ಆ್ಯಪ್ನಗರ

ಅಂದು 'ಪದ್ಮಾವತಿ' ಧಾರಾವಾಹಿ ಥಟ್ಟನೆ ಮುಗಿದಿದ್ದಕ್ಕೆ ಅದರ ಹೀರೋ ತ್ರಿವಿಕ್ರಮ್ ಹೇಳಿದ್ದೇನು?

2017ರಲ್ಲಿ ಆರಂಭವಾಗಿ 2019ರಲ್ಲಿ ಮುಕ್ತಾಯವಾದ ಜನಪ್ರಿಯ ಧಾರಾವಾಹಿ 'ಪದ್ಮಾವತಿ' ವಿಚಾರವಾಗಿ ನಟ ತ್ರಿವಿಕ್ರಮ್ ಕೆಲ ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರು ಹೇಳಿದ ಆ ಆಸಕ್ತಿಕರ ವಿಷಯ ಏನು?

Vijaya Karnataka Web 7 Jul 2020, 7:47 pm
ಕನ್ನಡ ಕಿರುತೆರೆಯ ಹ್ಯಾಂಡ್‌ಸಮ್ ಹುಡುಗ ತ್ರಿವಿಕ್ರಮ್ ಕಲರ್ಸ್ ಕನ್ನಡ ಧಾರಾವಾಹಿಯ 'ಪದ್ಮಾವತಿ' ಧಾರಾವಾಹಿಯಲ್ಲಿ ನಟಿಸಿದ್ದರು. ಪದ್ಮಾವತಿ ಎಂಬ ದೇವರು ಹಾಗೂ ಅವಳ ಭಕ್ತೆ ತುಳಸಿಯ ಸುತ್ತವೇ ಈ ಸೀರಿಯಲ್ ಕಥೆ ಸಾಗಿತ್ತು. ಜನ್ಮ ಜನ್ಮದ ಕಥೆ ಬಗ್ಗೆ ಕೂಡ ಇಲ್ಲಿ ಪ್ರಸ್ತಾಪ ಆಗಿತ್ತು. ಇದರಲ್ಲಿ ಹೀರೋ ಮತ್ತು ಹೀರೋಯಿನ್ ಅವರ ಜನ್ಮಾಂತರದ ಕಥೆಯಲ್ಲಿ ರಾಜ-ರಾಣಿ ಪೋಷಾಕು ಧರಿಸಿದ್ದು ವಿಕ್ಷಕರ ಗಮನಸೆಳೆದಿತ್ತು. 2019ರಲ್ಲಿ ಈ ಸೀರಿಯಲ್ ಮುಕ್ತಾಯವಾಗಿತ್ತು.
Vijaya Karnataka Web kannada actor trivikram speaks about padmavathi serial
ಅಂದು 'ಪದ್ಮಾವತಿ' ಧಾರಾವಾಹಿ ಥಟ್ಟನೆ ಮುಗಿದಿದ್ದಕ್ಕೆ ಅದರ ಹೀರೋ ತ್ರಿವಿಕ್ರಮ್ ಹೇಳಿದ್ದೇನು?


ಲಾಕ್‌ಡೌನ್‌ನಿಂದ ಹೊಸ ಧಾರಾವಾಹಿಗಳನ್ನು ನಿರ್ಮಿಸಲು ಸಾಧ್ಯವಾಗದೆ, ಟಿಆರ್‌ಪಿ ಇಲ್ಲದ ಸೀರಿಯಲ್ ಕೂಡ ಉಳಿಸಿಕೊಳ್ಳಲಾಗದೆ ಅರ್ಧಕ್ಕೆ ಹಲವು ಧಾರಾವಾಹಿಗಳು ಮುಕ್ತಾಯವಾಗಿದ್ದವು. ಅಷ್ಟೇ ಅಲ್ಲದೆ ಹಳೆಯ ಕೆಲ ಜನಪ್ರಿಯ ಧಾರಾವಾಹಿಗಳನ್ನು ಮತ್ತೆ ಪ್ರಸಾರ ಮಾಡಲಾಗುತ್ತಿದೆ. ಅವುಗಳಲ್ಲಿ 'ಪದ್ಮಾವತಿ' ಕೂಡ ಒಂದು. ಕಲರ್ಸ್ ಸೂಪರ್ ವಾಹಿನಿಯಲ್ಲಿ ಜೂನ್ 29ರಿಂದ ಸಂಜೆ 6.30ಕ್ಕೆ ಈ ಸೀರಿಯಲ್ ಪ್ರಸಾರವಾಗುತ್ತಲಿದೆ. ಹಿರಿಯ ನಟಿ ಲಕ್ಷ್ಮೀ ದೇವಿ ಈ ಸೀರಿಯಲ್ ಮೂಲಕ ಮತ್ತೆ ಬಣ್ಣಹಚ್ಚಿದ್ದು, ವಿಶೇಷವಾಗಿತ್ತು.

ಇವರು ನಟ ಅಲ್ಲದೆ ಕ್ರೀಡಾಳು ಕೂಡ ಆಗಿದ್ದಾರೆ. 'ಪದ್ಮಾವತಿ' ಧಾರಾವಾಹಿ ಮೂಲಕ ತ್ರಿವಿಕ್ರಮ್‌ಗೆ ಜನಪ್ರಿಯತೆ ಸಿಕ್ಕಿತು. ಅವರ ಧಾರಾವಾಹಿ ಪಯಣದ ಬಗ್ಗೆ ತ್ರಿವಿಕ್ರಮ್ 'ಟೈಮ್ಸ್ ಆಫ್ ಇಂಡಿಯಾ' ಜೊತೆಗೆ ಮಾತನಾಡಿದ್ದಾರೆ.

1000 ಜನರ ನಂತರ ಸಾಮ್ರಾಟ್‌ ಪಾತ್ರಕ್ಕೆ ಆಯ್ಕೆಯಾಗಿದ್ದ ತ್ರಿವಿಕ್ರಮ್!

ಮೂರು ವರ್ಷಗಳ ಕಾಲ ಪ್ರಸಾರವಾಗಿದ್ದ ಈ ಸೀರಿಯಲ್ ಕಳೆದ ವರ್ಷ ಪ್ರಸಾರ ನಿಲ್ಲಿಸಿತ್ತು. ಟಿಆರ್‌ಪಿಯಲ್ಲೂ ಕೂಡ 'ಪದ್ಮಾವತಿ' ಒಳ್ಳೆಯ ಅಂಕಿ ಪಡೆದಿತ್ತು. ಒಟ್ಟಾರೆಯಾಗಿ ಈ ಸೀರಿಯಲ್ ಸಾಕಷ್ಟು ಜನರ ಮೆಚ್ಚುಗೆ ಗಳಿಸಿತ್ತು. ಕಿರುತೆರೆಯಲ್ಲಿ 'ಪದ್ಮಾವತಿ' ಧಾರಾವಾಹಿಯ ಸಾಮ್ರಾಟ್ ಆಗಿ ಕಾಣಿಸಿಕೊಂಡಿದ್ದ ನಟ ತ್ರಿವಿಕ್ರಮ್, ಬೆಳ್ಳಿತೆರೆಯಲ್ಲಿ ಕಾಣಿಸಿಕೊಂಡರು. 'ನಾನು ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದಾಗ ಪದ್ಮಾವತಿ ಧಾರಾವಾಹಿ ಅವಕಾಶ ಸಿಕ್ಕಿತು. ಆಗಲೇ ಧಾರಾವಾಹಿ ತಂಡ 1000 ಜನರ ಆಡಿಶನ್ ಮಾಡಿತ್ತು. ಅದೃಷ್ಟವಶಾತ್ ನನಗೆ ಈ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತು. ಸತ್ಯಣ್ಣ ಮತ್ತು ನಿರ್ಮಲಕ್ಕರಿಂದ ನನಗೆ ಅವಕಾಶ ಸಿಕ್ಕಿತು, ಅವರು ನನಗೆ ತುಂಬ ಕ್ಲೋಸ್ ಆಗಿದ್ದಾರೆ' ಎಂದು ತ್ರಿವಿಕ್ರಮ್ ಹೇಳಿದ್ದಾರೆ.

ALso Read-ಮತ್ತೆ ಬರಲಿದೆ 'ಪದ್ಮಾವತಿ' ಧಾರಾವಾಹಿ; ಯಾವಾಗ? ಎಲ್ಲಿ?

ಕ್ರೀಡೆಯಲ್ಲಿಯೂ ಹೆಸರು ಮಾಡಿರುವ ತ್ರಿವಿಕ್ರಮ್

'ನಾನು ಕ್ರೀಡೆಯಲ್ಲಿಯೂ ಹೆಸರು ಮಾಡಿದ್ದೇನೆ. ಕಿರುತೆರೆ ನನ್ನನ್ನು ಮನೆ ಮನೆಗೆ ಪರಿಚಯ ಮಾಡಿಕೊಟ್ಟಿತು. ನಾನು ಏನು ಮಾಡಿದ್ದೇನೋ ಅದರಲ್ಲಿ ನನಗೆ ತೃಪ್ತಿಯಿದೆ. ಇದೇ ನನಗೆ ಮುಖ್ಯವಾಗುತ್ತದೆ. ಇನ್ನೂ ಕೂಡ ಜನರು ನನ್ನನ್ನು ನೆನಪಿಟ್ಟುಕೊಂಡು ಸಾಮ್ರಾಟ್ ಎಂದು ಕರೆದು ಹೊಗಳುತ್ತಾರೆ. ಇದನ್ನು ನಾನು ತುಂಬ ಎಂಜಾಯ್ ಮಾಡುತ್ತೀನಿ' ಎಂದು ನಟ ತ್ರಿವಿಕ್ರಮ್ ಹೇಳಿದ್ದಾರೆ. ತ್ರಿವಿಕ್ರಮ್‌ಗೆ ಜೊತೆಯಾಗಿ ನಟಿ ದೀಪ್ತಿ ಮಾನೆ ನಟಿಸಿದ್ದರು. ಶ್ರೀನಿವಾಸ್, ಅದಿತಿ ಪ್ರಭುದೇವ ನಟನೆಯ 'ರಂಗನಾಯಕಿ' ಸಿನಿಮಾದಲ್ಲಿ ತ್ರಿವಿಕ್ರಮ್ ನಟಿಸಿದ್ದರು. ಇದಕ್ಕೆ ದಯಾಳ್ ಪದ್ಮನಾಭನ್ ನಿರ್ದೇಶನ ಮಾಡಿದ್ದರು. ಈ ಸಿನಿಮಾಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು.

'ಪದ್ಮಾವತಿ' ಕಥೆ ಏನಾಗಿತ್ತು?

'ಪದ್ಮಾವತಿ' ಪಕ್ಕಾ ಮಹಿಳಾ ಪ್ರಧಾನ ಕಥೆ ಆಧಾರಿತ ಧಾರಾವಾಹಿ. ತುಳಸಿ, ಸಾಮ್ರಾಟ್, ಪದ್ಮಾವತಿ ದೇವರು ಪಾತ್ರಗಳ ಮೇಲೆ ಈ ಧಾರಾವಾಹಿ ಸಾಗಿತ್ತು.ಚಿತ್ರಾ ಶೆಣೈ ಕೂಡ ಇದರಲ್ಲಿ ಕೆಲ ದಿನಗಳ ಕಾಲ ಬಣ್ಣ ಹಚ್ಚಿದ್ದರು. ತುಂಬ ಅದ್ದೂರಿಯಾಗಿ ವಿಭಿನ್ನವಾಗಿ ಈ ಸೀರಿಯಲ್ ಮೂಡಿಬಂದಿತ್ತು. ನಾಸ್ತಿಕ, ಸ್ಟಾರ್ ಹೀರೋ ಆಗಿದ್ದ ಸಾಮ್ರಾಟ್‌ನನ್ನು ಅಚಾನಕ್ ಆಗಿ ತುಳಸಿ ಮದುವೆಯಾಗುತ್ತಾಳೆ. ತುಳಸಿಯನ್ನು ಸಾಮ್ರಾಟ್ ಪ್ರೀತಿಸುತ್ತಾನೆ. ಈ ಜೋಡಿಗೆ ಖುಷಿಯಾಗಿರಲು ಅಜ್ಜಿ ಬಿಡೋದಿಲ್ಲ. ಹಳೆಯ ಜನ್ಮಾಂತರದ ಸೇಡು ತೀರಿಸಿಕೊಳ್ಳಲು ಅಜ್ಜಿ ಸದಾ ಪ್ರಯತ್ನಪಡುತ್ತಾಳೆ. ಇಂತಹ ಕಷ್ಟಗಳಿಂದ ಸಾಮ್ರಾಟ್, ತುಳಸಿ ಹೇಗೆ ಬಚಾವ್ ಆಗುತ್ತಾರೆ ಎಂಬುದೇ 'ಪದ್ಮಾವತಿ' ಧಾರಾವಾಹಿ ಕಥೆ.

ಧಾರಾವಾಹಿ ಅರ್ಧಕ್ಕೆ ನಿಂತಿದ್ದೇಕೆ?

'ತ್ರಿವಿಕ್ರಮ್‌ಗೂ ಮತ್ತು ಪದ್ಮಾವತಿ ಧಾರಾವಾಹಿಯ ಸಾಮ್ರಾಟ್‌ಗೂ ಯಾವುದೇ ವ್ಯತ್ಯಾಸವಿಲ್ಲ. ತೆರೆ ಮೇಲಿನ ಸಾಮ್ರಾಟ್‌ನಂತೆ ನಾನು ಕೂಡ ರಿಯಲ್ ಲೈಫ್‌ನಲ್ಲಿ ಅಮ್ಮನ ಮಗ. ನನ್ನ ಸಹೋದರಿಯನ್ನು ನಾನು ತುಂಬ ಪ್ರೀತಿಸುತ್ತೇನೆ. ನಾಸ್ತಿಕ ಕೂಡ ಹೌದು. ಇವೆಲ್ಲವುಗಳಿಂದ ನನಗೆ ಧಾರಾವಾಹಿ ಪಾತ್ರ ಸಿಕ್ಕಿತು. ಧಾರಾವಾಹಿ ಅರ್ಧಕ್ಕೆ ಪರಿಪೂರ್ಣ ಮಾಡದೆ ನಿಂತು ಹೋಯ್ತು. ನಾನು ಇದ್ಯಾವುದಕ್ಕೂ ಕಾಮೆಂಟ್ ಮಾಡೋದಿಲ್ಲ. ಪದ್ಮಾವತಿ ಧಾರಾವಾಹಿ ನನಗೆ ಒಳ್ಳೆಯ ಪಯಣ. ಇದರ ನೆನಪುಗಳು ಸದಾ ನನ್ನಲ್ಲಿ ಇರುತ್ತವೆ. ನನ್ನ ಸಹಕಲಾವಿದರಿಂದ ನಾನು ಸಾಕಷ್ಟು ವಿಷಯಗಳನ್ನು ಕಲಿತೆ' ಎಂದು 'ಪದ್ಮಾವತಿ' ಹೀರೋ ತ್ರಿವಿಕ್ರಮ್ ಹೇಳಿದ್ದಾರೆ.

ALso Read-'ಪದ್ಮಾವತಿ' ಧಾರಾವಾಹಿ ಖ್ಯಾತಿಯ ನಟಿ ದೀಪ್ತಿ ಮಾನೆ ಕುರಿತ ಆಸಕ್ತಿಕರ ಮಾಹಿತಿಗಳು ಇಲ್ಲಿವೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ