ಆ್ಯಪ್ನಗರ

ಸಹನಟರಿಂದ ಈಗ ಸ್ನೇಹಿತರಾಗುವವರೆಗೆ ನಮ್ಮ ಜರ್ನಿ ತುಂಬ ಕ್ರೇಜಿಯಾಗಿತ್ತು: ಕವಿತಾ ಗೌಡ!

ಚಂದನ್ ಕುಮಾರ್ ಹಾಗೂ ಕವಿತಾ ಗೌಡ ಉತ್ತಮ ಸ್ನೇಹಿತರು. 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಈ ಜೋಡಿ ಒಟ್ಟಾಗಿ ನಟಿಸಿತ್ತು. ಧಾರಾವಾಹಿ ಮುಗಿದ ನಂತರದಲ್ಲಿ ಕೂಡ ಅದೇ ಸ್ನೇಹ, ಆತ್ಮೀಯತೆಯನ್ನು ಇವರಿಬ್ಬರು ಉಳಿಸಿಕೊಂಡಿದ್ದಾರೆ. ಈಗ ಚಂದನ್‌ಗೆ ವಿಶೇ‍ಷವಾದ ಸಂದೇಶವನ್ನು ಕವಿತಾ ನೀಡಿದ್ದಾರೆ.

Indiatimes 11 Sep 2020, 2:45 pm
ಇಂದು ನಟ ಚಂದನ್ ಕುಮಾರ್ ಅವರಿಗೆ ಹುಟ್ಟುಹಬ್ಬದ ಸಂಭ್ರಮ. 'ರಾಧಾ ಕಲ್ಯಾಣ' ಧಾರಾವಾಹಿ ಮೂಲಕ ಮನೆ ಮಾತಾದ ಚಂದನ್ ಆನಂತರ ಅನೇಕ ಧಾರಾವಾಹಿಗಳಲ್ಲಿ ನಟಿಸಿದರು, ರಿಯಾಲಿಟಿ ಶೋಗಳನ್ನು ಮಾಡಿದರು, ಸಿನಿಮಾದಲ್ಲಿಯೂ ಬಣ್ಣ ಹಚ್ಚಿದ್ದರು. ಕಿರುತೆರೆಯಲ್ಲಿ ಸಕ್ರಿಯವಾಗಿರುವ ಇವರಿಗೆ ಅನೇಕ ಧಾರಾವಾಹಿ, ಸಿನಿಮಾ ನಟರು ಹುಟ್ಟುಹಬ್ಬದ ಶುಭಾಶಯ ಕೋರುತ್ತಿದ್ದಾರೆ. ನಟಿ ಕವಿತಾ ಗೌಡ ಅವರು ವಿಶೇಷವಾಗಿ ಚಂದನ್‌ಗೆ ಹುಟ್ಟುಹಬ್ಬದ ಶುಭಾಶಯ ತಿಳಿಸಿದ್ದಾರೆ.
Vijaya Karnataka Web lakshmi baramma serial actress kavitha gowda wishes to chandan kumar
ಸಹನಟರಿಂದ ಈಗ ಸ್ನೇಹಿತರಾಗುವವರೆಗೆ ನಮ್ಮ ಜರ್ನಿ ತುಂಬ ಕ್ರೇಜಿಯಾಗಿತ್ತು: ಕವಿತಾ ಗೌಡ!


ಕವಿತಾಗೆ ಸರ್ಪ್ರೈಸ್ ಕೊಟ್ಟಿದ್ದ ಚಂದನ್!

ಚಂದನ್ ಜೊತೆಗೆ ತೆಗೆಸಿಕೊಂಡಿರುವ ಫೋಟೋಗಳನ್ನು ಕವಿತಾ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಕಳೆದ ಕೆಲವು ದಿನಗಳಿಂದ ಕವಿತಾ ಮತ್ತು ಚಂದನ್ ಸೇರಿ 'ಲಕ್ಷ್ಮೀ ಬಾರಮ್ಮ' ತಂಡ ವಿವಿಧ ಕಡೆಗಳಿಗೆ ಟ್ರಿಪ್ ಹೋಗಿ ಬಂದಿದೆ. ನಟಿ ಕವಿತಾ ಗೌಡ ಅವರ ಹುಟ್ಟುಹಬ್ಬದ ದಿನ ಮಧ್ಯರಾತ್ರಿ ಅವರ ಮನೆಗೆ ಭೇಟಿ ಕೊಟ್ಟು ಚಂದನ್ ಸರ್ಪ್ರೈಸ್ ನೀಡಿದ್ದರು. ಚಂದನ್ ಅವರು ಮನೆಯಲ್ಲಿಯೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದು, ಅನೇಕ ಕಿರುತೆರೆ ಕಲಾವಿದರು ಅದರಲ್ಲಿ ಭಾಗಿಯಾಗಿದ್ದಾರೆ.

ಚಂದನ್‌ಗೆ ಕವಿತಾ ಹೇಳಿದ್ದೇನು?

'ಸಹನಟರಿಂದ ಈಗ ಸ್ನೇಹಿತರಾಗುವವರೆಗೆ ನಮ್ಮ ಜರ್ನಿ ತುಂಬ ಕ್ರೇಜಿಯಾಗಿತ್ತು. ನನ್ನ ಜೀವನದಲ್ಲಿ ನಿಮ್ಮನ್ನು ಹೊಂದಲು ನನಗೆ ತುಂಬ ಖುಷಿಯಿದೆ. ನಿಮಗೆ ಹುಟ್ಟುಹಬ್ಬದ ಶುಭಾಶಯಗಳು. ಯಶಸ್ಸು, ಖುಷಿ ಸಿಗಲಿ' ಎಂದು ಚಂದನ್‌ ಕುಮಾರ್‌ಗೆ ಕವಿತಾ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ. ಇದಕ್ಕೆ ಚಂದನ್ ಥ್ಯಾಂಕ್ಯು ಗುಂಡಮ್ಮ ಎಂದಿದ್ದಾರೆ. ಇದರ ಜೊತೆಗೆ ಕವಿತಾ ಹಾಗೂ ಚಂದನ್ ಮೊದಲ ಬಾರಿಗೆ ಒಟ್ಟಾಗಿ ಫೋಟೋಶೂಟ್ ಮಾಡಿಸಿದ್ದು, ಆ ಫೋಟೋವನ್ನು ಕೂಡ ಇವರಿಬ್ಬರು ಹಂಚಿಕೊಂಡಿದ್ದಾರೆ.

Also Read-ಇಂದ್ರಜಿತ್‌ ಲಂಕೇಶ್‌ ಸಾರ್ವಜನಿಕವಾಗಿ ಡ್ರಗ್ಸ್‌ ದಂಧೆ ಬಗ್ಗೆ ಮಾತಾಡಿದ್ದಕ್ಕೆ ಇಲ್ಲಿದೆ 5 ಕಾರಣಗಳು!

'ಲಕ್ಷ್ಮೀ ಬಾರಮ್ಮ'ದ ಈ ಜೋಡಿ ಬಲು ಫೇಮಸ್!

ಕವಿತಾ ಗೌಡ ಹಾಗೂ ಚಂದನ್ ಕುಮಾರ್ 'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಒಟ್ಟಾಗಿ ನಟಿಸಿದ್ದರು. ವೈಯಕ್ತಿಕ ಕಾರಣಗಳಿಂದ ಮೊದಲು ಚಂದನ್ ಈ ಸೀರಿಯಲ್ ಬಿಟ್ಟರು, ಆಮೇಲೆ ಕೆಲ ವರ್ಷಗಳ ನಂತರದಲ್ಲಿ ಕವಿತಾ ಗೌಡ ಕೂಡ ಚಂದನ್ ಹಾದಿ ತುಳಿದರು. ಚಂದನ್ ಕೊನೆಯದಾಗಿ ಕನ್ನಡದಲ್ಲಿ 'ಸರ್ವಮಂಗಳ ಮಾಂಗಲ್ಯೇ' ಧಾರಾವಾಹಿಯಲ್ಲಿ ನಟಿಸಿದ್ದರು. ಕವಿತಾ ಗೌಡ 'ವಿದ್ಯಾ ವಿನಾಯಕ' ಸೀರಿಯಲ್‌ನಲ್ಲಿ ಕಾಣಿಸಿಕೊಂಡಿದ್ದರು. ಪ್ರಸ್ತುತ ಇವರಿಬ್ಬರು ಸಿನಿಮಾಗಳ ಕಡೆಗೆ ಗಮನ ಕೊಡುತ್ತಿದ್ದಾರೆ. ಚಂದನ್ ಪರಭಾಷೆಯ ಕಿರುತೆರೆಯಲ್ಲಿಯೂ ಸಕ್ರಿಯರಾಗಿದ್ದಾರೆ.

Also Read-ಕವಿತಾ ಗೌಡ-ಚಂದನ್‌ ನಿಜ ಜೀವನದಲ್ಲಿ ಮದುವೆ ಆಗ್ತಾರಾ? ಮೂಡಿದೆ ದೊಡ್ಡ ಕೌತುಕ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ