ಆ್ಯಪ್ನಗರ

ಫ್ರಾನ್ಸ್‌, ವಿಯೆನ್ನಾದಲ್ಲಿನ ಮುಗ್ಧ ಜನರ ಹತ್ಯೆಯನ್ನು ಖಂಡಿಸಿದ 'ಜೊತೆ ಜೊತೆಯಲಿ' ಅನಿರುದ್ಧ!

ಫ್ರಾನ್ಸ್‌, ವಿಯೆನ್ನಾ, ಸೌದಿ ಅರೆಬೀಯಾದಲ್ಲಿ ನಡೆದ ಆಗಂತುಕರ ದಾಳಿಗಳ ಬಗ್ಗೆ ನಟ ಅನಿರುದ್ಧ ಪ್ರತಿಕ್ರಿಯೆ ನೀಡಿದ್ದಾರೆ. ಧರ್ಮದ ಹೆಸರಲ್ಲೋ, ಜಾತಿಯ ಹೆಸರಲ್ಲೋ, ಪರಸ್ಪರ ದ್ವೇಷಿಸೋದು ನಿಲ್ಲಿಸೋಣ ಎಂದು ಕರೆ ಕೊಟ್ಟಿದ್ದಾರೆ.

Vijaya Karnataka Web 4 Nov 2020, 1:07 pm
ಈಚೆಗೆ ಫ್ರಾನ್ಸ್‌, ವಿಯೆನ್ನಾ, ಸೌದಿ ಅರೆಬೀಯಾದಲ್ಲಿ ನಡೆದ ದಾಳಿಗಳು ಪ್ರಪಂಚವನ್ನೇ ಬೆಚ್ಚಿ ಬೀಳಿಸಿದೆ. ಆಗಂತುಕರು ನಡೆಸಿದ ಈ ದಾಳಿಯಲ್ಲಿ ಅನೇಕ ಮುಗ್ಧರು ಪ್ರಾಣ ಬಿಟ್ಟಿದ್ದಾರೆ. ಈ ಬಗ್ಗೆ ವಿಶ್ವವ್ಯಾಪಿ ಖಂಡನೆ ವ್ಯಕ್ತವಾಗಿದೆ. ಭಾರತ ಸರ್ಕಾರ ಕೂಡ ಈ ದಾಳಿಯನ್ನು ಖಂಡಿಸಿದೆ. ಅಂದಹಾಗೆ, ಕಿರೆತೆರೆಯ ಜನಪ್ರಿಯ 'ಜೊತೆ ಜೊತೆಯಲಿ' ಧಾರಾವಾಹಿಯ ಅನಿರುದ್ಧ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. 'ಈ ಭೀಕರ ಹತ್ಯೆ ಪ್ರಕರಣ ಕೇಳಿ ಮನಸ್ಸಿಗೆ ತುಂಬಾ ನೋವಾಗಿದೆ' ಎಂದು ಅವರು ಹೇಳಿದ್ದಾರೆ.
Vijaya Karnataka Web Aniruddha


ಈ ಕುರಿತು ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಬರೆದುಕೊಂಡಿರುವ ಅನಿರುದ್ಧ, 'ನಾನು, ನನ್ನದು ಯಾವ್ದೂ ಇಲ್ಲಿ ಶಾಶ್ವತ ಅಲ್ಲ. ಇಡೀ ಬ್ರಹ್ಮಾಂಡದಲ್ಲಿ ನಮ್ಮ ಭೂಮಿ ತಾಯಿ ಒಂದು ಚಿಕ್ಕ ಕಣದಷ್ಟು ಮಾತ್ರ. ಇನ್ನು ನಾವು? ಅದರಲ್ಲಿ ನಮಗೆ ಮನುಷ್ಯ ಜನ್ಮ ಸಿಕ್ಕಿರೋದೇ ನಮ್ಮ ಪುಣ್ಯ. ಅದರ ಮಹತ್ವ, ಪ್ರಾಮುಖ್ಯತೆ, ವೈಶಿಷ್ಟ್ಯತೆಗಳ ಅರಿವು ನಮಗಿರಲಿ. ಹಿಂದೆ ಇರೋ ಎಷ್ಟೋ ಧರ್ಮಗಳು, ಸಂಸ್ಕೃತಿಗಳು, ಸಂಪ್ರದಾಯಗಳು, ಇವತ್ತಿಲ್ಲ. ಮುಂದೆ ಕೂಡ ಹೊಸ ಧರ್ಮಗಳೂ, ಸಂಸ್ಕೃತಿಗಳೂ, ಸಂಪ್ರದಾಯಗಳೂ ಹುಟ್ಟಿಕೊಳ್ಳುತ್ತವೆ. ಇಲ್ಲಿ ಯಾವುದೂ ಶಾಶ್ವತ ಅಲ್ಲ' ಎಂದು ಅವರು ಬರೆದುಕೊಂಡಿದ್ದಾರೆ.

'ಇತ್ತೀಚಿಗೆ ಫ್ರಾನ್ಸ್, ಸೌದಿ ಅರೇಬಿಯಾ ಮತ್ತೆ ವಿಯೆನ್ನಾಗಳಲ್ಲಿ ನಡೆದ ಭೀಕರ ಹತ್ಯೆ ಪ್ರಕರಣ ಕೇಳಿ ಮನಸ್ಸಿಗೆ ತುಂಬಾ ನೋವಾಗಿದೆ. ಅದರ ಪರ, ವಿರೋಧದ ಮಾತುಗಳೂ ಕೇಳಿ ಬರುತ್ತಿವೆ. ವಾದ ಏನೇ ಇರಲಿ, ಅದರ ಪರಿಣಾಮ ಮಾತ್ರ ಭಯಾನಕ. ಧರ್ಮದ ಹೆಸರಲ್ಲೋ, ಜಾತಿಯ ಹೆಸರಲ್ಲೋ, ಪರಸ್ಪರ ದ್ವೇಷಿಸೋದು ನಿಲ್ಲಿಸೋಣ. ಮಾನವೀಯತೆ ಒಂದೇ ಧರ್ಮ. ನಾವು ಒಬ್ಬರನ್ನೊಬ್ಬರು, ಪರಸ್ಪರ ಪ್ರೀತಿಸೋಣ. ನಮ್ಮ ಮುಂದಿನ ಪೀಳಿಗೆಗೆ ನಾವು ಮಾದರಿಯಾಗೋಣ..' ಎಂದು ಕರೆ ನೀಡಿದ್ದಾರೆ ಅನಿರುದ್ಧ.

ತೇಜಸ್ವಿ ಸೂರ್ಯ ಭೇಟಿಯಾದ 'ಜೊತೆ ಜೊತೆಯಲಿ' ನಟ; ನೆಗೆಟಿವ್ ಕಾಮೆಂಟ್ ಹಾಕಿದವರಿಗೆ ಅನಿರುದ್ಧ ಪ್ರತಿಕ್ರಿಯೆ!

ಇನ್ನು, ಅನಿರುದ್ಧ ಅವರ 'ಜೊತೆ ಜೊತೆಯಲಿ' ಧಾರಾವಾಹಿ ಕುರಿತು ಹೇಳುವುದಾದರೆ, ಈಚೆಗೆ ಅದರಲ್ಲಿನ ನಟನೆಗೆ ಅನಿರುದ್ಧಗೆ ಪ್ರಶಸ್ತಿ ಸಿಕ್ಕಿದೆ. ಹೌದು, ಜೀ ಕುಟುಂಬ ಅವಾರ್ಡ್ಸ್‌ನಲ್ಲಿ 'ನೆಚ್ಚಿನ ನಟ ಪ್ರಶಸ್ತಿ' ನೀಡಲಾಗಿದೆ. ಈ ಬಗ್ಗೆಯೂ ಅನಿರುದ್ಧ ಪ್ರತಿಕ್ರಿಯೆ ನೀಡಿದ್ದಾರೆ. 'ನನ್ನ ಎಲ್ಲಾ ಅಭಿಮಾನಿಗಳಿಗೆ, ಕನ್ನಡಿಗರಿಗೆ, ತಮಿಳು, ತೆಲುಗು, ಮಲಯಾಳಂ, ಮರಾಠಿ ಹಾಗೂ ಇತರ ಭಾಷೆ ಮಾತಾಡೋ ಭಾರತೀಯ ಮತ್ತು ಪ್ರಪಂಚದ ಬೇರೆ ಬೇರೆ ಭಾಗದಲ್ಲಿರೋ ಎಲ್ಲಾ ಅಭಿಮಾನಿಗಳಿಗೆ, ಅವರು ನನ್ನ ಮೇಲೆ ಪ್ರೀತಿ ಹಾಗೂ ಆಶೀರ್ವಾದ ಸುರಸಿದ್ದಕ್ಕೆ... ನನ್ನ ಎಲ್ಲಾ ಮಾಧ್ಯಮದ ಮಿತ್ರರಿಗೆ, ಗುರು ಹಿರಿಯರಿಗೆ, ಪುಟ್ಟ ಮಕ್ಕಳಿಗೆ, ಸ್ನೇಹಿತರಿಗೆ, ಮತ್ತೊಮ್ಮೆ ಮಗದೊಮ್ಮೆ ತಮ್ಮೆಲ್ಲರಿಗೂ ಧನ್ಯವಾದಗಳು... ತಮ್ಮ ಪ್ರೀತಿಗೆ, ವಿಶ್ವಾಸಕ್ಕೆ, ಅಭಿಮಾನಕ್ಕೆ, ಹಾರೈಕೆಗೆ ಮತ್ತು ಆಶೀರ್ವಾದಕ್ಕೆ.... ನಾವೂ ಹೀಗೇ ಯಾವತ್ತೂ 'ಜೊತೆ ಜೊತೆಯಲಿ' ಇರೋಣ ಎಂದು ತಮ್ಮಲ್ಲಿ ಕಳಕಳಿಂದ ಕೇಳಿಕೊಳ್ಳುತ್ತೇನೆ' ಅಂತ ಅನಿರುದ್ಧ ಹೇಳಿದ್ದಾರೆ.

ಅಭಿಮಾನಿಗಳನ್ನು ಮನೆಗೆ ಕರೆಯಲಿದ್ದಾರೆ 'ಜೊತೆ ಜೊತೆಯಲಿ' ಅನಿರುದ್ಧ! ಆದರೆ ಒಂದು ಕಂಡೀಷನ್‌

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ