ಆ್ಯಪ್ನಗರ

Lakshmi Baramma Serial: ವೈಷ್ಣವ್‌ನನ್ನು ನೋಡಲು ತನ್ನ ಜೀವ ಒತ್ತೆ ಇಟ್ಟ ಲಕ್ಷ್ಮೀ ಬದುಕ್ತಾಳಾ?

Lakshmi Baramma Kannada Serial Today Episode: ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ‘ಸೂಪರ್ ದಂಪತಿ’ ಸ್ಪರ್ಧೆ ನಡೆಯುತ್ತಿದೆ. ಲಕ್ಷ್ಮೀ, ವೈಷ್ಣವ್ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದು, ಗೆಲ್ಲಬೇಕು ಎಂದುಕೊಂಡಿದ್ದಾರೆ. ಆದರೆ ಈ ಜೋಡಿಯ ಖುಷಿ ಹಾಳು ಮಾಡಲು ಕೀರ್ತಿಯ ಎಂಟ್ರಿಯೂ ಆಗಿದೆ. ಈಗ ಲಕ್ಷ್ಮೀ ಜೀವ ಅಪಾಯದಲ್ಲಿದೆ. ವೈಷ್ಣವ್ ಅವಳನ್ನು ಕಾಪಾಡಿಕೊಳ್ತಾನಾ? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ. ಲೇಖನ ಓದಿ.

Authored byಪದ್ಮಶ್ರೀ ಭಟ್ | Vijaya Karnataka Web 26 Mar 2024, 6:46 pm

ಹೈಲೈಟ್ಸ್‌:

  • ‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ‘ಸೂಪರ್ ದಂಪತಿ’ ಸ್ಪರ್ಧೆ
  • ‘ಸೂಪರ್ ದಂಪತಿ’ ಗೆಲ್ಲಲು ವೈಷ್ಣವ್, ಲಕ್ಷ್ಮೀ ಪ್ರಯತ್ನ
  • ಈ ಜೋಡಿ ಖುಷಿ ಹಾಳು ಮಾಡಲು ಕೀರ್ತಿ ಎಂಟ್ರಿಯೂ ಆಗಿದೆ
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web lakshmi baramma
‘ಲಕ್ಷ್ಮೀ ಬಾರಮ್ಮ’ ಧಾರಾವಾಹಿಯಲ್ಲಿ ‘ಸೂಪರ್ ದಂಪತಿ’ ಸ್ಪರ್ಧೆ ನಡೆಯುತ್ತಿದೆ. ಈ ಸ್ಪರ್ಧೆಯಲ್ಲಿ ಕಶ್ಯಪ್ ಕುಟುಂಬದಲ್ಲಿ ಕಾವೇರಿ-ಕೃಷ್ಣ, ಲಕ್ಷ್ಮೀ-ವೈಷ್ಣವ್ ದಂಪತಿ ಸ್ಪರ್ಧೆ ಮಾಡುತ್ತಿದ್ದಾರೆ. ಈ ಗೇಮ್ ಹಾಳು ಮಾಡಲು ಕೀರ್ತಿ ಎಂಟ್ರಿಯಾಗಿದೆ.


ಕೀರ್ತಿಯ ಕುತಂತ್ರ

‘ಸೂಪರ್ ದಂಪತಿ’ ಸ್ಪರ್ಧೆ ಗೆಲ್ಲಲು ವೈಷ್ಣವ್, ಲಕ್ಷ್ಮೀ ಪ್ರಯತ್ನಪಡುತ್ತಿದ್ದಾರೆ. ಆದರೆ ಇವರಿಬ್ಬರು ಸ್ಪರ್ಧೆ ಗೆಲ್ಲಬಾರದು ಅಂತ ಕೀರ್ತಿ ಪ್ಲ್ಯಾನ್ ಮಾಡಿದ್ದಾಳೆ. ನಿರೂಪಕಿಯಾದ ಕೀರ್ತಿ ಬಾಯಿಗೆ ಬಂದಹಾಗೆ ಮಾತಾಡೋದಲ್ಲದೆ, ಲಕ್ಷ್ಮೀಯನ್ನು ರೂಮ್‌ನಲ್ಲಿ ಲಾಕ್ ಮಾಡಿದ್ದಳು. ಇದು ಲಕ್ಷ್ಮೀ ಅರಿವಿಗೂ ಬಂದಿದೆ. ಕೀರ್ತಿ ಮಾತ್ರ ತನ್ನ ತಪ್ಪನ್ನು ಅರಿತುಕೊಳ್ಳಲು ರೆಡಿ ಇಲ್ಲ.




ಕೀರ್ತಿ ಬುದ್ಧಿ ಲಕ್ಷ್ಮೀ, ವೈಷ್ಣವ್‌ಗೂ ಗೊತ್ತು

ಈಗ ಲಕ್ಷ್ಮೀ ಮೊದಲಿನ ಹಾಗೆ ಇಲ್ಲ. ಕೀರ್ತಿ ಪ್ಲ್ಯಾನ್, ಅವಳ ಕುತಂತ್ರ ಎಲ್ಲವೂ ಲಕ್ಷ್ಮೀಗೆ ಅರ್ಥ ಆಗಿದೆ. ಕೀರ್ತಿ ದುಷ್ಟತನದಿಂದ ಲಕ್ಷ್ಮೀಗೆ ಬೇಸರ ಆಗಿರೋದು ಕೂಡ ವೈಷ್ಣವ್‌ಗೆ ಅರ್ಥ ಆಗಿದೆ. ಕೀರ್ತಿಗೆ ಬುದ್ಧಿ ಕಲಿಸಬೇಕು ಅಂತ ವೈಷ್ಣವ್ ಅಂದುಕೊಂಡಿದ್ದಾನೆ.

Amruthadhaare Serial: ಗೌತಮ್ ಮುಚ್ಚಿಟ್ಟ ರಹಸ್ಯ ಏನು? ಮಾನ್ಯ ರಿವೀಲ್ ಮಾಡ್ತಾಳಾ?
ಇಂದಿನ ಎಪಿಸೋಡ್‌ನಲ್ಲಿ ಏನಾಗುವುದು?

ಇನ್ನೊಂದು ಕಡೆ ‘ಸೂಪರ್ ದಂಪತಿ’ ಸ್ಪರ್ಧೆಯಲ್ಲಿ ಲಕ್ಷ್ಮೀ ನದಿ ದಾಟಬೇಕಿತ್ತು. ವೈಷ್ಣವ್ ಒಂದು ಕಡೆಯಾದ್ರೆ, ಲಕ್ಷ್ಮೀ ಇನ್ನೊಂದು ಕಡೆ ಇದ್ದಾಳೆ. ನದಿಯಲ್ಲಿ ಹೋದರೆ ಮಾತ್ರ ವೈಷ್ಣವ್, ಲಕ್ಷ್ಮೀ ಭೇಟಿ ಆಗುತ್ತದೆ. ನಾನು ನನ್ನ ಗಂಡನ ಜೊತೆ ಇರಬೇಕು ಅಂತ ಲಕ್ಷ್ಮೀ ತಾನೇ ತೆಪ್ಪ ನಡೆಸಿಕೊಂಡು ನದಿ ದಾಟುತ್ತೀನಿ ಅಂತ ಹಠ ಹಿಡಿದಿದ್ದಾಳೆ. ಇನ್ನೊಂದು ಕಡೆ ವೈಷ್ಣವ್ ಕೂಡ ಲಕ್ಷ್ಮೀ ಎಲ್ಲಿ ಅಂತ ಹುಡುಕ್ತೀನಿ, ತೆಪ್ಪದಲ್ಲಿ ಹೋಗ್ತೀನಿ ಅಂತ ಹಠ ಹಿಡಿದಿದ್ದನು. ಇವರಿಬ್ಬರೂ ಯಾರ ಮಾತು ಕೇಳದೆ ತೆಪ್ಪದಲ್ಲಿ ಹೊರಡಬೇಕು ಎಂದುಕೊಂಡರು. ನೀನು ತೆಪ್ಪದಲ್ಲಿ ಹೋದರೆ ನಾನು ನದಿಗೆ ಬಿದ್ದು ಸಾಯ್ತೀನಿ ಅಂತ ವೈಷ್ಣವ್‌ಗೆ ಕೀರ್ತಿ ಬ್ಲ್ಯಾಕ್‌ಮೇಲೆ ಮಾಡಿದ್ದಳು. ಕೀರ್ತಿ ಹುಚ್ಚಾಟ ಮಾಡೋದರಿಂದ ವೈಷ್ಣವ್ ಸುಮ್ಮನೆ ಇದ್ದಾನೆ. ಆದರೆ ಲಕ್ಷ್ಮೀ ಮಾತ್ರ ತೆಪ್ಪದಲ್ಲಿ ಹೋಗಿದ್ದಾಳೆ.


Amruthadhaare Serial: ಮಾನ್ಯ ನೋಡಿ ಗೌತಮ್, ಶಾಕುಂತಲಾ ಹೆದರೋದು ಯಾಕೆ? ಹಳೇ ಕಥೆ ಏನು?

ಎಲ್ಲರಿಗೂ ಲಕ್ಷ್ಮೀ ಜೀವದ ಬಗ್ಗೆ ಹೆದರಿಕೆ ಶುರು ಆಗಿದೆ. ಆದರೆ ಈ ಜೋಡಿಗೆ ಏನೂ ಆಗೋದಿಲ್ಲ. ಇವರಿಬ್ಬರು ಬರುವ ಎಲ್ಲ ಸಮಸ್ಯೆಗಳನ್ನು ದಾಟಿಕೊಂಡು ಒಂದಾಗೋದಂತೂ ಸಹಜ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ರೋಚಕವಾಗಿವೆ.


ಧಾರಾವಾಹಿ ಕಥೆ ಏನು?

ಕೀರ್ತಿ ( ತನ್ವಿ ರಾವ್ ), ವೈಷ್ಣವ್ ( ಶಮಂತ್ ಬ್ರೊ ಗೌಡ ) ಪ್ರೀತಿ ಮಾಡಿ, ಮದುವೆ ಆಗಬೇಕು ಎಂದುಕೊಂಡಿದ್ದರು. ಆದರೆ ವೈಷ್ಣವ್ ತಾಯಿ ಕಾವೇರಿ ( ಸುಷ್ಮಾ ನಾಣಯ್ಯ ) ಈ ಮದುವೆ ಆಗದಂತೆ ತಡೆದಳು. ಕಾವೇರಿ ಹೇಳಿದ ಸುಳ್ಳಿನಿಂದ ಇವರಿಬ್ಬರು ದೂರ ಆದರು. ಇನ್ನೊಂದು ಕಡೆ ಏನು ಸುಳ್ಳು? ಯಾವ ಕಾರಣದಿಂದ ಕೀರ್ತಿ ತನ್ನಿಂದ ದೂರ ಆದಳು ಎನ್ನೋದು ವೈಷ್ಣವ್‌ಗೆ ಅರ್ಥ ಆಗಿಲ್ಲ. ಆಮೇಲೆ ಕಾವೇರಿಯು ತನ್ನ ಮಗನಿಗೆ ಲಕ್ಷ್ಮೀ ( ಭೂಮಿಕಾ ರಮೇಶ್ ) ಎನ್ನುವ ಹುಡುಗಿ ಜೊತೆ ಮದುವೆ ಮಾಡಿದಳು. ಕಾವೇರಿಗೆ ಮಗನ ಮೇಲೆ ಅತಿಯಾದ ವ್ಯಾಮೋಹ. ಮಗ-ಸೊಸೆ ಚೆನ್ನಾಗಿದ್ರೂ ಕಾವೇರಿಗೆ ಇಷ್ಟವೇ ಆಗೋದಿಲ್ಲ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್ ಭಾರೀ ರೋಚಕವಾಗಿದೆ.
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ