ಆ್ಯಪ್ನಗರ

Lakshana: ‘ಲಕ್ಷಣ’ದಲ್ಲಿ ದೊಡ್ಡ ತಿರುವು: ಮಾವ ಚಂದ್ರಶೇಖರ್ ತಪ್ಪನ್ನ ಕ್ಷಮಿಸಿದ ಭೂಪತಿ!

‘ಲಕ್ಷಣ’ ಧಾರಾವಾಹಿಗೆ ದೊಡ್ಡ ತಿರುವು ಸಿಕ್ಕಿದ್ದು, ನಕ್ಷತ್ರ ಹಾಗೂ ಚಂದ್ರಶೇಖರ್ ಬಗ್ಗೆ ಭೂಪತಿಗೆ ಸತ್ಯ ಗೊತ್ತಾಗಿದೆ. ಚಂದ್ರಶೇಖರ್ ಅವರನ್ನ ಮಾವ ಅಂತ ಭೂಪತಿ ಒಪ್ಪಿಕೊಂಡಿದ್ದಾರೆ.

Authored byಹರ್ಷಿತಾ ಎನ್ | Vijaya Karnataka Web 22 Feb 2023, 4:50 pm

ಹೈಲೈಟ್ಸ್‌:

  • ‘ಲಕ್ಷಣ’ ಧಾರಾವಾಹಿಯಲ್ಲಿ ಹೊಸ ತಿರುವು
  • ನಕ್ಷತ್ರ ಬಗ್ಗೆ ಸತ್ಯ ಅರಿತ ಭೂಪತಿ
  • ಚಂದ್ರಶೇಖರ್ ಅವರನ್ನ ಬಾಯ್ತುಂಬ ‘ಮಾವ’ ಅಂತ ಕರೆದ ಭೂಪತಿ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web lakshana serial written update bhupathi forgives chandrashekar
Lakshana: ‘ಲಕ್ಷಣ’ದಲ್ಲಿ ದೊಡ್ಡ ತಿರುವು: ಮಾವ ಚಂದ್ರಶೇಖರ್ ತಪ್ಪನ್ನ ಕ್ಷಮಿಸಿದ ಭೂಪತಿ!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿ ‘ಲಕ್ಷಣ’. ಜಗನ್ನಾಥ್ ಚಂದ್ರಶೇಖರ್ ಅಭಿನಯಿಸುತ್ತಿರುವ ‘ಲಕ್ಷಣ’ ಧಾರಾವಾಹಿಗೆ ಇದೀಗ ಹೊಸ ತಿರುವು ಸಿಕ್ಕಿದೆ. ಇಷ್ಟ ದಿನ ನಕ್ಷತ್ರ ಹಾಗೂ ಚಂದ್ರಶೇಖರ್ ಕಂಡ್ರೆ ಭೂಪತಿಗೆ ಆಗ್ಬರ್ತಿರ್ಲಿಲ್ಲ. ಮದುವೆ ವಿಚಾರದಲ್ಲಿ ಇಬ್ಬರೂ ಮೋಸ ಮಾಡಿದ್ದಾರೆ ಅಂತಲೇ ಭೂಪತಿ ಭಾವಿಸಿದ್ದರು. ಇದೀಗ.. ಭೂಪತಿಗೆ ಸತ್ಯದ ಅರಿವಾಗಿದೆ. ಮದುವೆ ವಿಷಯದಲ್ಲಿ ನಕ್ಷತ್ರ ಮೋಸ ಮಾಡಿಲ್ಲ ಅನ್ನೋದು ಭೂಪತಿಗೆ ಗೊತ್ತಾಗಿದೆ. ಹಾಗೇ, ಚಂದ್ರಶೇಖರ್ ತಪ್ಪು ಮಾಡಿದ್ದರೂ.. ಅದು ಒಳ್ಳೆಯದಕ್ಕಾಗಿ ಎಂಬುದೂ ಭೂಪತಿ ಅರಿವಿಗೆ ಬಂದಿದೆ.
ಭೂಪತಿಗೆ ಸತ್ಯದರ್ಶನ ಮಾಡಿಸಿದ ಮೌರ್ಯ
ತಾನೇ RJ ಸಖಿ ಅಂತ ಶ್ವೇತಾ ಸುಳ್ಳು ಹೇಳಿದ್ದಳು ಅನ್ನೋದು ಮೊದಲಿಗೆ ಭೂಪತಿಗೆ ಗೊತ್ತಾಯಿತು. ಹಾಗೇ, ನಿಜವಾದ RJ ಸಖಿ ನಕ್ಷತ್ರ ಅನ್ನೋದೂ ಭೂಪತಿ ಅರಿವಿಗೆ ಬಂತು. ಆನಂತರ.. ಮದುವೆ ಸಂದರ್ಭದಲ್ಲಿ ನಕ್ಷತ್ರ ಕಡೆಯಿಂದ ಯಾವುದೇ ಮೋಸ ಆಗಿಲ್ಲ ಎಂಬ ಸತ್ಯದರ್ಶನ ಭೂಪತಿಗೆ ಆಯಿತು. ‘’ನಕ್ಷತ್ರ - ಭೂಪತಿ ಮದುವೆ ಮಾಡಿಸಲು ಚಂದ್ರಶೇಖರ್ ಮುಂದಾದಾಗ, ನಕ್ಷತ್ರಗೆ ಏನೂ ತಿಳಿದಿರಲಿಲ್ಲ. ಮದುವೆ ಬಗ್ಗೆ ಚಂದ್ರಶೇಖರ್ - ನಕ್ಷತ್ರ ಚರ್ಚೆ ಮಾಡಿರಲಿಲ್ಲ’’ ಎಂಬ ಸತ್ಯವನ್ನ ಭೂಪತಿಗೆ ಮೌರ್ಯ ತಿಳಿಸಿದ. ಸತ್ಯವನ್ನ ಅರಿತ ಭೂಪತಿ.. ನಕ್ಷತ್ರ ಬಳಿ ಕ್ಷಮೆಯಾಚಿಸಿದರು.

Lakshana: ಬಹುದೊಡ್ಡ ರಹಸ್ಯ ಬಯಲು: ನಕ್ಷತ್ರ ಕುರಿತಾಗಿ ಪ್ರಮಾಣ ಮಾಡಿದ ಭೂಪತಿ..!
ಚಂದ್ರಶೇಖರ್ ಮನೆಗೆ ಭೂಪತಿ
ನಕ್ಷತ್ರ ಹಾಗೂ ಭೂಪತಿ ಮಧ್ಯೆ ಇದ್ದ ಭಿನ್ನಾಭಿಪ್ರಾಯ ಶಮನಗೊಂಡಿದೆ. ಹೀಗಾಗಿ, ಶಿವರಾತ್ರಿ ಹಬ್ಬದ ಪ್ರಯುಕ್ತ ನಕ್ಷತ್ರ ತಂದೆ ಚಂದ್ರಶೇಖರ್ ಹಾಗೂ ತಾಯಿ ಆರತಿ ಮನೆಗೆ ಭೂಪತಿ ಬಂದಿದ್ದಾರೆ. ಮಾವ ಚಂದ್ರಶೇಖರ್ ಮೇಲೆ ಭೂಪತಿಗೆ ಬೆಟ್ಟದಷ್ಟು ಕೋಪ ಇತ್ತು. ಆ ಕೋಪವನ್ನೂ ಮರೆತು ಇದೀಗ ಭೂಪತಿ ತಣ್ಣಗಾಗಿದ್ದಾರೆ. ದ್ವೇಷವನ್ನ ಮರೆತು ಮನಸಾರೆ, ಬಾಯ್ತುಂಬ ಚಂದ್ರಶೇಖರ್ ಅವರನ್ನ ‘ಮಾವ’ ಎಂದು ಭೂಪತಿ ಕರೆದಿದ್ದಾರೆ. ನಕ್ಷತ್ರ - ಭೂಪತಿ ಒಂದಾಗಿರುವುದು, ಭೂಪತಿ ತಮ್ಮನ್ನ ಮಾವ ಅಂತ ಕರೆದಿರುವುದು ಚಂದ್ರಶೇಖರ್‌ಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ.

Lakshana: ಭಾರ್ಗವಿನೇ ಡೆವಿಲ್ ಅನ್ನೋದು ಶ್ವೇತಾಗೆ ಗೊತ್ತಾಗೋಯ್ತು!
ಡೆವಿಲ್‌ಗೆ ಹಿಂಸೆ ಶುರು
ಇಷ್ಟು ದಿನ ಡೆವಿಲ್ ಆಡಿದ್ದೇ ಆಟವಾಗಿತ್ತು. ಆದ್ರೀಗ, ಡೆವಿಲ್ ಬೇರೆ ಯಾರೂ ಅಲ್ಲ.. ಚಂದ್ರಶೇಖರ್ ಸ್ವಂತ ಸಹೋದರಿ ಭಾರ್ಗವಿ ಅನ್ನೋದು ಶ್ವೇತಾಗೆ ಗೊತ್ತಾಗಿದೆ. ‘’ನಾನೇ ಡೆವಿಲ್’’ ಅಂತ ಭಾರ್ಗವಿ ಒಪ್ಪಿಕೊಂಡಿರುವ ವಿಡಿಯೋವನ್ನು ಇಟ್ಟುಕೊಂಡು ಶ್ವೇತಾ ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ. ‘’ಭೂಪತಿ ಜೊತೆಗೆ ನನ್ನ ಮದುವೆ ಮಾಡಿಸು’’ ಅಂತ ಡೆವಿಲ್‌ಗೆ ಶ್ವೇತಾ ಹಿಂಸೆ ಕೊಡುತ್ತಿದ್ದಾಳೆ.

Lakshana: ಶ್ವೇತಾಳ ಮುಂದೆ ಬಯಲಾದ ಡೆವಿಲ್ ರಹಸ್ಯ!
ಹಾಗಾದ್ರೆ, ಶ್ವೇತಾ ಒತ್ತಾಯಕ್ಕೆ ಮಣಿಯುತ್ತಾಳಾ ಡೆವಿಲ್? ಶ್ವೇತಾ ಜೊತೆ ಭೂಪತಿ ಮದುವೆ ನಡೆಯುತ್ತಾ? ಹೇಳಿ ಕೇಳಿ ಇದೀಗ ನಕ್ಷತ್ರ - ಭೂಪತಿ ಲವ್ ಸ್ಟೋರಿ ಶುರುವಾಗಿದೆ. ಅಂಥದ್ರಲ್ಲಿ ಶ್ವೇತಾ ತನ್ನ ಇಚ್ಛೆಯನ್ನ ಈಡೇರಿಸಿಕೊಳ್ಳೋದು ಹೇಗೆ? ಎಂಬಿತ್ಯಾದಿ ಪ್ರಶ್ನೆಗಳಿಗೆ ಮುಂದಿನ ಸಂಚಿಕೆಗಳಲ್ಲಿ ಉತ್ತರ ಸಿಗಲಿದೆ.

ಅಂದ್ಹಾಗೆ, ‘ಲಕ್ಷಣ’ ಧಾರಾವಾಹಿಯಲ್ಲಿ ಜಗನ್ನಾಥ್ ಚಂದ್ರಶೇಖರ್, ವಿಜಯಲಕ್ಷ್ಮೀ, ಸುಕೃತಾ ನಾಗ್, ಸುಧಾ ಬೆಳವಾಡಿ, ಕೀರ್ತಿ ಭಾನು, ಪ್ರಿಯಾ ಶಠಮರ್ಷಣ ಮುಂತಾದವರು ಅಭಿನಯಿಸುತ್ತಿದ್ದಾರೆ.
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ