ಆ್ಯಪ್ನಗರ

Kendasampige Serial: ತೀರ್ಥಂಕರ್ ಪ್ರಸಾದ್‌ ಮನೆ ಮೇಲೆ ರೇಡ್ ಆಗೋದು ಕನ್ಫರ್ಮ್?

Kendasampige Kannada Serial Today Episode: ‘’ಎಲೆಕ್ಷನ್‌ನಲ್ಲಿ ಗೆದ್ದಿದ್ದೇನೆ, ಎಲ್ಲರಿಗೂ ನಾನು ರೋಲ್ ಮಾಡೆಲ್ ಆಗಿದ್ದೇನೆ, ನಾನು ಹೇಳಿದ ಮಾತೇ ವೇದವಾಕ್ಯ’’ ಅಂತ ಮೆರೆಯುತ್ತಿದ್ದ ತೀರ್ಥಂಕರ್ ಪ್ರಸಾದ್‌.. ಕಾಂಟ್ರ್ಯಾಕ್ಟರ್‌ಗಳ ಬಳಿ ಜಗಳ ಮಾಡಿಕೊಂಡಿದ್ದ. ಈಗ ಅದೇ ಜಗಳದಿಂದಾಗಿ ತೀರ್ಥಂಕರ್ ಪ್ರಸಾದ್ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ತೀರ್ಥನ ಮನೆ ಮೇಲೆ ರೇಡ್ ಆಗಲಿದೆ.

Authored byಹರ್ಷಿತಾ ಎನ್ | Vijaya Karnataka Web 22 Aug 2023, 11:02 pm

ಹೈಲೈಟ್ಸ್‌:

  • ಕುತೂಹಲ ಹಂತದಲ್ಲಿ ‘ಕೆಂಡಸಂಪಿಗೆ’ ಧಾರಾವಾಹಿ
  • ತೀರ್ಥಂಕರ್ ಪ್ರಸಾದ್ ಮನೆ ಮೇಲೆ ಆಗುತ್ತಾ ರೇಡ್‌?
  • ರಾಜಕೀಯ ಜೀವನದಲ್ಲಿ ಸಂಕಷ್ಟಕ್ಕೆ ಸಿಲುಕುತ್ತಾನಾ ತೀರ್ಥಂಕರ್ ಪ್ರಸಾದ್?

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web kendasampige serial written update august 22 2023 episode theertha gets shocking news
Kendasampige Serial: ತೀರ್ಥಂಕರ್ ಪ್ರಸಾದ್‌ ಮನೆ ಮೇಲೆ ರೇಡ್ ಆಗೋದು ಕನ್ಫರ್ಮ್?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್ ಧಾರಾವಾಹಿಗಳ ಪೈಕಿ ‘ಕೆಂಡಸಂಪಿಗೆ’ ಕೂಡ ಒಂದು. ‘ಕೆಂಡಸಂಪಿಗೆ’ ಧಾರಾವಾಹಿ ಕುತೂಹಲ ಹಂತ ತಲುಪಿದೆ. ಎಲೆಕ್ಷನ್‌ನಲ್ಲಿ ಗೆದ್ದು ಶಾಸಕನಾದ್ಮೇಲೆ ಕಾಮಗಾರಿಗಳ ವಿಚಾರವಾಗಿ ತೀರ್ಥಂಕರ್ ಪ್ರಸಾದ್‌ ಬಳಿ ಬೇರೆಯೇ ಪ್ಲಾನ್ಸ್ ಇವೆ. ಹೀಗಾಗಿ, ಕಮಿಷನ್ ವಿಚಾರವಾಗಿ ಕಾಂಟ್ರ್ಯಾಕ್ಟರ್ ಹಾಗೂ ತೀರ್ಥಂಕರ್ ಪ್ರಸಾದ್ ಮಧ್ಯೆ ಮಾರಾಮಾರಿ ನಡೆದಿತ್ತು. ಈಗ ಅದೇ ವಿಚಾರ ಸೀರಿಯಸ್ ಆಗಿದೆ. ಕಾಂಟ್ರ್ಯಾಕ್ಟರ್‌ಗಳ ಕುತಂತ್ರದಿಂದ ತೀರ್ಥಂಕರ್ ಪ್ರಸಾದ್ ಮನೆ ಮೇಲೆ ರೇಡ್ ಆಗುವ ಸಾಧ್ಯತೆ ಇದೆ.

ಪಾತ್ರಧಾರಿಗಳ ಪರಿಚಯ

‘ಕೆಂಡಸಂಪಿಗೆ’ ಧಾರಾವಾಹಿಯಲ್ಲಿ ತೀರ್ಥಂಕರ್ ಪ್ರಸಾದ್ ಆಗಿ ಆಕಾಶ್, ಸುಮನಾ ಆಗಿ ಕಾವ್ಯ ಶೈವ, ಸಾಧನಾ ಆಗಿ ಅಮೃತಾ ರಾಮಮೂರ್ತಿ, ರಾಜೇಶ ಆಗಿ ಸುನೀಲ್, ಪದ್ಮ ಆಗಿ ಜ್ಯೋತಿ ಬಂಟ್ವಾಳ, ಕೇಶವ್ ಪ್ರಸಾದ್ ಆಗಿ ದೊಡ್ಡಣ್ಣ ಅಭಿನಯಿಸುತ್ತಿದ್ದಾರೆ.

ನಾನು ಅವತ್ತು ಫೋನ್ ಪಿಕ್ ಮಾಡಿದಿದ್ದರೆ, ಗೆಳತಿ ಬದುಕಿರುತ್ತಿದ್ದಳು! ಕಣ್ಣೀರಿಟ್ಟ Kendasampige ನಟಿ Kavya Shaiva

ಇಂದಿನ ಸಂಚಿಕೆಯಲ್ಲಿ ಏನಾಗಲಿದೆ?

‘ಕೆಂಡಸಂಪಿಗೆ’ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ ಮನೆಯಲ್ಲಿ ಪೂಜೆ ನೆರವೇರಿಸಲು ಕೇಶವ್ ಪ್ರಸಾದ್, ಪದ್ಮ ತಯಾರಿ ನಡೆಸುತ್ತಿರುತ್ತಾರೆ. ಸುಮನಾಳಿಂದಲೇ ಪೂಜೆಯನ್ನ ಹಾಳು ಮಾಡಿಸಬೇಕು ಅಂತ ಸಾಧನಾ ಹಾಗೂ ಜಾಹ್ನವಿ ಪ್ಲಾನ್ ಮಾಡುತ್ತಿರುತ್ತಾರೆ. ಈ ಮಧ್ಯೆ ತೀರ್ಥಂಕರ್ ಪ್ರಸಾದ್‌ಗೆ ನಾಯಕರು ಫೋನ್ ಮಾಡುತ್ತಾರೆ. ‘’ಕಾಂಟ್ರ್ಯಾಕ್ಟರ್‌ಗಳೊಂದಿಗಿನ ಕಿತ್ತಾಟದ ಪರಿಣಾಮವಾಗಿ ನಿನ್ನ ಮನೆ ಮೇಲೆ ರೇಡ್ ಆಗುವ ಸಾಧ್ಯತೆ ಇದೆ’’ ಎಂದು ತೀರ್ಥಂಕರ್ ಪ್ರಸಾದ್‌ಗೆ ನಾಯಕರು ಎಚ್ಚರಿಸುತ್ತಾರೆ. ಸುದ್ದಿ ಕೇಳಿ ತೀರ್ಥಂಕರ್ ಪ್ರಸಾದ್‌ ಗಾಬರಿಯಾಗುತ್ತಾನೆ. ಹಾಗಾದ್ರೆ, ತೀರ್ಥನ ಮನೆ ಮೇಲೆ ದಾಳಿಯಾಗುತ್ತಾ? ದಾಳಿಯಿಂದಾಗಿ ರಹಸ್ಯಗಳೇನಾದರೂ ಹೊರಗೆ ಬರುತ್ತದಾ?

Kendasampige Serial: ಅರೇ.. ಕೇಶವ್ ಪ್ರಸಾದ್ ಉರಿದುಬಿದ್ದಿದ್ದು ‘ಈ’ ಕಾರಣಕ್ಕಾ? ಸುಭಾಷ್ ಬಚಾವ್!

ಇಲ್ಲಿಯವರೆಗಿನ ಕಥೆ

ತೀರ್ಥಂಕರ್ ಪ್ರಸಾದ್ ಸ್ವಾರ್ಥಿ ಮತ್ತು ಅವಕಾಶವಾದಿ ರಾಜಕಾರಣಿ. ಕಾರ್ಪೊರೇಟರ್ ಆಗಿದ್ದ ತೀರ್ಥಂಕರ್ ಪ್ರಸಾದ್ ಎಲೆಕ್ಷನ್‌ನಲ್ಲಿ ಗೆದ್ದು ಎಎಂಲ್‌ಎ ಆಗುತ್ತಾನೆ. ಅದರ ಹಿಂದೆ ಸುಮನಾಳ ಶ್ರಮ ಕೂಡ ಇದೆ. ಅಸಲಿಗೆ, ಎಲೆಕ್ಷನ್‌ನಲ್ಲಿ ಮತಗಳು ಬೀಳಲಿ ಎಂಬ ಕಾರಣಕ್ಕಾಗಿಯೇ ಪರಿಸ್ಥಿತಿಯ ಒತ್ತಡಕ್ಕೆ ಮಣಿದು ಸುಮನಾಳನ್ನ ತೀರ್ಥಂಕರ್ ಪ್ರಸಾದ್ ಮದುವೆಯಾಗುತ್ತಾನೆ. ಎಲೆಕ್ಷನ್‌ ಮುಗಿದ ನಂತರ ಸುಮನಾಳನ್ನ ಮನೆಯಿಂದ ಹೊರಗೆ ಕಳುಹಿಸುವುದು ತೀರ್ಥಂಕರ್ ಪ್ರಸಾದ್ ಪ್ಲಾನ್ ಆಗಿತ್ತು. ಆದರೆ, ಅಷ್ಟರಲ್ಲಿ ಸುಮನಾ ಗರ್ಭಿಣಿ ಆಗುತ್ತಾಳೆ. ಈಗ ಸುಮನಾ ಮೇಲೆ ತೀರ್ಥಂಕರ್ ಪ್ರಸಾದ್‌ಗೆ ಪ್ರೀತಿ ಮೂಡುತ್ತಿದೆ. ಸುಮನಾ - ತೀರ್ಥಂಕರ್ ಪ್ರಸಾದ್‌ನ ಬೇರೆ ಮಾಡಲು ಸಾಧನಾ, ಜಾಹ್ನವಿ ಪ್ಲಾನ್ ಮಾಡುತ್ತಿದ್ದಾರೆ. ಹೀಗಿರುವಾಗಲೇ, ತೀರ್ಥಂಕರ್ ಪ್ರಸಾದ್‌ ರಾಜಕೀಯ ಜೀವನದಲ್ಲಿ ದೊಡ್ಡ ತೊಡುಕು ಉಂಟಾಗುತ್ತಾ? ಏನೋ ಮಾಡಲು ಹೋಗಿ ತೀರ್ಥಂಕರ್ ಪ್ರಸಾದ್ ಸಂಕಷ್ಟಕ್ಕೆ ಸಿಲುಕಿದ್ನಾ?

Kendasampige Serial: ಸುಳ್ಳು ಹೇಳಿ ತೀರ್ಥನ ಕೈಯಲ್ಲಿ ಸಿಕ್ಕಿಬೀಳ್ತಾಳಾ ಸುಮನಾ?
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ