ಆ್ಯಪ್ನಗರ

Naagini 2: ಕೊರೊನಾ ಸಂಕಷ್ಟದಲ್ಲೂ ದಾಖಲೆ ಬರೆದ 'ನಾಗಿಣಿ 2' ಧಾರಾವಾಹಿ

ನಟ ಜೆಕೆ ಮತ್ತು ನಮ್ರತಾ ಗೌಡ ಮುಖ್ಯಭೂಮಿಕೆಯಲ್ಲಿರುವ 'ನಾಗಿಣಿ 2' ಧಾರಾವಾಹಿಯು ಹೊಸ ಸಾಧನೆಯೊಂದನ್ನು ಮಾಡಿದೆ. ಕಿರುತೆರೆ ಪ್ರೇಕ್ಷಕರ ಮನಸ್ಸು ಗೆದ್ದಿರುವ ಈ ಧಾರಾವಾಹಿ ಈಗ ಸೆಂಚುರಿ ಬಾರಿಸಿದೆ.

Vijaya Karnataka Web 12 Aug 2020, 1:19 pm
ಕೊರೊನಾದಿಂದಾಗಿ ಶೂಟಿಂಗ್ ಬಂದ್ ಆಗಿತ್ತು. ಹಾಗಾಗಿ, ಎಷ್ಟೋ ಧಾರಾವಾಹಿಗಳು ಪ್ರಸಾರವನ್ನು ತಾತ್ಕಾಲಿಕವಾಗಿ ನಿಲ್ಲಿಸಿದರೆ, ಇನ್ನೂ ಕೆಲವು ಧಾರಾವಾಹಿಗಳು ಶಾಶ್ವತವಾಗಿಯೇ ಬಂದ್ ಆದವು. ಇಂಥದ್ದೊಂದು ಸಂಕಷ್ಟದ ಸಮಯದಲ್ಲೂ ಜೆಕೆ- ನಮ್ರತಾ ಗೌಡ ಮುಖ್ಯಭೂಮಿಕೆಯ 'ನಾಗಿಣಿ 2' ಧಾರಾವಾಹಿ ಸಾಧನೆಯೊಂದನ್ನು ಮಾಡಿದೆ.
Vijaya Karnataka Web jk namratha gowda starrer naagini 2 serial completes 100 episodes
Naagini 2: ಕೊರೊನಾ ಸಂಕಷ್ಟದಲ್ಲೂ ದಾಖಲೆ ಬರೆದ 'ನಾಗಿಣಿ 2' ಧಾರಾವಾಹಿ


100 ಸಂಚಿಕೆ ಪೂರೈಸಿದ ನಾಗಿಣಿ 2
'ನಾಗಿಣಿ 2' ಧಾರಾವಾಹಿಯು ಯಶಸ್ವಿಯಾಗಿ 100 ಸಂಚಿಕೆಗಳನ್ನು ಪೂರೈಸಿದೆ. ಈ ಧಾರಾವಾಹಿ ಪ್ರಸಾರ ಆರಂಭಿಸಿದ ದಿನಗಳಿಂದಲೂ ಉತ್ತಮ ಟಿಆರ್‌ಪಿ ಪಡೆಯುವುದರ ಜೊತೆಗೆ ಪ್ರೇಕ್ಷಕರ ಪ್ರೀತಿಯನ್ನು ಗಳಿಸಿತ್ತು. ಅತ್ಯುತ್ತಮ ದೃಶ್ಯ ವೈಭವದಿಂದ ನೋಡುಗರ ಗಮನಸೆಳೆದಿರುವ ಈ ಧಾರಾವಾಹಿಯು, ಕಥೆಯ ಕಾರಣಕ್ಕೂ ಕನ್ನಡಿಗರ ಹೃದಯ ಗೆದ್ದಿದೆ. ಅಂದಹಾಗೆ, ಇದು ಹಿಂದಿಯ 'ನಾಗಿನ್' ಧಾರಾವಾಹಿಯ ಕನ್ನಡ ರಿಮೇಕ್ ಆಗಿದೆ. ಆದರೆ, ಕನ್ನಡದ ನೆಟಿವಿಟಿಗೆ ತಕ್ಕಂತೆ ನಿರೂಪಣೆಯನ್ನು ಬದಲಾಯಿಸಲಾಗಿದೆ.

ಶಿವಾನಿ ಪಾತ್ರದಲ್ಲಿ ನಟಿ ನಮ್ರತಾ ಗೌಡ ಕಾಣಿಸಿಕೊಂಡಿದ್ದು, 'ಆದಿಶೇಷ' ಎಂಬ ಅತಿಥಿ ಪಾತ್ರದಲ್ಲಿ ಜೆಕೆ ಬಣ್ಣ ಹಚ್ಚಿದ್ದರು. ಜೊತೆಗೆ ಮರಿನಾ ತಾರಾ, ಮೋಹನ್‌, ಸ್ವಾತಿ ಸೇರಿದಂತೆ ಮುಂತಾದ ಕಲಾವಿದರು ಪಾರ್ಟ್ 2ನಲ್ಲಿ ಇದ್ದಾರೆ. 'ನಾಗಿಣಿ' ಧಾರಾವಾಹಿಯಲ್ಲಿ ನಾಗಿಣಿಯಾಗಿ ದೀಪಿಕಾ ದಾಸ್ ಕಾಣಿಸಿಕೊಂಡು, ಪ್ರೇಕ್ಷಕರ ಮನಸೂರೆಗೊಂಡಿದ್ದರು. ಇದೀಗ ಪಾರ್ಟ್‌ 2ರಲ್ಲಿ ಆ ಪಾತ್ರ ನಮ್ರತಾ ಪಾಲಾಗಿದೆ. ಧಾರಾವಾಹಿ ಕುರಿತು ನಮ್ರತಾ ಈ ಹಿಂದೆ ಮಾತನಾಡಿದ್ದರು.

ನಟಿ ದೀಪಿಕಾ ದಾಸ್ ಅವರಿಗೆ ಸ್ಪರ್ಧೆ ಕೊಟ್ಟು ಗೆದ್ದ 'ನಾಗಿಣಿ 2' ಹೀರೋಯಿನ್ ನಮ್ರತಾ ಗೌಡ!

'ಈ ಹಿಂದೆ ದೀಪಿಕಾ ದಾಸ್ ಮಾಡಿದ್ದ ಪಾತ್ರವನ್ನು ನಾನು ಮಾಡುವಾಗ ನನಗೆ ಸಾಕಷ್ಟು ಸವಾಲುಗಳು ಎದುರಾದವು. ನಾನೀಗ ತುಂಬ ಪಾಸಿಟಿವ್ ಆಗಿದ್ದೇನೆ. ವೀಕ್ಷಕರು ನನ್ನನ್ನು ನಾಗಿಣಿಯಾಗಿ ಸ್ವೀಕರಿಸಲಿದ್ದಾರೆ ಎಂಬ ನಂಬಿಕೆ ಇದೆ' ಎಂದು ಅವರು ಹೇಳಿದ್ದರು. ಅವರು ಹೇಳಿದಂತೆಯೇ, ಈಗ ಪ್ರೇಕ್ಷಕರು 'ನಾಗಿಣಿ 2' ಧಾರಾವಾಹಿಯನ್ನು ಗೆಲ್ಲಿಸಿದ್ದಾರೆ. ವಿಶೇಷವೆಂದರೆ, ಕಿರುತೆರೆಯಲ್ಲಿ ಮೊದಲ ಬಾರಿಗೆ ಧಾರಾವಾಹಿಯಲ್ಲಿ ಒಂದು ರೊಮ್ಯಾಂಟಿಕ್ ಸಾಂಗ್ ಬಳಕೆ ಮಾಡಿದ ಕೀರ್ತಿ 'ನಾಗಿಣಿ 2' ಧಾರಾವಾಹಿಗೆ ಸಲ್ಲುತ್ತದೆ.

'ನಾಗಿಣಿ 2' ಧಾರಾವಾಹಿಯ ಶಿವಾನಿ ಖ್ಯಾತಿಯ ನಮ್ರತಾ ಗೌಡ ರಿಯಲ್ ಲೈಫ್‌ ಬಗೆಗಿನ ರೋಚಕ ಸಂಗತಿಗಳಿವು !

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ