ಆ್ಯಪ್ನಗರ

ಜಾನಕಿ ರಾಘವ ಸೀರಿಯಲ್ ಬಿಡಲು ಹೇಳಿರಲಿಲ್ಲ: 'ರಂಗನಾಯಕಿ' ನಾಯಕ ಪವನ್

'ಜಾನಕಿ ರಾಘವ' ಧಾರಾವಾಹಿಯಲ್ಲಿ 91 ಸಂಚಿಕೆಗಳಲ್ಲಿ ಮಿಂಚಿದ್ದ ನಟ ಪವನ್, ಇದೀಗ ಹೊಸ ಸೀರಿಯಲ್‌ನತ್ತ ಹೆಜ್ಜೆ ಹಾಕಿದ್ದಾರೆ. ಇದೀಗ ಪವನ್ ಪಾಲಿಗೆ ಹಳೆಯ ಸೀರಿಯಲ್ ಎನಿಸಿರುವ 'ಜಾನಕಿ ರಾಘವ' ಮತ್ತು ಹೊಸ ಸೀರಿಯಲ್ 'ರಂಗನಾಯಕಿ' ಎರಡರ ಬಗ್ಗೆಯೂ ಪವನ್ ಮಾತನಾಡಿದ್ದಾರೆ.

Vijaya Karnataka Web 22 Apr 2019, 6:48 pm
'ಜಾನಕಿ ರಾಘವ' ಸೀರಿಯಲ್ ಖ್ಯಾತಿಯ ನಟ ಪವನ್ ರವೀಂದ್ರ, ಹೊಸ ಸೀರಿಯಲ್ 'ರಂಗನಾಯಕಿ' ನಾಯಕ 'ಚಿರಂತ್' ಪಾತ್ರದಲ್ಲಿ ಮಿಂಚಲು ಹೊರಟಿದ್ದಾರೆ. 'ಜಾನಕಿ ರಾಘವ' ಧಾರಾವಾಹಿಯಲ್ಲಿ 91 ಸಂಚಿಕೆಗಳಲ್ಲಿ ಮಿಂಚಿದ್ದ ನಟ ಪವನ್, ಇದೀಗ ಹೊಸ ಸೀರಿಯಲ್‌ನತ್ತ ಹೆಜ್ಜೆ ಹಾಕಿದ್ದಾರೆ. ಇದೀಗ ಪವನ್ ಪಾಲಿಗೆ ಹಳೆಯ ಸೀರಿಯಲ್ ಎನಿಸಿರುವ 'ಜಾನಕಿ ರಾಘವ' ಮತ್ತು ಹೊಸ ಸೀರಿಯಲ್ 'ರಂಗನಾಯಕಿ' ಎರಡರ ಬಗ್ಗೆಯೂ ಪವನ್ ಮಾತನಾಡಿದ್ದಾರೆ.
Vijaya Karnataka Web pavan2204


ಹೌದು, ನಟ ಪವನ್ ಅವರನ್ನು ಜಾನಕಿ ರಾಘವ ಸೀರಿಯಲ್‌ನಿಂದ ನಟನೆ ಸರಿಯಾಗಿಲ್ಲ ಎಂಬ ಕಾರಣಕ್ಕೆ ಕಿತ್ತು ಹಾಕಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಸತ್ಯವೇನು ಎಂಬುದನ್ನು ಪವನ್ ಹೇಳಿದ್ದಾರೆ. "91 ಎಪಿಸೋಡ್ ಮುಗಿಸಿದ ಮೇಲೆ ಜಾನಕಿ ರಾಘವ ನಿರ್ದೇಶಕರು ನನಗೆ 'ಇನ್ನು ಮುಂದಿನ ಪಾತ್ರಕ್ಕೆ ಹೆಚ್ಚು ಪ್ರಿಪರೇಷನ್ ಅಗತ್ಯವಿದೆ' ಎಂದಿದ್ದಾರೆ ಅಷ್ಟೇ.

ಅದಕ್ಕೊಪ್ಪಿದ ನಾನು ಪಾತ್ರಕ್ಕೆ ಅಗತ್ಯವಿರುವ ಸಿದ್ಧತೆಯಲ್ಲಿ ತೊಡಗಿಕೊಂಡಿದ್ದೆ. ಮುಂದೆ ಕೂಡ ನಾನೇ ನಟಿಸಲು ನಿರ್ದೇಶಕರು ಅನುಮತಿ ನೀಡಿದ್ದರು. ಆದರೆ, ಆ ಬಳಿಕ ಸೂಕ್ತ ಕಾರಣಕ್ಕೆ ನಮ್ಮಿಬ್ಬರ ಮಧ್ಯೆ ಪರಸ್ಪರ ಮಾತುಕತೆ-ಒಪ್ಪಿಗೆ ಮೇರೆಗೆ ನಾನು ಆ ಪ್ರಾಜೆಕ್ಟ್ ಬಿಟ್ಟು ಹೊರಬಂದೆ" ಎಂದಿದ್ದಾರೆ ನಟ ಪವನ್ ರವೀಂದ್ರ.

ಅಷ್ಟೇ ಅಲ್ಲ, "ಧಾರಾವಾಹಿ 'ಜಾನಕಿ ರಾಘವ' ಬಿಟ್ಟು ಬಂದ ಮೇಲೆ ನಾನು ನನ್ನ ನಟನೆ ಮತ್ತು ದೇಹ ಎರಡರ ಬಗ್ಗೆಯೂ ವಿಶೇಷ ಗಮನ ಹರಿಸಿದೆ. ಅದಕ್ಕೂ ಮೊದಲು ನಾನು ಅಷ್ಟಾಗಿ ನನ್ನ ವೃತ್ತಿಯ ಬಗ್ಗೆ ಸೀರಿಯಸ್ ಆಗಿರಲಿಲ್ಲ ಎನ್ನಬಹುದೇನೋ! ಚಿಕ್ಕ ಪಟ್ಟಣದಿಂದ ಬಂದ ನಾನು ನಟನಾ ಕ್ಷೇತ್ರಕ್ಕೆ ಬಂದಿರುವುದೇ ಒಂದು ಪವಾಡದಂತಿದೆ.

ಈ ರಂಗನಾಯಕಿ ಸೀರಿಯಲ್‌ಗೆ ಬರುವ ಮೊದಲು ನಾನು ಶ್ರುತಿ ನಾಯ್ಡು ಅವರ "ಏಟು ಎದಿರೇಟು' ಶೋನಲ್ಲಿ ಕೂಡ ಭಾಗವಹಿಸಿದ್ಧೇನೆ. ಒಟ್ಟಿನಲ್ಲಿ, ಇದೀಗ ನಾನು ರಂಗನಾಯಕಿ ಧಾರಾವಾಹಿಯ ನಾಯಕನಾಗಿ ನನ್ನ ಅಭಿನಯ ವೃತ್ತಿಯನ್ನು ಮುಂದುವರಿಸಿದ್ಧೇನೆ" ಎಂದಿದ್ದಾರೆ ನಟ ಪವನ್ ರವೀಂದ್ರ.

ಯಾವುದೇ ಸೀರಿಯಲ್‌ನ ಕಲಾವಿದರನ್ನಾಗಲೀ ರಸ್ತೆಯಲ್ಲಿ ಹೋಗುತ್ತಿದ್ದವರನ್ನು ತಂದು ಕ್ಯಾಮರಾ ಮುಂದೆ ನಿಲ್ಲಿಸುವುದಿಲ್ಲ. ಅಡಿಶನ್ ಮಾಡಿ ನೋಡಿಯೇ ಆಯ್ಕೆ ಮಾಡಿಕೊಳ್ಳುತ್ತಾರೆ. ನಿರ್ಮಾಪಕರು, ನಿರ್ದೇಶಕರು ಹಾಗೂ ಚಾನೆಲ್‌ನವರು ಎಲ್ಲರೂ ಓಕೆ ಮಾಡಿದ ಮೇಲೆಯೇ ಕಲಾವಿದರು ಕ್ಯಾಮರಾ ಮುಂದೆ ನಿಲ್ಲಲು ಸಾಧ್ಯ. ಹೀಗಿದ್ದೂ 90-100 ಸಂಚಿಕೆಗಳು ಮುಗಿದ ಮೇಲೆ ನಟನೆ ಬರುವುದಿಲ್ಲ ಎಂದರೆ ಯಾರ ಬಗ್ಗೆ ಸಂಶಯ ಪಡಬೇಕು ಎಂದು ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆ ನಡೆಯತೊಡಗಿದೆ. ಅಂದರೆ, ಹೇಳಲಾಗದ ಕಾರಣವನ್ನು ಈ ರೀತಿ ಹೇಳುತ್ತಾರಾ ಹೇಗೆ ಎನ್ನುವಂತಾಗಿದೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ