ಆ್ಯಪ್ನಗರ

'ಸೀತೆಯ ರಾಮ' ಧಾರಾವಾಹಿಯಲ್ಲಿ ನಟ ಜೆಕೆಯ ರಾವಣನ ಅವತಾರ ನೀವೂ ನೋಡಬಹುದು!

ಸೀತೆಯ ರಾಮ ಸೀರಿಯಲ್‌ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ. ಈ ಧಾರಾವಾಹಿಯಲ್ಲಿ ನಟ ಜಯರಾಮ್ ಕಾರ್ತಿಕ್ ನಟಿಸಿದ್ದಾರೆ. ಇಂದು ಹಿಂದಿ ಧಾರಾವಾಹಿಯಾಗಿದ್ದು, ಕನ್ನಡಕ್ಕೆ ಡಬ್ ಆಗಿ ಬರಲಿದೆ.

Vijaya Karnataka Web 10 Aug 2020, 11:58 am
ಕನ್ನಡಿಗರು ಹೊಸ ಆಲೋಚನೆ, ಹೊಸ ವಿಚಾರಧಾರೆಗಳನ್ನು ಬೆಂಬಲಿಸುತ್ತಾರೆ. ಇದೇ ನಿಟ್ಟಿನಲ್ಲಿ ಪ್ರಸಾರವಾದ 'ರಾಧಾ ಕೃಷ್ಣ' ಸೀರಿಯಲ್‌ ವೀಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಈಗ ಅದೇ ರೀತಿಯ 'ಸೀತೆಯ ರಾಮ' ಸೀರಿಯಲ್‌ ಅನ್ನು ಜನ ಒಪ್ಪಿಕೊಳ್ಳುತ್ತಾರೆ ಎಂಬ ವಿಶ್ವಾಸದಿಂದ ಸ್ಟಾರ್‌ ಸುವರ್ಣ ವಾಹಿನಿ ಇಂದಿನಿಂದ ಅದರ ಪ್ರಸಾರವನ್ನು ಆರಂಭಿಸುತ್ತಿದೆ.
Vijaya Karnataka Web karthik jayaram starrer seetheya rama serial will telecast in star suvarna
'ಸೀತೆಯ ರಾಮ' ಧಾರಾವಾಹಿಯಲ್ಲಿ ನಟ ಜೆಕೆಯ ರಾವಣನ ಅವತಾರ ನೀವೂ ನೋಡಬಹುದು!


ಸೀತೆಯ ದೃಷ್ಟಿಕೋನದಲ್ಲಿರುವ ರಾಮಾಯಣವನ್ನು ಕನ್ನಡಿಗರು ಅಕ್ಕರೆಯಿಂದ ಒಪ್ಪಿಕೊಳ್ಳಲಿದ್ದಾರೆ. ಭಾರತದ ಪರಂಪರೆ ಮತ್ತು ಸಂಸ್ಕೃತಿಯ ಪ್ರತೀಕವಾಗಿರುವ ಮಹಾಭಾರತ ಮತ್ತು ರಾಮಾಯಣ ಮಹಾಗ್ರಂಥಗಳಲ್ಲಿ ಈಗಾಗಲೇ ಮಹಾಭಾರತವನ್ನು ಧಾರಾವಾಹಿ ರೂಪದಲ್ಲಿ ಸ್ಟಾರ್‌ ಸುವರ್ಣ ವೀಕ್ಷಕರಿಗೆ ತೋರಿಸಿದೆ. ಈಗ ರಾಮಾಯಣದ ಸರದಿಯಾಗಿದ್ದು, ವಿಶೇಷವಾಗಿ ಹಿಂದೆಂದೂ ಕಂಡಿರದ ರೀತಿಯಲ್ಲಿ ಮೂಲ ಕಥೆಗೆ ಧಕ್ಕೆಯಾಗದಂತೆ 'ಸೀತೆಯ ರಾಮ' ಧಾರಾವಾಹಿಯನ್ನು ಈ ಬಾರಿ ಪ್ರಸ್ತುತ ಪಡಿಸಲಾಗುತ್ತಿದೆ.

ಸೀತಾ ಮಾತೆಯ ಬಾಲ್ಯದ ಜತೆಯಲ್ಲಿರಾಮನ ಬಾಲ್ಯ, ಮಿಥಿಲಾ ನಗರದ ಪರಿಚಯದೊಂದಿಗೆ ಅಯೋಧ್ಯೆ ಜತೆಗಿನ ನಂಟು ಈ ಸೀರಿಯಲ್‌ನಲ್ಲಿ ಅನಾವರಣಗೊಳ್ಳಲಿವೆ. ರಾಮ ಮತ್ತು ಸೀತೆ ಒಬ್ಬರಿಂದೊಬ್ಬರು ದೂರವಿದ್ದರೂ ಸಂಸ್ಕಾರ, ವಿದ್ಯೆ, ಗುಣಗಳಲ್ಲಿಪರಸ್ಪರ ಪ್ರತಿಬಿಂಬದಂತಿರುತ್ತಾರೆ. ರಾಮ ಮತ್ತು ಸೀತೆಯ ಪಾತ್ರಗಳು ವರ್ಗ ಮತ್ತು ವಯಸ್ಸಿನ ಬೇಧವಿಲ್ಲದೆ, ಎಲ್ಲರಿಗೂ ಆಪ್ತವೆನಿಸಲಿವೆ. ಇದರಲ್ಲಿಅಹಲ್ಯಾ ಶಾಪ ವಿಮೋಚನೆ, ಸೀತಾ ಸ್ವಯಂವರ, ಸೀತಾ ರಾಮರ ವನವಾಸ, ಲಂಕಾಪತಿ ರಾವಣನ ಅಟ್ಟಹಾಸ, ಹನುಮಂತನ ಕಥೆ, ವಾಲಿ ವಧೆ, ಲಂಕಾದಹನ ಮತ್ತು ರಾವಣನ ಸಂಹಾರ ಹೀಗೆ ಮರ್ಯಾದ ಪುರುಷೋತ್ತಮನ ಜೀವನದ ಪ್ರತಿ ಕ್ಷಣವನ್ನು ಸೀತೆಯ ದೃಷ್ಟಿಯಿಂದ ಸೆರೆ ಹಿಡಿಯಲಾಗಿದೆ.

Also Read-ರಾಮಾಯಣ ಧಾರಾವಾಹಿಯಲ್ಲಿ ಪ್ರೇಕ್ಷಕರ ಕಣ್ಣಲ್ಲಿ ನೀರು ತರಿಸಿದ ಆ ಒಂದು ದೃಶ್ಯ ಯಾವುದು?

ಈ ಧಾರಾವಾಹಿಯ ಪ್ರತಿ ಸನ್ನಿವೇಶಗಳು ಕಿರುತೆರೆಯಲ್ಲಿ ದೃಶ್ಯ ವೈಭವ ಸೃಷ್ಟಿಸಲಿವೆ. ಇದರಲ್ಲಿಅನೇಕ ಪುಸ್ತಕಗಳಲ್ಲಿ ಉಲ್ಲೇಖವಾಗಿರುವ 'ಶಾಂತ' ಎನ್ನುವ ರಾಮನ ಹಿರಿಯ ಸಹೋದರಿಯ ಕಥೆಯನ್ನು ನೋಡಬಹುದಾಗಿದೆ. ಸೀತೆಯ ಪಾತ್ರದಲ್ಲಿ ನಟಿ ಮದಿರಾಕ್ಷಿ ನಟಿಸಿದ್ದರೆ, ರಾಮನಾಗಿ ಆಶಿಶ್‌ ಶರ್ಮ ಆ ಪಾತ್ರಕ್ಕೆ ಜೀವ ತುಂಬಿದ್ದಾರೆ. ದಾನಿಶ್‌ ಅಖ್ತರ್‌ ಸೈಫಿ ಹನುಮಂತನಾಗಿ ನಟಿಸಿದ್ದಾರೆ. ಕನ್ನಡದ ಖ್ಯಾತ ನಟ ಕಾರ್ತಿಕ್‌ ಜಯರಾಮ್‌ ರಾವಣನಾಗಿ ಅಮೋಘವಾಗಿ ನಟಿಸಿದ್ದಾರೆ. ಈ ಸೀರಿಯಲ್‌ ಆಗಸ್ಟ್‌ 10ರಿಂದ ಅಂದರೆ ಇಂದಿನಿಂದ ರಾತ್ರಿ 8.30 ಗಂಟೆಗೆ ಸ್ಟಾರ್‌ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ