ಆ್ಯಪ್ನಗರ

'ಮಹಾಭಾರತ' ಧಾರಾವಾಹಿಯ ಸೌರಭ್ ಜೈನ್‌ರನ್ನು ಹೊಗಳಿದ ಸಿಎಂ ಬಿಎಸ್ ಯಡಿಯೂರಪ್ಪ!

ಸಿಎಂ ಬಿ ಎಸ್ ಯಡಿಯೂರಪ್ಪ ಅವರು ಧಾರಾವಾಹಿಯೊಂದನ್ನು ಹೊಗಳಿದ್ದಾರೆ. ಅಷ್ಟೇ ಅಲ್ಲದೆ ನಾನು ಆ ಧಾರಾವಾಹಿಯ ದೊಡ್ಡ ಅಭಿಮಾನಿ ಎಂದಿದ್ದಾರೆ. ಹಾಗಾದರೆ ಯಾವುದು ಆ ಧಾರಾವಾಹಿ? ಯಾವಾಗ ಪ್ರಸಾರವಾಗುತ್ತದೆ? ಇಲ್ಲಿದೆ ಹೆಚ್ಚಿನ ಮಾಹಿತಿ.

Vijaya Karnataka Web 12 Jun 2020, 5:32 pm
ಸಿಎಂ ಬಿಎಸ್ ಯಡಿಯೂರಪ್ಪ 'ಮಹಾಭಾರತ' ಧಾರಾವಾಹಿಯನ್ನು ಹೊಗಳಿದ್ದಾರೆ. ಈಗಾಗಲೇ ಈ ಪೌರಾಣಿಕ ಧಾರಾವಾಹಿ ಸಾಕಷ್ಟು ಜನರ ಮೆಚ್ಚುಗೆ ಕೂಡ ಪಡೆದಿದೆ. ಸೋಮವಾರದಿಂದ ಶನಿವಾರದವರೆಗೆ ಸಂಜೆ 7ಗಂಟೆಯಿಂದ ರಾತ್ರಿ 8.30ರವರೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಈ ಧಾರಾವಾಹಿ ಪ್ರಸಾರವಾಗುತ್ತಿದೆ.
Vijaya Karnataka Web sgfhghjkujukhgjkjhgkjl


ಬಿ ಎಸ್ ಯಡಿಯೂರಪ್ಪ ಹೇಳಿದ್ದೇನು?
"ಜನರಿಗೆ ಮೌಲ್ಯಗಳನ್ನು ತಿಳಿಸುಕೊಡುವಲ್ಲಿ ಮಹಾಭಾರತ ಧಾರಾವಾಹಿಯ ಪಾತ್ರ ಮುಖ್ಯವಾದುದು. ಈ ಧಾರಾವಾಹಿ ಆರಂಭವಾದಾಗಿನಿಂದ ನಾನು ಕೂಡ ಈ ಧಾರಾವಾಹಿಯ ದೊಡ್ಡ ಅಭಿಮಾನಿಯಾಗಿದ್ದೇನೆ. ಮಹಾಭಾರತದಲ್ಲಿ ಕೃಷ್ಣ ಪಾತ್ರವನ್ನು ಕಂಡು ತುಂಬ ಖುಷಿಪಟ್ಟಿದ್ದೇನೆ, ಆಶ್ಚರ್ಯಚಕಿತನಾಗಿದ್ದೇನೆ. ಶ್ರೀಕೃಷ್ಣ ಹೇಳುವ ಒಂದೊಂದು ಮಾತುಗಳು ಕೂಡ ಜನರ ಜೀವನಕ್ಕೆ ಸಂಬಂಧಪಟ್ಟದ್ದಾಗಿರುತ್ತವೆ. ಅಷ್ಟೇ ಅಲ್ಲದೆ ಇವು ಆದರ್ಶ ಜೀವನಕ್ಕೆ ನಾಂದಿ ಹಾಡುತ್ತವೆ." ಎಂದು ಬಿಎಸ್‌ವೈ ಹೇಳಿದ್ದಾರೆ.

ಹಿಂದಿಯ ಧಾರಾವಾಹಿಯದು
ಜನರ ಒತ್ತಾಯದ ಮೇರೆಗೆ ಅರ್ಧ ಗಂಟೆ ಹೆಚ್ಚಿಸಿ, ಒಟ್ಟಾರೆ ಒಂದೂವರೆ ಗಂಟೆಗಳ ಕಾಲ 'ಮಹಾಭಾರತ' ಪ್ರಸಾರ ಮಾಡಲಾಗುತ್ತಿದೆ. ವ್ಯಾಸ ಗ್ರಂಥ ಆಧಾರಿತ 'ಮಹಾಭಾರತ' ಧಾರಾವಾಹಿ ಹಿಂದಿಯಲ್ಲಿ 2013-2014ರಲ್ಲಿ ಪ್ರಸಾರವಾಗಿತ್ತು. ಸೌರಭ್ ಜೈನ್ ಅವರು ಕೃಷ್ಣ ಪಾತ್ರದಲ್ಲಿ ನಟಿಸಿದ್ದರು. ಶಾಹೀರ್ ಶೇಖ್, ಪೂಜಾ ಶರ್ಮಾ, ಅಹಂ ಶರ್ಮಾ, ಆರವಿ ಚೌಧರಿ, ಅರ್ಪಿತ್ ರ್ಯಾಂಕ್ ಮುಂತಾದವರು ಈ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಲಾಕ್ ಡೌನ್ ಆದಾಗಿನಿಂದ ಹಿಂದಿಯಲ್ಲೂ ಕೂಡ ಈ ಧಾರಾವಾಹಿ ಮರುಪ್ರಸಾರವಾಗುತ್ತಿದೆ. ಕನ್ನಡದಲ್ಲಿ ಡಬ್ ಆಗಿ ಈ ಧಾರಾವಾಹಿ ಪ್ರಸಾರವಾಗುತ್ತಿದೆ. ಕನ್ನಡದಲ್ಲಿ ಡಬ್ ಆದ ಎರಡನೇ ಧಾರಾವಾಹಿ ಇದಾಗಿದೆ.

Also read-'ನ್ಯಾಶನಲ್ ಕ್ರಶ್' ಕೃಷ್ಣ ಪಾತ್ರಧಾರಿ ಸೌರಭ್ ಜೈನ್ ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿದ್ರು!

100 ಕೋಟಿ ರೂಪಾಯಿ ಧಾರಾವಾಹಿ
ಸಿದ್ದಾರ್ಥ್ ಆನಂದ್ ಕುಮಾರ್ ಈ ಧಾರಾವಾಹಿ ನಿರ್ದೇಶನ ಮಾಡಿದ್ದಾರೆ. ಮುಕೇಶ್ ಕುಮಾರ್ ಸಿಂಗ್, ಲೋಕನಾಥ್ ಪಾಂಡೆ ಈ ಧಾರಾವಾಹಿ ನಿರ್ಮಾಣಕ್ಕೆ 100 ಕೋಟಿ ರೂ ಬಳಸಲಾಗಿದೆ, ಚಿತ್ರೀಕರಣಕ್ಕೂ ಮುನ್ನ 4 ವರ್ಷಗಳ ಕಾಲ ಅಧ್ಯಯನ ಮಾಡಲಾಗಿದೆ ಎಂದಿದ್ದಾರೆ. ತಂದೆ ಶಾಂತನು ಮದುವೆಯಾಗುವಂತೆ ಭೀಷ್ಮ, ಸತ್ಯವತಿಯನ್ನು ಒಪ್ಪಿಸಲು ಶುರು ಮಾಡಿದಾಗಿನಿಂದ ಈ ಧಾರಾವಾಹಿ ಕಥೆ ಶುರುವಾಗುತ್ತದೆ.
Also read-ಕನ್ನಡದಲ್ಲೂ ಬರುತ್ತಿದೆ 'ಮಹಾಭಾರತ' ಧಾರಾವಾಹಿ! ಪ್ರಸಾರಕ್ಕೆ ಫಿಕ್ಸ್‌ ಆಯ್ತು ದಿನಾಂಕ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ