ಆ್ಯಪ್ನಗರ

ಆ್ಯಂಡಿ ವಿರುದ್ಧ ಮಹಿಳಾ ಆಯೋಗದ ಮೆಟ್ಟಿಲೇರಿದ ಬಿಗ್ ಬಾಸ್ ಸ್ಪರ್ಧಿ

ಶೋನಲ್ಲೇ ಆರಂಭದಲ್ಲೇ ದೊಡ್ಡ ಪ್ರಾಬ್ಲಂ ಆಗಿತ್ತು. ಈ ಬಗ್ಗೆ ಅಲ್ಲಿದ್ದವರಿಗೆ ಹೇಳಿದ್ದೆ. ಆದರೆ ಅವರು ಇದನ್ನೆಲ್ಲಾ ಕ್ರೀಡಾ ಮನೋಭಾವದಿಂದ ತೆಗೆದುಕೊಳ್ಳಬೇಕು ಎಂದು ಸಮಾಧಾನ ಮಾಡಿದ್ದರು. ಒಳಗೆ ಇದ್ದಾಗಲೂ ಆ್ಯಂಡಿ ನನ್ನನ್ನೇ ಟಾರ್ಗೆಟ್ ಮಾಡಿದ್ದಲ್ಲದೆ ಹೊರಗೆ ಬಂದ ಮೇಲೂ ಟಾರ್ಗೆಟ್ ಮಾಡುತ್ತಿರುವುದು ಖಚಿತವಾ ಯಿತು. ಹೊರಗೆ ಬಂದ ಮೇಲಾದರೂ ಸುಮ್ಮನಾಗುತ್ತಾರೆ ಎಂದುಕೊಂಡಿದ್ದು ಸುಳ್ಳಾಯಿತು. ಹೀಗಾಗಿ ಆಯೋಗದ ಮೆಟ್ಟಿಲೇರಿದ್ದೇನೆ ಎಂದಿದ್ದಾರೆ ಕವಿತಾ.

Vijaya Karnataka 12 Feb 2019, 12:34 pm
ಬಿಗ್ ಬಾಸ್ ಆರನೇ ಸೀಸನ್‌ನ ಇಬ್ಬರು ಸ್ಪರ್ಧಿಗಳ ನಡುವಿನ ಮತ್ತೊಂದು ವಿವಾದ ಇದೀಗ ಮಹಿಳಾ ಆಯೋಗದ ಮೆಟ್ಟಿಲೇರಿದೆ. ಬಿಗ್‌ಬಾಸ್‌ನ ಸ್ಪರ್ಧಿ ಆಂಡ್ರ್ಯೂ
Vijaya Karnataka Web kavitha-gowda

ಅಲಿಯಾಸ್ ಆ್ಯಂಡಿ ವಿರುದ್ದ ಮತ್ತೊಬ್ಬ ಸ್ಪರ್ಧಿ ನಟಿ ಕವಿತಾ ಗೌಡ ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ.

ಬಿಗ್‌ಬಾಸ್‌ನಲ್ಲಿದ್ದಾಗ ಅನುಚಿತವಾಗಿ ವರ್ತಿಸಿದ ಆ್ಯಂಡಿ, ಅದರಿಂದ ಹೊರಗೆ ಬಂದ ನಂತರವೂ ಅದೇ ರೀತಿ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿಬಾಯಿ ಅವರಿಗೆ ದೂರು ನೀಡಿ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಬಿಗ್ ಬಾಸ್ ಅಂಗಳದಲ್ಲಿ ಇದ್ದಾಗಲೇ ಆ್ಯಂಡಿ ವಿರುದ್ಧ ನಾನಾ ಆರೋಪಗಳು ಕೇಳಿ ಬಂದಿದ್ದವು. ಸಹ ಸರ್ಥಿಗಳ ಮುಖಕ್ಕೆ ಸ್ಪ್ರೇ ಹೊಡೆದ ಆರೋಪದ ಮೇಲೆ ಬಿಡದಿ ಠಾಣೆಯಲ್ಲಿ ಆ್ಯ೦ಡಿ ವಿರುದ್ಧ ದೂರು ದಾಖಲಾಗಿದೆ. ನಟಿ ಕವಿತಾ ಅವರ ಜತೆ ಅನುಚಿತವಾಗಿ ವರ್ತಿಸಿದ ಬಗ್ಗೆಯೂ ಆ್ಯಂಡಿ ವಿರುದ್ಧ ಮೊದಲೇ ಆರೋಪ ಕೇಳಿ ಬಂದಿತ್ತು.

ಈ ಬಗ್ಗೆ ಮಾಧ್ಯಗಳ ಜತೆ ಮಾತನಾಡಿದ ಕವಿತಾ, 'ಶೋನಲ್ಲೇ ಆರಂಭದಲ್ಲೇ ದೊಡ್ಡ ಪ್ರಾಬ್ಲಂ ಆಗಿತ್ತು. ಈ ಬಗ್ಗೆ ಅಲ್ಲಿದ್ದವರಿಗೆ ಹೇಳಿದ್ದೆ. ಆದರೆ ಅವರು ಇದನ್ನೆಲ್ಲಾ ಕ್ರೀಡಾ ಮನೋಭಾವದಿಂದ ತೆಗೆದುಕೊಳ್ಳಬೇಕು ಎಂದು ಸಮಾಧಾನ ಮಾಡಿದ್ದರು. ಒಳಗೆ ಇದ್ದಾಗಲೂ ಆ್ಯಂಡಿ ನನ್ನನ್ನೇ ಟಾರ್ಗೆಟ್ ಮಾಡಿದ್ದಲ್ಲದೆ ಹೊರಗೆ ಬಂದ ಮೇಲೂ ಟಾರ್ಗೆಟ್ ಮಾಡುತ್ತಿರುವುದು ಖಚಿತವಾ ಯಿತು. ಹೊರಗೆ ಬಂದ ಮೇಲಾದರೂ ಸುಮ್ಮನಾಗುತ್ತಾರೆ ಎಂದುಕೊಂಡಿದ್ದು ಸುಳ್ಳಾಯಿತು. ಹೀಗಾಗಿ ಆಯೋಗದ ಮೆಟ್ಟಿಲೇರಿದ್ದೇನೆ'' ಎಂದರು.

ವಿದ್ಯಾ ವಿನಾಯಕ ಧಾರಾವಾಹಿಯ ಮೂಲಕ ಗಮನ ಸೆಳೆದಿದ್ದ ಕವಿತಾ ಗೌಡ ಹಲವು ಸಿನಿಮಾಗಳಲ್ಲಿ ಸಹ ಮಿಂಚಿದ್ದಾರೆ. 'ಶ್ರೀನಿವಾಸ ಕಲ್ಯಾಣ' ಅವರ ಮೊದಲ ಸಿನಿಮಾ. ಸದ್ಯ ಅದೇ ತಂಡದ ಜೊತೆಗೆ 'ಬೀರ್ ಬಲ್' ಚಿತ್ರದಲ್ಲಿ ಸಹ ಅವರು ಕಾಣಿಸಿಕೊಂಡಿದ್ದಾರೆ. ಆಂಡಿ ಜತೆಗಿನ ಅವರ ಕಿತ್ತಾಟ ತಾರಕಕ್ಕೇರಿತ್ತು. ಅದನ್ನು ಬಿಟ್ಟರೆ ಮನೆಯಲ್ಲಿದ್ದಷ್ಟು ದಿನ ಕವಿತಾ ಸಹ ಅಂತಹ ದೊಡ್ಡ ಕಿರಿಕ್ ಮಾಡಿಕೊಂಡಿಲ್ಲ.

ಸ್ವಯಂ ನಾಮನಿರ್ದೇಶನ ಟಾಸ್ಕ್ ಅವರ ಪಾಲಿಗೆ ಗೇಮ್ ಚೇಂಜರ್ ಆಯ್ತು. ನಿರ್ಧಾರ ತೆಗೆದುಕೊಳ್ಳಲು ಕವಿತಾ ಮತ್ತು ಆಂಡಿ ಅವರನ್ನು ಕನ್ಫೆಷನ್ ಕೋಣೆಗೆ ಕಳುಹಿಸಲಾಯಿತು. ಮೊದಲನೆ ಸಲ ಯಾರನ್ನು ಸೂಚಿಸಬೇಕು ಎಂದು ತೀರ್ಮಾನಕ್ಕೆ ಬರಲು ಇಬ್ಬರು ವಿಫಲರಾಗಿ ನಂತರ ಮತ್ತೊಂದು ಅವಕಾಶ ಪಡೆದುಕೊಂಡರು. ಆದರೆ ಇಬ್ಬರ ನಡುವೆ ಒಂದು ಡೀಲ್ ಆಯಿತು. ಕವಿತಾ ಪ್ರತಿ ದಿನ 10 ನಿಮಿಷ ಆ್ಯಂಡಿ ಜತೆ ಮಾತಾಡಬೇಕು ಎಂಬ ಡೀಲ್ ಕುದುರಿತು.

ಪ್ರತಿ ದಿನ ಹತ್ತು ನಿಮಿಷ ಕವಿತಾ ಜೊತೆ ಕಾಲ ಕಳೆಯಬಹುದು ಎಂಬ ನಂಬಿಕೆ ಮೇಲೆ ಆಂಡಿ ನಾಮಿನೇಟ್ ಆಗಲು ಮನಸ್ಸು ಮಾಡಿದರು. ಕೊಟ್ಟ ಮಾತಿನಂತೆ ಆಂಡಿ ಜೊತೆಗೆ ಕವಿತಾ ಪ್ರತ್ಯೇಕವಾಗಿ ಸಮಯ ಕಳೆಯುತ್ತಿದ್ದರು. ಆದರೆ ಕೋರ್ಟ್ ಟಾಸ್ಕ್‌ನಲ್ಲಿ ಕವಿತಾ, ಆಂಡಿ ಡೀಲ್ ಅಡ್ವಾಂಟೇಜ್ ತೆಗೆದುಕೊಳ್ಳುತ್ತಿದ್ದು, ನನಗೆ ಹಿಂಸೆ ನೀಡುತ್ತಿದ್ದಾರೆ ಎಂದು ದೂರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ