ಆ್ಯಪ್ನಗರ

'ಹಣ ಪಡೆದು ಅಭಿಮಾನವನ್ನ ಮಾರಿಕೊಳ್ಳಲಾರೆ'! 'ಕನ್ನಡತಿ' ರಂಜನಿ ರಾಘವನ್‌ ಖಡಕ್‌ ನಿರ್ಧಾರ

ಎಷ್ಟೋ ಸೆಲೆಬ್ರಿಟಿಗಳು ಹಣ ಪಡೆದುಕೊಂಡು ಅಭಿಮಾನಿಗಳಿಗೆ ಶುಭಕೋರುತ್ತಾರೆ! ಅದಕ್ಕಾಗಿಯೇ ಕೆಲವು ಆ್ಯಪ್‌ಗಳು ಚಾಲ್ತಿಯಲ್ಲಿವೆ. 'ಅಂಥ ಸೆಲೆಬ್ರಿಟಿಗಳ ಸಾಲಿಗೆ ನಾನು ಸೇರಲಾರೆ' ಎಂದು ಗಟ್ಟಿ ನಿರ್ಧಾರ ತೆಗೆದುಕೊಂಡಿದ್ದಾರೆ ನಟಿ ರಂಜನಿ ರಾಘವನ್‌.

Vijaya Karnataka Web 1 Jul 2020, 11:06 am
ಕನ್ನಡದ ಕಿರುತೆರೆಯಲ್ಲಿ ಭಾರಿ ಜನಪ್ರಿಯತೆ ಪಡೆದುಕೊಂಡಿರುವ ನಟಿ ರಂಜನಿ ರಾಘವನ್‌ ಅವರು, ಕೇವಲ ನಟನೆ ಮಾತ್ರವಲ್ಲದೆ ಸಮಾಜಮುಖಿ ಆಲೋಚನೆಯಿಂದಲೂ ಅಭಿಮಾನಿಗಳಿಗೆ ಇಷ್ಟ ಆಗುತ್ತಾರೆ. ಇತ್ತೀಚೆಗೆ ಅವರು ತೆಗೆದುಕೊಂಡ ಒಂದು ನಿರ್ಧಾರ ನಿಜಕ್ಕೂ ಮೆಚ್ಚುವಂತಿದೆ. 'ಎಷ್ಟೇ ಹಣದ ಆಮಿಷ ಒಡ್ಡಿದ್ದರೂ ಅಭಿಮಾನವನ್ನು ಮಾರಿಕೊಳ್ಳಲಾರೆ' ಎಂದು 'ಕನ್ನಡತಿ' ಧಾರಾವಾಹಿ ನಟಿ ರಂಜನಿ ಹೇಳಿದ್ದಾರೆ.
Vijaya Karnataka Web kannadathi serial actress ranjani raghavan rejects offer from popular app
'ಹಣ ಪಡೆದು ಅಭಿಮಾನವನ್ನ ಮಾರಿಕೊಳ್ಳಲಾರೆ'! 'ಕನ್ನಡತಿ' ರಂಜನಿ ರಾಘವನ್‌ ಖಡಕ್‌ ನಿರ್ಧಾರ


ದಿನದ 24 ಗಂಟೆಯಲ್ಲಿ ಜನರು ಹಲವಾರು ಆ್ಯಪ್‌ಗಳನ್ನು ಬಳಸುತ್ತಾರೆ. ಅಚ್ಚರಿ ಏನೆಂದರೆ, ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಸೆಲೆಬ್ರಿಟಿಗಳಿಂದ ಶುಭಾಶಯ ಹೇಳಿಸುವ ಆ್ಯಪ್‌ಗಳು ಕೂಡ ಚಾಲ್ತಿಯಲ್ಲಿವೆ. ಸೆಲೆಬ್ರಿಟಿಗಳಿಂದ ಶುಭಾಶಯ ಪಡೆಯಬೇಕು ಎಂಬ ಆಸೆ ಇರುವವರು ಹಣ ನೀಡಬೇಕು. ನಂತರ ಅವರಿಗೆ ತಮ್ಮಿಷ್ಟದ ನಟ-ನಟಿಯಿಂದ ಶುಭಾಶಯ ಹೇಳಿಸಲಾಗುತ್ತದೆ. ಇಂಥ ಒಂದು ಆ್ಯಪ್‌ನಿಂದ ರಂಜನಿಗೆ ಆಫರ್‌ ಬಂದಿತ್ತು. ಆದರೆ ಅದನ್ನು ಅವರು ಮುಲಾಜಿಲ್ಲದೆ ತಿರಸ್ಕರಿಸಿದ್ದಾರೆ.

ಈ ಬಗ್ಗೆ ಮಾತನಾಡುವ ರಂಜನಿ, 'ಸೆಲೆಬ್ರಿಟಿಗಳು ಹಣವನ್ನು ಪಡೆದು ತಮ್ಮ ಅಭಿಮಾನಿಗಳಿಗೆ ವಿಶ್‌ ಮಾಡುತ್ತಾರೆ. ಇಂತಹ ಒಂದು ಆ್ಯಪ್‌ನಿಂದ ಒಳ್ಳೆಯ ಹಣ ಸಂಪಾದನೆ ಮಾಡಬಹುದು ಮತ್ತು ಅಭಿಮಾನಿಗಳಿಗೆ ಹತ್ತಿರವಾಗಬಹುದು. ಇಂಥ ಅವಕಾಶ ನನಗೂ ಬಂತು ಆದರೆ ಹಣ ಪಡೆದು ಅಭಿಮಾನವನ್ನ ಮಾರಿಕೊಳ್ಳಬಾರದು ಎನ್ನುವುದು ನನ್ನ ಅಭಿಪ್ರಾಯ ಹಾಗಾಗಿ ಇದನ್ನು ತಿರಸ್ಕರಿಸಿದ್ದೇನೆ' ಎಂದಿದ್ದಾರೆ.

also read: 'ಕನ್ನಡತಿ' ಸೀರಿಯಲ್‌ ಕಥಾನಾಯಕನಿಗೆ ಕ್ವಾರಂಟೈನ್‌! ಹಾಗಾದ್ರೆ ಮುಂದೇನಾಗಲಿದೆ ಭುವಿ ಕಥೆ?

'ಒಮ್ಮೆ ಸಾಯಿ ಪಲ್ಲವಿ ಅವರು ಮೇಕಪ್ ಕಾಸ್ಮೆಟಿಕ್ ಬ್ರ್ಯಾಂಡ್ ಒಂದರ ಎಂಡೋಸ್ಮೆಂಟ್ ಅನ್ನು ತಮ್ಮ ಎಥಿಕ್ಸ್‌ಗೆ ವಿರುದ್ಧವಾಗಿದ್ದರಿಂದ ಒಪ್ಪಿಕೊಳ್ಳಲಿಲ್ಲವೆಂದು ಕೇಳಿದ್ದೆ. ಅಭಿಮಾನಿಗಳಿಗೆ ವಿಶ್ ಮಾಡಿ ದುಡ್ಡು ತೆಗೆದುಕೊಳ್ಳುವ ಅವಕಾಶ ಬಂದಾಗ ನನಗೆ ಅವರೇ ನೆನಪಾಗಿದ್ದು. ಇದು ನನ್ನ ಎಥಿಕ್ಸ್‌ಗೆ ವಿರುದ್ಧವೆಂದು ಈ ಅವಕಾಶವನ್ನು ತಿರಸ್ಕರಿಸಿದ್ದರ ಬಗ್ಗೆ ನನಗೂ ಬಹಳ ಸಂತೋಷವಿದೆ' ಎಂದು ರಂಜನಿ ರಾಘವನ್‌ ಹೇಳಿದ್ದಾರೆ.

also read: ಈ 'ಕನ್ನಡತಿ'ಗೆ ಬಂದಿದೆ ಭಾರಿ ಬೇಡಿಕೆ; ರಂಜನಿ ರಾಘವನ್‌ ಮಾಡಿದ ಮ್ಯಾಜಿಕ್‌ ಅಂಥದ್ದು!

'ಪುಟ್ಟಗೌರಿ ಮದುವೆ' ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಮನೆಮಾತಾದ ನಟಿ ರಂಜನಿ ಈಗ 'ಕನ್ನಡತಿ' ಸೀರಿಯಲ್‌ನಲ್ಲಿ ನಟಿಸುತ್ತಿದ್ದಾರೆ. ಜೊತೆಗೆ ಅವರು ಹಿರಿತೆರೆಗೂ ಕಾಲಿಟ್ಟಿದ್ದು, 'ಟಕ್ಕರ್‌' ಸಿನಿಮಾದಲ್ಲಿ ನಟಿಸಿದ್ದಾರೆ. ಆ ಚಿತ್ರ ಇನ್ನೂ ಬಿಡುಗಡೆ ಆಗುವುದು ಬಾಕಿ ಇದೆ. ಹೊಸದೊಂದು ಸಿನಿಮಾದಲ್ಲಿ ನಟ ದಿಗಂತ್‌ ಜೊತೆ ತೆರೆಹಂಚಿಕೊಳ್ಳುವ ಅವಕಾಶ ಕೂಡ ರಂಜನಿಗೆ ಸಿಕ್ಕಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ