ಆ್ಯಪ್ನಗರ

'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಕಲ್ಪನಾ ಪಾತ್ರಧಾರಿ ನಟಿ ಲಕ್ಷ್ಮೀ ಗಂಡ ಕನ್ನಡದ ಖ್ಯಾತ ಖಳನಟ!

'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಗೊಂಬೆ ತಾಯಿ ಪಾತ್ರದಲ್ಲಿ ನಟಿಸಿರುವ ಲಕ್ಷ್ಮೀ ಸಿದ್ದಯ್ಯ ಅವರ ವೈಯಕ್ತಿಕ ಲೈಫ್ ಬಗ್ಗೆ ಹಲವರಿಗೆ ಮಾಹಿತಿ ಇಲ್ಲ. ಇವರ ಗಂಡ ಕೂಡ ಪ್ರಖ್ಯಾತ ಖಳನಟ ಎನ್ನುವುದು ಹಲವರಿಗೆ ಗೊತ್ತಿಲ್ಲ. ಇವರ ಕುಟುಂಬ, ಧಾರಾವಾಹಿ ಪಯಣದ ಬಗ್ಗೆ ಇಲ್ಲಿದೆ ಮಾಹಿತಿ

Vijaya Karnataka Web 9 Jun 2020, 8:08 pm
ಲಕ್ಷ್ಮೀ ಸಿದ್ದಯ್ಯ ಎಂದಕೂಡಲೇ ಹಲವರಿಗೆ ಯಾರಿದು ಎಂದೆನಿಸಬಹುದು. ಆದರೆ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಕಲ್ಪನಾ ಅಥವಾ ಗೊಂಬೆ ತಾಯಿ ಎಂದಕೂಡಲೇ ಯಾರು ಅಂತ ಥಟ್ಟನೇ ಗೊತ್ತಾಗುತ್ತದೆ. ಇವರ ಗಂಡ ಕೂಡ ನಟ, ಕೇವಲ ನಟನಲ್ಲ ಖಳನಟ.
Vijaya Karnataka Web 1ghvb (1)


'ರಾಧಾ' ಧಾರಾವಾಹಿಯಲ್ಲಿ ಇವರು ಲೀಡ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇಲ್ಲಿವಯವರೆಗೆ ಲಕ್ಷ್ಮೀ ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. 'ಬಿದಿಗೆ ಚಂದ್ರಮ', 'ಮಾಂಗಲ್ಯ', 'ಕದನ', 'ಸಂಬಂಧ' ಮುಂತಾದ ಧಾರಾವಾಹಿಗಳಲ್ಲಿ ಲಕ್ಷ್ಮೀ ನಟಿಸಿದ್ದರು. ಅಷ್ಟೇ ಅಲ್ಲದೆ ಇವರು 20ಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ನಟನೆ ಕ್ಷೇತ್ರಕ್ಕೆ ಬಂದು 15 ವರ್ಷಗಳಾಯ್ತು. ಕೆಲ ವರ್ಷಗಳಿಂದ ಅವರು ಮೇಲಿಂದ ಮೇಲೆ ಧಾರಾವಾಹಿಗಳಲ್ಲಿ ತಾಯಿ ಪಾತ್ರದಲ್ಲಿಯೇ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಹೀರೋ, ಹೀರೋಯಿನ್ ಅಕ್ಕನ ರೀತಿಯಲ್ಲಿ ಲಕ್ಷ್ಮೀ ಕಾಣಿಸುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ.

ಲಕ್ಷ್ಮೀ ಅವರ ಮಗನಿಗೆ ಈಗ 16 ವರ್ಷ. 'ಅಣ್ಣ ತಂಗಿ' ಧಾರಾವಾಹಿಯಲ್ಲಿ ಲಕ್ಷ್ಮೀ, ತಾಯಿ ಪಾತ್ರ ಮಾಡಿದ್ದರು. ಆಮೇಲೆ ಈ ಸೀರಿಯಲ್ ಕಥೆ ಸಾಗುತ್ತ, ಸಾಗುತ್ತ ಮಕ್ಕಳು ದೊಡ್ಡವರಾದರು. ಆಗ ಲಕ್ಷ್ಮೀ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ವ್ಯಕ್ತಿ ವಯಸ್ಸು ಲಕ್ಷ್ಮೀಗಿಂತ ಹೆಚ್ಚಾಗಿತ್ತು ಎನ್ನೋದೇ ವಿಪರ್ಯಾಸ. ಸ್ಯಾಂಡಲ್‌ವುಡ್ ಸಿಂಡ್ರೆಲಾ ರಾಧಿಕಾ ಮತ್ತು ರಾಕಿಂಗ್ ಸ್ಟಾರ್ ಯಶ್ ಜೊತೆಗೆ ಲಕ್ಷ್ಮೀಗೆ ಒಳ್ಳೆಯ ಸಂಬಂಧವಿದೆ. ರಾಧಿಕಾ ಮನೆಯ ಎಲ್ಲ ಖಾಸಗಿ ಕಾರ್ಯಕ್ರಮಗಳಲ್ಲೂ ಲಕ್ಷ್ಮೀ ಹಾಜರಿ ಇದ್ದೇ ಇರುತ್ತದೆ.

Also read-'ಲಕ್ಷ್ಮೀ ಬಾರಮ್ಮ' ಧಾರಾವಾಹಿಯ ಗೊಂಬೆ ನೇಹಾ ಗೌಡ ಗಂಡ ಏನು ಮಾಡುತ್ತಿದ್ದಾರೆ?

'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಲಕ್ಷ್ಮೀ 'ಕಲ್ಪನಾ' ಎಂಬ ತಾಯಿ ಪಾತ್ರ ಮಾಡಿದ್ದರೂ ಕೂಡ ಇಲ್ಲಿ ಸ್ವಲ್ಪ ನೆಗೆಟಿವ್ ಶೇಡ್ ಇತ್ತು. ತಾಯಿ ಪಾತ್ರವಾದರೂ ಸ್ವಲ್ಪ ಡಿಫರೆಂಟ್ ಆಗಿತ್ತು. ಹೀಗಾಗಿ ಈ ಪಾತ್ರ ಮಾಡಲು ಲಕ್ಷ್ಮೀ ಒಪ್ಪಿಕೊಂಡಿದ್ದರಂತೆ. ಯೋಗ ಪ್ರವೀಣೆಯಾಗಿದ್ದ ಲಕ್ಷ್ಮೀಗೆ ಕ್ರೀಡೆಯಲ್ಲಿ ಏನಾದರೂ ಮಾಡುವ ಆಸೆಯಿತ್ತು. ಆದರೆ ಅವರು ಕಾಲಿಟ್ಟಿದ್ದು ಮಾತ್ರ ನಟನಾ ಕ್ಷೇತ್ರಕ್ಕೆ. ಲಕ್ಷ್ಮೀ ಗಂಡ ಸಿದ್ದಯ್ಯ ಅನೇಕ ಸಿನಿಮಾಗಳಲ್ಲಿ ಖಳನಟರಾಗಿ ಕಾಣಿಸಿಕೊಂಡಿದ್ದಾರೆ. ರಕ್ಷಿತಾ, ಶ್ರೀಮುರಳಿ ಅಭಿನಯದ 'ಯಶವಂತ್' ಸಿನಿಮಾದಲ್ಲಿ ಸಿದ್ದಯ್ಯ ಖಳನಟನಾಗಿದ್ದರು. ಅನೇಕ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ.

Also read-'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನಟಿ ನೇಹಾ ಗೌಡ ಹಣ, ಸಂಬಂಧದ ಬಗ್ಗೆ ಈಗ ಯಾಕೆ ಹೀಗೆ ಮಾತನಾಡಿದ್ರು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ