ಆ್ಯಪ್ನಗರ

Lakshana: ಪ್ರೇಮ ಪತ್ರ ಬರೆದ ಭೂಪತಿ: ವಿಚ್ಛೇದನ ಕೊಡಲು ನಕ್ಷತ್ರ ತಯಾರಿ?

Lakshana Kannada Serial Today Episode 419: ‘ಲಕ್ಷಣ’ ಧಾರಾವಾಹಿ ಕುತೂಹಲಕಾರಿ ಹಂತ ತಲುಪಿದೆ. ಡೆವಿಲ್ ಭಯದಿಂದಾಗಿ ಭೂಪತಿಗೆ ನಕ್ಷತ್ರ ಡಿವೋರ್ಸ್ ಕೊಡ್ತಾಳಾ?

Authored byಹರ್ಷಿತಾ ಎನ್ | Vijaya Karnataka Web 21 Mar 2023, 6:14 pm

ಹೈಲೈಟ್ಸ್‌:

  • ಕುತೂಹಲಕಾರಿ ಘಟ್ಟದಲ್ಲಿ ‘ಲಕ್ಷಣ’ ಧಾರಾವಾಹಿ
  • ಭೂಪತಿಗೆ ನಕ್ಷತ್ರ ಡಿವೋರ್ಸ್ ಕೊಡುತ್ತಾರಾ?
  • ಭೂಪತಿಯ ಪ್ರೇಮ ಪತ್ರ ನಕ್ಷತ್ರಳನ್ನ ತಲುಪುತ್ತಾ?

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web lakshana serial written update march 21st 2023 episode 419 nakshatra is scared
Lakshana: ಪ್ರೇಮ ಪತ್ರ ಬರೆದ ಭೂಪತಿ: ವಿಚ್ಛೇದನ ಕೊಡಲು ನಕ್ಷತ್ರ ತಯಾರಿ?
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಟಾಪ್ ಧಾರಾವಾಹಿಗಳ ಪೈಕಿ ‘ಲಕ್ಷಣ’ ಕೂಡ ಒಂದು. ‘ಲಕ್ಷಣ’ ಧಾರಾವಾಹಿ ಇದೀಗ ಕುತೂಹಲಕಾರಿ ಘಟ್ಟ ತಲುಪಿದೆ. ನಕ್ಷತ್ರಗೆ ಡೆವಿಲ್ ಅಲಿಯಾಸ್ ಭಾರ್ಗವಿ ಬ್ಲಾಕ್ ಮೇಲ್ ಮಾಡುತ್ತಿದ್ದಾಳೆ. ಇನ್ನೆರಡು ದಿನಗಳಲ್ಲಿ ಭೂಪತಿಗೆ ವಿಚ್ಛೇದನ ಕೊಡಲಿಲ್ಲ ಅಂದ್ರೆ ಶಕುಂತಲಾ ದೇವಿ ಪ್ರಾಣಕ್ಕೆ ಅಪಾಯ ತರುವುದಾಗಿ ನಕ್ಷತ್ರಗೆ ಡೆವಿಲ್ ದಿಗಿಲು ಹುಟ್ಟಿಸಿದ್ದಾಳೆ. ಭಯ ಪಟ್ಟುಕೊಂಡಿರುವ ನಕ್ಷತ್ರ.. ಭೂಪತಿಗೆ ವಿಚ್ಛೇದನ ನೀಡುತ್ತಾಳಾ?

ಪಾತ್ರ ಪರಿಚಯ

‘ಲಕ್ಷಣ’ ಧಾರಾವಾಹಿಯಲ್ಲಿ ಕಥಾನಾಯಕ ಭೂಪತಿ ಆಗಿ ಜಗನ್ನಾಥ್ ಚಂದ್ರಶೇಖರ್, ಕಥಾನಾಯಕಿ ನಕ್ಷತ್ರ ಆಗಿ ವಿಜಯಲಕ್ಷ್ಮೀ, ಶ್ವೇತಾ ಆಗಿ ಸುಕೃತಾ ನಾಗ್, ನಕ್ಷತ್ರ ತಂದೆ ಚಂದ್ರಶೇಖರ್ ಆಗಿ ಕೀರ್ತಿ ಭಾನು, ನಕ್ಷತ್ರ ತಾಯಿ ಆರತಿ ಆಗಿ ದೀಪಾ ಅಯ್ಯರ್, ಶಕುಂತಲಾ ದೇವಿ ಆಗಿ ಸುಧಾ ಬೆಳವಾಡಿ, ಡೆವಿಲ್ ಅಲಿಯಾಸ್ ಭಾರ್ಗವಿ ಆಗಿ ಪ್ರಿಯಾ ಶಠಮರ್ಷಣ ಅಭಿನಯಿಸುತ್ತಿದ್ದಾರೆ.

Lakshana: ಶಕುಂತಲಾ ದೇವಿ ಪ್ರಾಣಕ್ಕೆ ಕುತ್ತು? ಭೂಪತಿಗೆ ವಿಚ್ಛೇದನ ಕೊಡಲು ನಕ್ಷತ್ರ ಒಪ್ಪಿಗೆ?

ಇಂದಿನ ಸಂಚಿಕೆ

‘ಲಕ್ಷಣ’ ಧಾರಾವಾಹಿಯ ಇಂದಿನ ಸಂಚಿಕೆಯಲ್ಲಿ (Episode 419) ನಕ್ಷತ್ರ ಇಕ್ಕಟ್ಟಿಗೆ ಸಿಲುಕುತ್ತಾಳೆ. ನಕ್ಷತ್ರಗೆ ಡೆವಿಲ್ ಅಲಿಯಾಸ್ ಭಾರ್ಗವಿ ಬ್ಲಾಕ್ ಮೇಲ್ ಮಾಡುವುದು ಮುಂದುವರಿದಿದೆ. ತನ್ನ ಕುಟುಂಬಕ್ಕೆ ಡೆವಿಲ್ ತೊಂದರೆ ಮಾಡಬಹುದು ಎಂಬ ನಿರೀಕ್ಷೆ ಮೇಲೆ ಎಲ್ಲರನ್ನೂ ಮನೆಯಲ್ಲೇ ಇರುವಂತೆ ನಕ್ಷತ್ರ ಸೂಚಿಸಿದ್ದಾಳೆ. ಹೀಗಿರುವಾಗಲೇ, ಶಕುಂತಲಾ ದೇವಿ ಮೇಲೆ ಡೆವಿಲ್ ಕಣ್ಣು ಹಾಕಿದ್ದಾಳೆ. ಇನ್ನೆರಡು ದಿನಗಳಲ್ಲಿ ಭೂಪತಿಗೆ ಡಿವೋರ್ಸ್ ಕೊಡಬೇಕು ಅಂತ ನಕ್ಷತ್ರಗೆ ಡೆವಿಲ್ ಗಡುವು ನೀಡಿದ್ದಾಳೆ. ಒಂದ್ವೇಳೆ ಎರಡು ದಿನಗಳಲ್ಲಿ ಭೂಪತಿಗೆ ಡಿವೋರ್ಸ್ ಕೊಡಲಿಲ್ಲ ಅಂದ್ರೆ ಶಕುಂತಲಾ ದೇವಿ ವಾಪಸ್ ಮನೆಗೆ ಬರುವುದಿಲ್ಲ ಅಂತ ನಕ್ಷತ್ರಗೆ ಡೆವಿಲ್ ಹೆದರಿಸಿದ್ದಾಳೆ.

ಇತ್ತ ನಕ್ಷತ್ರಗೆ ತನ್ನ ಪ್ರೀತಿಯ ವಿಚಾರವನ್ನ ಹೇಳಲು ಭೂಪತಿ ಒದ್ದಾಡುತ್ತಿದ್ದಾನೆ. ಎಲ್ಲವನ್ನೂ ಬಾಯಲ್ಲಿ ಹೇಳೋದು ಕಷ್ಟ ಅಂತ.. ನಕ್ಷತ್ರಗೆ ಭೂಪತಿ ಪ್ರೇಮ ಪತ್ರ ಬರೆದಿದ್ದಾನೆ. ಭೂಪತಿಯ ಪ್ರೇಮ ಪತ್ರ ತಲುಪುವ ಮುನ್ನವೇ.. ನಕ್ಷತ್ರ ಡಿವೋರ್ಸ್ ಕೊಡುತ್ತಾಳಾ?

Lakshana: ಭೂಪತಿಗೆ ಡಿವೋರ್ಸ್ ಕೊಡುವಂತೆ ಸೂಚಿಸಿದ ಡೆವಿಲ್: ಶಾಕ್ ಆದ ನಕ್ಷತ್ರ!

ಇಲ್ಲಿಯವರೆಗಿನ ಕಥೆ

ಹುಟ್ಟುತ್ತಲೇ ನಕ್ಷತ್ರ ಹಾಗೂ ಶ್ವೇತಾ ಅದಲು ಬದಲಾಗುತ್ತಾರೆ. ಶ್ರೀಮಂತ ಉದ್ಯಮಿ ಚಂದ್ರಶೇಖರ್ ಮನೆಯಲ್ಲಿ ಶ್ವೇತಾ ಬೆಳೆಯುತ್ತಾಳೆ. ಮಧ್ಯಮ ವರ್ಗದ ತುಕಾರಾಂ ಮನೆಯಲ್ಲಿ ನಕ್ಷತ್ರ ಬೆಳೆಯುತ್ತಾಳೆ. 23 ವರ್ಷಗಳ ಬಳಿಕ ಶ್ವೇತಾ - ಭೂಪತಿಗೆ ಮದುವೆ ಫಿಕ್ಸ್ ಆಗುತ್ತದೆ. ಮದುವೆ ಮಂಟಪದಲ್ಲೇ ಚಂದ್ರಶೇಖರ್ ಮಗಳು ಶ್ವೇತಾ ಅಲ್ಲ ನಕ್ಷತ್ರ ಅನ್ನೋದು ಬಹಿರಂಗವಾಗುತ್ತದೆ. ಪರಿಣಾಮ, ಭೂಪತಿ - ನಕ್ಷತ್ರ ಮದುವೆ ಜರುಗುತ್ತದೆ.

ಶ್ರೀಮಂತಿಕೆ ಹಾಗೂ ಭೂಪತಿಯನ್ನ ಕಳೆದುಕೊಂಡ ಶ್ವೇತಾಗೆ ನಕ್ಷತ್ರ ಮೇಲೆ ದ್ವೇಷ. ಹೀಗಾಗಿ, ಭೂಪತಿ ಹಾಗೂ ನಕ್ಷತ್ರಳನ್ನ ಬೇರೆ ಮಾಡಲು ಶ್ವೇತಾ ಪ್ರಯತ್ನಿಸುತ್ತಿದ್ದಾಳೆ. ಚಂದ್ರಶೇಖರ್ ಮತ್ತು ನಕ್ಷತ್ರ ಖುಷಿಯಾಗಿರುವುದು ಡೆವಿಲ್ ಅಲಿಯಾಸ್ ಭಾರ್ಗವಿಗೆ ಇಷ್ಟವಿಲ್ಲ. ಹೀಗಾಗಿ, ಭೂಪತಿ ಮತ್ತು ನಕ್ಷತ್ರಳನ್ನ ಬೇರೆ ಮಾಡುತ್ತಿದ್ದಾಳೆ ಡೆವಿಲ್ ಅಲಿಯಾಸ್ ಭಾರ್ಗವಿ. ಶ್ವೇತಾ ಮತ್ತು ಡೆವಿಲ್ ಕುತಂತ್ರದಿಂದ ಭೂಪತಿ - ನಕ್ಷತ್ರ ಬೇರೆ ಆಗುತ್ತಾರಾ?
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ