ಆ್ಯಪ್ನಗರ

Lakshana: ಶ್ವೇತಾಳನ್ನ ಕಿಡ್ನ್ಯಾಪ್ ಮಾಡೋಕೆ ಹೋಗಿ ತಾನೇ ಟ್ರ್ಯಾಪ್ ಆದ ನಕ್ಷತ್ರ!

‘ಲಕ್ಷಣ’ ಸೀರಿಯಲ್‌ ಇದೀಗ ಕುತೂಹಲಕಾರಿ ಘಟ್ಟ ತಲುಪಿದೆ. ಶ್ವೇತಾ ಬಳಿ ನಿಜ ಬಾಯ್ಬಿಡಿಸಲು ನಕ್ಷತ್ರ ಮುಂದಾಗಿದ್ದಳು. ಅದೇ ಕಾರಣಕ್ಕೆ ಶ್ವೇತಾಳನ್ನ ನಕ್ಷತ್ರ ಕಿಡ್ನ್ಯಾಪ್ ಮಾಡಿಸಿದ್ದಳು. ಆದ್ರೆ, ಶ್ವೇತಾಳನ್ನ ಕಿಡ್ಯ್ನಾಪ್ ಮಾಡೋಕೆ ಹೋದ ನಕ್ಷತ್ರ ತಾನೇ ಟ್ರ್ಯಾಪ್ ಆಗಿದ್ದಾಳೆ..!

Authored byಹರ್ಷಿತಾ ಎನ್ | Vijaya Karnataka Web 13 Aug 2022, 5:05 pm

ಹೈಲೈಟ್ಸ್‌:

  • ‘ಲಕ್ಷಣ’ ಧಾರಾವಾಹಿಯಲ್ಲಿ ರೋಚಕ ತಿರುವು
  • ಶ್ವೇತಾಳನ್ನು ಕಿಡ್ನ್ಯಾಪ್ ಮಾಡಿರುವ ನಕ್ಷತ್ರ
  • ನಕ್ಷತ್ರಳನ್ನು ಟ್ರ್ಯಾಪ್ ಮಾಡಿದ ಮೌರ್ಯ

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web lakshana serial written update nakshatra gets trapped by maurya
Lakshana: ಶ್ವೇತಾಳನ್ನ ಕಿಡ್ನ್ಯಾಪ್ ಮಾಡೋಕೆ ಹೋಗಿ ತಾನೇ ಟ್ರ್ಯಾಪ್ ಆದ ನಕ್ಷತ್ರ!
ಕಲರ್ಸ್ ಕನ್ನಡ ವಾಹಿನಿಯಲ್ಲಿ (Colors Kannada) ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ಲಕ್ಷಣ’ (Lakshana) ಕೂಡ ಒಂದು. ‘ಲಕ್ಷಣ’ ಸೀರಿಯಲ್‌ ಇದೀಗ ಕುತೂಹಲಕಾರಿ ಘಟ್ಟ ತಲುಪಿದೆ. ಶ್ವೇತಾ ಬಳಿ ನಿಜ ಬಾಯ್ಬಿಡಿಸಲು ನಕ್ಷತ್ರ ಮುಂದಾಗಿದ್ದಳು. ಅದೇ ಕಾರಣಕ್ಕೆ ಶ್ವೇತಾಳನ್ನ ನಕ್ಷತ್ರ ಕಿಡ್ನ್ಯಾಪ್ ಮಾಡಿಸಿದ್ದಳು. ಆದ್ರೆ, ಶ್ವೇತಾಳನ್ನ ಕಿಡ್ಯ್ನಾಪ್ ಮಾಡೋಕೆ ಹೋದ ನಕ್ಷತ್ರ ತಾನೇ ಟ್ರ್ಯಾಪ್ ಆಗಿದ್ದಾಳೆ..!
ಮೌರ್ಯನ ಫೋಟೋ ಮಾಯ..!
ತನ್ನ ಮೇಲೆ ಪದೇ ಪದೇ ಅಟ್ಯಾಕ್ ಮಾಡುತ್ತಿದ್ದ ವ್ಯಕ್ತಿಯ (ಮೌರ್ಯ) ಫೋಟೋ ನಕ್ಷತ್ರಗೆ ಲಭಿಸಿತು. ಭೂಪತಿ ಮನೆಯಲ್ಲೇ ಹೊಸ ವಿಲನ್ (ಮೌರ್ಯ) ಫೋಟೋ ಸಿಕ್ಕಿದ್ದು ನೋಡಿ ನಕ್ಷತ್ರಗೆ ಶಾಕ್ ಆಯಿತು. ಈ ವಿಚಾರವನ್ನು ಭೂಪತಿಗೆ ಫೋನ್ ಮಾಡಿ ತಿಳಿಸುವ ಹೊತ್ತಿಗೆ ಮೌರ್ಯನ ಫೋಟೋ ಮಿಸ್ ಆಗಿತ್ತು.

ಅಸಲಿಗೆ, ಹೊಸ ವಿಲನ್ ಬೇರೆ ಯಾರೂ ಅಲ್ಲ.. ಭೂಪತಿಯ ಸಹೋದರ ಮೌರ್ಯ ಅನ್ನೋದು ನಕ್ಷತ್ರಗೆ ಇನ್ನೂ ಗೊತ್ತಾಗಿಲ್ಲ. ಆದರೆ, ಮೌರ್ಯನ ಫೋಟೋ ತೆಗೆದುಕೊಂಡು ಹೋಗಿರೋದು ಶ್ವೇತಾನೇ ಅನ್ನೋ ಬಲವಾದ ನಂಬಿಕೆ ನಕ್ಷತ್ರಗೆ ಇದೆ. ಹೀಗಾಗಿ, ಶ್ವೇತಾಳನ್ನ ಬಾಯ್ಬಿಡಿಸಲು ನಕ್ಷತ್ರ ಮುಂದಾದಳು. ಮಿಲಿಗೆ ಶ್ವೇತಾಳನ್ನ ಕಿಡ್ನ್ಯಾಪ್ ಮಾಡಲು ನಕ್ಷತ್ರ ಸೂಚಿಸಿದಳು.

Lakshana: ‘ಕಪ್ಪು’ ಹುಡುಗ ಮೌರ್ಯನ ರಹಸ್ಯ ಶ್ವೇತಾ ಮುಂದೆ ಬಯಲು! ಮುಂದೇನು?

ಶ್ವೇತಾಳನ್ನ ಕಿಡ್ನ್ಯಾಪ್ ಮಾಡಿದ ಮಿಲಿ!
ನಕ್ಷತ್ರಳ ಸೂಚನೆ ಮೇರೆಗೆ ಶ್ವೇತಾಳನ್ನ ಮಿಲಿ ಕಿಡ್ನ್ಯಾಪ್ ಮಾಡಿದಳು. ಶ್ವೇತಾಳನ್ನ ಬಾಯ್ಬಿಡಲು ಹೋದ ನಕ್ಷತ್ರ ಇದೀಗ ಮೌರ್ಯ ಕೈಯಲ್ಲಿ ಸಿಕ್ಕಿಬಿದ್ದಿದ್ದಾಳೆ.

Lakshana: ಹೊಸ ವಿಲನ್ ಇನ್ಯಾರೂ ಅಲ್ಲ.. ಶಕುಂತಲಾ ದೇವಿ ಪುತ್ರ ಮೌರ್ಯ!

ನಕ್ಷತ್ರ ಪ್ರಾಣಕ್ಕೆ ಅಪಾಯ?
ಮನೆಯಿಂದ ನಕ್ಷತ್ರ ಹೊರಗೆ ಬಂದರೆ ಸಾಕು.. ನರಕ ಏನು ಅಂತ ತೋರಿಸ್ತೀನಿ, ಚಂದ್ರಶೇಖರ್ ಕಣ್ಣಲ್ಲಿ ರಕ್ತ ಸುರಿಸ್ತೀನಿ ಅಂತ ಮೌರ್ಯ ಪದೇ ಪದೇ ಹೇಳುತ್ತಿದ್ದರು. ಈಗ, ಶ್ವೇತಾಳನ್ನು ಬಾಯ್ಬಿಡಿಸುವ ನೆಪದಲ್ಲಿ ನಕ್ಷತ್ರ ತಮ್ಮ ಮನೆಯಿಂದ ಆಚೆ ಬಂದಿದ್ದಾಳೆ. ಇದೇ ಅವಕಾಶವನ್ನು ಉಪಯೋಗಿಸಿಕೊಂಡು ಮೌರ್ಯ, ನಕ್ಷತ್ರ ಪ್ರಾಣಕ್ಕೆ ಅಪಾಯ ತಂದೊಡ್ಡುತ್ತಾನಾ?

Lakshana: ‘ಆಗುಂತಕ’ನ ಪತ್ತೆಹಚ್ಚಲು ಮನೆಯಿಂದ ಓಡಿ ಹೋದ ನಕ್ಷತ್ರ - ಭೂಪತಿ..!

ಸತ್ಯ ಬಯಲಾಗೋದು ಯಾವಾಗ?
ಭೂಪತಿ ಹಾಗೂ ನಕ್ಷತ್ರಗೆ ತೊಂದರೆ ಕೊಡ್ತಿರೋದು ಮೌರ್ಯನೇ ಅಂತ ಎಲ್ಲರಿಗೂ ಗೊತ್ತಾಗೋದು ಯಾವಾಗ? ಮೌರ್ಯನ ಜೊತೆ ಶ್ವೇತಾ ಕೂಡ ಕೈಜೋಡಿಸಿದ್ದಾಳೆ ಎಂಬ ಸತ್ಯ ಬಹಿರಂಗ ಆಗೋದು ಯಾವಾಗ? ಎಂಬ ಪ್ರಶ್ನೆಗಳು ವೀಕ್ಷಕರ ತಲೆಯಲ್ಲಿ ಕೊರೆಯುತ್ತಿದೆ.

ಅಂದ್ಹಾಗೆ, ‘ಲಕ್ಷಣ’ ಧಾರಾವಾಹಿಯಲ್ಲಿ ಭೂಪತಿಯಾಗಿ ನಟ ಜಗನ್ನಾಥ್ ಚಂದ್ರಶೇಖರ್ (Jagannath Chandrashekar), ನಕ್ಷತ್ರ ಆಗಿ ವಿಜಯಲಕ್ಷ್ಮಿ (Vijayalakshmi), ಶ್ವೇತಾ ಆಗಿ ಸುಕೃತಾ ನಾಗ್ (Sukrutha Nag), ಶಕುಂತಲಾ ದೇವಿ ಆಗಿ ಸುಧಾ ಬೆಳವಾಡಿ (Sudha Belawadi) ಅಭಿನಯಿಸುತ್ತಿದ್ದಾರೆ.
ಲೇಖಕರ ಬಗ್ಗೆ
ಹರ್ಷಿತಾ ಎನ್
ವಿಜಯ ಕರ್ನಾಟಕ ಆನ್‌ಲೈನ್‌ನಲ್ಲಿ 2021ರ ಮಾರ್ಚ್‌ನಿಂದ ಕಾರ್ಯನಿರ್ವಹಿಸುತ್ತಿದ್ದಾರೆ. 2011ರಿಂದ ಮಾಧ್ಯಮ ರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಸುದ್ದಿ ವಾಹಿನಿಗಳು ಹಾಗೂ ಡಿಜಿಟಲ್ ಮೀಡಿಯಾಗಳಲ್ಲಿ ಸಿನಿಮಾ ವರದಿಗಾರ್ತಿಯಾಗಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. ಸಿನಿಮಾ ವರದಿಗಾರಿಕೆ ಇವರ ಪ್ರಮುಖ ಆಸಕ್ತಿ ವಿಭಾಗ.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ