ಆ್ಯಪ್ನಗರ

ಕನ್ನಡತಿ: ಸಹ್ಯಾದ್ರಿ ಬೆಟ್ಟದಲ್ಲಿ ‘ಹವಿ’: ಭುವಿಯನ್ನ ಪ್ರಪಾತಕ್ಕೆ ತಳ್ಳುತ್ತಾನಾ ಸುಪಾರಿ ಕಿಲ್ಲರ್?

‘ಕನ್ನಡತಿ’ ಧಾರಾವಾಹಿಯಲ್ಲಿ ಇದೀಗ ದೊಡ್ಡ ತಿರುವು ಸಿಕ್ಕಿದೆ. ‘ಹವಿ’ ನಿಶ್ಚಿತಾರ್ಥ ನೆರವೇರಿದೆ. ಎಲ್ಲವೂ ಸರಿಹೋಯ್ತು ಅಂತ ಅಂದುಕೊಳ್ಳುವಾಗಲೇ, ಭುವಿಯ ಪ್ರಾಣಕ್ಕೆ ಕಂಟಕ ಎದುರಾಗಿದೆ. ಸುಪಾರಿ ಕಿಲ್ಲರ್ ಕೈಯಿಂದ ಭುವಿ ಬಚಾವ್ ಆಗುತ್ತಾಳಾ?

Authored byಹರ್ಷಿತಾ ಎನ್ | Vijaya Karnataka Web 15 Apr 2022, 5:05 pm

ಹೈಲೈಟ್ಸ್‌:

  • ‘ಕನ್ನಡತಿ’ ಧಾರಾವಾಹಿಯಲ್ಲಿ ರೋಚಕ ತಿರುವು
  • ಭುವಿ ಪ್ರಾಣಕ್ಕೆ ಗಂಡಾಂತರ ಎದುರಾಗಿದೆ
  • ಸುಪಾರಿ ಕಿಲ್ಲರ್‌ನಿಂದ ಬಚಾವ್ ಆಗುತ್ತಾಳಾ ಭುವನೇಶ್ವರಿ?

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web kannadathi serial written update will bhuvaneshwari escape from danger
ಕನ್ನಡತಿ: ಸಹ್ಯಾದ್ರಿ ಬೆಟ್ಟದಲ್ಲಿ ‘ಹವಿ’: ಭುವಿಯನ್ನ ಪ್ರಪಾತಕ್ಕೆ ತಳ್ಳುತ್ತಾನಾ ಸುಪಾರಿ ಕಿಲ್ಲರ್?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ಕನ್ನಡತಿ’ ಕೂಡ ಒಂದು. ‘ಕನ್ನಡತಿ’ ಧಾರಾವಾಹಿಯಲ್ಲಿ ಇದೀಗ ದೊಡ್ಡ ತಿರುವು ಸಿಕ್ಕಿದೆ. ‘ಹವಿ’ ನಿಶ್ಚಿತಾರ್ಥ ನೆರವೇರಿದೆ. ಎಲ್ಲವೂ ಸರಿಹೋಯ್ತು ಅಂತ ಅಂದುಕೊಳ್ಳುವಾಗಲೇ, ಭುವಿಯ ಪ್ರಾಣಕ್ಕೆ ಕಂಟಕ ಎದುರಾಗಿದೆ. ಸುಪಾರಿ ಕಿಲ್ಲರ್ ಕೈಯಿಂದ ಭುವಿ ಬಚಾವ್ ಆಗುತ್ತಾಳಾ?
ವಿಘ್ನಗಳ ನಡುವೆಯೂ ನೆರವೇರಿದ ‘ಹವಿ’ ನಿಶ್ಚಿತಾರ್ಥ
ಅಕ್ಕಿ ಮಿಲ್ ಸಾಹುಕರನಿಗೆ ಭುವಿಯನ್ನ ಕೊಟ್ಟು ಮದುವೆ ಮಾಡಬೇಕು ಎಂಬುದು ಮಂಗಳಮ್ಮ ಅಜ್ಜಿಯ ಬಯಕೆಯಾಗಿತ್ತು. ಅಷ್ಟರಲ್ಲೇ ಹರ್ಷ - ಭುವಿಯ ಪ್ರೇಮ ಕಹಾನಿ ಮಂಗಳಮ್ಮ ಅಜ್ಜಿಗೆ ಗೊತ್ತಾಯಿತು. ವಾದ, ವಿವಾದ, ರಂಪಾಟವೆಲ್ಲಾ ಮುಗಿದ ನಂತರ ಹರ್ಷ - ಭುವಿ ಮದುವೆಗೆ ಅಜ್ಜಿ ಒಪ್ಪಿಗೆ ಸೂಚಿಸಿದರು. ಭುವಿಯ ತಂದೆ ಮನೆಯಲ್ಲೇ ನಿಶ್ಚಿತಾರ್ಥ ನಿಗದಿಯಾಯಿತು.

ನಿಶ್ಚಿತಾರ್ಥಕ್ಕೂ ಮುನ್ನ ಭುವಿಯ ಸೀರೆ ಸುಟ್ಟುಹೋಯ್ತು, ಭುವಿಯ ಚಿಕ್ಕಮ್ಮನಿಗೆ ಕರೆಂಟ್ ಶಾಕ್ ತಗುಲಿತು, ನಿಶ್ಚಿತಾರ್ಥಕ್ಕೆಂದು ಖರೀದಿಸಿದ ಉಂಗುರಗಳು ಕಾಣೆಯಾದವು. ಇಷ್ಟೆಲ್ಲಾ ವಿಘ್ನಗಳ ನಡುವೆಯೂ ‘ಹವಿ’ ಎಂಗೇಜ್‌ಮೆಂಟ್ ನಡೆಯಿತು. ರೇಶ್ಮೆ ದಾರದಲ್ಲೇ ಉಂಗುರಗಳನ್ನು ಮಾಡಿ ಹರ್ಷ ಹಾಗೂ ಭುವಿ ಬದಲಾಯಿಸಿಕೊಂಡರು. ಬಳಿಕ ಈ ಹಿಂದೆ ಖರೀದಿಸಿದ್ದ ‘ಹವಿ’ ಉಂಗುರವನ್ನು ಭುವಿಗೆ ಹರ್ಷ ತೊಡಿಸಿದರು.

ಕನ್ನಡತಿ ಧಾರಾವಾಹಿ: ನಿಶ್ಚಿತಾರ್ಥದ ಮನೆಯಲ್ಲಿ ಭುವಿ, ರತ್ನಮ್ಮನಿಗೆ ಪದೇ ಪದೇ ಅಪಾಯ
ಒಂದಾದ ಸಾನಿಯಾ - ವರೂಧಿನಿ
ಹರ್ಷ - ಭುವಿ ಒಂದಾಗಿರುವುದು ವರೂಧಿನಿಗೆ ಸಹಿಸಿಕೊಳ್ಳಲಾಗುತ್ತಿಲ್ಲ. ಹರ್ಷ ತನ್ನವನಾಗಬೇಕೆಂದು ವರೂಧಿನಿ ಪ್ರಯತ್ನಿಸುತ್ತಲೇ ಇದ್ದಾರೆ. ಹೀಗಾಗಿ, ಭುವಿಯ ನಿಶ್ಚಿತಾರ್ಥದ ಸೀರೆಗೆ ವರೂಧಿನಿ ಬೆಂಕಿ ಹಚ್ಚಿದರು. ಇನ್ನೂ, ನಿಶ್ಚಿತಾರ್ಥದ ಉಂಗುರಗಳನ್ನು ಕದ್ದಿದ್ದು ಕೂಡ ವರೂಧಿನಿಯೇ.

ಅತ್ತ ‘ರತ್ನಮಾಲಾ’ ಸಾಮ್ರಾಜ್ಯಕ್ಕೆ ಭುವಿ ಒಡತಿಯಾಗುತ್ತಾಳೆ ಎಂಬುದು ಗೊತ್ತಾದ ಬಳಿಕ ಭುವಿಯನ್ನ ಕೊಲೆ ಮಾಡಿಸಲು ಸಾನಿಯಾ ಸಂಚು ರೂಪಿಸಿದ್ದಾಳೆ. ಭುವಿಯನ್ನ ಕೊಲ್ಲಲು ಸಾನಿಯಾ ಸುಪಾರಿ ಕೊಟ್ಟಿದ್ದಾಳೆ. ಭುವಿಯನ್ನ ಕೊಲೆ ಮಾಡಿಸುವ ಪ್ಲಾನ್‌ನಲ್ಲಿ ವರೂಧಿನಿಯನ್ನೂ ಸಾನಿಯಾ ತನಗೆ ಬೇಕಾದ ಹಾಗೆ ಬಳಸಿಕೊಳ್ಳುತ್ತಿದ್ದಾಳೆ. ‘ಹರ್ಷನನ್ನ ನಿನಗೆ ಕೊಡಿಸುತ್ತೇನೆ’ ಎಂದು ಸುಳ್ಳು ಭರವಸೆ ನೀಡಿ ವರೂಧಿನಿಯನ್ನ ತನ್ನ ತಾಳಕ್ಕೆ ತಕ್ಕಂತೆ ಸಾನಿಯಾ ಬಳಸಿಕೊಳ್ಳುತ್ತಿದ್ದಾಳೆ. ಹರ್ಷನ ನೆಪದಿಂದಾಗಿ ಸಾನಿಯಾ ಜೊತೆ ವರೂಧಿನಿ ಕೈಜೋಡಿಸಿದ್ದಾಳೆ.

ಕನ್ನಡ ಧಾರಾವಾಹಿ ಮರಾಠಿಗೆ ರೀಮೇಕ್: ಇದು ‘ಕನ್ನಡತಿ’ಯ ಹೆಮ್ಮೆ!
ಸಹ್ಯಾದ್ರಿ ಬೆಟ್ಟ
‘ಸಹ್ಯಾದ್ರಿ ಬೆಟ್ಟಕ್ಕೆ ಭುವಿ ಬರುತ್ತಾಳೆ. ಅಲ್ಲಿಂದ ಅವಳನ್ನ ನೂಕಿಬಿಡು’ ಎಂದು ಈ ಹಿಂದೆಯೇ ಸುಪಾರಿ ಕಿಲ್ಲರ್‌ಗೆ ಸಾನಿಯಾ ತಿಳಿಸಿದ್ದಳು. ಈಗ ನೋಡಿದ್ರೆ… ಭುವಿ, ಹರ್ಷ, ರತ್ನಮಾಲಾ, ಬಿಂದು, ವರೂಧಿನಿ ಸಹ್ಯಾದ್ರಿ ಬೆಟ್ಟಕ್ಕೆ ಬಂದಿದ್ದಾರೆ. ಸುಪಾರಿ ಕಿಲ್ಲರ್ ಕೂಡ ಸಹ್ಯಾದ್ರಿ ಬೆಟ್ಟದಲ್ಲೇ ಇದ್ದಾನೆ. ಮುಂದೇನಾಗುತ್ತೆ ಎಂಬ ಕುತೂಹಲ ವೀಕ್ಷಕರಿಗೆ ಕಾಡುತ್ತಿದೆ.

ಅಂದ್ಹಾಗೆ, ‘ಕನ್ನಡತಿ’ ಧಾರಾವಾಹಿಯಲ್ಲಿ ಭುವಿಯಾಗಿ ನಟಿ ರಂಜನಿ ರಾಘವನ್, ರತ್ನಮಾಲಾ ಆಗಿ ಚಿತ್ಕಳಾ ಬಿರಾದಾರ, ಹರ್ಷ ಆಗಿ ನಟ ಕಿರಣ್ ರಾಜ್, ವರೂಧಿನಿ ಆಗಿ ಸಾರಾ ಅಣ್ಣಯ್ಯ, ಸಾನಿಯಾ ಆಗಿ ಆರೋಹಿ ನೈನಾ ಅಭಿನಯಿಸುತ್ತಿದ್ದಾರೆ.
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ