ಆ್ಯಪ್ನಗರ

Kannadathi: 'ಕನ್ನಡತಿ' ಧಾರಾವಾಹಿಯಲ್ಲಿ ಸಾನ್ಯಾ ಪ್ರಾಣ ತೆಗೆಯುತ್ತಾನಾ ಆದಿ? ಇಕ್ಕಟ್ಟಿನಲ್ಲಿ ಭುವಿ

'ಕನ್ನಡತಿ' ಧಾರಾವಾಹಿಯಲ್ಲಿ ಆದಿಯ ಬಳಿ ಭುವಿ ವಿರುದ್ಧ ಸಾನ್ಯಾ ಆರೋಪ ಮಾಡಿದ್ದಾಳೆ. ಅದನ್ನು ಆದಿಯೇ ನಿಜ ಮಾಡಲು ಹೊರಟಿದ್ದಾನೆ. ಅಂದರೆ ಸಾನ್ಯಾಳನ್ನು ಆದಿ ಬಿಲ್ಡಿಂಗ್‌ ಮೇಲಿಂದ ನೂಕಿದ್ದಾನೆ, ಅಷ್ಟೇ ಅಲ್ಲದೆ ಅವಳ ಕೈ ಹಿಡಿದುಕೊಂಡಿದ್ದಾನೆ. ಈಗ ಆತ ಸಾನ್ಯಾ ಕೈ ಬಿಟ್ಟರೆ ಅವಳು ಪ್ರಾಣ ಕಳೆದುಕೊಳ್ಳುವುದು ನಿಶ್ಚಿತ. ಸಾನ್ಯಾ ಬದುಕೋದು ಭುವಿ ಕೈಯಲ್ಲಿದೆ. ಏನಾಗಬಹುದು?

Authored byಪದ್ಮಶ್ರೀ ಭಟ್ | Vijaya Karnataka Web 24 Jan 2023, 10:35 am

ಹೈಲೈಟ್ಸ್‌:

  • 'ಕನ್ನಡತಿ' ಧಾರಾವಾಹಿಯಲ್ಲಿ ಆದಿಯ ಬಳಿ ಭುವಿ ವಿರುದ್ಧ ಆರೋಪ ಮಾಡಿದ ಸಾನ್ಯಾ
  • ಸಾನ್ಯಾ ಆರೋಪವನ್ನು ನಿಜ ಮಾಡಲು ಹೊರಟ ಆದಿ
  • 'ಕನ್ನಡತಿ' ಧಾರಾವಾಹಿಯಲ್ಲಿ ಸಾನ್ಯಾ ಪ್ರಾಣ ತೆಗೆಯುತ್ತಾನಾ ಆದಿ?
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web kannadathi serial
'ಕನ್ನಡತಿ' ಧಾರಾವಾಹಿಯಲ್ಲಿ ಸಾನ್ಯಾಗೆ ಬುದ್ಧಿ ಕಲಿಸಲು ಭುವಿ ಪಣ ತೊಟ್ಟಿದ್ದಾಳೆ. ಪದೇ ಪದೇ ತಿದ್ದುಕೊಳ್ಳಲು ಚಾನ್ಸ್ ಕೊಡುತ್ತಿರುವ ಭುವಿ ವಿರುದ್ಧವೇ ಆದಿಯ ಬಳಿ ಸಾನ್ಯಾ ಆರೋಪ ಮಾಡುತ್ತಿದ್ದಾಳೆ. ಆದಿಗೆ ಸಾನ್ಯಾಳ ನಿಜವಾದ ಬಣ್ಣ ಏನು ಅಂತ ಗೊತ್ತಿರೋದಿಕ್ಕೆ ಮತ್ತೆ ಬುದ್ಧಿವಾದ ಹೇಳುವ ಪ್ರಯತ್ನವೂ ಮಾಡಿದ್ದಾನೆ.
ಆಸ್ಪತ್ರೆ ಕಟ್ಟುತ್ತಿರುವ ಬಿಲ್ಡಿಂಗ್‌ ಮೇಲಿಂದ ಭುವಿ ತನ್ನನ್ನು ತಳ್ಳುತ್ತಾಳೆ, ಇವಳು ರತ್ನಮಾಲಾ ತರ ನಟಿಸ್ತಾಳೆ, ಆದರೆ ರತ್ನಮಾಲಾ ಅಲ್ಲ ಎಂದು ಸಾನ್ಯಾ ಕೂಗಿ ಕೂಗಿ ಹೇಳಿದಾಗಲೂ ಅದನ್ನು ಆದಿ ಕೇಳಲೇ ಇಲ್ಲ. ಸಾನ್ಯಾಗೆ ಎಷ್ಟು ಹೇಳಿದರೂ ಕೂಡ ಅವಳು ಮಾತು ಕೇಳದಿದ್ದಾಗ, ಆದಿಯೇ ಅವಳನ್ನು ಬಿಲ್ಡಿಂಗ್‌ ಮೇಲಿಂದ ನೂಕಿದ್ದಾನೆ. ಆದರೂ ಕೂಡ ಆದಿ ಅವಳ ಕೈ ಹಿಡಿದುಕೊಂಡು, ಭಯ ಎಂದರೆ ಹೇಗೆ ಏನಿರುತ್ತದೆ ಎಂದು ತೋರಿಸಿದ್ದಾನೆ. ಕೈ ಬಿಡಬೇಡಿ, ಬೀಳ್ತೀನಿ ಎಂದು ಸಾನ್ಯಾ ಪರಿ ಪರಿಯಾಗಿ ಬೇಡಿಕೊಂಡಿದ್ದಾಳೆ. ಆಗ ಆದಿ ಏನು ಮಾಡುತ್ತಾನೆ ಎನ್ನೋದನ್ನು ತಿಳಿಯಲು 'ಕನ್ನಡತಿ' ಎಪಿಸೋಡ್ ನೋಡಬೇಕು.

ರತ್ನಮಾಲಾ ಯಾವತ್ತೂ ಸಾನ್ಯಾಗೆ ಶಿಕ್ಷೆ ಕೊಟ್ಟಿಲ್ಲ. ಎಂಡಿ ಪಟ್ಟ ಕಿತ್ತುಕೊಂಡಿದ್ದು ಬಿಟ್ಟರೆ ಅವಳನ್ನು ಜೈಲಿಗೂ ಕೂಡ ಕಳಿಸಿಲ್ಲ. ಅಂತೆಯೇ ಭುವಿ ಕೂಡ ಮಾತಿನಲ್ಲಿ ತಿಳಿ ಹೇಳುವ ಪ್ರಯತ್ನ ಮಾಡಿದರೂ ಕೂಡ ಸಾನ್ಯಾ ಮಾತ್ರ ತನ್ನ ತಪ್ಪು ತಿದ್ದುಕೊಳ್ಳದೆ ತಾನೇ ಗೆಲ್ಲಬೇಕು ಎನ್ನುವ ದೃಷ್ಟಿಯಿಂದ ಯಾವ ಜೀವವನ್ನು ತೆಗೆಯಲು ಬೇಕಿದ್ರೂ ಹಿಂದೆ ಮುಂದೆ ನೋಡೋದಿಲ್ಲ. ಸಾನ್ಯಾಗೆ ಯಾವಾಗ ಬುದ್ಧಿ ಬರತ್ತೋ ಏನೋ!

ಇನ್ನು ವರೂಧಿನಿಗೆ ಹರ್ಷಿತ್ ಇಷ್ಟವಾಗುತ್ತಿದ್ದಾನೆ. ಇವರಿಬ್ಬರು ಒಂದಾಗುತ್ತಾರಾ? ಹರ್ಷನನ್ನು ಮರೆತು ವರೂಧಿನಿ, ಹರ್ಷಿತ್‌ನನ್ನು ಮದುವೆಯಾಗ್ತಾಳಾ ಎಂದು ಕಾದು ನೋಡಬೇಕಿದೆ. ಅಲ್ಲಿಗೆ ಹವಿ ಜೋಡಿಗೆ ( ಹರ್ಷ, ಭುವಿ ) ವರೂಧಿನಿ ಎನ್ನುವ ಸೈಕೋ ಸಮಸ್ಯೆ ತಪ್ಪುತ್ತದೆ.

Kannadathi: ಕನ್ನಡತಿ ಧಾರಾವಾಹಿಯಲ್ಲಿ ಇನ್ನೊಂದು ಜೀವಕ್ಕೆ ಅಪಾಯ? ಮತ್ತೊಂದು ಬಲಿಯಾಗತ್ತಾ?

ಸಾನ್ಯಾ ಕೂಡ ಸರಿ ಹೋದರೆ ಹರ್ಷ, ಭುವಿ ಆರಾಮಾಗಿ ಆಫೀಸ್, ಕೆಫೆ, ಕಾಲೇಜ್ ಎನ್ನುತ್ತ ಸಂತೋಷದೊಂದಿಗೆ ಕುಟುಂಬದ ಜೊತೆ ಸಮಯ ಕಳೆಯಬಹುದು.

'ಕನ್ನಡತಿ' ಧಾರಾವಾಹಿಗೆ ಪರಮೇಶ್ವರ್ ಗುಂಡ್ಕಲ್ ಕಥೆ ಬರೆದಿದ್ದು, ವಿಕಾಸ್ ನೆಗಿಲೋಣಿ ಅವರು ಚಿತ್ರಕಥೆ ಬರೆಯುತ್ತಿದ್ದಾರೆ, ಮಂಜುನಾಥ್ ಭಟ್ ಅವರ ಸಂಭಾಷಣೆ, ರಂಜನಿ ರಾಘವನ್, ಕಿರಣ್ ರಾಜ್, ಚಿತ್ಕಳಾ ಬಿರಾದಾರ್, ಸೌಮ್ಯಾ ಭಟ್, ಸಾರಾ ಅಣ್ಣಯ್ಯ, ವಿಜಯ್ ಸಿದ್ದರಾಜ್, ದಿವ್ಯಾ ಗೋಪಾಲ್, ಆರ್ ಟಿ ರಮಾ, ಹೇಮಾ, ಸತೀಶ್ ಮೈಸೂರು, ಅಮೃತಾ ಮೂರ್ತಿ, ಮೊಹಿರಾ ಆಚಾರ್ಯ ಮುಂತಾದವರು ಈ ಧಾರಾವಾಹಿಯಲ್ಲಿ ನಟಿಸಿದ್ದಾರೆ.

Kannadathi: 'ಕನ್ನಡತಿ' ಧಾರಾವಾಹಿ ಕೊನೆ ದಿನದ ಶೂಟಿಂಗ್‌ನಲ್ಲಿ ಕಲಾವಿದರ ಕಣ್ಣೀರ ಕೋಡಿ...; ವಿಡಿಯೋ ವೈರಲ್

ಕನ್ನಡ ಕಿರುತೆರೆಯಲ್ಲಿ ದೊಡ್ಡ ಸಂಚಲನ ಮೂಡಿಸಿದ ಸೂಕ್ಷ್ಮ ಸಂವೇದಿ ಸೀರಿಯಲ್ ಇದಾಗಿದ್ದು, ಫೆಬ್ರವರಿಯಲ್ಲಿ ಈ ಸೀರಿಯಲ್ ಅಂತ್ಯವಾಗಲಿದೆಯಂತೆ. ಈ ಬಗ್ಗೆ ಕಲಾವಿದರು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದ್ದು, ವಾಹಿನಿ ಯಾವುದೇ ಮಾಹಿತಿ ನೀಡಿಲ್ಲ.
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ