ನಟ ವಿನಯ್ ಗೌಡ ಅವರು ಈಗಾಗಲೇ ಪೌರಾಣಿಕ ಧಾರಾವಾಹಿಗಳಲ್ಲಿ ಪಾತ್ರ ಮಾಡಿ ಪ್ರಸಿದ್ಧಿ ಪಡೆದಿದ್ದಾರೆ. ಇನ್ನು ಅವರು ಶಿವನ ಪಾತ್ರ ಮಾಡಿ ಪ್ರೇಕ್ಷಕರಿಂದ ಮೆಚ್ಚುಗೆ ಗಳಿಸಿದ್ದರು. ಈಗ ಮತ್ತೆ ಅವರು ಶಿವನ ಪಾತ್ರ ಮಾಡೋದಿಕ್ಕೆ ರೆಡಿಯಾಗಿದ್ದಾರೆ. ಅದು ನಾಲ್ಕನೇ ಬಾರಿ ಅನ್ನೋದು ವಿಶೇಷ.
ಈ ಹಿಂದೆ ಅವರು 'ಹರ ಹರ ಮಹಾದೇವ', 'ಉಘೇ ಉಘೇ ಮಹದೇಶ್ವರ', 'ಜೈ ಹನುಮಾನ್' ಸೀರಿಯಲ್ನಲ್ಲಿ ಶಿವನ ಪೋಷಾಕು ಧರಿಸಿದ್ದರು. ಈಗ 'ಯಡಿಯೂರು ಸಿದ್ದಲಿಂಗೇಶ್ವರ' ಮೂಲಕ ಮತ್ತೆ ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಾಹಿನಿ ಶೀಘ್ರದಲ್ಲಿಯೇ ಈ ಪೌರಾಣಿಕ ಧಾರಾವಾಹಿಯ ಪ್ರೋಮೋವನ್ನು ರಿಲೀಸ್ ಮಾಡಲಿದೆಯಂತೆ.
ಯಡಿಯೂರು ಸಿದ್ದಲಿಂಗೇಶ್ವರ ಧಾರಾವಾಹಿಯಲ್ಲಿ ವಿನಯ್
'ನನ್ನ ಜೀವನದಲ್ಲಿ 4ನೇ ಬಾರಿ ಶಿವನ ಪಾತ್ರ ಮಾಡಲು ಪುಣ್ಯ ಮಾಡಿದ್ದೇನೆ. ಎಲ್ಲ ಕಲಾವಿದರಿಗೂ ಈ ರೀತಿಯ ಅವಕಾಶ ಸಿಗೋದಿಲ್ಲ. ಯಡಿಯೂರು ಸಿದ್ದಲಿಂಗೇಶ್ವರ ಧಾರಾವಾಹಿಯು ಶ್ರೇಷ್ಠ ಶರಣ ಸಂತ ಸಿದ್ದಲಿಂಗೇಶ್ವರ ಸ್ವಾಮಿ ಕುರಿತು ಇದೆ. ಶರಣರ ನಂಬಿಕೆಗಳನ್ನು ಅವರು ಸಂಚಾರ ಮಾಡಿ ಸಾರಿದ್ದಾರೆ. ಇದು ತುಂಬ ಬಿಗ್ ಬಜೆಟ್ ಧಾರಾವಾಹಿ. ಇದರ ಚಿತ್ರೀಕರಣಕ್ಕಾಗಿ ಅದ್ದೂರಿಯಾದ ಸೆಟ್ ಹಾಕಲಾಗುವುದು' ಎಂದು ವಿನಯ್ 'ಟೈಮ್ಸ್ ಆಫ್ ಇಂಡಿಯಾ'ಕ್ಕೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.
ಬಯಸದೆ ಬಳಿ ಬಂದೆ ಧಾರಾವಾಹಿಯಲ್ಲಿ ವಿನಯ್ ನಟನೆ
'ಬಯಸದೆ ಬಳಿ ಬಂದೆ' ಧಾರಾವಾಹಿಯಲ್ಲಿ ವಿನಯ್ ಅವರು ನಿರ್ಮಾಪಕ ಜೀವ ಪಾತ್ರ ಮಾಡಿದ್ದರು. ಲಾಕ್ಡೌನ್ನಲ್ಲಿ ಟಿಆರ್ಪಿ ಕಡಿಮೆ ಇರೋದಿಕ್ಕೆ ಈ ಸೀರಿಯಲ್ ಅಂತ್ಯವಾಯ್ತು. ಗೌತಮ್ ವಿಪಿ ನಿರ್ದೇಶನದ ಸಿನಿಮಾದಲ್ಲಿ ವಿನಯ್ ನಟಿಸುತ್ತಿದ್ದಾರೆ. ಇದರಲ್ಲಿ ಪ್ರಿಯಾಮಣಿ, ಪ್ರಿಯಾಂಕಾ ಉಪೇಂದ್ರ, ಛಾಯಾ ಸಿಂಗ್ ನಟಿಸುತ್ತಿದ್ದಾರೆ.
Also Read-ಪೌರಾಣಿಕ ಪಾತ್ರಗಳನ್ನು ಮಾಡುವಾಗ ನಟ ವಿನಯ್ ಗೌಡ ಎದುರಿಸಿದ್ದ ಸವಾಲುಗಳಿವು!
ಪೌರಾಣಿಕ ಪಾತ್ರ ಮಾಡೋದು ಸವಾಲಿನ ಕೆಲಸ!
ಇನ್ನು ವಿನಯ್ ಮೈತುಂಬೆಲ್ಲ ಟ್ಯಾಟೂಗಳಿವೆ. ಪೌರಾಣಿಕ ಪಾತ್ರ ಮಾಡುವಾಗ ಅವೆಲ್ಲ ಕಾಣಿಸಬಾರದು. ಹೀಗಾಗಿ ಶಿವನ ಪಾತ್ರ ಮಾಡುವಾಗ ಅಷ್ಟೂ ಟ್ಯಾಟೂಗಳನ್ನು ಕವರ್ ಮಾಡಬೇಕಾಗುತ್ತಿತ್ತು. ಶೂಟಿಂಗ್ ಶುರುವಾಗುವುದಕ್ಕೂ ಎರಡು ಗಂಟೆ ಮೊದಲು ಅವರು ಮೇಕಪ್ಗೆ ಕುಳಿತುಕೊಳ್ಳುತ್ತಿದ್ದರು. ಡಯೆಟ್ ಮಾಡಿ ದೇಹದ ತೂಕ ಕಾಪಾಡಿಕೊಳ್ಳುವುದು ಕೂಡ ತುಂಬ ಮುಖ್ಯ. ಮನೆಯಿಂದ ದೂರವಾದ ಊರುಗಳಲ್ಲಿ ಶೂಟಿಂಗ್ ಮಾಡಬೇಕಾಗುತ್ತದೆ. ಹೀಗಾಗಿ ಪೌರಾಣಿಕ ಪಾತ್ರ ಮಾಡುವುದು ತುಂಬ ಸವಾಲಿನ ಕೆಲಸವೇ ಸರಿ.
Also Read-ಪ್ರೇಕ್ಷಕರನ್ನು ಹೆದರಿಸಲು ಒಂದಾಗುತ್ತಿರುವ ಪ್ರಿಯಾಮಣಿ, ಪ್ರಿಯಾಂಕಾ ಉಪೇಂದ್ರ, ಛಾಯಾ ಸಿಂಗ್!
ಈ ಹಿಂದೆ ಅವರು 'ಹರ ಹರ ಮಹಾದೇವ', 'ಉಘೇ ಉಘೇ ಮಹದೇಶ್ವರ', 'ಜೈ ಹನುಮಾನ್' ಸೀರಿಯಲ್ನಲ್ಲಿ ಶಿವನ ಪೋಷಾಕು ಧರಿಸಿದ್ದರು. ಈಗ 'ಯಡಿಯೂರು ಸಿದ್ದಲಿಂಗೇಶ್ವರ' ಮೂಲಕ ಮತ್ತೆ ಶಿವನ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ವಾಹಿನಿ ಶೀಘ್ರದಲ್ಲಿಯೇ ಈ ಪೌರಾಣಿಕ ಧಾರಾವಾಹಿಯ ಪ್ರೋಮೋವನ್ನು ರಿಲೀಸ್ ಮಾಡಲಿದೆಯಂತೆ.
ಯಡಿಯೂರು ಸಿದ್ದಲಿಂಗೇಶ್ವರ ಧಾರಾವಾಹಿಯಲ್ಲಿ ವಿನಯ್
'ನನ್ನ ಜೀವನದಲ್ಲಿ 4ನೇ ಬಾರಿ ಶಿವನ ಪಾತ್ರ ಮಾಡಲು ಪುಣ್ಯ ಮಾಡಿದ್ದೇನೆ. ಎಲ್ಲ ಕಲಾವಿದರಿಗೂ ಈ ರೀತಿಯ ಅವಕಾಶ ಸಿಗೋದಿಲ್ಲ. ಯಡಿಯೂರು ಸಿದ್ದಲಿಂಗೇಶ್ವರ ಧಾರಾವಾಹಿಯು ಶ್ರೇಷ್ಠ ಶರಣ ಸಂತ ಸಿದ್ದಲಿಂಗೇಶ್ವರ ಸ್ವಾಮಿ ಕುರಿತು ಇದೆ. ಶರಣರ ನಂಬಿಕೆಗಳನ್ನು ಅವರು ಸಂಚಾರ ಮಾಡಿ ಸಾರಿದ್ದಾರೆ. ಇದು ತುಂಬ ಬಿಗ್ ಬಜೆಟ್ ಧಾರಾವಾಹಿ. ಇದರ ಚಿತ್ರೀಕರಣಕ್ಕಾಗಿ ಅದ್ದೂರಿಯಾದ ಸೆಟ್ ಹಾಕಲಾಗುವುದು' ಎಂದು ವಿನಯ್ 'ಟೈಮ್ಸ್ ಆಫ್ ಇಂಡಿಯಾ'ಕ್ಕೆ ನೀಡಿದ ಸಂದರ್ಶನದಲ್ಲಿ ಮಾಹಿತಿ ನೀಡಿದ್ದಾರೆ.
ಬಯಸದೆ ಬಳಿ ಬಂದೆ ಧಾರಾವಾಹಿಯಲ್ಲಿ ವಿನಯ್ ನಟನೆ
'ಬಯಸದೆ ಬಳಿ ಬಂದೆ' ಧಾರಾವಾಹಿಯಲ್ಲಿ ವಿನಯ್ ಅವರು ನಿರ್ಮಾಪಕ ಜೀವ ಪಾತ್ರ ಮಾಡಿದ್ದರು. ಲಾಕ್ಡೌನ್ನಲ್ಲಿ ಟಿಆರ್ಪಿ ಕಡಿಮೆ ಇರೋದಿಕ್ಕೆ ಈ ಸೀರಿಯಲ್ ಅಂತ್ಯವಾಯ್ತು. ಗೌತಮ್ ವಿಪಿ ನಿರ್ದೇಶನದ ಸಿನಿಮಾದಲ್ಲಿ ವಿನಯ್ ನಟಿಸುತ್ತಿದ್ದಾರೆ. ಇದರಲ್ಲಿ ಪ್ರಿಯಾಮಣಿ, ಪ್ರಿಯಾಂಕಾ ಉಪೇಂದ್ರ, ಛಾಯಾ ಸಿಂಗ್ ನಟಿಸುತ್ತಿದ್ದಾರೆ.
Also Read-ಪೌರಾಣಿಕ ಪಾತ್ರಗಳನ್ನು ಮಾಡುವಾಗ ನಟ ವಿನಯ್ ಗೌಡ ಎದುರಿಸಿದ್ದ ಸವಾಲುಗಳಿವು!
ಪೌರಾಣಿಕ ಪಾತ್ರ ಮಾಡೋದು ಸವಾಲಿನ ಕೆಲಸ!
ಇನ್ನು ವಿನಯ್ ಮೈತುಂಬೆಲ್ಲ ಟ್ಯಾಟೂಗಳಿವೆ. ಪೌರಾಣಿಕ ಪಾತ್ರ ಮಾಡುವಾಗ ಅವೆಲ್ಲ ಕಾಣಿಸಬಾರದು. ಹೀಗಾಗಿ ಶಿವನ ಪಾತ್ರ ಮಾಡುವಾಗ ಅಷ್ಟೂ ಟ್ಯಾಟೂಗಳನ್ನು ಕವರ್ ಮಾಡಬೇಕಾಗುತ್ತಿತ್ತು. ಶೂಟಿಂಗ್ ಶುರುವಾಗುವುದಕ್ಕೂ ಎರಡು ಗಂಟೆ ಮೊದಲು ಅವರು ಮೇಕಪ್ಗೆ ಕುಳಿತುಕೊಳ್ಳುತ್ತಿದ್ದರು. ಡಯೆಟ್ ಮಾಡಿ ದೇಹದ ತೂಕ ಕಾಪಾಡಿಕೊಳ್ಳುವುದು ಕೂಡ ತುಂಬ ಮುಖ್ಯ. ಮನೆಯಿಂದ ದೂರವಾದ ಊರುಗಳಲ್ಲಿ ಶೂಟಿಂಗ್ ಮಾಡಬೇಕಾಗುತ್ತದೆ. ಹೀಗಾಗಿ ಪೌರಾಣಿಕ ಪಾತ್ರ ಮಾಡುವುದು ತುಂಬ ಸವಾಲಿನ ಕೆಲಸವೇ ಸರಿ.
Also Read-ಪ್ರೇಕ್ಷಕರನ್ನು ಹೆದರಿಸಲು ಒಂದಾಗುತ್ತಿರುವ ಪ್ರಿಯಾಮಣಿ, ಪ್ರಿಯಾಂಕಾ ಉಪೇಂದ್ರ, ಛಾಯಾ ಸಿಂಗ್!