ಸ್ಯಾಂಡಲ್‌ವುಡ್‌ನ ಅನೇಕ ಕಲಾವಿದರು ಆಗಮಿಸಿದ್ದರು.
Vijaya Karnataka Web harshika poonacha dances with bharathi vishnuvardhan at jothe jotheyali serial hero aniruddha jatkar birthday party
ಅಳಿಯ ಅನಿರುದ್ಧ್ ಹುಟ್ಟುಹಬ್ಬಕ್ಕೆ ಭರ್ಜರಿ ಸ್ಟೆಪ್ ಹಾಕಿದ್ರು ಭಾರತಿ ವಿಷ್ಣುವರ್ಧನ್ ; ಬರ್ತಡೇ ಪಾರ್ಟಿಯಲ್ಲಿ ಪುನೀತ್, ಗಣೇಶ್ ಪತ್ನಿ ಭಾಗಿ


ಅನಿರುದ್ಧ್ ಬರ್ತಡೇ ಪಾರ್ಟಿಯಲ್ಲಿ ಶಿವಣ್ಣ, ಅಶ್ವಿನಿ ಪುನೀತ್, ಶಿಲ್ಪಾ ಗಣೇಶ್

ಬೆಂಗಳೂರಿನ ರಾಜಾಜಿನಗರದಲ್ಲಿರುವ 'ಜೆಟ್‌ಲ್ಯಾಗ್‌'ನಲ್ಲಿ ಅನಿರುದ್ಧ್ ತಮ್ಮ ಕುಟುಂಬ, ಸ್ಯಾಂಡಲ್‌ವುಡ್‌ನ ಕಲಾವಿದರ ಜೊತೆ ತಮ್ಮ ಜನ್ಮದಿನ ಆಚರಿಸಿಕೊಂಡಿದ್ದಾರೆ. ನಟ ಡಾ.ಶಿವರಾಜ್‌ಕುಮಾರ್, ಶಿಲ್ಪಾ ಗಣೇಶ್, ಅಶ್ವಿನಿ ಪುನೀತ್‌ರಾಜ್‌ಕುಮಾರ್, ಪಲ್ಲವಿ ಗುರುಕಿರಣ್, ಜೈಜಗದೀಶ್, ಹರ್ಷಿಕಾ ಪೂಣಚ್ಛ, ಜೊತೆ ಜೊತೆಯಲಿ ಧಾರಾವಾಹಿಯ ತಂತ್ರಜ್ಞರು, ರಾಘವೇಂದ್ರ ಹುಣಸೂರು, ಮೇಘಾ ಶೆಟ್ಟಿ ಮುಂತಾದವರು ಆಗಮಿಸಿದ್ದರು ಎಂದು ಸ್ವತಃ ನಟ ಅನಿರುದ್ಧ್ 'ವಿಜಯ ಕರ್ನಾಟಕ'ಕ್ಕೆ ಮಾಹಿತಿ ನೀಡಿದ್ದಾರೆ.

ಬೇರೆ ಹುಡುಗನ ಜೊತೆ ಫಿಕ್ಸ್ ಆಯ್ತು ಅನು ಮದುವೆ ; ಆರ್ಯವರ್ಧನ್‌ಗೋಸ್ಕರ ಅನು ಬಲಿಕೊಡ್ತಾನಾ ಜೇಂಢೇ?

ಹುಟ್ಟುಹಬ್ಬದ ದಿನ ಅನೇಕ ಸಾಮಾಜಿಕ ಕೆಲಸ ಮಾಡಿದ ಅನಿರುದ್ಧ್

ನಟ ವಿಷ್ಣುವರ್ಧನ್‌ ಅವರ ಮನೆಯ ಮುಂದಿರುವ ವಿಷ್ಣುವರ್ಧನ್ ಪಾರ್ಕ್‌ನಲ್ಲಿ 46ಗಿಡಗಳನ್ನು ಅನಿರುದ್ಧ್ ಹುಟ್ಟುಹಬ್ಬದ ಪ್ರಯುಕ್ತ ನೆಡಲಾಗಿದೆ. ರಕ್ತದಾನ ಶಿಬಿರ ಮಾಡಲಾಗಿದೆ. ಅದರ ಜೊತೆಗೆ 46 ಶಾಲೆಗಳಲ್ಲಿ ಇಡೀ ವರ್ಷ ಪೂರ್ತಿ ಒಂದೊಂದು ಶಾಲೆಯಲ್ಲಿ 46ಗಿಡಗಳನ್ನು ನೆಡಲಾಗುತ್ತದೆಯಂತೆ. ಅನಿರುದ್ಧ್ ಅವರು ಕೆಲ ಗಂಟೆಗಳ ಕಾಲ ಅಭಿಮಾನಿಗಳ ಜೊತೆ ಕಳೆದಿದ್ದಾರೆ. ಅಷ್ಟೇ ಅಲ್ಲದೆ ವಿಷ್ಣುವರ್ಧನ್ ಜನ್ಮದಿನ, ಪುಣ್ಯತಿಥಿಯಂದು ವಿಷ್ಣು ಕುಟುಂಬ ಕೆಲ ಸಾಮಾಜಿಕ ಕೆಲಸಗಳನ್ನು ಮಾಡಿಕೊಂಡು ಬರುತ್ತಿದೆ. 'ವಿಷ್ಣು ಸ್ಮಾರಕ'ದ ಮೂಲಕ ಇನ್ನಷ್ಟು ಒಳ್ಳೆಯ ಕೆಲಸಗಳನ್ನು ಮಾಡಿಕೊಂಡು ಹೋಗುವ ಆಶಯ ಈ ಕುಟುಂಬದ್ದು.

'ಜೊತೆ ಜೊತೆಯಲಿ' ಧಾರಾವಾಹಿ ಆರ್ಯವರ್ಧನ್ ವಿರುದ್ಧ ಕೇಳಿಬಂತೊಂದು ದೂರು!

ವೈರಲ್ ಆಯ್ತು ಭಾರತಿ ವಿಷ್ಣುವರ್ಧನ್ ಡಾನ್ಸ್ ಸ್ಟೆಪ್ಸ್ !

ಜೆಟ್‌ಲ್ಯಾಗ್‌ನಲ್ಲಿ ನಡೆದ ಪಾರ್ಟಿಯಲ್ಲಿ 'ಸ್ವಾಗ್‌ ಸೇ ಕರೇಂಗೆ ಸಬ್ ಕಾ ಸ್ವಾಗತ್' ಎಂಬ ಹಿಂದಿ ಹಾಡಿಗೆ ನಟಿ ಭಾರತಿ ವಿಷ್ಣುವರ್ಧನ್ ಮತ್ತು ಅನಿರುದ್ಧ್ ಅವರ ತಾಯಿ ಕೂಡ ಹೆಜ್ಜೆ ಹಾಕಿದ್ದಾರೆ. ಹರ್ಷಿಕಾ ಪೂಣಚ್ಛ ಇವರಿಗೆ ಡಾನ್ಸ್ ಸ್ಟೆಪ್ ಹೇಳಿಕೊಟ್ಟಿದ್ದರು. ಭಾರತಿ ಅವರು ಇಷ್ಟೊಂದು ಖುಷಿಯಲ್ಲಿ ಹೆಜ್ಜೆ ಹಾಕಿರುವ ವಿಡಿಯೋ ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಜಲಂಧರ್ ವಿರುದ್ಧ ಆರ್ಯವರ್ಧನ್ ಹೋರಾಡದೆ ಮೂಲೆಯಲ್ಲಿ ಕೂತಿರೋದೇಕೆ?

Twitter-buttercakeluv

Twitter-Bangalore Times

Video-'ವಿಷ್ಣು ಸ್ಮಾರಕ'ದ ಬಗ್ಗೆ ಅನಿರುದ್ಧ ಹೇಳಿದ್ದೇನು ಗೊತ್ತಾ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ