ಆ್ಯಪ್ನಗರ

'ಕನ್ನಡತಿ' ಧಾರಾವಾಹಿ: ಡ್ರಗ್ಸ್ ಆರೋಪದಿಂದ ಹೇಗೆ ಬಚಾವ್ ಆಗ್ತಾನೆ ಹರ್ಷ?

'ಕನ್ನಡತಿ' ಧಾರಾವಾಹಿಯಲ್ಲಿ ಈಗಾಗಲೇ ಹಲವು ಟ್ವಿಸ್ಟ್‌ಗಳು ಬಂದು ಹೋಗಿವೆ. ಒಟ್ಟಿನಲ್ಲಿ ಹರ್ಷನನ್ನು ಕೊಲೆ ಮಾಡಬೇಕು ಎಂದು ಸಾನಿಯಾ ಒಂದಾದ ಮೇಲೆ ಒಂದು ಪ್ಲ್ಯಾನ್ ಮಾಡುತ್ತಿದ್ದಾಳೆ. ಈಗ ನೋಡಿದರೆ ಹರ್ಷ ಡ್ರಗ್ ಆರೋಪವನ್ನು ಎದುರಿಸಬೇಕಾಗಿದೆ. ಇಲ್ಲಿದೆ ಮಾಹಿತಿ

Vijaya Karnataka Web 22 Sep 2020, 3:38 pm
ಕನ್ನಡತಿ ಧಾರಾವಾಹಿ ದಿನದಿಂದ ದಿನಕ್ಕೆ ತುಂಬ ರೋಚಕವಾದ ಎಪಿಸೋಡ್‌ಗಳೊಂದಿಗೆ ಪ್ರಸಾರವಾಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಈ ಸೀರಿಯಲ್ ಬಗ್ಗೆ ವ್ಯಾಪಕ ಮೆಚ್ಚುಗೆ ಕೇಳಿಬರುತ್ತಿದೆ. ಧಾರಾವಾಹಿ ನೋಡದಿದ್ದವರೂ ಕೂಡ 'ಕನ್ನಡತಿ' ನೋಡಿ ಭೇಷ್ ಎಂದಿರೋದು ನಿಜಕ್ಕೂ ಆಶ್ಚರ್ಯಕರವಾದ ವಿಷಯ. ಈಗ ಇದರಲ್ಲಿ ಡ್ರಗ್ ಕೇಸ್ ಸೇರಿಕೊಂಡಿದೆ. ಡ್ರಗ್ಸ್ ಎಂದಕೂಡಲೇ ನಿಮ್ಮ ತಲೆಯಲ್ಲಿ ನೂರೆಂಟು ಪ್ರಶ್ನೆಗಳು ಏಳುತ್ತವೆ. ಇದಕ್ಕೆಲ್ಲ ಉತ್ತರ ಇಲ್ಲಿದೆ.'
Vijaya Karnataka Web kannadathi kannada serial written update 23 september 2020 will saniya will against harsha
'ಕನ್ನಡತಿ' ಧಾರಾವಾಹಿ: ಡ್ರಗ್ಸ್ ಆರೋಪದಿಂದ ಹೇಗೆ ಬಚಾವ್ ಆಗ್ತಾನೆ ಹರ್ಷ?


ಹರ್ಷನ ಕೊಲೆ ಮಾಡ್ತಾಳಾ ಸಾನಿಯಾ?
ಕಥಾ ನಾಯಕ ಹರ್ಷನನ್ನು ಕೊಲೆ ಮಾಡಬೇಕು ಅಂತ ಸಾನಿಯಾ ಪ್ಲ್ಯಾನ್ ಮಾಡಿದ್ದಾಳೆ. ಈಗಾಗಲೇ ಅವಳು ಹರ್ಷನ ವಿರುದ್ಧ ಅನೇಕ ಪ್ಲ್ಯಾನ್ ಮಾಡಿದ್ದರೂ ಕೂಡ, ಅದು ಯಾವುದು ಗೆಲ್ಲದೆ ಹರ್ಷ ಬಚಾವ್ ಆಗಿದ್ದಾನೆ. ಹೀಗಂತ ಸಾನಿಯಾ ಕೆಟ್ಟ ಕೆಲಸ ಮಾಡೋದನ್ನು ಬಿಟ್ಟಿಲ್ಲ. ಸಾನಿಯಾಳಿಂದ ತನ್ನ ಪ್ರಾಣಕ್ಕೆ ಕುತ್ತು ಬರುತ್ತದೆ ಎಂದು ಹರ್ಷನಿಗೆ ಗೊತ್ತಿದೆ. ಈಗಾಗಲೇ ಇದರ ಬಗ್ಗೆ ಆತ ಮುಂಜಾಗ್ರತೆ ಕೈಗೊಂಡಿದ್ದಾನೆ. ಹರ್ಷ, ಅಮ್ಮಮ್ಮ ರತ್ನಮಾಲಾಗೂ ಕೂಡ ಈ ವಿಚಾರ ತಿಳಿಸಿದ್ದಾನೆ.

ಸಾನಿಯಾ ಪ್ಲ್ಯಾನ್ ಏನು?

ಈಗಾಗಲೇ ಹಲವು ಪ್ಲ್ಯಾನ್ ಮಾಡಿರುವ ಸಾನಿಯಾ, ಡ್ರಗ್ ಕೇಸ್‌ನಲ್ಲಿ ಹರ್ಷನನ್ನು ಸಿಕ್ಕಿಸುವ ಯೋಚನೆ ಮಾಡಿದ್ದಾಳೆ. ಡ್ರಗ್ ಮಾಫಿಯಾದಲ್ಲಿ ಹರ್ಷ ಭಾಗಿಯಾಗಿದ್ದಾನೆ ಎಂಬ ಆರೋಪದ ಮೇಲೆ ಸಾನಿಯಾ, ಹರ್ಷನಿಗೆ ತೊಂದರೆ ನೀಡಲು ಹೊರಟಿದ್ದಾಳೆ.

ಧಾರಾವಾಹಿಯಲ್ಲಿ ಟ್ರೆಂಡಿಂಗ್ ವಿಷಯ ಸೇರಿಕೆ
ಸ್ಯಾಂಡಲ್‌ವುಡ್‌ನಲ್ಲಿ ಡ್ರಗ್ ಮಾಫಿಯಾ ಕುರಿತು ದೊಡ್ಡ ತನಿಖೆ ನಡೆಯುತ್ತಿದೆ. ಈ ವಿಚಾರವಾಗಿ ಕನ್ನಡದ ಸಿನಿಮಾ ಹಾಗೂ ಟಿವಿ ಕಲಾವಿದರಿಗೆ ನೋಟಿಸ್ ನೀಡಿದೆ. ಯಾವ ವಿಷಯ ಟ್ರೆಂಡಿಂಗ್ ಇರುತ್ತದೆಯೋ ಅದನ್ನು ಸಾಮಾನ್ಯವಾಗಿ ಧಾರಾವಾಹಿಗಳಲ್ಲಿ ಬಳಸಲಾಗುತ್ತದೆ. ಸೀರಿಯಲ್‌ನಲ್ಲಿ ಕೊರೊನಾ ವೈರಸ್ ಕುರಿತು ಜಾಗೃತಿ ಮೂಡಿಸಲಾಗಿತ್ತು, ಆನ್‌ಲೈನ್ ಕ್ಲಾಸ್, ವರ್ಕ್ ಫ್ರಂ ಹೋಮ್ ಕುರಿತು ಕೂಡ ಎಪಿಸೋಡ್ ಪ್ರಸಾರ ಮಾಡಲಾಗಿತ್ತು. ಹಬ್ಬ-ಹರಿದಿನದ ವಿಶೇಷಗಳಿರುವ ಎಪಿಸೋಡ್ ಕೂಡ ಪ್ರಸಾರ ಮಾಡಲಾಗುತ್ತದೆ.

Also Read-'ಕನ್ನಡತಿ' ಧಾರಾವಾಹಿ ನೋಡಲು ಆರಂಭಿಸಿದ ಗಂಡು ಮಕ್ಕಳು ಮಾಡಿದ ಮನವಿ ಏನು?

'ಕನ್ನಡತಿ'ಯಲ್ಲಿ ಇರುವ ಸವಾಲುಗಳೇನು?
ಜ್ಯೋತಿಷಿ, ಪಿಆರ್‌ಒರಿಂದ ಕೂಡ ಹರ್ಷನಿಗೆ ಸಮಸ್ಯೆ ಉಂಟು ಮಾಡಲು ಸಾನಿಯಾ ಹೊಂಚು ಹಾಕಿದ್ದಾಳೆ. ಇವುಗಳನ್ನೆಲ್ಲ ಹರ್ಷ ಹೇಗೆ ನಿಭಾಯಿಸುತ್ತಾನೆ, ಹೋರಾಡುತ್ತಾನೆ ಎಂದು ತಿಳಿದುಕೊಳ್ಳುವ ಕುತೂಹಲ ಪ್ರೇಕ್ಷಕರದ್ದು. ಒಟ್ಟಿನಲ್ಲಿ ಉತ್ತಮವಾದ ಸಂಭಾಷಣೆ, ಕಥೆ-ಚಿತ್ರಕಥೆ, ನಿರೂಪಣೆ ಮೂಲಕ 'ಕನ್ನಡತಿ' ಧಾರಾವಾಹಿ ತುಂಬ ನೈಜ-ಸಹಜವಾಗಿ ಮೂಡಿ ಬರುತ್ತಿದೆ. ರಂಜನಿ ರಾಘವನ್, ಕಿರಣ್ ರಾಜ್ ಈ ಸೀರಿಯಲ್‌ನಲ್ಲಿ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Also Read-ಧಾರಾವಾಹಿ ಕಟ್ಟಾ ವಿರೋಧಿಗಳು ಸಹ 'ಕನ್ನಡತಿ' ಸೀರಿಯಲ್ ನೋಡುತ್ತಿರುವುದೇಕೆ?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ