ಆ್ಯಪ್ನಗರ

Kannadathi Serial: ಕನ್ನಡತಿ ಧಾರಾವಾಹಿಯ ಆದಿ ಬಗ್ಗೆ ಹೊಸ ಗುಸುಗುಸು! ಇದು ನಿಜವೇ?

‘ಕನ್ನಡತಿ’ ಧಾರಾವಾಹಿಯಲ್ಲಿ ಸಾನಿಯಾ ಪತಿ ಆದಿ ಪಾತ್ರವೂ ಪ್ರಮುಖವಾದದ್ದು. ಆದಿ ಪಾತ್ರಕ್ಕೆ ‘ಸ್ಮೈಲ್ ಗುರು’ ರಕ್ಷಿತ್ ಬಣ್ಣ ಹಚ್ಚಿದ್ದಾರೆ. ಇದೀಗ ಇದೇ ಆದಿ ಪಾತ್ರದ ಬಗ್ಗೆ ಗುಸುಗುಸು ಕೇಳಿಬರುತ್ತಿದೆ. ಅದೇನಪ್ಪಾ ಅಂದ್ರೆ, ‘ಕನ್ನಡತಿ’ ಧಾರಾವಾಹಿಯಿಂದ ಆದಿ ಪಾತ್ರಧಾರಿ ‘ಸ್ಮೈಲ್ ಗುರು’ ರಕ್ಷಿತ್ ಹೊರಬಂದಿದ್ದಾರಂತೆ. ಹಾಗಂತ ಗುಲ್ಲೆಬ್ಬಿದೆ.

Authored byಹರ್ಷಿತಾ ಎನ್ | Vijaya Karnataka Web 29 Jun 2022, 3:38 pm

ಹೈಲೈಟ್ಸ್‌:

  • ಕನ್ನಡತಿ ಧಾರಾವಾಹಿಯಿಂದ ಹೊರಬಂದ್ರಾ ಆದಿ ಪಾತ್ರಧಾರಿ ರಕ್ಷಿತ್?
  • ಕನ್ನಡತಿ ಧಾರಾವಾಹಿಯಲ್ಲಿ ಕನ್ನಡದ ಮದುವೆ ನಡೆಯುತ್ತಿದೆ
  • ಆಸ್ಪತ್ರೆಯಲ್ಲಿ ಮದುವೆಯಾಗುತ್ತಾರಾ ಹರ್ಷ ಮತ್ತು ಭುವಿ?

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web kannadathi serial will adhi character smile guru rakshith quits serial
Kannadathi Serial: ಕನ್ನಡತಿ ಧಾರಾವಾಹಿಯ ಆದಿ ಬಗ್ಗೆ ಹೊಸ ಗುಸುಗುಸು! ಇದು ನಿಜವೇ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ಕನ್ನಡತಿ’ (Kannadathi) ಕೂಡ ಒಂದು. ‘ಕನ್ನಡತಿ’ ಧಾರಾವಾಹಿ ಇದೀಗ ಪ್ರಮುಖ ಘಟ್ಟ ತಲುಪಿದೆ. ‘ಕನ್ನಡತಿ’ ಧಾರಾವಾಹಿಯಲ್ಲಿ ಇದೀಗ ‘ಮದುವೆ ಸಂಭ್ರಮ’ ಜೋರಾಗಿದೆ. ‘ಕನ್ನಡದ ಮದುವೆ’ ನಡೆಯುತ್ತಿದೆ. ಮದುವೆ ಮಂಟಪದಲ್ಲಿ ಹಸೆಮಣೆ ಏರೋದಕ್ಕೆ ಹರ್ಷ ಹಾಗೂ ಭುವಿ ತಯಾರಾಗಿದ್ದಾರೆ.
ಆದಿ ಬಗ್ಗೆ ಗುಸು ಗುಸು
‘ಕನ್ನಡತಿ’ ಧಾರಾವಾಹಿಯಲ್ಲಿ ಸಾನಿಯಾ ಪತಿ ಆದಿ ಪಾತ್ರವೂ ಪ್ರಮುಖವಾದದ್ದು. ಆದಿ ಪಾತ್ರಕ್ಕೆ ‘ಸ್ಮೈಲ್ ಗುರು’ ರಕ್ಷಿತ್ (Smile Guru Rakshith) ಬಣ್ಣ ಹಚ್ಚಿದ್ದಾರೆ. ಇದೀಗ ಇದೇ ಆದಿ ಪಾತ್ರದ ಬಗ್ಗೆ ಗುಸುಗುಸು ಕೇಳಿಬರುತ್ತಿದೆ. ಅದೇನಪ್ಪಾ ಅಂದ್ರೆ, ‘ಕನ್ನಡತಿ’ ಧಾರಾವಾಹಿಯಿಂದ ಆದಿ ಪಾತ್ರಧಾರಿ ‘ಸ್ಮೈಲ್ ಗುರು’ ರಕ್ಷಿತ್ ಹೊರಬಂದಿದ್ದಾರಂತೆ. ಹಾಗಂತ ಗುಲ್ಲೆಬ್ಬಿದೆ.

ಕನ್ನಡತಿ ಧಾರಾವಾಹಿ: ವರೂಧಿನಿ ಪ್ರಾಣಕ್ಕೆ ಅಪಾಯ, ಹರ್ಷ, ಭುವಿ ಮದುವೆ ನಡೆಯೋದೇ ಸಂದೇಹ
ಸ್ಪಷ್ಟನೆ ಸಿಕ್ಕಿಲ್ಲ!
ಆದಿ ಪಾತ್ರಧಾರಿ ‘ಸ್ಮೈಲ್ ಗುರು’ ರಕ್ಷಿತ್ ‘ಕನ್ನಡತಿ’ ಧಾರಾವಾಹಿಯಿಂದ ಹೊರಬಂದಿರುವ ಬಗ್ಗೆ ಇನ್ನೂ ಕ್ಲಾರಿಟಿ ಸಿಕ್ಕಿಲ್ಲ. ‘ಕನ್ನಡತಿ’ ತಂಡವಾಗಲಿ, ರಕ್ಷಿತ್ ಆಗಿ ಇನ್ನೂ ಈ ಗಾಸಿಪ್ ಬಗ್ಗೆ ಸ್ಪಷ್ಟನೆ ನೀಡಿಲ್ಲ.

ಸಾನಿಯಾ, ದೇವ್ ಪಾತ್ರಧಾರಿಗಳು ಹೊರಬಂದಿದ್ದರು!
ಈ ಹಿಂದೆ ‘ಕನ್ನಡತಿ’ ಧಾರಾವಾಹಿಯಲ್ಲಿ ಸಾನಿಯಾ ಪಾತ್ರದಲ್ಲಿ ರಮೋಲಾ ಅಭಿನಯಿಸುತ್ತಿದ್ದರು. ಕಾರಣಾಂತರಗಳಿಂದ ರಮೋಲಾ ಹೊರಬಂದರು. ಇದೀಗ ಸಾನಿಯಾ ಪಾತ್ರದಲ್ಲಿ ಆರೋಹಿ ನೈನಾ ಕಾಣಿಸಿಕೊಳ್ಳುತ್ತಿದ್ದಾರೆ.

ಡಾ.ದೇವ್ ಪಾತ್ರದಲ್ಲಿ ಈ ಹಿಂದೆ ವಿಜಯ್ ಕೃಷ್ಣ ಅಭನಯಿಸುತ್ತಿದ್ದರು. ವಿಜಯ್ ಕೃಷ್ಣ ಹೊರಬಂದ್ಮೇಲೆ ಇದೀಗ ಡಾ.ದೇವ್ ಪಾತ್ರದಲ್ಲಿ ಹೇಮಂತ್ ಕುಮಾರ್ ನಟಿಸುತ್ತಿದ್ದಾರೆ. ಇದೀಗ ಆದಿ ಪಾತ್ರಧಾರಿ ರಕ್ಷಿತ್ ಕೂಡ ಹೊರನಡೆದಿದ್ದಾರೆ ಅಂತ ಹೇಳಲಾಗುತ್ತಿದೆ.

ಕನ್ನಡತಿ ಧಾರಾವಾಹಿ: ಹರ್ಷನನ್ನು ಮದುವೆಯಾಗಲು ಮದುಮಗಳಂತೆ ರೆಡಿಯಾದ ವರು ಪ್ಲ್ಯಾನ್ ಏನು? ಭುವಿ ಕಥೆ ಏನು?
‘ಕನ್ನಡತಿ’ಯಲ್ಲಿ ಕನ್ನಡದ ಮದುವೆ
‘ಕನ್ನಡತಿ’ ಧಾರಾವಾಹಿಯಲ್ಲಿ ಇದೀಗ ಹರ್ಷ ಹಾಗೂ ಭುವಿಯ ಮದುವೆ ನಡೆಯುತ್ತಿದೆ. ಶಾಸ್ತ್ರಗಳು ಎಲ್ಲರಿಗೂ ಅರ್ಥವಾಗುವಂತೆ ಕನ್ನಡದ ಮದುವೆಯಾಗುತ್ತಿದ್ದಾರೆ ಹರ್ಷ ಮತ್ತು ಭುವಿ. ಇನ್ನೇನು ಭುವಿ ಮಂಟಪಕ್ಕೆ ಹೋಗಬೇಕು ಅನ್ನುವರ್ಷರಲ್ಲಿ ವರೂಧಿನಿ ಅಡ್ಡಗಾಲು ಹಾಕಿದ್ದಾಳೆ. ಹರ್ಷನನ್ನ ನನಗೆ ಬಿಟ್ಟುಕೊಡು ಅಂತ ಭುವಿ ಬಳಿ ಬೇಡಿಕೊಂಡಿದ್ದಾಳೆ.

ವರೂಧಿನಿಯನ್ನ ಸಮಾಧಾನ ಪಡಿಸಲು ಭುವಿ ಹರಸಾಹಸ ಪಟ್ಟಳು. ಆದರೆ, ತಾಳ್ಮೆ ಕಳೆದುಕೊಂಡ ವರೂಧಿನಿ ಪ್ರಾಣಕ್ಕೆ ಅಪಾಯ ತಂದುಕೊಂಡಳು. ವರೂಧಿನಿಯನ್ನ ಭುವಿಯೇ ಆಸ್ಪತ್ರೆಗೆ ಅಡ್ಮಿಟ್ ಮಾಡಿದ್ದಾಳೆ. ಆಸ್ಪತ್ರೆಗೆ ವರ ಹರ್ಷ ಹಾಗೂ ಅಮ್ಮಮ್ಮ ರತ್ನಮಾಲಾ ಕೂಡ ಭೇಟಿಕೊಟ್ಟಿದ್ದಾಳೆ. ಆಸ್ಪತ್ರೆಯಲ್ಲಿ ತನ್ನನ್ನು ಮದುವೆಯಾಗುವಂತೆ ಹರ್ಷನ ಮುಂದೆ ವರೂಧಿನಿ ಪರಿಪರಿಯಾಗಿ ಬೇಡಿಕೊಂಡಿದ್ದಾಳೆ.

Kannadathi: ‘ಕನ್ನಡತಿ’ ಸೀರಿಯಲ್‌ನಿಂದ ಹೊರಬಂದ ಡಾ.ದೇವ್ ಖ್ಯಾತಿಯ ವಿಜಯ್ ಕೃಷ್ಣ
ಆಸ್ಪತ್ರೆಯಲ್ಲೇ ಮದುವೆಯಾಗುತ್ತಾ?
ಇತ್ತ ಆಸ್ಪತ್ರೆಗೆ ರಾಮಾಚಾರಿ ಭೇಟಿ ಕೊಟ್ಟಿದ್ದಾನೆ. ಹಾಗಾದರೆ, ಆಸ್ಪತ್ರೆಯಲ್ಲೇ ಹರ್ಷ ಹಾಗೂ ಭುವಿಯ ಮದುವೆಯನ್ನು ರಾಮಾಚಾರಿ ನೆರವೇರಿಸುತ್ತಾರಾ? ವರೂಧಿನಿಯನ್ನ ಹರ್ಷ ಹಾಗೂ ಭುವಿ ಹೇಗೆ ಸಮಾಧಾನ ಪಡಿಸುತ್ತಾರೆ ಎಂಬ ಕುತೂಹಲ ವೀಕ್ಷಕರಿಗೆ ಕಾಡುತ್ತಿದೆ.

Fill this survey and get a chance to win an attractive gift
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ