ಆ್ಯಪ್ನಗರ

Lakshmi Baramma-'ಲಕ್ಷ್ಮೀ ಬಾರಮ್ಮ': ಆ ನಿಗೂಢ ವ್ಯಕ್ತಿ ಹೇಳಿದಂತೆ ಲಕ್ಷ್ಮೀ, ವೈಷ್ಣವ್‌ಗೆ ಹಿತಶತ್ರುಗಳು ಯಾರು?

Lakshmi Baramma Kannada Serial Episode 32: ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ವೈಷ್ಣವ್ ಹಾಗೂ ಲಕ್ಷ್ಮೀ ದೇಗುಲಕ್ಕೆ ಭೇಟಿ ಕೊಟ್ಟಾಗ ಅಲ್ಲಿ ಶಾಸ್ತ್ರ ಹೇಳುವವರು ಎದುರಾಗಿದ್ದಾರೆ. ಆ ವೇಳೆ ಅವರು ಈ ದಂಪತಿಗೆ ಒಗಟಾಗಿ ಒಂದಷ್ಟು ಮಾತು ಹೇಳಿದ್ದಾರೆ. ಅವರ ಮಾತು ಕೇಳಿ ವೈಷ್ಣವ್ ಹಾಗೂ ಲಕ್ಷ್ಮೀಗೆ ಸ್ವಲ್ಪ ಗಾಬರಿ ಕೂಡ ಆಗಿದ್ದು, ಹಿತಶತ್ರುಗಳು ಯಾರು ಎಂಬ ಪ್ರಶ್ನೆ ಕೂಡ ಎದುರಾಗಿದೆ. ಹಾಗಾದರೆ ಆ ಶಾಸ್ತ್ರದವರು ಹೇಳಿದ್ದೇನು? ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Authored byಪದ್ಮಶ್ರೀ ಭಟ್ | Vijaya Karnataka Web 18 Apr 2023, 6:30 pm

ಹೈಲೈಟ್ಸ್‌:

  • 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ದೇಗುಲಕ್ಕೆ ವೈಷ್ಣವ್, ಲಕ್ಷ್ಮೀ ಭೇಟಿ
  • ವೈಷ್ಣವ್ ಬಳಿ ಭವಿಷ್ಯ ಹೇಳಿದ ಆ ನಿಗೂಢ ವ್ಯಕ್ತಿ
  • ಆ ಶಾಸ್ತ್ರದವರು ವೈಷ್ಣವ್, ಲಕ್ಷ್ಮೀಗೆ ಹೇಳಿದ ಹಿತಶತ್ರುಗಳು ಯಾರು?

ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web lakshmi baramma serial
'ಲಕ್ಷ್ಮೀ ಬಾರಮ್ಮ' ಕನ್ನಡ ಧಾರಾವಾಹಿಯಲ್ಲಿ ವೈಷ್ಣವ್ ಹಾಗೂ ಲಕ್ಷ್ಮೀ ಅವರು ದೇಗುಲಕ್ಕೆ ಹೋಗಿದ್ದರು. ಆ ವೇಳೆ ಶಾಸ್ತ್ರ ಹೇಳೋರು ಎದುರಾಗಿದ್ದಾರೆ. ಆಗ ವೈಷ್ಣವ್ ಅವರನ್ನು ಕರೆದು ಮುಂದಿನ ಜೀವನದ ಬಗ್ಗೆ ಕೇಳಿದ್ದಾರೆ. ವೈಷ್ಣವ್ ಎಲ್ಲ ಚೆನ್ನಾಗಿರುತ್ತಾ? ನಾನು ಮಹಾಲಕ್ಷ್ಮೀ ಚೆನ್ನಾಗಿ ಇರುತ್ತೀವಾ ಎಂದು ಪ್ರಶ್ನೆ ಕೇಳಿದ್ದಾನೆ.

ಧಾರಾವಾಹಿ ಕಥೆ ಏನು?

'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಪ್ರೀತಿಸಿದ ಹುಡುಗಿ ಕೀರ್ತಿ (ತನ್ವಿ ರಾವ್) ಸಿಗಲಿಲ್ಲ ಎಂದು ವೈಷ್ಣವ್ (ಶಮಂತ್ ಗೌಡ), ಲಕ್ಷ್ಮೀಯನ್ನು (ಭೂಮಿಕಾ ರಮೇಶ್) ಮದುವೆಯಾಗಿದ್ದಾನೆ. ವೈಷ್ಣವ್ ಕೀರ್ತಿಯನ್ನು ಮದುವೆಯಾಗೋದನ್ನು ಅವನ ತಾಯಿ ಕಾವೇರಿ ( ಸುಷ್ಮಾ ನಾಣಯ್ಯ) ತಪ್ಪಿಸಿದ್ದಾರೆ. ಲಕ್ಷ್ಮೀ ಕಂಡರೆ ವಿಧಿ ( ಲಾವಣ್ಯಾ ಹೀರೆಮಠ), ಸುಪ್ರೀತಾ ( ರಜನಿ ಪ್ರವೀಣ್‌)ಗೆ ಇಷ್ಟ ಇಲ್ಲ. ಈ ಎಲ್ಲ ಸಮಸ್ಯೆಗಳ ಮಧ್ಯೆ ವೈಷ್ಣವ್ ಹಾಗೂ ಲಕ್ಷ್ಮೀ ಚೆನ್ನಾಗಿ ಬಾಳುತ್ತಾರಾ ಅನ್ನೋದು ಈ ಧಾರಾವಾಹಿಯ ಒನ್‌ಲೈನ್ ಕತೆ.

Kannada Serial: 'ಭಾಗ್ಯಲಕ್ಷ್ಮೀ', 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ಬಗ್ಗೆ ಹೀಗ್ಯಾಕೆ ಅಂದ್ರು 'ಕನ್ನಡತಿ' ಸೀರಿಯಲ್ ಪ್ರೇಕ್ಷಕರು?
ಶಾಸ್ತ್ರದವರು ಏನಂದ್ರು?

ನಾನು, ಲಕ್ಷ್ಮೀ ಚೆನ್ನಾಗಿರುತ್ತೀವಾ ಅಂತ ವೈಷ್ಣವ್ ಪ್ರಶ್ನೆ ಮಾಡಿದಾಗ ಶಾಸ್ತ್ರದವರು ಕಗ್ಗಂಟಿನ ರೀತಿ ಉತ್ತರ ನೀಡಿದ್ದಾರೆ.
"ಪ್ರಯತ್ನ ಇದ್ದ ಕಡೆ ಫಲ. ಮನಸ್ಸಿದ್ದರೆ ಮಾರ್ಗ. ಎಲ್ಲ ಸರಿ ಇದ್ದರೆ ಅದನ್ನು ಜೀವನ ಅಂತ ಕರೆಯಲ್ಲ. ಒಂದೊಂದು ಕಡೆ ಮುಳ್ಳಿನ ಹಾಸಿಗೆ, ಇನ್ನೊಂದು ಕಡೆ ಕಲ್ಲು. ಒಂದೊಂದು ಕಡೆ ಬೆಂಕಿ ನಡಿಗೆ. ಇದೆಲ್ಲ ಇದ್ದಿದ್ದೆ. ಅಷ್ಟಿಲ್ಲದೆ ಅದು ಮನುಷ್ಯ ಜೀವನ ಅಂತ ಅನಿಸಿಕೊಳ್ಳತ್ತಾ?" ಎಂದು ಶಾಸ್ತ್ರದವರು ಒಗಟಾಗಿ ಹೇಳಿದ್ದಾರೆ.

ಲಕ್ಷ್ಮೀ ಬಾರಮ್ಮ ವಿಧಿ ಪಾತ್ರಧಾರಿ ಬಗ್ಗೆ ನಿಮಗೆ ಗೊತ್ತಿಲ್ಲದ ರಿಯಲ್ ಸಂಗತಿಗಳು

ಲಕ್ಷ್ಮೀ ಇರೋದಿಲ್ಲ

"ಕಣ್ಣು ಮುಂದೆ ಇರೋ ಶತ್ರುಗಳಿಗಿಂತ ಬೆನ್ನು ಹಿಂದೆ ಶತ್ರುಗಳು ಜಾಸ್ತಿ ಆಗ್ತಾರೆ. ಅವರ ಕಡೆ ಗಮನ ಕೊಡಬೇಕು. ನಿನ್ನನ್ನು, ನಿನ್ನ ಮನೆಯನ್ನು ಕಾಯುವ ಮಹಾಲಕ್ಷ್ಮೀ ಇವಳು. ವಿಷ್ಣುವಿನ ರೀತಿ ನೀನು ಯಾವಾಗಲೂ ಇವಳ ಜೊತೆ ಇರಬೇಕು, ಗೌರವಿಸಬೇಕು, ಆದರಿಸಬೇಕು. ಲಕ್ಷ್ಮೀ ಮಹಾ ಸ್ವಾಭಿಮಾನಿ. ಎಲ್ಲಿ ಸ್ವಾಭಿಮಾನಕ್ಕೆ ಧಕ್ಕೆ ಆಗತ್ತೋ ಅವಳು ಅಲ್ಲಿ ಇರೋದಿಲ್ಲ. ನೋಡು ನೋಡುತ್ತಿದ್ದಂತೆ ಅವಳು ಎದ್ದು ಹೊರಟು ಹೋಗ್ತಾಳೆ. ಮಹಾಲಕ್ಷ್ಮೀ ಇಲ್ಲದ ಕಡೆ ವಿಷ್ಣುಗೆ ಏಳ್ಗೆ ಇರಲ್ಲ, ನೆಮ್ಮದಿ ಇರಲ್ಲ. ಲಕ್ಷ್ಮೀ ಇಲ್ಲದಾಗಲೇ ವಿಷ್ಣು ದಿವಾಳಿ ಆಗಿದ್ದು. ವಿಷ್ಣು ರೀತಿ ನಿನ್ನ ಜೀವನ ಆಗಬಾರದು. ಹಿತಶತ್ರುಗಳು ಜಾಸ್ತಿ ಆದಾಗ ನೀನು ಇವಳ ಜೊತೆ ಇರಬೇಕು" ಎಂದು ಶಾಸ್ತ್ರದವರು ಹೇಳಿದ್ದಾರೆ.

Lakshmi Baramma S02: ಲಕ್ಷ್ಮೀ ಬಾರಮ್ಮ: ವೈಷ್ಣವ್ ಮನೆಯವರಿಗೆ ಭಾರೀ ಶಾಕ್; ವಿಧಿಯಾಟಕ್ಕೆ ಎಲ್ರೂ ಕಣ್ಣೀರು

ವೈಷ್ಣವ್ ಹಾಗೂ ಲಕ್ಷ್ಮೀ ಅವರು ನಾವಿಬ್ಬರೂ ಒಟ್ಟಿಗಿರುತ್ತೇವೆ ಎಂದು ಹೇಳಿದಾಗ ಶಾಸ್ತ್ರದವರು, ಪರಿಸ್ಥಿತಿ ಏನು ಮಾಡತ್ತೆ ಅಂತ ಕಾದು ನೋಡೋಣ ಎಂದು ಹೇಳಿದ್ದಾರೆ.

ವೈಷ್ಣವ್‌ಗೂ, ಲಕ್ಷ್ಮೀಗೂ ಹಿತಶತ್ರುಗಳು ಯಾರು ಎಂಬ ಪ್ರಶ್ನೆ ಕಾಡಿದೆ.


ಸುಪ್ರೀತಾ- ವೈಷ್ಣವ್ ಸೋದರತ್ತೆ ಸುಪ್ರೀತಾಗೆ ವೈಷ್ಣವ್ ಲಕ್ಷ್ಮೀಯನ್ನು ಮದುವೆ ಆಗಿರೋದು ಇಷ್ಟವಿಲ್ಲ. ಮೊದಲಿನಿಂದಲೂ ಸುಪ್ರೀತಾ ಅವಕಾಶ ಸಿಕ್ಕಾಗಲೆಲ್ಲ ಲಕ್ಷ್ಮೀಗೆ ಬೈಯ್ಯುತ್ತಿದ್ದಾಳೆ.

ವಿಧಿ-
ವೈಷ್ಣವ್ ಸಹೋದರಿ ವಿಧಿಗೂ ಕೂಡ ಲಕ್ಷ್ಮೀ ಕಂಡರೆ ಇಷ್ಟ ಇಲ್ಲ. ಅವಳು ಕೂಡ ಅವಕಾಶ ಸಿಕ್ಕಾಗಲೆಲ್ಲ ವಿಧಿಯನ್ನು ಅವಮಾನ ಮಾಡುತ್ತಿರುತ್ತಾಳೆ.

ಕಾವೇರಿ-
ವೈಷ್ಣವ್ ತಾಯಿಗೆ ಲಕ್ಷ್ಮೀ ಅಂದರೆ ಇಷ್ಟವೇ. ಆದರೆ ತನ್ನ ಮಗ ಕೈತಪ್ಪಿ ಹೋಗಬಾರದು, ನನ್ನ ಮಗನಿಗೆ ಮೊದಲ ಆದ್ಯತೆ ನಾನೇ ಆಗಬೇಕು ಅಂತ ಕಾವೇರಿ ಬಯಸುತ್ತಿದ್ದಾಳೆ. ಲಕ್ಷ್ಮೀ ಒಳ್ಳೆಯ ಗುಣವೇ ಕಾವೇರಿಗೆ ಮಗನನ್ನು ಕಳೆದುಕೊಳ್ಳುವ ಆತಂಕ ಮೂಡಿಸಿದೆ.

ಕೀರ್ತಿ-
ವೈಷ್ಣವ್‌ನನ್ನು ಪಡೆದುಕೊಳ್ಳಲೇಬೇಕು ಅಂತ ಕೀರ್ತಿ ಪಣ ತೊಟ್ಟಿದ್ದಾಳೆ. ಇದಕ್ಕಾಗಿ ಅವಳು ಏನು ಬೇಕಿದ್ರೂ ಮಾಡ್ತಾಳೆ.

ಸುನಂದ, ಪೂಜಾ- ಲಕ್ಷ್ಮೀ ದೊಡ್ಡಮ್ಮ ಸುನಂದ, ಸಹೋದರಿ ಪೂಜಾಳಿಗೆ ಲಕ್ಷ್ಮೀಗೆ ಒಳ್ಳೆಯದಾದ್ರೆ ಇಷ್ಟ ಆಗೋದಿಲ್ಲ. ಅವರು ಕೂಡ ಲಕ್ಷ್ಮೀ ಜೀವನ ಹಾಳು ಮಾಡಲು ನೋಡುತ್ತಿದ್ದಾರೆ.
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ