ಹಿರಿಯ ಹಾಸ್ಯ ಕಲಾವಿದ ಶಂಕರ್ ರಾವ್ ನಿಧನರಾಗಿದ್ದಾರೆ. ಇಂದು ಬೆಳಗಿನ ಜಾವ 6.30ರ ಸುಮಾರಿಗೆ ಕೊನೆಯುಸಿರೆಳೆದಿದ್ದಾರೆ. ಕೆಲ ದಿನಗಳಿಂದ ಅವರು ಅನಾರೋಗ್ಯದಿಂದ ಬಳಲುತ್ತಿದ್ದರು.
ಜನಪ್ರಿಯ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದರು
'ಪಾಪ ಪಾಂಡು' ಧಾರಾವಾಹಿ ಖ್ಯಾತಿಯ ಪಾತ್ರದಿಂದ ಜನಪ್ರಿಯತೆ ಗಳಿಸಿದ್ದರು. ನಟರಂಗ ತಂಡದೊಟ್ಟಿಗೆ ಶಂಕರ್ ರಾವ್ ಗುರುತಿಸಿಕೊಂಡಿದ್ದರು. ಶಂಕರ್ ರಾವ್ ಹವ್ಯಾಸಿ ರಂಗಭೂಮಿ ಕಲಾವಿದರಾಗಿದ್ದರು. ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಅವರು ಬಣ್ಣ ಹಚ್ಚಿದ್ದರು. 'ಮಾಯಾಮೃಗ'ದಲ್ಲಿ ಸಂತಾನಂ ಪಾತ್ರ ನಿರ್ವಹಿಸಿದ್ದರು. ಶಂಕರ್ ರಾವ್ ಅವರು ವೈವಿದ್ಯಮಯ ಪಾತ್ರಗಳನ್ನು ನಿರ್ವಹಿಸಿದ ಅಪಾರ ಅನುಭವ ಉಳ್ಳವರು. ಅದರಲ್ಲೂ ಹಾಸ್ಯ ಪಾತ್ರಗಳಲ್ಲಿ ಮಿಂಚಿ ಕನ್ನಡಿಗರನ್ನು ರಂಜಿಸಿದ್ದರು. 'ಪರ್ವ' ಧಾರಾವಾಹಿಯಲ್ಲಿಯೂ ಅವರು ನಟಿಸಿದ್ದರು. ಹಾಸ್ಯ ಪಾತ್ರಗಳಿಗೆ, ಬಹು ಮುಖ್ಯವಾಗಿ ರಂಗಭೂಮಿಯಲ್ಲಿ ಒಂದು ಅರ್ಥ ಬರೆದವರು ಶಂಕರ ರಾವ್. ಇಂತಹ ಪಾತ್ರಗಳ ಯಶಸ್ವಿ ನಿರ್ವಹಣೆ ಅವರನ್ನು ಮೊದಲಿಗೆ ಚಿತ್ರರಂಗಕ್ಕೂ ನಂತರದಲ್ಲಿ ಕಿರು ತೆರೆಗೂ ಸೆಳೆದುಕೊಂಡು ಹೋಯಿತು.
"ಬಹುಕಾಲದ ಗೆಳೆಯ , ಕನ್ನಡ ರಂಗಭೂಮಿಯ ಮಹಾನ್ ಕಲಾವಿದ ಶಂಕರ ರಾವ್ ಇಂದು ನಿಧನರಾಗಿದ್ದಾರೆ. ಶಂಕರರಾವ್ ನಟರಂಗ ತಂಡದ ಆಧಾರ ಸ್ಥಂಭಗಳಲ್ಲಿ ಒಬ್ಬರಾಗಿದ್ದರು. ಅವರಿಲ್ಲದೆ ಯಾವ ನಾಟಕ ವನ್ನೂ ಅವರು ಆಡುತ್ತಿರಲಿಲ್ಲ. ನಮ್ಮ ತಂಡದ ಮಾಯಾಮೃಗ ಧಾರಾವಾಹಿಯಲ್ಲಿ ಸಂತಾನಂ ಪಾತ್ರ ಮಾಡಿ ಬಹಳ ಜನಪ್ರಿಯರಾಗಿದ್ದರು. ಅವರಿದ್ದ ಕಡೆ ಪ್ರತಿಕ್ಷಣವೂ ನಗೆಬುಗ್ಗೆಗಳಿಗೆ ಬರವಿರಲಿಲ್ಲ.ಸದಾ ಹಸನ್ಮುಖಿ. ಎಲ್ಲರ ಕಷ್ಟಕ್ಕೆ ಹೃದಯದ ಮೂಲಕ ಸ್ಪಂದಿಸುತ್ತಿದ್ದ ವ್ಯಕ್ತಿ. ಅವರ ಮನೆಯವರ ಶೋಕ ದಟ್ಟವಾಗಿ ಕುಳಿತಿದೆ.ನಟರಂಗದವರ ತಬ್ಬಲಿತನ ದಿನೇ ದಿನೇ ಹೆಚ್ಚು ಹೆಚ್ಚು ಕಾಡುತ್ತಿದೆ. ಅವರ ಅಗಲಿಕೆಯ ದುಃಖವನ್ನು ತಡೆದುಕೊಳ್ಳುವ ಶಕ್ತಿಅವರ ಮನೆಯವರಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಟಿ ಎನ್ ಸೀತಾರಾಮ್ ಸಂತಾಪ ಸೂಚಿಸಿದ್ದಾರೆ.
ಸಂತಾಪ ಸೂಚಿಸದ ನಟ ನಾಗೇಂದ್ರ ಶಾನ್
'ನಗೆ ಚಿಲುಮೆ, ಬದುಕನ್ನು ಆನಂದಮಯವಾಗಿಸಿಕೊಳ್ಳಬೇಕು ಅಂತ ಪಾಠ ಕಲಿಸಿದ ಗುರು ಶಂಕರ್ ರಾವ್. ಅಂತಿಮ ಶುಭ ವಿದಾಯ ಗುರುವೇ' ಎಂದು ನಟ ನಾಗೇಂದ್ರ ಶಾನ್ ಸಂತಾಪ ಸೂಚಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ 'ಅಪ್ಪು' ಸಿನಿಮಾದಲ್ಲಿ ಪ್ರೊಫೆಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿಯೂ ಅವರು ಬಣ್ಣ ಹಚ್ಚಿದ್ದರು.
ಕನ್ನಡ ಧಾರಾವಾಹಿ, ಸಿನಿಮಾ ನಟ ಉಮೇಶ್ ಹೆಗಡೆ ವಿಧಿವಶ; ಸಂತಾಪ ಸೂಚಿಸಿದ ಚಿತ್ರರಂಗ
ಜಿ ಕೆ ಗೋವಿಂದ ರಾವ್ ನಿಧನ
ಸಾಕಷ್ಟು ಹಿರಿಯ ಕಲಾವಿದರು ನಿಧನರಾಗಿದ್ದಾರೆ, ಮೂರು ದಿನಗಳಿಂದ ನಟ, ಚಿಂತಕ ಜಿ.ಕೆ ಗೋವಿಂದ ರಾವ್ ಅವರು ಹುಬ್ಬಳ್ಳಿಯ ಪುತ್ರಿಯ ನಿವಾಸದಲ್ಲಿ ಶುಕ್ರವಾರ ಬೆಳಗಿನ ಜಾವ ಗೋವಿಂದ ರಾವ್ ನಿಧನರಾಗಿದ್ದರು. ವಯೋಸಹಜ ಅನಾರೋಗ್ಯದಿಂದ ಗೋವಿಂದ ರಾವ್ ಇಹಲೋಕ ತ್ಯಜಿಸಿದ್ದರು. ಗೋವಿಂದ ರಾವ್ ಅವರ ನೇತ್ರಗಳನ್ನು ಕುಟುಂಬದವರು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪುರದ ಮುಕ್ತಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿದೆ. ಜಿ ಕೆ ಗೋವಿಂದ ರಾವ್ ನಿಧನಕ್ಕೆ ನಿರ್ದೇಶಕ ಟಿ ಎನ್ ಸೀತಾರಾಮ್, ಸಿ ಎನ್ ಅಶ್ವತ್ಥನಾರಾಯಣ, ಮಂಡ್ಯ ರಮೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದರು.
ನಟ, ಚಿಂತಕ ಜಿ ಕೆ ಗೋವಿಂದ ರಾವ್ ವಿಧಿವಶ; ನೇತ್ರದಾನ ಮಾಡಿದ ಕುಟುಂಬದ ಸದಸ್ಯರು
ಜನಪ್ರಿಯ ಧಾರಾವಾಹಿಗಳಲ್ಲಿ ಬಣ್ಣ ಹಚ್ಚಿದ್ದರು
'ಪಾಪ ಪಾಂಡು' ಧಾರಾವಾಹಿ ಖ್ಯಾತಿಯ ಪಾತ್ರದಿಂದ ಜನಪ್ರಿಯತೆ ಗಳಿಸಿದ್ದರು. ನಟರಂಗ ತಂಡದೊಟ್ಟಿಗೆ ಶಂಕರ್ ರಾವ್ ಗುರುತಿಸಿಕೊಂಡಿದ್ದರು. ಶಂಕರ್ ರಾವ್ ಹವ್ಯಾಸಿ ರಂಗಭೂಮಿ ಕಲಾವಿದರಾಗಿದ್ದರು. ಹಲವು ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಅವರು ಬಣ್ಣ ಹಚ್ಚಿದ್ದರು. 'ಮಾಯಾಮೃಗ'ದಲ್ಲಿ ಸಂತಾನಂ ಪಾತ್ರ ನಿರ್ವಹಿಸಿದ್ದರು. ಶಂಕರ್ ರಾವ್ ಅವರು ವೈವಿದ್ಯಮಯ ಪಾತ್ರಗಳನ್ನು ನಿರ್ವಹಿಸಿದ ಅಪಾರ ಅನುಭವ ಉಳ್ಳವರು. ಅದರಲ್ಲೂ ಹಾಸ್ಯ ಪಾತ್ರಗಳಲ್ಲಿ ಮಿಂಚಿ ಕನ್ನಡಿಗರನ್ನು ರಂಜಿಸಿದ್ದರು.
"ಬಹುಕಾಲದ ಗೆಳೆಯ , ಕನ್ನಡ ರಂಗಭೂಮಿಯ ಮಹಾನ್ ಕಲಾವಿದ ಶಂಕರ ರಾವ್ ಇಂದು ನಿಧನರಾಗಿದ್ದಾರೆ. ಶಂಕರರಾವ್ ನಟರಂಗ ತಂಡದ ಆಧಾರ ಸ್ಥಂಭಗಳಲ್ಲಿ ಒಬ್ಬರಾಗಿದ್ದರು. ಅವರಿಲ್ಲದೆ ಯಾವ ನಾಟಕ ವನ್ನೂ ಅವರು ಆಡುತ್ತಿರಲಿಲ್ಲ. ನಮ್ಮ ತಂಡದ ಮಾಯಾಮೃಗ ಧಾರಾವಾಹಿಯಲ್ಲಿ ಸಂತಾನಂ ಪಾತ್ರ ಮಾಡಿ ಬಹಳ ಜನಪ್ರಿಯರಾಗಿದ್ದರು. ಅವರಿದ್ದ ಕಡೆ ಪ್ರತಿಕ್ಷಣವೂ ನಗೆಬುಗ್ಗೆಗಳಿಗೆ ಬರವಿರಲಿಲ್ಲ.ಸದಾ ಹಸನ್ಮುಖಿ. ಎಲ್ಲರ ಕಷ್ಟಕ್ಕೆ ಹೃದಯದ ಮೂಲಕ ಸ್ಪಂದಿಸುತ್ತಿದ್ದ ವ್ಯಕ್ತಿ. ಅವರ ಮನೆಯವರ ಶೋಕ ದಟ್ಟವಾಗಿ ಕುಳಿತಿದೆ.ನಟರಂಗದವರ ತಬ್ಬಲಿತನ ದಿನೇ ದಿನೇ ಹೆಚ್ಚು ಹೆಚ್ಚು ಕಾಡುತ್ತಿದೆ. ಅವರ ಅಗಲಿಕೆಯ ದುಃಖವನ್ನು ತಡೆದುಕೊಳ್ಳುವ ಶಕ್ತಿಅವರ ಮನೆಯವರಿಗೆ ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ" ಎಂದು ಟಿ ಎನ್ ಸೀತಾರಾಮ್ ಸಂತಾಪ ಸೂಚಿಸಿದ್ದಾರೆ.
ಸಂತಾಪ ಸೂಚಿಸದ ನಟ ನಾಗೇಂದ್ರ ಶಾನ್
'ನಗೆ ಚಿಲುಮೆ, ಬದುಕನ್ನು ಆನಂದಮಯವಾಗಿಸಿಕೊಳ್ಳಬೇಕು ಅಂತ ಪಾಠ ಕಲಿಸಿದ ಗುರು ಶಂಕರ್ ರಾವ್. ಅಂತಿಮ ಶುಭ ವಿದಾಯ ಗುರುವೇ' ಎಂದು ನಟ ನಾಗೇಂದ್ರ ಶಾನ್ ಸಂತಾಪ ಸೂಚಿಸಿದ್ದಾರೆ. ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ 'ಅಪ್ಪು' ಸಿನಿಮಾದಲ್ಲಿ ಪ್ರೊಫೆಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. 'ಸಿಲ್ಲಿ ಲಲ್ಲಿ' ಧಾರಾವಾಹಿಯಲ್ಲಿಯೂ ಅವರು ಬಣ್ಣ ಹಚ್ಚಿದ್ದರು.
ಕನ್ನಡ ಧಾರಾವಾಹಿ, ಸಿನಿಮಾ ನಟ ಉಮೇಶ್ ಹೆಗಡೆ ವಿಧಿವಶ; ಸಂತಾಪ ಸೂಚಿಸಿದ ಚಿತ್ರರಂಗ
ಜಿ ಕೆ ಗೋವಿಂದ ರಾವ್ ನಿಧನ
ಸಾಕಷ್ಟು ಹಿರಿಯ ಕಲಾವಿದರು ನಿಧನರಾಗಿದ್ದಾರೆ, ಮೂರು ದಿನಗಳಿಂದ ನಟ, ಚಿಂತಕ ಜಿ.ಕೆ ಗೋವಿಂದ ರಾವ್ ಅವರು ಹುಬ್ಬಳ್ಳಿಯ ಪುತ್ರಿಯ ನಿವಾಸದಲ್ಲಿ ಶುಕ್ರವಾರ ಬೆಳಗಿನ ಜಾವ ಗೋವಿಂದ ರಾವ್ ನಿಧನರಾಗಿದ್ದರು. ವಯೋಸಹಜ ಅನಾರೋಗ್ಯದಿಂದ ಗೋವಿಂದ ರಾವ್ ಇಹಲೋಕ ತ್ಯಜಿಸಿದ್ದರು. ಗೋವಿಂದ ರಾವ್ ಅವರ ನೇತ್ರಗಳನ್ನು ಕುಟುಂಬದವರು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ. ಹುಬ್ಬಳ್ಳಿಯ ಕೇಶ್ವಾಪುರದ ಮುಕ್ತಧಾಮದಲ್ಲಿ ಅಂತ್ಯಕ್ರಿಯೆ ನೆರವೇರಿದೆ. ಜಿ ಕೆ ಗೋವಿಂದ ರಾವ್ ನಿಧನಕ್ಕೆ ನಿರ್ದೇಶಕ ಟಿ ಎನ್ ಸೀತಾರಾಮ್, ಸಿ ಎನ್ ಅಶ್ವತ್ಥನಾರಾಯಣ, ಮಂಡ್ಯ ರಮೇಶ್ ಅವರು ಸೋಶಿಯಲ್ ಮೀಡಿಯಾದಲ್ಲಿ ಸಂತಾಪ ಸೂಚಿಸಿದ್ದರು.
ನಟ, ಚಿಂತಕ ಜಿ ಕೆ ಗೋವಿಂದ ರಾವ್ ವಿಧಿವಶ; ನೇತ್ರದಾನ ಮಾಡಿದ ಕುಟುಂಬದ ಸದಸ್ಯರು