ಆ್ಯಪ್ನಗರ

'ವೀಕೆಂಡ್ ವಿತ್ ರಮೇಶ್'ನಲ್ಲಿ ಶಂಕರ್ ಬಿದರಿ ಮತ್ತು ಟೈಗರ್ ಅಶೋಕ್ ಕುಮಾರ್!

ಪೊಲೀಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಖ್ಯಾತಿ ಪಡೆದಿರುವ ಶಂಕರ್ ಬಿದರಿ ಮತ್ತು 'ಟೈಗರ್' ಖ್ಯಾತಿಯ ಬಿಬಿ ಅಶೋಕ್ ಕುಮಾರ್ ಅವರಿಬ್ಬರು ಭಾಗಿಯಾಗಿರುವ 'ವೀಕೆಂಡ್ ವಿತ್ ರಮೇಶ್' ಸಂಚಿಕೆಗಳು ಕ್ರಮವಾಗಿ ಇಂದು ಮತ್ತು ನಾಳೆ ಪ್ರಸಾರವಾಗಲಿವೆ. ಅವರ ಅನುಭವಗಳನ್ನು ಕೇಳಲು ಇಡೀ ಕರ್ನಾಟಕ ಕುತೂಹಲದಿಂದ ಕಾಯುತ್ತಿದೆ ಎನ್ನಬಹುದು.

TIMESOFINDIA.COM 29 Jun 2019, 7:19 pm
ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ವೀಕೆಂಡ್ ವಿತ್ ರಮೇಶ್'ಕಾರ್ಯಕ್ರಮದಲ್ಲಿ ಈ ವಾರದ ಅತಿಥಿಗಳಾಗಿ ಐಪಿಎಸ್ ಅಧಿಕಾರಿಗಳಾಗಿ ಸೇವೆ ಸಲ್ಲಿಸಿರುವ ಶಂಕರ್ ಬಿದರಿ ಮತ್ತು ಬಿಬಿ ಅಶೋಕ್ ಕುಮಾರ್ ಅವರು ಕಾಣಿಸಿಕೊಳ್ಳಲಿದ್ದಾರೆ. ಇಂದು ಶನಿವಾರ (ಜೂನ್ 29) ಮತ್ತು ಭಾನುವಾರ (ಜೂನ್ 30) ರಂದು ಕ್ರಮವಾಗಿ ಅವರಿಬ್ಬರೂ ಭಾಗಿಯಾಗಿರುವ 'ವೀಕೆಂಡ್ ವಿತ್ ರಮೇಶ್' ಶೋ ಪ್ರಸಾರವಾಗಲಿದೆ.
Vijaya Karnataka Web shankarBidari


ಪೊಲೀಸ್ ಸಂಸ್ಥೆಯಲ್ಲಿ ಸೇವೆ ಸಲ್ಲಿಸಿ ಖ್ಯಾತಿ ಪಡೆದಿರುವ ಶಂಕರ್ ಬಿದರಿ ಅವರು ತಮ್ಮ ವಿದ್ಯಾಭ್ಯಾಸ, ಪಟ್ಟ ಪರಿಶ್ರಮ, ಕರ್ನಾಟಕದ ಉನ್ನತ ಹುದ್ದೆ ಡಿಜಿಪಿ ನಿರ್ವಹಣೆ, ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಬ್ಲಾಸ್ಟ್ ಮೊದಲಾದ ಎಲ್ಲ ಸಂದರ್ಭಗಳಲ್ಲಿ ಹೊರಜಗತ್ತಿಗೆ ಗೊತ್ತಿಲ್ಲದ ಎಷ್ಟೋ ಸತ್ಯಗಳನ್ನು ಶಂಕರ್ ಬಿದರಿ ಅವರು ಈ 'ವೀಕೆಂಡ್ ವಿತ್ ರಮೇಶ್' ಶೋ ಮೂಲಕ ಜಗತ್ತಿನ ಎದುರು ಹಂಚಿಕೊಂಡಿದ್ದಾರೆ. ಅವರ ಅನುಭವಗಳನ್ನು ಕೇಳಲು ಇಡೀ ಕರ್ನಾಟಕ ಕುತೂಹಲದಿಂದ ಕಾಯುತ್ತಿದೆ ಎನ್ನಬಹುದು.

ಇನ್ನು 'ಟೈಗರ್ ಅಶೋಕ್ ಕುಮಾರ್' ಖ್ಯಾತಿಯ ಬಿಬಿ ಅಶೋಕ್ ಕುಮಾರ್ ಅವರು ತಮ್ಮ ಸ್ಕೂಲ್ ದಿನಗಳು, ತಾವು ಕಂಡಿದ್ದ ಕನಸು, ಪೊಲೀಸ್ ಆಫೀಸರ್ ಆಗಬೇಕೆಂದು ಅಂದುಕೊಳ್ಳದೇ ಐಪಿಎಸ್ ಆಫೀಸರ್ ಆಗಿ ಸೇವೆ ಸಲ್ಲಿಸಿದ ಸಂಗತಿ, ಹೀಗೆ ಹತ್ತು ಹಲವು ವಿಷಯಗಳನ್ನು ಭಾನುವಾರದ 'ವೀಕೆಂಡ್ ವಿತ್ ರಮೇಶ್' ಶೋ ಮೂಲಕ ಹೊರಜಗತ್ತಿಗೆ ಅನಾವರಣ ಮಾಡಲಿದ್ದಾರೆ.

ಒಟ್ಟಿನಲ್ಲಿ ಸಿನಿಮಾ ಸೆಲೆಬ್ರೆಟಿಗಳಿಗೇ ಹೆಚ್ಚು ಮೀಸಲಾಗಿದೆ ಎಂಬ ಅಪವಾದಕ್ಕೆ ಒಳಗಾಗಿದ್ದ 'ವೀಕೆಂಡ್ ವಿತ್ ರಮೇಶ್' ಕಾರ್ಯಕ್ರಮದಲ್ಲಿ ಇದೀಗ ಪೊಲೀಸ್ ಅಧಿಕಾರಿಗಳಾಗಿ ಸೇವೆ ಸಲ್ಲಿಸಿ ಖ್ಯಾತರಾದವರು ಕಾಣಿಸಿಕೊಳ್ಳುತ್ತಿರುವುದು ಹಲವರ ಸಂತೋಷಕ್ಕೆ ಕಾರಣವಾಗಿದೆ ಎನ್ನಲಾಗುತ್ತಿದೆ. ಅಂದಹಾಗೆ, ಇಂದು ರಾತ್ರಿ 9-00 ರಿಂದ 10-30ರವೆರೆಗೆ ಶಂಕರ್ ಬಿದರಿಯವರ ಸಂಚಿಕೆ 'ವೀಕೆಂಡ್ ವಿತ್ ರಮೇಶ್' ಪ್ರಸಾರವಾಗಲಿದ್ದು, ಈಗಾಗಲೇ ಈ ಸಂಚಿಕೆ ನೋಡಲು ಹಲವರು ಕುತೂಹಲದಿಂದ ಕಾಯುತ್ತಿದ್ದಾರೆ ಎನ್ನಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ