ಆ್ಯಪ್ನಗರ

ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಮತ್ತು ಆರ್ಯನ ನಡುವೆ ಬಂದಿರುವ ಜಲಂಧರ್ ಯಾರು?

'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರ್ಯವರ್ಧನ್ ಲಂಡನ್‌ಗೆ ಹೊರಡುತ್ತಿದ್ದಾನೆ. ಅಂತೂ ಅನುಗೆ ಬಾಯ್ ಬಾಯ್ ಹೇಳಿ ಕಾರ್ ಹತ್ತಿದ್ದಾನೆ. ಇತ್ತಕಡೆ ಅನು ಇನ್ನೂ ಕೆಲ ದಿನ ಆರ್ಯ ಸರ್ ನೋಡೋದಿಕ್ಕೆ ಆಗೋದಿಲ್ಲ ಎಂದು ದುಃಖದಲ್ಲೇ ತನ್ನ ಪ್ರೇಮಿಯನ್ನು ಬೀಳ್ಕೊಟ್ಟಿದ್ದಾಳೆ. ಹಾಗಾದರೆ ಆರ್ಯವರ್ಧನ್ ಲಂಡನ್‌ಗೆ ಹೋಗೋದು ನಿಜಾನಾ? ಆರ್ಯವರ್ಧನ್ ಇಲ್ಲದೆ ಧಾರಾವಾಹಿಯ ಎಪಿಸೋಡ್ ನಡೆಯಲಿದೆಯಾ? ಇಲ್ಲಿದೆ 'ಜೊತೆ ಜೊತೆಯಲಿ' ಧಾರಾವಾಹಿಯ ಮುಂದಿನ ಎಪಿಸೋಡ್ ಡಿಟೇಲ್ಸ್.

Vijaya Karnataka Web 6 Feb 2020, 11:45 am
'ಜೊತೆ ಜೊತೆಯಲಿ' ಧಾರಾವಾಹಿಯಲ್ಲಿ ಆರ್ಯವರ್ಧನ್ ಲಂಡನ್‌ಗೆ ಹೊರಡುತ್ತಿದ್ದಾನೆ. ಅಂತೂ ಅನುಗೆ ಬಾಯ್ ಬಾಯ್ ಹೇಳಿ ಕಾರ್ ಹತ್ತಿದ್ದಾನೆ. ಇತ್ತಕಡೆ ಅನು ಇನ್ನೂ ಕೆಲ ದಿನ ಆರ್ಯ ಸರ್ ನೋಡೋದಿಕ್ಕೆ ಆಗೋದಿಲ್ಲ ಎಂದು ದುಃಖದಲ್ಲೇ ತನ್ನ ಪ್ರೇಮಿಯನ್ನು ಬೀಳ್ಕೊಟ್ಟಿದ್ದಾಳೆ. ಹಾಗಾದರೆ ಆರ್ಯವರ್ಧನ್ ಲಂಡನ್‌ಗೆ ಹೋಗೋದು ನಿಜಾನಾ? ಆರ್ಯವರ್ಧನ್ ಇಲ್ಲದೆ ಧಾರಾವಾಹಿಯ ಎಪಿಸೋಡ್ ನಡೆಯಲಿದೆಯಾ? ಇಲ್ಲಿದೆ 'ಜೊತೆ ಜೊತೆಯಲಿ' ಧಾರಾವಾಹಿಯ ಮುಂದಿನ ಎಪಿಸೋಡ್ ಡಿಟೇಲ್ಸ್.
Vijaya Karnataka Web jothe jotheyali kannada serial written updates director brings jalandhar between anu and aryavardhan
ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅನು ಮತ್ತು ಆರ್ಯನ ನಡುವೆ ಬಂದಿರುವ ಜಲಂಧರ್ ಯಾರು?


ಲಂಡನ್‌ಗೆ ಹೋಗ್ತಾನಾ ಆರ್ಯ?

ಈ ಧಾರಾವಾಹಿ ಲಂಡನ್‌ನಲ್ಲಿ ಶೂಟ್ ಆಗೋದು ಸ್ವಲ್ಪ ಕಷ್ಟದ ಕೆಲಸ. ಧಾರಾವಾಹಿಗಳು ಲಂಡನ್‌ನಲ್ಲಿ ಶೂಟ್ ಆಗೋದೇ ಅಂತಲ್ಲ, ಆದರೆ ಆರ್ಯವರ್ಧನ್ ಪಾತ್ರಧಾರಿ ನಟ ಅನಿರುದ್ಧ್ ಲಂಡನ್‌ ಹೋಗಿಲ್ಲ. ಕೆಲ ದಿನಗಳ ಹಿಂದೆ ಅವರು ಕುಟುಂಬ ಸಮೇತ ಧರ್ಮಸ್ಥಳ, ಕುಕ್ಕೇ ಸುಬ್ರಹ್ಮಣ್ಯ ಮುಂತಾದ ದೇಗುಲಗಳಿಗೆ ತೆರಳಿದ್ದರು. ಹೀಗಾಗಿ ಈ ಸಮಯದಲ್ಲಿ ಶೂಟ್ ಮಾಡದೇ ಇರಬಹುದು. ಆದ್ದರಿಂದ ಕೆಲ ಎಪಿಸೋಡ್‌ಗಳಲ್ಲಿ ಆರ್ಯವರ್ಧನ್ ಇರದಿರುವ ಸಾಧ್ಯತೆ ಹೆಚ್ಚಿದೆ. ಅಷ್ಟೇ ಅಲ್ಲದೆ ಆರ್ಯವರ್ಧನ್ ಮತ್ತು ಅನು ಕಾಂಬಿನೇಶನ್ ಒಟ್ಟಿಗೆ ತೆರೆ ಮೇಲೆ ಏಕ ಕಾಲಕ್ಕೆ ಕಾಣಿಸಿಕೊಂಡಾಗ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ. ಹೀಗಾಗಿ ಆರ್ಯವರ್ಧನ್ ಇಲ್ಲದೆ ಎಪಿಸೋಡ್‌ ಪ್ರಸಾರ ಆಗುವುದು ಸ್ವಲ್ಪ ಡೌಟಿದೆ.

ಜೇಂಢೇ ತಲೆಕೆಡಿಸಿಕೊಂಡಿರುವ ಜಲಂಧರ್ ಯಾರು?

ಈ ಧಾರಾವಾಹಿಯಲ್ಲಿ ಜೇಂಡೇ, ಮೀರಾ ಮಾತ್ರ ಅನು-ಆರ್ಯ ಪಾಲಿಗೆ ವಿಲನ್ ಆಗಿದ್ದರು ಎಂದು ಭಾವಿಸಲಾಗಿತ್ತು. ಆದರೆ ಕಥೆ ಬೇರೆಯೇ ಇದೆ. ಏಕೆಂದರ್ ಜಲಂಧರ್ ಆಗಮನವಾಗಿದೆ. ಜಲಂಧರ್ ಯಾರು? ಜಲಂಧರ್‌ಗೂ ಜೇಂಡೇಗೂ ಏನು ಸಂಬಂಧ? ಜಲಂಧರ್ ರಿಲೀಸ್ ಆದರೆ ಆರ್ಯ ಯಾಕೆ ತಲೆಕೆಡಿಸಿಕೊಳ್ಳಬೇಕು? ಈ ಎಲ್ಲ ಪ್ರಶ್ನೆಗಳಿಗೆ ಮುಂದಿನ ಎಪಿಸೋಡ್‌ಗಳಲ್ಲಿ ಉತ್ತರ ಸಿಗಲಿದೆ. ಆದರೆ ಜಲಂಧರ್, ಆರ್ಯ ಕುಟುಂಬಕ್ಕೆ ಸೇರಿದವನಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಅಷ್ಟೇ ಅಲ್ಲದೆ ಪ್ರತಿಯೊಂದು ಧಾರಾವಾಹಿಯಲ್ಲಿ ಕೆಂಡ ಕಾರುವ, ವಿಷ ಹಾಕುವ ವಿಲನ್ ಇದ್ದೇ ಇರುತ್ತಾನೆ. ಹೀಗಾಗಿ ಅನು-ಆರ್ಯ ಮಧ್ಯೆ ಜಲಂಧರ್ ಇನ್ನಷ್ಟು ಆಟ ಆಡುವ ಸಾಧ್ಯತೆ ಹೆಚ್ಚಿದೆ. ಇಷ್ಟು ದಿನ ಇವರಿಬ್ಬರ ಪ್ರೀತಿ-ಆಫೀಸ್-ಪುಷ್ಫಾ ಮನೆ ಸುತ್ತ ನಡೆಯುತ್ತಿದ್ದ ಕಥೆ ಸುತ್ತ ಜಲಂಧರ್ ಆಗಮಿಸಿದ್ದಾನೆ. ಹೀಗಾಗಿ ಕಥೆ ಇನ್ನಷ್ಟು ರೋಚಕತೆ ಪಡೆದುಕೊಳ್ಳಲಿದೆ.

ಜಲಂಧರ್‌ನನ್ನು ಆರ್ಯ ಹೇಗೆ ಎದುರಿಸುತ್ತಾನೆ?

ಜಲಂಧರ್‌ನಿಂದ ಆರ್ಯನಿಗೆ, ಆರ್ಯನ ಸುತ್ತ ಮುತ್ತ ಇದ್ದವರಿಗೆ ಏನೇನೆಲ್ಲ ಸಮಸ್ಯೆ ಆಗಲಿದೆ ಎಂಬುದನ್ನು ಮುಂದಿನ ದಿನಗಳಲ್ಲಿ ತೋರಿಸಲಿದ್ದಾರೆ. ಅಷ್ಟೇ ಅಲ್ಲದೆ ಇದರಿಂದ ಅನು ಮೇಲೆ ಬೀರುವ ಪರಿಣಾಮ ಏನು ಅನ್ನೋದು ಕೂಡ ಗೊತ್ತಾಗಲಿದೆ. ಅಷ್ಟೇ ಅಲ್ಲದೆ ಬುದ್ಧಿವಂತ ಆರ್ಯ, ಜಲಂಧರ್‌ಗೆ ಹೇಗೆ ಪಾಠ ಕಲಿಸುತ್ತಾನೆ? ಹೇಗೆ ಮಟ್ಟ ಹಾಕುತ್ತಾನೆ ಎಂಬುದು ಕೂಡ ಬಹಿರಂಗವಾಗಲಿದೆ. ಹೀಗಾಗಿ ಈ ಎಪಿಸೋಡ್‌ಗಳನ್ನು ನೋಡಲು ಜನರು ತುಂಬ ಕಾತುರರಾಗಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ