ಆ್ಯಪ್ನಗರ

ಸ್ಟಾರ್ ಸುವರ್ಣದಿಂದ ಬೇರೆ ವಾಹಿನಿಗೆ ಜಿಗಿದ ಕನ್ನಡದ ಕೋಟ್ಯಧಿಪತಿ ಶೋ!

ಕನ್ನಡದ ಕೋಟ್ಯಧಿಪತಿ ಶೋದ ಚಾನಲ್ ಮಾತ್ರವಲ್ಲ, ಕಾರ್ಯಕ್ರಮದ ನಿರೂಪಕರೂ ಕೂಡ ಬದಲಾಗಿದ್ದಾರೆ. ಹೌದು, ಕಳೆದ ಆವೃತ್ತಿಯಲ್ಲಿ ರಮೇಶ್ ಅರವಿಂದ್ ನಿರೂಪಣೆ ಮಾಡಿದ್ದ ಈ ಶೋ ಈಗ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ ಪಾಲಾಗಿದೆ.

Vijaya Karnataka Web 28 Mar 2019, 8:40 pm
ಮತ್ತೆ 'ಕನ್ನಡದ ಕೋಟ್ಯಧಿಪತಿ' ರಿಯಾಲಿಟಿ ಶೋ ಸದ್ದು ಮಾಡತೊಡಗಿದೆ.ಈ ಬಾರಿ ಈ ಶೋದ 'ಸೀಸನ್ 4' ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವುದಿಲ್ಲ. ಬದಲಿಗೆ, ಈ ನಾಲ್ಕನೆ ಸೀಸನ್ ಕಲರ್ಸ್ ಕನ್ನಡ ವಾಹಿನಿ ಪಾಲಾಗಿದೆ.
Vijaya Karnataka Web puneeth-kannada2803


ಸದ್ಯಕ್ಕೆ ಸಿಕ್ಕ ಮಾಹಿತಿ ಪ್ರಕಾರ 'ಕನ್ನಡದ ಕೋಟ್ಯಧಿಪತಿ' ರಿಯಾಲಿಟಿ ಶೋ, ಸ್ಟಾರ್ ಸುವರ್ಣ ವಾಹಿನಿಯಿಂದ ಕಲರ್ಸ್ ಕನ್ನಡಕ್ಕೆ ಶಿಪ್ಟ್ ಆಗಿದೆ. ಕಾರಣವೇನು ಎತ್ತ ಎಂಬ ಬಗ್ಗೆ ಮಾಹಿತಿ ಇಲ್ಲದಿದ್ದರೂ ಕನ್ನಡದ ಕೋಟ್ಯಧಿಪತಿ ಪ್ರಸಾರವಾಗಲಿರುವ ಚಾನಲ್ ಶಿಫ್ಟ್ ಆಗಿದೆ ಎನ್ನಲಾಗಿದೆ. ಆದರೆ ಸಿಕ್ಕ ಅವಕಾಶವನ್ನು ಕಲರ್ಸ್ ಕನ್ನಡ ಚೆನ್ನಾಗಿ ಉಪಯೋಗಿಸಿಕೊಳ್ಳಲು ನಿರ್ಧರಿಸಿದೆ ಎನ್ನಲಾಗಿದೆ.

ಕನ್ನಡದ ಕೋಟ್ಯಧಿಪತಿ ಶೋದ ಚಾನಲ್ ಮಾತ್ರವಲ್ಲ, ಕಾರ್ಯಕ್ರಮದ ನಿರೂಪಕರೂ ಕೂಡ ಬದಲಾಗಿದ್ದಾರೆ. ಹೌದು, ಕಳೆದ ಆವೃತ್ತಿಯಲ್ಲಿ ರಮೇಶ್ ಅರವಿಂದ್ ನಿರೂಪಣೆ ಮಾಡಿದ್ದ ಈ ಶೋ ಈಗ ಪವರ್ ಸ್ಟಾರ್ ಪುನೀತ್‌ ರಾಜ್‌ಕುಮಾರ್ ಪಾಲಾಗಿದೆ. ಒಟ್ಟಿನಲ್ಲಿ, ಮೊದಲು ಕೂಡ ಪುನೀತ್ ಮಾಡುತ್ತಿದ್ದ ಶೋ ಮತ್ತೆ ಅವರ ಮಡಿಲಿಗೆ ಬಿದ್ದಿದೆ ಎನ್ನಬಹುದು.

ಈಗಾಗಲೇ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮ ಪ್ರೋಮೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೊಸ ಚಾನಲ್, ಹೊಸ ಆಂಕರ್ ಜೊತೆ ಬರ್ತಿರುವ ಈ ಶೋ, ಯಾವತ್ತಿಂದ ಶುರುವಾಗಲಿದೆ ಎಂಬ ಬಗ್ಗೆ ಇನ್ನೂ ಸರಿಯಾದ ಮಾಹಿತಿಯಿಲ್ಲ. ಸದ್ಯಕ್ಕೆ ಜನರಿಗೆ 'ಕನ್ನಡದ ಕೋಟ್ಯಧಿಪತಿ, ಸೀಸನ್-4' ಶೋ ಶುರುವಾಗಲಿದೆ ಎಂಬ ಸುದ್ದಿಯೇ ಸಖತ್ ಖುಷಿ ಕೊಡುವುದಂತೂ ಖಂಡಿತ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ