ಆ್ಯಪ್ನಗರ

Lakshana: ನಕ್ಷತ್ರ ಮೇಲೆ ಭೂಪತಿಗೆ ಲವ್ ಆಗೋಯ್ತು!

Lakshana Kannada Serial Today Episode 416: ‘ಲಕ್ಷಣ’ ಧಾರಾವಾಹಿಗೆ ಹೊಸ ಟ್ವಿಸ್ಟ್ ಸಿಕ್ಕಿದೆ. ನಕ್ಷತ್ರ ಮೇಲೆ ತನಗಿರುವುದು ಪ್ರೀತಿ ಅನ್ನೋದು ಭೂಪತಿಗೆ ಗೊತ್ತಾಗಿದೆ.

Authored byಹರ್ಷಿತಾ ಎನ್ | Vijaya Karnataka Web 16 Mar 2023, 6:11 pm

ಹೈಲೈಟ್ಸ್‌:

  • ಕುತೂಹಲಕಾರಿ ಹಂತದಲ್ಲಿ ‘ಲಕ್ಷಣ’ ಧಾರಾವಾಹಿ
  • ಭೂಪತಿಯ ಹೃದಯದಲ್ಲಿ ಪ್ರೀತಿ
  • ನಕ್ಷತ್ರ ಮೇಲೆ ತನಗಿರುವುದು ಪ್ರೀತಿ ಅಂತ ಭೂಪತಿಗೆ ಗೊತ್ತಾಯ್ತು!

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web lakshana serial written update march 16th 2023 episode 416 bhupathi is in love
Lakshana: ನಕ್ಷತ್ರ ಮೇಲೆ ಭೂಪತಿಗೆ ಲವ್ ಆಗೋಯ್ತು!
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್ ಧಾರಾವಾಹಿಗಳ ಪೈಕಿ ‘ಲಕ್ಷಣ’ ಕೂಡ ಒಂದು. ‘ಲಕ್ಷಣ’ ಧಾರಾವಾಹಿ ಇದೀಗ ಕುತೂಹಲಕಾರಿ ಘಟ್ಟ ತಲುಪಿದೆ. ಅತ್ತ ಪತಿ ಭೂಪತಿ - ಪತ್ನಿ ನಕ್ಷತ್ರಳನ್ನ ದೂರ ಮಾಡಲು ಡೆವಿಲ್ ಮತ್ತು ಶ್ವೇತಾ ಪ್ರಯತ್ನಿಸುತ್ತಿದ್ದಾರೆ, ಇತ್ತ ನಕ್ಷತ್ರಳನ್ನ ತಾನು ಪ್ರೀತಿಸುತ್ತಿರುವುದು ಭೂಪತಿಗೆ ಅರಿವಾಗಿದೆ. ‘ಐ ಲವ್ ನಕ್ಷತ್ರ’ ಎಂದಿದ್ದಾನೆ ಭೂಪತಿ.

ಪಾತ್ರವರ್ಗ

‘ಲಕ್ಷಣ’ ಸೀರಿಯಲ್‌ನಲ್ಲಿ ಕಥಾನಾಯಕ ಭೂಪತಿಯಾಗಿ ಜಗನ್ನಾಥ್ ಚಂದ್ರಶೇಖರ್, ಕಥಾನಾಯಕಿ ನಕ್ಷತ್ರ ಆಗಿ ವಿಜಯಲಕ್ಷ್ಮೀ, ನಕ್ಷತ್ರ ತಂದೆ ಚಂದ್ರಶೇಖರ್ ಆಗಿ ಕೀರ್ತಿ ಭಾನು, ನಕ್ಷತ್ರ ತಾಯಿ ಆರತಿ ಆಗಿ ದೀಪಾ ಅಯ್ಯರ್, ಚಂದ್ರಶೇಖರ್ ಸಹೋದರಿ ಭಾರ್ಗವಿ ಅಲಿಯಾಸ್ ಡೆವಿಲ್ ಆಗಿ ಪ್ರಿಯಾ ಶಠಮರ್ಷಣ, ಶ್ವೇತಾ ಆಗಿ ಸುಕೃತಾ ನಾಗ್ ಅಭಿನಯಿಸುತ್ತಿದ್ದಾರೆ.

Lakshana: ಶ್ವೇತಾಳ ಕಪಾಳಕ್ಕೆ ಬಾರಿಸಿದ ಭಾರ್ಗವಿ: ಸಿಟ್ಟು ತೀರಿಸಿಕೊಂಡ ಡೆವಿಲ್!

ಇಂದಿನ ಸಂಚಿಕೆ

‘ಲಕ್ಷಣ’ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ (Episode 416) ಭೂಪತಿಗೆ ತನ್ನ ಪ್ರೀತಿಯ ಅರಿವಾಗುತ್ತದೆ. ಮೌರ್ಯ ಹಾಗೂ ಆತನ ಸ್ನೇಹಿತೆ ಮಾಡಿದ ಪುಟ್ಟ ನಾಟಕದಿಂದ ಭೂಪತಿಗೆ ತನ್ನ ಪ್ರೀತಿಯ ಅರಿವಾಗಿದೆ. ನಕ್ಷತ್ರಳನ್ನ ತಾನು ಪ್ರೀತಿಸುವುದು ಭೂಪತಿಯ ಅರಿವಿಗೆ ಬಂದಿದೆ. ನಕ್ಷತ್ರ ಮೇಲೆ ತನಗಿರುವುದು ಬರೀ ಕಾಳಜಿ ಅಲ್ಲ.. ಪ್ರೀತಿ ಅನ್ನೋದು ಭೂಪತಿಗೆ ಸ್ಪಷ್ಟವಾಗಿದೆ. ‘’ಐ ಲವ್ ನಕ್ಷತ್ರ’’ ಅಂತ ಖುಷಿಯಿಂದಲೇ ಭೂಪತಿ ಹೇಳಿದ್ದಾನೆ.

ಅತ್ತ.. ‘’ಮನೆಗೆ ಸೊಸೆಯಾಗಿದ್ದರೂ ನೀನು ಕೆಲಸದವಳ ತರಹ ಇದ್ದೀಯಾ, ಭೂಪತಿ ಯಾವತ್ತೂ ನಿನ್ನನ್ನ ಪ್ರೀತಿಸಲ್ಲ’’ ಅಂತ ನಕ್ಷತ್ರಳನ್ನ ಶ್ವೇತಾ ಹೀಯಾಳಿಸಿದ್ದಾಳೆ. ಇತ್ತ ಮೌರ್ಯನ ಪ್ಲಾನ್ ವರ್ಕೌಟ್ ಆಗಿದೆ ಅಂತ ಕೇಳಿ ಮಯೂರಿಗೆ ಖುಷಿಯಾಗಿದೆ. ಭೂಪತಿ - ನಕ್ಷತ್ರ ಒಂದಾಗುತ್ತಿದ್ದಾರೆ ಅಂತ ಕೇಳಿ ಸಿಹಿ ತಿಂಡಿ ಮಾಡಲು ಮಯೂರಿ ಸೂಚಿಸಿದ್ದಾಳೆ.

ಭೂಪತಿ - ನಕ್ಷತ್ರ ಲವ್ ಸ್ಟೋರಿ ಶುರುವಾಗುತ್ತಿರುವುದು ಶ್ವೇತಾಗೆ ಗೊತ್ತಾಗೋದು ಯಾವಾಗ? ಇಬ್ಬರ ಪ್ರೀತಿಗೆ ಶ್ವೇತಾ ಮುಳ್ಳಾಗುತ್ತಾಳಾ? ಭೂಪತಿ - ನಕ್ಷತ್ರ ಒಂದಾಗಿಬಿಟ್ಟರೆ ಡೆವಿಲ್ ಏನು ಮಾಡ್ತಾಳೆ? ಎಂಬುದು ಮುಂದಿನ ಸಂಚಿಕೆಗಳಲ್ಲಿ ಗೊತ್ತಾಗಲಿದೆ.

Lakshana: ನಕ್ಷತ್ರಳನ್ನ ಗಡಗಡ ನಡುಗಿಸುತ್ತಿರುವ ಡೆವಿಲ್: ಇದಕ್ಕೆ ಮುಕ್ತಿ ಯಾವಾಗ?

ಇಲ್ಲಿಯವರೆಗಿನ ಕಥೆ

ಚಂದ್ರಶೇಖರ್ - ಆರತಿ ಪುತ್ರಿ ನಕ್ಷತ್ರ, ತುಕಾರಾಂ - ಜಯಾ ಪುತ್ರಿ ಶ್ವೇತಾ.. ಹುಟ್ಟಿದ ಕೂಡಲೆ ಅದಲು - ಬದಲಾಗುತ್ತಾರೆ. ಶ್ರೀಮಂತರ ಮಗಳು ನಕ್ಷತ್ರ ವಠಾರದಲ್ಲಿ ಬೆಳೆಯುತ್ತಾಳೆ. ವಠಾರದ ಹುಡುಗಿ ಶ್ವೇತಾಗೆ ಪುಕ್ಕಟ್ಟೆ ಶ್ರೀಮಂತಿಕೆ ಲಭಿಸುತ್ತದೆ. 23 ವರ್ಷಗಳ ನಂತರ ನಕ್ಷತ್ರ ಹಾಗೂ ಶ್ವೇತಾ ಜನ್ಮರಹಸ್ಯ ಬಯಲಾಗುತ್ತದೆ. ನಕ್ಷತ್ರನೇ ತನ್ನ ಮಗಳು ಅಂತ ಚಂದ್ರಶೇಖರ್‌ಗೆ ಗೊತ್ತಾಗುತ್ತದೆ. ಪರಿಣಾಮ, ಭೂಪತಿ ಹಾಗೂ ನಕ್ಷತ್ರ ಮದುವೆ ನಡೆಯುತ್ತದೆ.

ಶ್ವೇತಾ ಶ್ರೀಮಂತಿಕೆಯನ್ನ ಕಳೆದುಕೊಳ್ಳುತ್ತಾಳೆ. ಹೀಗಾಗಿ, ನಕ್ಷತ್ರಳನ್ನ ಭೂಪತಿಯಿಂದ ಬೇರೆ ಮಾಡಿ, ಭೂಪತಿಯನ್ನ ಮದುವೆಯಾಗಿ ಜೀವನದಲ್ಲಿ ಸೆಟಲ್ ಆಗಬೇಕು ಅನ್ನೋದು ಶ್ವೇತಾ ಪ್ಲಾನ್. ಇದಕ್ಕಾಗಿ ಡೆವಿಲ್ ಅಲಿಯಾಸ್ ಭಾರ್ಗವಿಯನ್ನ ಶ್ವೇತಾ ಬಳಸಿಕೊಳ್ಳುತ್ತಿದ್ದಾರೆ.

ಚಂದ್ರಶೇಖರ್ ಮೇಲೆ ಸ್ವಂತ ತಂಗಿ ಭಾರ್ಗವಿಗೆ ದ್ವೇಷ ಇದೆ. ಹೀಗಾಗಿ, ಚಂದ್ರಶೇಖರ್ ಮತ್ತು ನಕ್ಷತ್ರ ಖುಷಿಯಾಗಿರುವುದು ಡೆವಿಲ್‌ಗೆ ಇಷ್ಟವಿಲ್ಲ. ಆದ ಕಾರಣ.. ನಕ್ಷತ್ರ ಸಂಸಾರವನ್ನ ಹಾಳು ಮಾಡಲು ಡೆವಿಲ್ ಹೊರಟ್ಟಿದ್ದಾಳೆ. ಮುಂದೇನಾಗುತ್ತದೆ ಎಂಬುದನ್ನ ಕಾದುನೋಡಬೇಕಿದೆ.
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ