ಆ್ಯಪ್ನಗರ

Kannadathi: ಹರ್ಷನ ಮೇಲೆ ಚೀಟಿಂಗ್ ಕೇಸ್: ಭುವಿಗೆ ವಿಚ್ಛೇದನ ಕೊಡಿಸ್ತಾರೆ ವರೂಧಿನಿ!

ಒಂದು ಅಥವಾ ಎರಡು ತಿಂಗಳಿನಲ್ಲಿ ಹರ್ಷ ಹಾಗೂ ಭುವಿಗೆ ಡಿವೋರ್ಸ್ ಕೊಡಿಸಲು ವರೂಧಿನಿ ಮುಂದಾಗಿದ್ದಾಳೆ. ಇದಕ್ಕಾಗಿ ಈಗಾಗಲೇ ವಕೀಲರನ್ನೂ ಭೇಟಿ ಮಾಡಿ ವಿಚ್ಛೇದನದ ಅರ್ಜಿಯ ಡ್ರಾಫ್ಟ್ ತಯಾರಿಸಲು ವರೂಧಿನಿ ಹೇಳಿದ್ದಾಳೆ.

Authored byಹರ್ಷಿತಾ ಎನ್ | Vijaya Karnataka Web 21 Jul 2022, 3:45 pm

ಹೈಲೈಟ್ಸ್‌:

  • ‘ಕನ್ನಡತಿ’ ಧಾರಾವಾಹಿಯಲ್ಲಿ ಹೊಸ ತಿರುವು
  • ಹರ್ಷ ಹಾಗೂ ಭುವಿಗೆ ವಿಚ್ಛೇದನ ಕೊಡಿಸುತ್ತಾರಂತೆ ವರೂಧಿನಿ
  • ಹರ್ಷ ಮೇಲೆ ಚೀಟಿಂಗ್ ಆರೋಪಕ್ಕೆ ಸಾಕ್ಷಿ ಹುಡುಕಲು ವರೂಧಿನಿ ಪ್ಲಾನ್

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web kannadathi serial written update varudhini all set to make bhuvi divorce harsha
Kannadathi: ಹರ್ಷನ ಮೇಲೆ ಚೀಟಿಂಗ್ ಕೇಸ್: ಭುವಿಗೆ ವಿಚ್ಛೇದನ ಕೊಡಿಸ್ತಾರೆ ವರೂಧಿನಿ!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ಕನ್ನಡತಿ’ ಕೂಡ ಒಂದು. ‘ಕನ್ನಡತಿ’ ಧಾರಾವಾಹಿಯಲ್ಲಿ ಕಥಾನಾಯಕ ಹರ್ಷ ಕುಮಾರ್ ಹಾಗೂ ಕಥಾನಾಯಕಿ ಭುವಿಗೆ ಮದುವೆಯಾಗಿದ್ದಾಯ್ತು. ಅತ್ತ ಅಮ್ಮಮ್ಮ ರತ್ನಮಾಲಾ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಹರ್ಷ ಹಾಗೂ ಭುವಿಯನ್ನ (ಭುವನೇಶ್ವರಿ / ಸೌಪರ್ಣಿಕಾ) ದೂರ ಮಾಡೋಕೆ ವರೂಧಿನಿ ಪಣ ತೊಟ್ಟಿದ್ದಾಳೆ. ಇನ್ನೆರಡೇ ತಿಂಗಳಲ್ಲಿ ಹರ್ಷ ಹಾಗೂ ಭುವಿಗೆ ವಿಚ್ಛೇದನ ಕೊಡಿಸೋಕೆ ವರೂಧಿನಿ ಸ್ಕೆಚ್ ಹಾಕಿದ್ದಾಳೆ..!
ಲಾಯರ್ ಜೊತೆ ವರೂಧಿನಿ ಮಾತುಕತೆ
ಒಂದು ಅಥವಾ ಎರಡು ತಿಂಗಳಿನಲ್ಲಿ ಹರ್ಷ ಹಾಗೂ ಭುವಿಗೆ ಡಿವೋರ್ಸ್ ಕೊಡಿಸಲು ವರೂಧಿನಿ ಮುಂದಾಗಿದ್ದಾಳೆ. ಇದಕ್ಕಾಗಿ ಈಗಾಗಲೇ ವಕೀಲರನ್ನೂ ಭೇಟಿ ಮಾಡಿ ವಿಚ್ಛೇದನದ ಅರ್ಜಿಯ ಡ್ರಾಫ್ಟ್ ತಯಾರಿಸಲು ವರೂಧಿನಿ ಹೇಳಿದ್ದಾಳೆ.

ಕನ್ನಡತಿ ಧಾರಾವಾಹಿ: ತನ್ನ ಫಾಲೋ ಮಾಡಿಕೊಂಡು ಬಂದ ವರೂಧಿನಿಯ ಗ್ರಹಚಾರ ಬಿಡಿಸಿದ್ನಾ ಹರ್ಷ?
ಹರ್ಷನ ವಿರುದ್ಧ ಚೀಟಿಂಗ್ ಕೇಸ್
‘ಪರಸ್ಪರ ಒಪ್ಪಿಗೆಯ ಮೇರೆಗೆ’ ವಿಚ್ಛೇದನದ ಅರ್ಜಿಯನ್ನ ತಯಾರಿಸಲು ವರೂಧಿನಿ ಹೇಳಿಲ್ಲ. ಬದಲಾಗಿ ಹರ್ಷನ ವಿರುದ್ಧ ಚೀಟಿಂಗ್ ಆರೋಪವನ್ನ ಹೊರಿಸಲು ವರೂಧಿನಿ ವಕೀಲರಿಗೆ ಸೂಚಿಸಿದ್ದಾಳೆ.

ಸಾಕ್ಷಿಗಾಗಿ ಹುಡುಕಾಟ
‘’ಭುವಿಯನ್ನ ಹರ್ಷ ಲವ್ ಮಾಡಿಲ್ಲ. ಎಲ್ಲಾ ಸುಳ್ಳು ಅನ್ನೋದಕ್ಕೆ ಸಾಕ್ಷಿ ಬೇಕು’’ ಅಂತ ಸಾನಿಯಾಗೆ ವರೂಧಿನಿ ಹೇಳಿದ್ದಾಳೆ.

Kannadathi: ‘ಕನ್ನಡತಿ’ ಆದಿ ಕುರಿತಾದ ಗಾಸಿಪ್ ನಿಜ: ಧಾರಾವಾಹಿಯಿಂದ ಹೊರಬಂದ ರಕ್ಷಿತ್!
ವಿಲ್ ಹೊರಗೆ ಬಂದರೆ.?

ಈಗಾಗಲೇ ಅಮ್ಮಮ್ಮ (ರತ್ನಮಾಲಾ) ತಮ್ಮ ಸಕಲ ಆಸ್ತಿಯನ್ನು ಭುವಿ ಹೆಸರಿಗೆ ಬರೆದಿದ್ದಾರೆ. ಈ ವಿಚಾರ ಯಾರಿಗೂ ಗೊತ್ತಿಲ್ಲ. ಒಂದ್ವೇಳೆ ವಿಲ್ ಹೊರಗೆ ಬಂದರೆ.. ಆಸ್ತಿಗಾಗಿ ಹರ್ಷ ತನ್ನನ್ನ ಪ್ರೀತಿಸಿ ಮದುವೆಯಾದರು ಎಂಬ ಅನುಮಾನದ ಹುಳ ಭುವಿ ತಲೆಗೆ ಹೊಕ್ಕುತ್ತಾ? ಇದನ್ನೇ ಸಾನಿಯಾ ಮತ್ತು ವರೂಧಿನಿ ದಾಳವಾಗಿ ಬಳಸಿಕೊಂಡು ಹರ್ಷ - ಭುವಿಯನ್ನ ದೂರ ಮಾಡುತ್ತಾರಾ?

Kannadathi Serial: ಕನ್ನಡತಿ ಧಾರಾವಾಹಿ: ಭುವಿ ಮೇಲೆ ರೇಗಾಡಿದ ಹರ್ಷ, ಸಾನಿಯಾ ಕುತಂತ್ರ ಫಲಿಸಿತೇ?
ರಾಜೀನಾಮೆ ಕೊಟ್ಟ ಭುವಿ?
ಮದುವೆಯಾದ ಬಳಿಕ ಆಫೀಸ್‌ಗೆ ಬಂದ ಮೊದಲ ದಿನವೇ ಹರ್ಷ ಹಾಗೂ ಭುವಿ ಮಧ್ಯೆ ಕಿರಿಕ್ ಆಗುವ ಹಾಗೆ ಸಾನಿಯಾ ಮಾಡಿದ್ದಳು. ನಂತರ ಅದನ್ನೇ ದೊಡ್ಡದು ಮಾಡಿ.. ಭುವಿಯ ಸ್ವಾಭಿಮಾನಕ್ಕೆ ಪೆಟ್ಟು ಕೊಟ್ಟು ಆಕೆಯಿಂದ ಸಾನಿಯಾ ರಾಜೀನಾಮೆ ಪಡೆದಿದ್ದಾಳೆ. ಮುಂದೇನಾಗುತ್ತೆ ಎಂಬ ಕುತೂಹಲ ವೀಕ್ಷಕರಿಗೆ ಕಾಡುತ್ತಿದೆ.

ಅಂದ್ಹಾಗೆ, ‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷ ಆಗಿ ಕಿರಣ್ ರಾಜ್, ಭುವಿ ಆಗಿ ರಂಜನಿ ರಾಘವನ್, ರತ್ನಮಾಲಾ ಆಗಿ ಚಿತ್ಕಳಾ ಬಿರಾದಾರ, ಸಾನಿಯಾ ಆಗಿ ಆರೋಹಿ ನೈನಾ, ವರೂಧಿನಿ ಆಗಿ ಸಾರಾ ಅಣ್ಣಯ್ಯ ಅಭಿನಯಿಸುತ್ತಿದ್ದಾರೆ.

Fill this survey and get a chance to win an attractive gift
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ