ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನಪ್ರಿಯ ಧಾರಾವಾಹಿಗಳ ಪೈಕಿ ‘ಲಕ್ಷಣ’ ಕೂಡ ಒಂದು. ‘ಲಕ್ಷಣ’ ಧಾರಾವಾಹಿಗೆ ಇದೀಗ ದೊಡ್ಡ ತಿರುವು ಲಭಿಸಿದೆ. ಅಂದುಕೊಂಡಂತೆ ನಕ್ಷತ್ರಳನ್ನ ಶಕುಂತಲಾ ದೇವಿ ತಮ್ಮ ಮನೆಯಿಂದ ಹೊರದಬ್ಬಿದ್ದಾರೆ. ಹಾಗಾದ್ರೆ, ಅಷ್ಟು ಸುಲಭವಾಗಿ ತನ್ನ ಸೋಲನ್ನ ನಕ್ಷತ್ರ ಒಪ್ಪಿಕೊಂಡ್ಳಾ? ಮಗಳ ಪರವಾಗಿ ಚಂದ್ರಶೇಖರ್ ಮಾತನಾಡಲೇ ಇಲ್ವಾ?
ಪಂದ್ಯದಲ್ಲಿ ಸೋತ ನಕ್ಷತ್ರ
ನಕ್ಷತ್ರ ಹಾಗೂ ಶ್ವೇತಾ ಮಧ್ಯೆ ಚಂದ್ರಶೇಖರ್ ಹಾಗೂ ಶಕುಂತಲಾ ದೇವಿ ಒಂದು ಪಂದ್ಯ ಕಟ್ಟಿದ್ದರು. ನೀಡಲಾದ 500 ರೂಪಾಯಿ ಹಣದಲ್ಲಿ ದಿನಸಿ, ತರಕಾರಿ ತಂದು ಇಡೀ ದಿನ ಅಡುಗೆಗೆ ನಕ್ಷತ್ರ ಹಾಗೂ ಶ್ವೇತಾ ಮ್ಯಾನೇಜ್ ಮಾಡಬೇಕಿತ್ತು. ಈ ಚಾಲೆಂಜ್ನಲ್ಲಿ ನಕ್ಷತ್ರ ಗೆದ್ದರೆ, ಆಕೆಯನ್ನು ಸೊಸೆಯೆಂದು ಸ್ವೀಕರಿಸುವುದಾಗಿ ಶಕುಂತಲಾ ದೇವಿ ತಿಳಿಸಿದ್ದರು. ಹಾಗೇ, ಒಂದ್ವೇಳೆ ಚಾಲೆಂಜ್ನಲ್ಲಿ ನಕ್ಷತ್ರ ಸೋತರೆ, ಆಕೆ ಕೂಡಲೆ ಮನೆ ಬಿಟ್ಟು ಹೋಗಬೇಕು ಅಂತಲೂ ಶಕುಂತಲಾ ದೇವಿ ಕಂಡೀಷನ್ ಹಾಕಿದ್ದರು. ಮಗಳ ಜೀವನ ಸರಿಹೋಗಬೇಕು ಎಂಬ ಕಾರಣಕ್ಕೆ ಕಂಡೀಷನ್ಗೆ ಚಂದ್ರಶೇಖರ್ ಒಪ್ಪಿಗೆ ಸೂಚಿಸಿದ್ದರು.
ಹಾಗ್ನೋಡಿದ್ರೆ, ಚಾಲೆಂಜ್ನಲ್ಲಿ ಗೆಲ್ಲುವ ಅರ್ಹತೆ ಇದ್ದದ್ದು ನಕ್ಷತ್ರಗೆ ಮಾತ್ರ. ಯಾಕಂದ್ರೆ, ಶ್ವೇತಾಗೆ ಅಡುಗೆ ಮಾಡೋಕೆ ಬರಲ್ಲ. ಇದನ್ನ ತಿಳಿದಿದ್ದ ಡೆವಿಲ್ ಅಲಿಯಾಸ್ ಭಾರ್ಗವಿ ಮತ್ತು ಮಿಲಿ ನಕ್ಷತ್ರಳನ್ನ ಸೋಲುವಂತೆ ಮಾಡಿದರು. ಭಾರ್ಗವಿ ಆರ್ಡರ್ ಮೇರೆಗೆ ನಕ್ಷತ್ರ ಬಳಿಯಿದ್ದ ಹಣವನ್ನ ಮಿಲಿ ಕದ್ದಳು. ಹಾಗೇ, ನಕ್ಷತ್ರ ಮಾಡಿದ್ದ ತಿಂಡಿಯನ್ನ ಮಿಲಿ ಮಣ್ಣುಪಾಲು ಮಾಡಿದ್ದಳು. ಆದರೂ, ಕೊನೆಯ ಕ್ಷಣದಲ್ಲಿ ಹಾಗೂ ಹೀಗೂ ಮ್ಯಾನೇಜ್ ಮಾಡಿದ್ದ ನಕ್ಷತ್ರ ರಾತ್ರಿ ಊಟದ ಅಡುಗೆಯನ್ನೂ ಮಾಡಿದ್ದಳು. ಇನ್ನೇನು ಬಡಿಸಬೇಕು ಅನ್ನೋಷ್ಟರಲ್ಲಿ ಅಡುಗೆ ಹಾಗೂ ಉಳಿದ ತರಕಾರಿಯನ್ನ ಮಿಲಿ ನಾಪತ್ತೆ ಮಾಡುತ್ತಾಳೆ. ಬೇರೆ ದಾರಿಯಿಲ್ಲದೆ ನಕ್ಷತ್ರ ಸೋಲೊಪ್ಪಿಕೊಂಡಿದ್ದಾಳೆ. ಶಕುಂತಲಾ ದೇವಿ ಮುಂದೆ ಕಣ್ಣೀರು ಹಾಕುತ್ತಾ ಮನೆಯಿಂದ ಆಚೆ ಕಳುಹಿಸಬೇಡಿ ಎಂದು ನಕ್ಷತ್ರ ಬೇಡಿಕೊಂಡಿದ್ದಾಳೆ.
ಮನೆಯಿಂದ ಹೊರದಬ್ಬಿದ ಶಕುಂತಲಾ ದೇವಿ
ನಕ್ಷತ್ರ ಅಂಗಲಾಚಿ ಬೇಡಿಕೊಂಡರೂ ಕರಗದ ಶಕುಂತಲಾ ದೇವಿ, ಆಕೆಯನ್ನ ತಮ್ಮ ಮನೆಯಿಂದ ಹೊರದಬ್ಬಿದ್ದಾರೆ. ಹಾಗಾದ್ರೆ, ಚಂದ್ರಶೇಖರ್ ತಮ್ಮ ಮಗಳ ಈ ಸೋಲನ್ನ ಒಪ್ಪಿಕೊಳ್ತಾರಾ? ಎಂಬ ಪ್ರಶ್ನೆ ಇದೀಗ ವೀಕ್ಷಕರ ತಲೆಯಲ್ಲಿ ಕಾಡುತ್ತಿದೆ.
ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿರುವ ‘ಲಕ್ಷಣ’ ಧಾರಾವಾಹಿಯಲ್ಲಿ ಶ್ವೇತಾಳ ಬಂಡವಾಳ ಬಯಲಾಗುತ್ತಾ? ಚಂದ್ರಶೇಖರ್ ಹಾಗೂ ನಕ್ಷತ್ರಳ ಸಂಕಷ್ಟಕ್ಕೆ ಕಾರಣವಾಗಿರೋದು ಭಾರ್ಗವಿ ಮತ್ತು ಮಿಲಿ ಎಂದು ತಿಳಿದುಬರುತ್ತಾ ಎಂಬುದು ಮುಂದಿನ ಸಂಚಿಕೆಗಳಲ್ಲಿ ಗೊತ್ತಾಗಲಿದೆ.
ಅಂದ್ಹಾಗೆ, ‘ಲಕ್ಷಣ’ ಸೀರಿಯಲ್ನಲ್ಲಿ ನಕ್ಷತ್ರ ಆಗಿ ವಿಜಯಲಕ್ಷ್ಮೀ, ಶ್ವೇತಾ ಆಗಿ ಸುಕೃತಾ ನಾಗ್, ಭೂಪತಿ ಆಗಿ ಜಗನ್ನಾಥ್ ಚಂದ್ರಶೇಖರ್, ಶಕುಂತಲಾ ದೇವಿ ಆಗಿ ಸುಧಾ ಬೆಳವಾಡಿ, ಚಂದ್ರಶೇಖರ್ ಆಗಿ ಕೀರ್ತಿ ಭಾನು, ಆರತಿ ಆಗಿ ದೀಪಾ ಅಯ್ಯರ್, ಮಿಲಿ ಆಗಿ ಶ್ರುತಿ ರಮೇಶ್, ಡೆವಿಲ್ ಅಲಿಯಾಸ್ ಭಾರ್ಗವಿ ಆಗಿ ಪ್ರಿಯಾ ಶಠಮರ್ಷಣ ಮುಂತಾದವರು ಅಭಿನಯಿಸುತ್ತಿದ್ದಾರೆ.
ಪಂದ್ಯದಲ್ಲಿ ಸೋತ ನಕ್ಷತ್ರ
ನಕ್ಷತ್ರ ಹಾಗೂ ಶ್ವೇತಾ ಮಧ್ಯೆ ಚಂದ್ರಶೇಖರ್ ಹಾಗೂ ಶಕುಂತಲಾ ದೇವಿ ಒಂದು ಪಂದ್ಯ ಕಟ್ಟಿದ್ದರು. ನೀಡಲಾದ 500 ರೂಪಾಯಿ ಹಣದಲ್ಲಿ ದಿನಸಿ, ತರಕಾರಿ ತಂದು ಇಡೀ ದಿನ ಅಡುಗೆಗೆ ನಕ್ಷತ್ರ ಹಾಗೂ ಶ್ವೇತಾ ಮ್ಯಾನೇಜ್ ಮಾಡಬೇಕಿತ್ತು. ಈ ಚಾಲೆಂಜ್ನಲ್ಲಿ ನಕ್ಷತ್ರ ಗೆದ್ದರೆ, ಆಕೆಯನ್ನು ಸೊಸೆಯೆಂದು ಸ್ವೀಕರಿಸುವುದಾಗಿ ಶಕುಂತಲಾ ದೇವಿ ತಿಳಿಸಿದ್ದರು. ಹಾಗೇ, ಒಂದ್ವೇಳೆ ಚಾಲೆಂಜ್ನಲ್ಲಿ ನಕ್ಷತ್ರ ಸೋತರೆ, ಆಕೆ ಕೂಡಲೆ ಮನೆ ಬಿಟ್ಟು ಹೋಗಬೇಕು ಅಂತಲೂ ಶಕುಂತಲಾ ದೇವಿ ಕಂಡೀಷನ್ ಹಾಕಿದ್ದರು. ಮಗಳ ಜೀವನ ಸರಿಹೋಗಬೇಕು ಎಂಬ ಕಾರಣಕ್ಕೆ ಕಂಡೀಷನ್ಗೆ ಚಂದ್ರಶೇಖರ್ ಒಪ್ಪಿಗೆ ಸೂಚಿಸಿದ್ದರು.
ಹಾಗ್ನೋಡಿದ್ರೆ, ಚಾಲೆಂಜ್ನಲ್ಲಿ ಗೆಲ್ಲುವ ಅರ್ಹತೆ ಇದ್ದದ್ದು ನಕ್ಷತ್ರಗೆ ಮಾತ್ರ. ಯಾಕಂದ್ರೆ, ಶ್ವೇತಾಗೆ ಅಡುಗೆ ಮಾಡೋಕೆ ಬರಲ್ಲ. ಇದನ್ನ ತಿಳಿದಿದ್ದ ಡೆವಿಲ್ ಅಲಿಯಾಸ್ ಭಾರ್ಗವಿ ಮತ್ತು ಮಿಲಿ ನಕ್ಷತ್ರಳನ್ನ ಸೋಲುವಂತೆ ಮಾಡಿದರು. ಭಾರ್ಗವಿ ಆರ್ಡರ್ ಮೇರೆಗೆ ನಕ್ಷತ್ರ ಬಳಿಯಿದ್ದ ಹಣವನ್ನ ಮಿಲಿ ಕದ್ದಳು. ಹಾಗೇ, ನಕ್ಷತ್ರ ಮಾಡಿದ್ದ ತಿಂಡಿಯನ್ನ ಮಿಲಿ ಮಣ್ಣುಪಾಲು ಮಾಡಿದ್ದಳು. ಆದರೂ, ಕೊನೆಯ ಕ್ಷಣದಲ್ಲಿ ಹಾಗೂ ಹೀಗೂ ಮ್ಯಾನೇಜ್ ಮಾಡಿದ್ದ ನಕ್ಷತ್ರ ರಾತ್ರಿ ಊಟದ ಅಡುಗೆಯನ್ನೂ ಮಾಡಿದ್ದಳು. ಇನ್ನೇನು ಬಡಿಸಬೇಕು ಅನ್ನೋಷ್ಟರಲ್ಲಿ ಅಡುಗೆ ಹಾಗೂ ಉಳಿದ ತರಕಾರಿಯನ್ನ ಮಿಲಿ ನಾಪತ್ತೆ ಮಾಡುತ್ತಾಳೆ. ಬೇರೆ ದಾರಿಯಿಲ್ಲದೆ ನಕ್ಷತ್ರ ಸೋಲೊಪ್ಪಿಕೊಂಡಿದ್ದಾಳೆ. ಶಕುಂತಲಾ ದೇವಿ ಮುಂದೆ ಕಣ್ಣೀರು ಹಾಕುತ್ತಾ ಮನೆಯಿಂದ ಆಚೆ ಕಳುಹಿಸಬೇಡಿ ಎಂದು ನಕ್ಷತ್ರ ಬೇಡಿಕೊಂಡಿದ್ದಾಳೆ.
ಮನೆಯಿಂದ ಹೊರದಬ್ಬಿದ ಶಕುಂತಲಾ ದೇವಿ
ನಕ್ಷತ್ರ ಅಂಗಲಾಚಿ ಬೇಡಿಕೊಂಡರೂ ಕರಗದ ಶಕುಂತಲಾ ದೇವಿ, ಆಕೆಯನ್ನ ತಮ್ಮ ಮನೆಯಿಂದ ಹೊರದಬ್ಬಿದ್ದಾರೆ. ಹಾಗಾದ್ರೆ, ಚಂದ್ರಶೇಖರ್ ತಮ್ಮ ಮಗಳ ಈ ಸೋಲನ್ನ ಒಪ್ಪಿಕೊಳ್ತಾರಾ? ಎಂಬ ಪ್ರಶ್ನೆ ಇದೀಗ ವೀಕ್ಷಕರ ತಲೆಯಲ್ಲಿ ಕಾಡುತ್ತಿದೆ.
ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಿರುವ ‘ಲಕ್ಷಣ’ ಧಾರಾವಾಹಿಯಲ್ಲಿ ಶ್ವೇತಾಳ ಬಂಡವಾಳ ಬಯಲಾಗುತ್ತಾ? ಚಂದ್ರಶೇಖರ್ ಹಾಗೂ ನಕ್ಷತ್ರಳ ಸಂಕಷ್ಟಕ್ಕೆ ಕಾರಣವಾಗಿರೋದು ಭಾರ್ಗವಿ ಮತ್ತು ಮಿಲಿ ಎಂದು ತಿಳಿದುಬರುತ್ತಾ ಎಂಬುದು ಮುಂದಿನ ಸಂಚಿಕೆಗಳಲ್ಲಿ ಗೊತ್ತಾಗಲಿದೆ.
ಅಂದ್ಹಾಗೆ, ‘ಲಕ್ಷಣ’ ಸೀರಿಯಲ್ನಲ್ಲಿ ನಕ್ಷತ್ರ ಆಗಿ ವಿಜಯಲಕ್ಷ್ಮೀ, ಶ್ವೇತಾ ಆಗಿ ಸುಕೃತಾ ನಾಗ್, ಭೂಪತಿ ಆಗಿ ಜಗನ್ನಾಥ್ ಚಂದ್ರಶೇಖರ್, ಶಕುಂತಲಾ ದೇವಿ ಆಗಿ ಸುಧಾ ಬೆಳವಾಡಿ, ಚಂದ್ರಶೇಖರ್ ಆಗಿ ಕೀರ್ತಿ ಭಾನು, ಆರತಿ ಆಗಿ ದೀಪಾ ಅಯ್ಯರ್, ಮಿಲಿ ಆಗಿ ಶ್ರುತಿ ರಮೇಶ್, ಡೆವಿಲ್ ಅಲಿಯಾಸ್ ಭಾರ್ಗವಿ ಆಗಿ ಪ್ರಿಯಾ ಶಠಮರ್ಷಣ ಮುಂತಾದವರು ಅಭಿನಯಿಸುತ್ತಿದ್ದಾರೆ.