ಆ್ಯಪ್ನಗರ

ಅಂದು ನಡೆದ ಕಹಿ ಘಟನೆ ನೆನಪಿಸಿಕೊಂಡ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನಟಿ ರಶ್ಮಿ ಪ್ರಭಾಕರ್!

'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನಟಿ ರಶ್ಮಿ ಪ್ರಭಾಕರ್ ಅವರ ಬದುಕಿನಲ್ಲಿ ನಡೆದ ಕಹಿ ಘಟನೆ ಬಗ್ಗೆ ಮಾತನಾಡಿದ್ದಾರೆ. ಏನದು?

Vijaya Karnataka Web 9 Jul 2020, 10:41 pm
'ಲಕ್ಷ್ಮೀ ಬಾರಮ್ಮ' ಧಾರಾವಾಹಿಯಲ್ಲಿ ಲಕ್ಷ್ಮೀ (ಚಿನ್ನು) ಪಾತ್ರ ತುಂಬ ಮಹತ್ವದ್ದಾಗಿತ್ತು. ಚಿನ್ನು ಪಾತ್ರದಲ್ಲಿ ಆರಂಭದ ಒಂದಷ್ಟು ವರ್ಷಗಳ ಕಾಲ ನಟಿಸಿದ್ದ ಕವಿತಾ ಗೌಡ ಸಿನಿಮಾಗೋಸ್ಕರ ಈ ಧಾರಾವಾಹಿಯಿಂದ ಹೊರನಡೆದರು. ಆಮೇಲೆ ಈ ಪಾತ್ರಕ್ಕೆ ನಟಿ ರಶ್ಮಿ ಪ್ರಭಾಕರ್ ಜೀವ ತುಂಬಿದ್ದರು. ಇದಕ್ಕೂ ಮುನ್ನ ರಶ್ಮಿ 'ಜೀವನ ಚೈತ್ರ', 'ಶುಭ ವಿವಾಹ', 'ಮಹಾಭಾರತ' ಧಾರಾವಾಹಿಯಲ್ಲಿ ನಟಿಸಿದ್ದರು. ಒಂದು ವೇಳೆ 'ಲಕ್ಷ್ಮೀ ಬಾರಮ್ಮ' ಅವಕಾಶ ಸಿಗದಿದ್ದಲ್ಲಿ ಚಿತ್ರರಂಗದಿಂದ ದೂರವಾಗುತ್ತಿದ್ದೆ ಎಂದು ಈ ಹಿಂದೆ 'ವಿಜಯ ಕರ್ನಾಟಕ'ಕ್ಕೆ ನೀಡಿದ ಸಂದರ್ಶನದಲ್ಲಿ ರಶ್ಮಿ ಹೇಳಿದ್ದರು. ನ್ಯೂಸ್ ರೀಡರ್ ಆಗಿ ಖಾಸಗಿ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದ ರಶ್ಮಿ, ಕಾರಣಾಂತರಗಳಿಂದ ಈ ಕೆಲಸ ಬಿಟ್ಟರು. ಸ್ನೇಹಿತೆ ಮಾತಿಗೆ ಒಪ್ಪಿ ಆಡಿಶನ್‌ ನೀಡಿ, ಇವರು ಧಾರಾವಾಹಿ ಲೋಕಕ್ಕೆ ಬಂದರು. ಈಗ ಇದೇ ಕ್ಷೇತ್ರದಲ್ಲಿ ಇನ್ನಷ್ಟು ಹೆಸರು ಮಾಡುವ ಆಶಯದಲ್ಲಿ ರಶ್ಮಿ ಪ್ರಭಾಕರ್ ಇದ್ದಾರೆ.
Vijaya Karnataka Web lakshmi baramma serial actress rashmi prabhakar remembers her eye injury
ಅಂದು ನಡೆದ ಕಹಿ ಘಟನೆ ನೆನಪಿಸಿಕೊಂಡ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನಟಿ ರಶ್ಮಿ ಪ್ರಭಾಕರ್!


'ಲಕ್ಷ್ಮೀ ಬಾರಮ್ಮ' ಧಾರಾವಾಹಿ ನಟಿ ರಶ್ಮಿ ಪ್ರಭಾಕರ್ ಅವರು ಬಾಲ್ಯದ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋಗಳು ನಿಜಕ್ಕೂ ನಮ್ಮ ಬಾಲ್ಯವನ್ನು ನೆನಪಿಸುವಂತಿವೆ. ಈ ಫೋಟೋಗಳ ಹಿಂದೆ ಒಂದು ಕಥೆ ಕೂಡ ಇದೆ.

ಬಾಲ್ಯದಲ್ಲಿ ಕಣ್ಣಿನ ಇಂಜುರಿ ಮಾಡಿಕೊಂಡಿದ್ದ ನಟಿ ರಶ್ಮಿ ಪ್ರಭಾಕರ್!

ಈಗ ಕ್ಯಾಮರಾ ಮುಂದೆ ಬಂದು ಪ್ರಖ್ಯಾತಿ ಪಡೆದಿದ್ದ ರಶ್ಮಿ ಈ ಹಿಂದೆ ಫೋಟೋಗಳನ್ನು ತೆಗೆಸಿಕೊಳ್ಳಲು ಇಷ್ಟಪಡುತ್ತಿರಲಿಲ್ಲ. 'ಬಾಲ್ಯದಲ್ಲಿ ನನಗೆ ಇಂಜುರಿಯಾಗಿತ್ತು. ಇದರಿಂದ ಬಹುತೇಕ ನನ್ನ ಎಡಗಡೆ ಕಣ್ಣು ಹೋಗಿತ್ತು ಎನ್ನುವಂತಾಗಿತ್ತು. ಊರಹೊರಗಡೆಯಿರುವುದಕ್ಕೆ ಆಸ್ಪತ್ರೆಗೆ ಹೋಗೋದು ಬಹಳ ತಡವಾಗಿತ್ತು. ನನ್ನ ಕಣ್ಣು ಶೇ 90ರಷ್ಟು ಭಾಗ ದೃಷ್ಟಿಯನ್ನು ಕಳೆದುಕೊಂಡಿತ್ತು. ಈ ಗಾಯವಾದ ಮರುದಿನ ನಾವು ಆಸ್ಪತ್ರೆಗೆ ಹೋದೆವು. ನಾನು ಚಿಕ್ಕವಳಿದ್ದರಿಂದ ಏನೂ ಮಾಡಲಾಗದು ಎಂದು ವೈದ್ಯರು ಹೇಳಿದ್ದರು. ಸರ್ಜರಿ ಮಾಡುವ ಹಾಗೆ ಇರಲಿಲ್ಲ. ಹೀಗಾಗಿ ಚಿಕ್ಕ ಕಣ್ಣಿನ ಹುಡುಗಿ ನಾನು ಎಂದೇ ಗುರುತಿಸಲ್ಪಡುತ್ತಿದ್ದೆ. ಆಮೇಲೆ ನಿಧಾನವಾಗಿ ನಾನು ವಾಸ್ತವವನ್ನು ಅರ್ಥ ಮಾಡಿಕೊಳ್ಳುತ್ತ ಬಂದೆ' ಎಂದು ರಶ್ಮಿ ಪ್ರಭಾಕರ್ ಹೇಳಿದ್ದಾರೆ.

Also Read-ಧಾರಾವಾಹಿ ನಟನಿಗೆ ಕೊರೊನಾ ಪಾಸಿಟಿವ್! ರಶ್ಮಿ ಪ್ರಭಾಕರ್ ನಟಿಸುತ್ತಿದ್ದ ಸೀರಿಯಲ್ ಶೂಟಿಂಗ್‌ಗೆ ತಡೆ!

ವೈದ್ಯರೂ ಕಾಸ್ಮೆಟಿಕ್ ಲೆನ್ಸ್ ಕೊಟ್ಟರೂ ಬಳಸದ ರಶ್ಮಿ ಪ್ರಭಾಕರ್!

ರಶ್ಮಿ ಪ್ರಭಾಕರ್ ಅವರ ಇಂಜುರಿ ನಟನೆಗೂ ಬಿಸಿ ಮುಟ್ಟಿಸಿತ್ತು. 'ನಾನು ಸರ್ಜರಿ ಮಾಡಿಸಿಕೊಂಡಾಗ ಕಣ್ಣು ಸ್ವಲ್ಪ ಚೆನ್ನಾಗಿ ಕಾಣುತ್ತಿತ್ತು. ನಾನಂತೂ ಕಣ್ಣಿನ ವಿಚಾರದಲ್ಲಿ ತುಂಬ ಕಾನ್ಶಿಯಸ್ ಆಗಿರುತ್ತಿದ್ದೆ. ಇದಾದನಂತರದ ವೈದ್ಯರು ನನಗೆ ಕಾಸ್ಮೆಟಿಕ್ ಲೆನ್ಸ್ ನೀಡಿದರು. ಆದರೂ ಕೂಡ ನಾನು ಇದನ್ನು ಬಳಸೋದಿಲ್ಲ. ಈಗ ಜನರು ನಾನು ಹೇಗಿದ್ದೇನೆಯೋ ಹಾಗೆ ನನ್ನನ್ನು ಒಪ್ಪಿಕೊಂಡಿದ್ದಾರೆ, ಪ್ರೀತಿಸಿದ್ದಾರೆ. ಜನರು ನನ್ನಲ್ಲಿ ಭರವಸೆ ತುಂಬಿದ್ದಾರೆ. ಹೀಗಾಗಿ ನನ್ನ ಮೇಲೆ ನನಗೆ ನಂಬಿಕೆ ಬಂದಿದೆ. ಅವರು ನನ್ನ ನೋಡುವ ಪರಿಯಲ್ಲಿಯೇ ನಾನಿದ್ದೇನೆ. ಈಗ ಕಣ್ಣಿನ ಸಮಸ್ಯೆ ಗುಣಮುಖವಾಗಿ ಈಗ ಸಹಜ ಸ್ಥಿತಿಗೆ ಬರುತ್ತಿದೆ. ಇಲ್ಲಿಯವರೆಗಿನ ನನ್ನ ಪಯಣದಲ್ಲಿ ನಾನು ಇನ್ನಷ್ಟು ಈಗ ಭರವಸೆ ಹೊಂದಿದ್ದೇನೆ' ಎಂದು ರಶ್ಮಿ ಹೇಳಿದ್ದಾರೆ.

Also Read-ಆಡಿಶನ್ ಕೊಟ್ಟು ಕೊಟ್ಟು ಜೀವನದಲ್ಲಿ ಜಿಗುಪ್ಸೆ ಬಂದಿತ್ತು ನನಗೆ: ಲಕ್ಷ್ಮೀ ಬಾರಮ್ಮ ನಟಿ ರಶ್ಮಿ ಪ್ರಭಾಕರ್

ಬಾಲ್ಯದ ಫೋಟೋಗಳನ್ನು ಹಂಚಿಕೊಂಡ ರಶ್ಮಿ ಪ್ರಭಾಕರ್!

ರಶ್ಮಿ ಪ್ರಭಾಕರ್ ಸೋಶಿಯಲ್ ಮೀಡಿಯಾದಲ್ಲಿ ಬಾಲ್ಯದ ಫೋಟೋ, ವಿಡಿಯೋಗಳನ್ನು ಹಂಚಿಕೊಂಡಿದ್ದಾರೆ. ಪಿಯುಸಿವರೆಗಿನ ಫೋಟೋಗಳನ್ನು ರಶ್ಮಿ ಹಂಚಿಕೊಂಡಿದ್ದಾರೆ. 'ಹೋಮ್ ಕ್ವಾರೈಂಟೈನ್‌ನಲ್ಲಿದ್ದರಿಂದ ಮನೆಯಲ್ಲಿ ಏನೂ ಕೆಲಸ ಮಾಡಲು ಇರಲಿಲ್ಲ. ಹೀಗಾಗಿ ಸುಮ್ಮನೆ ಕಬೋರ್ಡ್ ಕ್ಲೀನ್ ಮಾಡುತ್ತಿರುವಾಗ ಈ ಫೋಟೋಗಳು ಕಣ್ಣಿಗೆ ಬಿತ್ತು. ಇವುಗಳನ್ನು ನೋಡಿದಾಗ ನಾನು ಭಾವುಕಳಾದೆ' ಎಂದು ರಶ್ಮಿ ಪ್ರಭಾಕರ್ ಹೇಳಿದ್ದಾರೆ. ಈ ಫೋಟೋಗಳನ್ನು ನೆಟ್ಟಿಗರು ಮೆಚ್ಚಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಅವರಿಗೆ ವಿವಿಧ ರೀತಿಯಲ್ಲಿ ಪಾಸಿಟಿವ್ ಆಗಿ ಕಾಮೆಂಟ್ ಮಾಡಿ ರಶ್ಮಿ ಪ್ರಭಾಕರ್‌ಗೆ ಬೆಂಬಲ ಸೂಚಿಸಿದ್ದಾರೆ. ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ರಶ್ಮಿ, ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

'ಪೌರ್ಣಮಿ' ಧಾರಾವಾಹಿಯಲ್ಲಿ ನಟಿಸುತ್ತಿರುವ ರಶ್ಮಿ ಪ್ರಭಾಕರ್!

ರಶ್ಮಿ ಪ್ರಭಾಕರ್ ಅವರ ನಟನೆ ಪಯಣ ಕೂಡ ತುಂಬ ಸುಲಭವಿರಲಿಲ್ಲ. ಕಾಮಿಡಿ ರಿಯಾಲಿಟಿ ಶೋಗಳಿಗೂ ಕೂಡ ಅವರು ಆಡಿಶನ್ ನೀಡಿದ್ದರು. ಆಡಿಶನ್ ನೀಡಿ ಪದೇ ಪದೇ ರಿಜೆಕ್ಟ್ ಆಗುತ್ತಿದ್ದ ರಶ್ಮಿಗೆ ಜೀವನದ ಮೇಲೆ ಒಂದು ಕಾಲದಲ್ಲಿ ತುಂಬ ಜಿಗುಪ್ಸೆ ಬಂದಿತ್ತಂತೆ. ಒಂದು ಧಾರಾವಾಹಿಯಲ್ಲಿ ಈಗಾಗಲೇ ಪಾತ್ರಕ್ಕೆ ಒಂದು ವ್ಯಕ್ತಿ ಜೀವ ತುಂಬಿದ್ದು, ಮತ್ತೆ ಆ ಪಾತ್ರವನ್ನು ರಿಪ್ಲೇಸ್ ಮಾಡೋದು ಬಹಳ ಕಷ್ಟ. ಹೀಗಾಗಿ 'ಲಕ್ಷ್ಮೀ ಬಾರಮ್ಮ' ಧಾರಾವಾಹಿ ರಶ್ಮಿ ಪ್ರಭಾಕರ್ ಪಾಲಿಗೆ ಸವಾಲಾಗಿದ್ದರೂ ಕೂಡ ಆಮೇಲೆ ಜನರು ಒಪ್ಪಿ, ಇಷ್ಟಪಡುವಷ್ಟರ ಮಟ್ಟಿಗೆ ರಶ್ಮಿ ನಟಿಸಿದ್ದರು. ಪ್ರಸ್ತುತ ಅವರು ತೆಲುಗಿನ 'ಪೌರ್ಣಮಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದು, ಶೀಘ್ರದಲ್ಲಿಯೇ ಕನ್ನಡದಲ್ಲಿನ ಪ್ರಾಜೆಕ್ಟ್ ಬಗ್ಗೆ ಕೂಡ ಹೇಳಲಿದ್ದಾರಂತೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ