ಆ್ಯಪ್ನಗರ

Kamali Serial: ಮದುವೆಯಾಗುತ್ತಿರುವ 'ಕಮಲಿ' ಧಾರಾವಾಹಿ ಕಲಾವಿದರಾದ ಗ್ಯಾಬ್ರಿಯಾಲಾ & ಸುಹಾಸ್

ಕಮಲಿ ಧಾರಾವಾಹಿಯಲ್ಲಿ ಅನಿಕಾ ಪಾತ್ರ ಮಾಡುತ್ತಿರುವ ನಟಿ ಗೇಬ್ರಿಯೆಲಾ ಹಾಗೂ ಶಂಭು ಪಾತ್ರ ಮಾಡುತ್ತಿರುವ ನಟ ಸುಹಾಸ್ ಅವರು ಪ್ರೀತಿ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. 'ವಿಜಯ ಕರ್ನಾಟಕ ವೆಬ್' ಜೊತೆ ಮಾತನಾಡಿರುವ ಗೇಬ್ರಿಯೆಲಾ ಅವರು ಈ ವಾರವೇ ಮದುವೆ ಆಗಲಿದ್ದೇವೆ ಎಂದಿದ್ದಾರೆ. ಈ ಕಲಾವಿದರು ಕಮಲಿ ಧಾರಾವಾಹಿ ಸೆಟ್‌ನಲ್ಲಿ ಪರಿಚಯ ಆಗಿ ಪ್ರೀತಿಯಲ್ಲಿ ಬಿದ್ದಿತ್ತು. ಈ ಜೋಡಿ ಮದುವೆ ಪ್ಲ್ಯಾನ್ ಹೇಗಿರಲಿದೆಯಂತೆ?

Authored byಪದ್ಮಶ್ರೀ ಭಟ್ | Vijaya Karnataka Web 16 Aug 2022, 1:26 pm

ಹೈಲೈಟ್ಸ್‌:

  • ರಿಯಲ್ ಆಗಿ ಪ್ರೀತಿಯಲ್ಲಿ ಬಿದ್ದ ಗೇಬ್ರಿಯೆಲಾ ಹಾಗೂ ಸುಹಾಸ್
  • ಕಮಲಿ ಧಾರಾವಾಹಿಯಲ್ಲಿ ನಟಿಸುತ್ತಿರುವ ಗೇಬ್ರಿಯೆಲಾ, ಸುಹಾಸ್ ಜೋಡಿ
  • ಈ ವಾರ ಮದುವೆ ಆಗಲಿರುವ ಗೇಬ್ರಿಯೆಲಾ, ಸುಹಾಸ್



ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web kamali serial
( ಸಂದರ್ಶನ )
'ಕಮಲಿ' ಧಾರಾವಾಹಿಯಲ್ಲಿ ( Kamali Serial ) ನಟಿಸುತ್ತಿದ್ದ ಗೇಬ್ರಿಯೆಲಾ ಅಲಿಯಾಸ್ ರಚನಾ ( Gabriella Smith ) ಹಾಗೂ ಸುಹಾಸ್ ಅವರ ಮಧ್ಯೆ ರಿಯಲ್ ಆಗಿ ಪ್ರೀತಿ ಅರಳಿದೆ. ಕಳೆದ ಮೂರು ವರ್ಷಗಳಿಂದ ಪ್ರೀತಿ ಮಾಡಿಕೊಳ್ಳುತ್ತಿದ್ದ ಈ ಜೋಡಿ ಈ ವಾರವೇ ಮದುವೆ ಆಗಲಿದೆ. ಈ ವಿಷಯವನ್ನು ಸ್ವತಃ ಗ್ಯಾಬ್ರಿಲಾ ಅವರು 'ವಿಜಯ ಕರ್ನಾಟಕ ವೆಬ್' ಜೊತೆ ಹಂಚಿಕೊಂಡಿದ್ದಾರೆ.

3 ವರ್ಷಗಳಿಗೂ ಅಧಿಕ ಸಮಯದಿಂದ ಲವ್

"ನಾನು ಹಾಗೂ ಸುಹಾಸ್ ಅವರು ಆರಂಭದಿಂದಲೂ ಕಮಲಿ ಧಾರಾವಾಹಿಯಲ್ಲಿ ನಟಿಸುತ್ತಿದ್ದೇವೆ. ಆ ಸೀರಿಯಲ್‌ನಲ್ಲಿ ನಾನು ಅನಿಕಾ ಪಾತ್ರ ಮಾಡುತ್ತಿದ್ದೇನೆ, ಸುಹಾಸ್ ಅವರು ಶಂಭು ಪಾತ್ರ ಮಾಡುತ್ತಿದ್ದಾರೆ. ಆರಂಭದಲ್ಲಿ ನಾವಿಬ್ಬರೂ ಸ್ನೇಹಿತರಾಗಿದ್ದೆವು. ಹೊರಾಂಗಣ ಶೂಟ್ ಇದ್ದಾಗಲೇ ನನ್ನ, ಸುಹಾಸ್ ಮಧ್ಯೆ ಮಾತು ಹೆಚ್ಚಾಗಿ ಸ್ನೇಹ ಬೆಳೆದು, ಪ್ರೀತಿಯಾಗಿ ತಿರುಗಿತು. ಕಳೆದ 3 ವರ್ಷಗಳಿಂದ ರಿಲೇಶನ್‌ಶಿಪ್‌ನಲ್ಲಿದ್ದರೂ ಕೂಡ ನಾವು ಈ ವಿಚಾರವನ್ನು ಯಾರಿಗೂ ಹೇಳಿರಲಿಲ್ಲ" ಎಂದು ಹೇಳಿದ್ದಾರೆ ಗೇಬ್ರಿಯೆಲಾ

"ಸುಹಾಸ್ ಕಮಲಿ ಸೇರಿದಂತೆ ಮರಳಿ ಮನಸಾಗಿದೆ, ನಿನ್ನಿಂದಲೇ, ಮಂಗಳಗೌರಿ ಮದುವೆ ಮುಂತಾದ ಧಾರಾವಾಹಿಗಳು, ಸಿನಿಮಾದಲ್ಲಿ ನಟಿಸಿದ್ದಾರೆ, ಡಬ್ಬಿಂಗ್ ಆರ್ಟಿಸ್ಟ್ ಕೂಡ ಹೌದು. ಸುಹಾಸ್ ನನಗೆ ಪ್ರೇಮ ನಿವೇದನೆ ಮಾಡಿದಾಗ ನಾನು ಒಪ್ಪಿಕೊಂಡೆ. ಎರಡೂ ಕುಟುಂಬದವರು ಈ ಮದುವೆಗೆ ಒಪ್ಪಿದ್ದಾರೆ. ಈಗ ಖುಷಿಯಿಂದ ಮದುವೆ ಆಗುತ್ತಿದ್ದೇವೆ" ಎಂದಿದ್ದಾರೆ ಗೇಬ್ರಿಯೆಲಾ
ಜನರ ಬೈಗುಳ ಸಹಿಸಲಾಗದೆ ಆರು ತಿಂಗಳು ಸೋಶಿಯಲ್ ಮೀಡಿಯಾ ನೋಡಿರಲಿಲ್ಲ: 'ಕಮಲಿ' ಧಾರಾವಾಹಿ ನಟಿ ರಚನಾ ಸ್ಮಿತ್

ಅಕ್ಟೋಬರ್‌ನಲ್ಲಿ ಆರತಕ್ಷತೆ ಕಾರ್ಯಕ್ರಮ
"ಎರಡೂ ಕುಟುಂಬದವರು ಮದುವೆ ಒಪ್ಪಿದ್ದಾರೆ. ನಾವಿಬ್ಬರೂ ತುಂಬ ಅರ್ಥಮಾಡಿಕೊಂಡಿದ್ದೇವೆ, ಚೆನ್ನಾಗಿ ಬಾಳುತ್ತೇವೆ ಎಂಬ ನಂಬಿಕೆಯಿದೆ" ಎಂದಿದ್ದಾರೆ ಗೇಬ್ರಿಯೆಲಾ

ಜನಪ್ರಿಯ ಕಮಲಿ ಧಾರಾವಾಹಿ ಮುಕ್ತಾಯ ಆಗುತ್ತಿಲ್ಲ!

"ಅಕ್ಟೋಬರ್‌ನಲ್ಲಿ ಆರತಕ್ಷತೆಗೆ ಎಲ್ಲರನ್ನೂ ಕರೆಯುತ್ತೇವೆ. ಸದ್ಯ ಸುಹಾಸ್ ಜೊತೆ ಹೊಸ ಜೀವನ ಶುರು ಮಾಡುತ್ತಿರುವುದಕ್ಕೆ ತುಂಬ ಖುಷಿಯಿದೆ. ಇದಕ್ಕೆ ಎಲ್ಲರ ಪ್ರೀತಿ, ಆಶೀರ್ವಾದ ಬೇಕು" ಎಂದಿದ್ದಾರೆ ಗೇಬ್ರಿಯೆಲಾ

ಸುಹಾಸ್ ಅವರು ಪ್ರೇಮ ನಿವೇದನೆ ಮಾಡಿರುವ ವಿಡಿಯೋವನ್ನು ಗೇಬ್ರಿಯೆಲಾ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ವಿಶೇಷವಾದ ಕಾರಣಕ್ಕೆ ನಟ ಪುನೀತ್ ರಾಜ್‌ಕುಮಾರ್ ಭೇಟಿ ಮಾಡಿದ 'ಕಮಲಿ' ಧಾರಾವಾಹಿ ನಟಿ ರಚನಾ ಸ್ಮಿತ್!
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ