ಆ್ಯಪ್ನಗರ

ವೀಕೆಂಡ್ ವಿತ್ ರಮೇಶ್ ಶೋ: ನಟ ಶರಣ್ ಸಂಚಿಕೆ ಪ್ರಸಾರಕ್ಕೆ ಕ್ಷಣಗಣನೆ!

ಶರಣ್ ಸಂಚಿಕೆ ಪ್ರಸಾರವಾಗಲಿದೆ ಎಂದ ಗೊತ್ತಾದ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಲವರು ಈ ಬಗ್ಗೆ ತಕರಾರು ತೆಗೆದಿದ್ದಾರೆ ಎನ್ನಲಾಗಿದೆ. ಆದರೆ, ಅದು ನಟ ಶರಣ್ ವಿರುದ್ಧ ಅಲ್ಲ ಮತ್ತು ಶರಣ್ ಸಾಧಕರಲ್ಲ ಎಂಬ ಅರ್ಥದಲ್ಲಿ ಅಲ್ಲ.

Vijaya Karnataka Web 15 Jun 2019, 12:11 pm
ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಪ್ರತಿ ಶನಿವಾರ ಮತ್ತು ಭಾನುವಾರ ಸಾಧಕರ ಸೀಟಿನಲ್ಲಿ ಕುಳಿತು ಸೆಲೆಬ್ರಟಿಟಗಳು ಮಾತನಾಡುವುದು ಬಹಳಷ್ಟು ಜನರಿಗೆ ಗೊತ್ತಿರುವ ಸಂಗತಿ. ಈ ಸೀಸನ್‌ನ ವೀಕೆಂಟ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಈಗಾಗಲೇ ಧರ್ಮಸ್ಥಳದ ಧರ್ಮಾಧಿಕಾರಿ ವೀರೆಂದ್ರ ಹೆಗ್ಗಡೆ, ನಟಿ ಪ್ರೇಮಾ, ರಾಘವೇಂದ್ರ ರಾಜ್‌ಕುಮಾರ್, ಸುಧಾಮೂರ್ತಿ-ನಾರಾಯಣಮೂರ್ತಿ, ವಿನಯಾ ಪ್ರಸಾದ್, ಟಿಎಸ್ ನಾಗಾಭರಣ ಸೇರಿದಂತೆ ಹಲವಾರು ಸೆಲೆಬ್ರಿಟಿಗಳು ಈಗಾಗಲೇ ಭಾಗಿಯಾಗಿ ತಮ್ಮ ಸಾಧನೆಯ ಜರ್ನಿ ಬಗ್ಗೆ ಹೇಳಿಕೊಂಡಿದ್ದಾರೆ. ಇದೀಗ ಹಾಸ್ಯ ನಟ ಶರಣ್ ಸರದಿ.
Vijaya Karnataka Web sharan1506


ಹೌದು, ಕನ್ನಡದ ಹಾಸ್ಯನಟ ಶರಣ್ ಅವರು ಈ ವಾರದ ಅತಿಥಿಯಾಗಿ ಸಾಧಕರ 'ಕೆಂಪು ಕುರ್ಚಿ'ಯಲ್ಲಿ ಕುಳಿತುಕೊಂಡಿದ್ದಾರೆ. ಈಗಾಗಲೇ ಈ ಎಪಿಸೋಡ್ ಶೂಟ್ ಆಗಿದ್ದು, ಇಂದು (ಜೂನ್ 15, 2019) ರಂದು ಈ ಸಂಚಿಕೆ ಪ್ರಸಾರವಾಗಲಿದೆ. ಎಂದಿನಂತೆ ಶನಿವಾರ ಮತ್ತು ಭಾನುವಾರ ರಾತ್ರಿ 9-00 ಗಂಟೆಗೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗಲಿರುವ ಈ ಶೋದಲ್ಲಿ ಇಂದು ನಟ ಶರಣ್ 'ಸಿನಿಮಾ ಯಾನ'ವನ್ನು ಪ್ರೇಕ್ಷಕರು ನೋಡಲಿದ್ದಾರೆ.

ಶರಣ್ ಸಂಚಿಕೆ ಪ್ರಸಾರವಾಗಲಿದೆ ಎಂದ ಗೊತ್ತಾದ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಹಲವರು ತಕರಾರು ತೆಗೆದಿದ್ದಾರೆ ಎನ್ನಲಾಗಿದೆ. ಆದರೆ, ಅದು ನಟ ಶರಣ್ ವಿರುದ್ಧ ಅಲ್ಲ ಮತ್ತು ಶರಣ್ ಸಾಧಕರಲ್ಲ ಎಂಬ ಅರ್ಥದಲ್ಲಿ ಅಲ್ಲ. ಬದಲಿಗೆ, ಕಾರ್ಯಕ್ರಮದ ಹೆಸರು 'ವೀಕೆಂಡ್ ವಿತ್ ರಮೇಶ್; ಎಂದು ಇಟ್ಟುಕೊಂಡು ಅದ್ಯಾಕೆ ಕೇವಲ ಸಿನಿಮಾ ಸೆಲೆಬ್ರೆಟಿಗಳನ್ನೇ ಹೆಚ್ಚಿನ ಸಂಖ್ಯೆಯಲ್ಲಿ ಕರೆಸುವುದು ಎಂಬುದು ವೀಕ್ಷಕರ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ. ಎಲ್ಲೋ ಒಬ್ಬಿಬ್ಬರು ಬೇರೆ ಕ್ಷೇತ್ರದ ಸಾಧಕರನ್ನು ಕರೆಸಿದ್ದು ಬಿಟ್ಟರೆ ಮಿಕ್ಕಂತೆ ಸಿನಿಮಾ ಸಾಧಕರ ಸಂಚಿಕೆ ಮಾತ್ರ ಪ್ರಸಾರ ಕಾಣುತ್ತಿರುವುದು ವೀಕ್ಷಕರ ಕೋಪಕ್ಕೆ ಕಾರಣವಾಗಿದೆ ಎನ್ನಲಾಗಿದೆ.

ಸಾಲುಮರದ ತಿಮ್ಮಕ್ಕನೋ ಅಥವಾ ಕಷ್ಟಪಟ್ಟು ಕೃಷಿ ಮಾಡುತ್ತಿರುವ ಮಹಾನ್ ರೈತರನ್ನೋ ಈ ಶೋಗೆ ಕರೆಸಲಿಕ್ಕೆ ಯಾಕೆ ಆಗುವುದಿಲ್ಲ ಎಂಬುದು ಹಲವಾರು ಟಿವಿ ವೀಕ್ಷಕರ ಹಾಗೂ ಈ ಶೋ ಅಭಿಮಾನಿಗಳ ಪ್ರಶ್ನೆ ಎನ್ನಲಾಗುತ್ತಿದೆ. ಬರೇ ಸಿನಿಮಾ ತಾರೆಗಳಿಗೇ ಈ ಶೋ ಮೀಸಲು ಎಂದಾದರೇ ಯಾಕೆ 'ವೀಕೆಂಡ್ ವಿತ್ ರಮೇಶ್' ಎಂಬ ಟೈಟಲ್ ಬದಲಾಯಿಸಿ ಬೇರೆ ಹೆಸರು ಇಡಬಾರದು ಎಂದು ಬಹಳಷ್ಟು ವೀಕ್ಷಕರು ಪ್ರಶ್ನಿಸುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ.

ಒಟ್ಟಿನಲ್ಲಿ, ಇಂದು ನಟ ಶರಣ್ ಸಂಚಿಕೆ ಪ್ರಸಾರವಾಗಲಿದ್ದು, ವೀಕೆಂಡ್ ವಿತ್ ರಮೇಶ್ ಶೋ ಮೂಲಕ ನಟ ಶರಣ್ ಸಾಧನೆಯ ಹಾದಿಯಲ್ಲಿನ ಹಲವರಿಗೆ ಗೊತ್ತಿಲ್ಲದ ಹಲವಾರು ಸಂಗತಿಗಳು ಹೊರಜಗತ್ತಿಗೆ ಅನಾವರಣಗೊಳ್ಳಲಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ