ಆ್ಯಪ್ನಗರ

ಸದ್ಯದಲ್ಲೇ ಟಿವಿ ವೀಕ್ಷಕರಿಗೆ 'ದರ್ಶನ' ಕೊಡಲಿರುವ ಪುನೀತ್ ರಾಜ್‌ಕುಮಾರ್

ಈಗಾಗಲೇ ಕನ್ನಡದ ಕೋಟ್ಯಧಿಪತಿ ಶೋದ ಪ್ರೋಮೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದರಲ್ಲೂ ಪವರ್ ಸ್ಟಾರ್ ಪುನೀತ್ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಈ ಸುದ್ದಿ ಪ್ರಕಟಿಸಿದ್ದೇ ತಡ, ಈ ಸುದ್ದಿ ಪಾರಿವಾಳಗಳಂತೆ ಹಾರಿ ಹೋಗಿ ಕರ್ನಾಟಕದ ಮೂಲೆಮೂಲೆ ತಲುಪಿದೆ.

Vijaya Karnataka Web 31 Mar 2019, 10:46 am
ಕನ್ನಡದ ಕೋಟ್ಯಧಿಪತಿ ಮತ್ತೆ ಶುರುವಾಗಲಿದೆ. ಈ ಬಾರಿ ಈ ಶೋದ 'ಸೀಸನ್ 4' ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುವುದಿಲ್ಲ. ಬದಲಿಗೆ, ಈ ನಾಲ್ಕನೆ ಸೀಸನ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಾಣಿಸಿಕೊಳ್ಳಲಿದೆ. ಕಾರ್ಯಕ್ರಮದ ನಿರೂಪಣೆ ಮಾಡಲಿರುವ ನಟ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಸ್ವತಃ ಈ ವಿಷಯವನ್ನು ತಮ್ಮ ಟ್ವೀಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇಷ್ಟು ದಿನವೂ ಈ ಸುದ್ದಿ ಅಧಿಕೃತವೋ ಅನಧಿಕೃತವೋ ಎಂಬ ಗೊಂದಲ ಬಹಳಷ್ಟು ಜನರನ್ನು ಕಾಡಿತ್ತು. ಈಗ ಅದು ಅಧಿಕೃತ ಸುದ್ದಿ ಎಂದು ಪಕ್ಕಾ ಆಗಿದೆ.
Vijaya Karnataka Web puneeth3103


'ಕನ್ನಡದ ಕೋಟ್ಯಧಿಪತಿ' ರಿಯಾಲಿಟಿ ಶೋ, ಸ್ಟಾರ್ ಸುವರ್ಣ ವಾಹಿನಿಯಿಂದ ಕಲರ್ಸ್ ಕನ್ನಡಕ್ಕೆ ಶಿಪ್ಟ್ ಆಗಿದೆ. ಕಾರಣವೇನು ಎತ್ತ ಎಂಬ ಬಗ್ಗೆ ಮಾಹಿತಿ ಇಲ್ಲದಿದ್ದರೂ ಕನ್ನಡದ ಕೋಟ್ಯಧಿಪತಿ ಪ್ರಸಾರವಾಗಲಿರುವ ಚಾನಲ್ ಶಿಫ್ಟ್ ಆಗಿದೆ ಎಂಬುದು ಪಕ್ಕಾ. ಸಿಕ್ಕ ಅವಕಾಶವನ್ನು ಕಲರ್ಸ್ ಕನ್ನಡ ಚೆನ್ನಾಗಿ ಉಪಯೋಗಿಸಿಕೊಳ್ಳಲು ನಿರ್ಧರಿಸಿದೆ ಎನ್ನಲಾಗಿದೆ. ಕಳೆದ ನಾಲ್ಕನೇ ಸೀಸನ್ ನಿರೂಪಕರಾಗಿದ್ದ ನಟ ರಮೇಶ್ ಅರವಿಂದ್ ಬದಲು ಈ ಬಾರಿ ಮೊದಲು ಮೂರು ಸೀಸನ್ ನಿರೂಪಣೆ ಮಾಡಿದ್ದ ಪುನೀತ್ ರಾಜ್‌ಕುಮಾರ್ ಮತ್ತೆ ಆ ಸ್ಥಾನಕ್ಕೆ ಬರಲಿದ್ದಾರೆ.

ಈಗಾಗಲೇ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ಪ್ರೋಮೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಅದರಲ್ಲೂ ನಿರೂಪಕರಾಗಿರುವ ಪವರ್ ಸ್ಟಾರ್ ಪುನೀತ್ ಅವರು ತಮ್ಮ ಟ್ವೀಟರ್ ಖಾತೆಯಲ್ಲಿ ಈ ಸುದ್ದಿ ಪ್ರಕಟಿಸಿದ್ದೇ ತಡ, ಈ ಸುದ್ದಿ ಪಾರಿವಾಳಗಳಂತೆ ಹಾರಿ ಹೋಗಿ ಕರ್ನಾಟಕದ ಮೂಲೆಮೂಲೆ ತಲುಪಿದೆ. ಹೊಸ ಚಾನಲ್, ಹೊಸ ಆಂಕರ್ ಜೊತೆ ಬರ್ತಿರುವ ಈ ಶೋ, ಯಾವತ್ತಿಂದ ಶುರುವಾಗಲಿದೆ ಎಂಬ ಬಗ್ಗೆ ಇನ್ನೂ ಅಧಿಕೃತ ಮಾಹಿತಿಯಿಲ್ಲ.

ಆದರೆ, ಸದ್ಯದಲ್ಲೇ ಪ್ರಾರಂಭವಾಗಲಿದೆ ಎನ್ನಲಾಗಿದೆ. ಈ ಕಾರ್ಯಕ್ರಮದ ರೂಪುರೇಷೆ ಬದಲಾಗಿದೆಯೇ ಅಥವಾ ಮೊದಲಿನ ರೀತಿಯಲ್ಲೇ ಅದು ಮುಂದುವರಿಯಲಿದೆಯೇ ಎಂಬ ಮಾಹಿತಿ ಸದ್ಯದಲ್ಲೇ ಸಿಗಲಿದೆ. ಒಟ್ಟಿನಲ್ಲಿ, ಬಿಗ್ ಬಾಸ್ ಮುಗಿದು ಬೇಸರದಲ್ಲಿದ್ದ ಕಲರ್ಸ್ ಕನ್ನಡ ಅಭಿಮಾನಿಗಳಿಗೆ 'ಕನ್ನಡದ ಕೋಟ್ಯಧಿಪತಿ, ಸೀಸನ್-4' ಶೋ ಶುರುವಾಗಲಿದೆ ಎಂಬ ಸುದ್ದಿಯಿಂದ ಸಖತ್ ಖುಷಿಯಾಗಿರುವುದು ಖಂಡಿತ ಎನ್ನಬಹುದು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ