ಆ್ಯಪ್ನಗರ

Lakshmi Nivasa serial: ಜಾಹ್ನವಿಗೂ ಮುನ್ನ ಜಯಂತ್‌ಗೆ ಮೊದಲೇ ಮದುವೆ ಆಗಿತ್ತಾ? ಫಸ್ಟ್ ಹೆಂಡ್ತಿ ಯಾರು?

Lakshmi Nivasa Serial Today Episode: ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗುತ್ತಲಿರುವ ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಜಯಂತ್ ಮಾತ್ರ ಹೆಂಡ್ತಿ ಜಾಹ್ನವಿ ವಿಷಯದಲ್ಲಿ ಪಕ್ಕಾ ಸೈಕೋ ಥರ ಆಡ್ತಾನೆ. ಜಯಂತ್‌ ಪಾತ್ರದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಇದರ ಜೊತೆಗೆ ಜಯಂತ್‌ಗೆ ಮೊದಲೇ ಮದುವೆ ಆಗಿತ್ತಾ? ಹೆಂಡ್ತಿ ಯಾರು? ಅಂತೆಲ್ಲ ಪೋಸ್ಟ್‌ಗಳು ಹರಿದಾಡುತ್ತಿವೆ.

Authored byಪದ್ಮಶ್ರೀ ಭಟ್ | Vijaya Karnataka Web 15 Apr 2024, 5:47 pm

ಹೈಲೈಟ್ಸ್‌:

  • ‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಸೈಕೋ ಬುದ್ಧಿ ಹೊಂದಿರುವ ಜಯಂತ್
  • ಜಯಂತ್ ಪಾತ್ರದ ಬಗ್ಗೆ ಭಾರೀ ಚರ್ಚೆ ಆಗ್ತಿದೆ
  • ಜಯಂತ್‌ಗೆ ಮೊದಲೇ ಮದುವೆ ಆಗಿತ್ತಾ? ಹೆಂಡ್ತಿ ಇದ್ದಳಾ?
ಹೈಲೈಟ್ಸ್‌ ಮಾತ್ರವೇ ಓದಲು ಆ್ಯಪ್‌ ಡೌನ್‌ಲೋಡ್‌ ಮಾಡಿ
Vijaya Karnataka Web lakshmi nivasa serial
‘ಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಜಯಂತ್‌ಗೆ ಮದುವೆ ಆಗಿದ್ಯಾ? ಹೀಗೊಂದು ಪ್ರಶ್ನೆ ಸೋಶಿಯಲ್ ಮೀಡಿಯಾದಲ್ಲಿ ಎದ್ದಿದೆ. ಹೌದು, ಧಾರಾವಾಹಿಯಲ್ಲಿ ಜಯಂತ್ ಅನಾಥ ಅಂತ ಮಾತ್ರ ತೋರಿಸಲಾಗಿತ್ತು. ಆದರೆ ಅವನಿಗೆ ಈಗಾಗಲೇ ಮದುವೆ ಆಗಿತ್ತು ಅಂತ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹರಿದಾಡುತ್ತಿದೆ.


ಅತಿಯಾದ ಜಯಂತ್ ಪ್ರೀತಿ

ಜಯಂತ್ ತನ್ನ ಹೆಂಡ್ತಿ ಜಾಹ್ನವಿಯನ್ನು ತುಂಬ ಇಷ್ಟಪಡ್ತಾನೆ, ಅವಳು ನನಗೆ ಮಾತ್ರ ಸ್ವಂತ, ಅವಳು ನನ್ನ ಮಾತ್ರ ಪ್ರೀತಿ ಮಾಡಬೇಕು, ನನ್ನ ಜೊತೆ ಮಾತ್ರ ಆತ್ಮೀಯತೆಯಿಂದ ಇರಬೇಕು, ನನಗೆ ಮಾತ್ರ ಆದ್ಯತೆ ಕೊಡಬೇಕು ಅಂತ ಜಯಂತ್ ಬಯಸುತ್ತಾನೆ. ‘ಅತಿಯಾದರೆ ಅಮೃತವೂ ವಿಷವಂತೆ’, ಹಾಗೆಯೇ ಇಲ್ಲಿ ಜಯಂತ್ ಅವರ ಪ್ರೀತಿಯೂ, ಅದರ ರೀತಿಯೂ ಮಿತಿಮೀರಿದೆ.


Lakshmi Nivasa Serial: ಜಾನು ಮೈಮುಟ್ಟಿದ ವೈದ್ಯರ ಗ್ರಹಚಾರ ಬಿಡಿಸಿದ ಜಯಂತ್; 'ಜ್ಯೂ ರಘುವರನ್' ಎಂದ ವೀಕ್ಷಕರು

ಈಗ ಕಾಡುವ ಪ್ರಶ್ನೆಗಳಯ ಏನು?

ದೊಡ್ಡ ಕಂಪೆನಿಯ ಮಾಲೀಕ ಜಯಂತ್ ಆಗರ್ಭ ಶ್ರೀಮಂತ. ಈಗ ತಾನೇ ಡಿಗ್ರಿ ಶಿಕ್ಷಣ ಪಡೆಯುತ್ತಿರುವ ಜಾಹ್ನವಿಯನ್ನು ಅವನು ಪ್ರೀತಿಸಿ ಮದುವೆ ಆಗಿದ್ದಾನೆ. ಹಾಗಾದರೆ ಇದು ಜಯಂತ್‌ನ ಮೊದಲ ಮದುವೆಯೇ? ಜಯಂತ್‌ಗೂ ಜಾಹ್ನವಿಗೂ ವಯಸ್ಸಿನ ಅಂತರ ಇಲ್ವಾ? ಹೀಗೆಲ್ಲ ಪ್ರಶ್ನೆಗಳು ಸಹಜವಾಗಿಯೇ ಹುಟ್ಟುತ್ತವೆ.


Lakshmi Nivasa Serial: ಜಯಂತ್‌ ಸೈಕೋ ಥರ ಆಡಲು ಪೊಸೆಸಿವ್‌ನೆಸ್ ಕಾರಣ! ಈ ಪೆಡಂಭೂತಕ್ಕೆ ಪರಿಹಾರ ಇದ್ಯಾ?

ಕಥೆಯಲ್ಲಿ ಬದಲಾವಣೆ ಆಗತ್ತಾ?

ಸೋಶಿಯಲ್ ಮೀಡಿಯಾದಲ್ಲಿ ಜಯಂತ್‌ಗೆ ಮೊದಲೇ ಮದುವೆ ಆಗಿತ್ತು, ಮೊದಲ ಪತ್ನಿ ಯಾರು ಅಂತೆಲ್ಲ ಪೋಸ್ಟ್‌ಗಳು ಹರಿದಾಡುತ್ತಿವೆ. ಧಾರಾವಾಹಿಯಲ್ಲಿ ಮಾತ್ರ ಜಯಂತ್‌ಗೆ ಮದುವೆ ಆಗಿತ್ತು ಅಂತ ಎಲ್ಲಿಯೂ ಹೇಳಿಲ್ಲ. ಆದರೆ ಈ ಪೋಸ್ಟ್‌ಗಳ ಥರ ಕಥೆಯಲ್ಲಿ ಬದಲಾವಣೆ ಆದರೂ ಆಗಬಹುದು.


Seetha Raama Serial: ರಾಮ್ ಮದುವೆಯಾಗೋ ಹುಡುಗಿ ಹೆಸರು ಘೋಷಿಸಿದ ಭಾರ್ಗವಿ; 'ಭೂತದ ಬಾಯಲ್ಲಿ ಭಗವದ್ಗೀತೆ'ನಾ?

ಏನಾಗಿರಬಹುದು?

ಜಯಂತ್‌ಗೆ ಮೊದಲೇ ಮದುವೆ ಆಗಿರಬಹುದು, ಹೆಂಡ್ತಿ ಬಿಟ್ಟುಹೋಗಿರಬಹುದು. ಜಯಂತ್‌ಗೆ ಇರುವ ಅತಿಯಾದ ಪೊಸೆಸ್ಸಿವ್‌ನೆಸ್‌ನಿಂದ ಅವಳು ಅವನಿಂದ ದೂರ ಹೋಗಿರಬಹುದು. ಈ ಸೈಕೋ ಅವನ ಮೊದಲ ಪತ್ನಿಯನ್ನು ಸಾಯಿಸಿದರೂ ಆಶ್ಚರ್ಯವಿಲ್ಲ. ಸಾಮಾನ್ಯವಾಗಿ ಧಾರಾವಾಹಿಗಳಲ್ಲಿ ನಾಯಕಿ ಒಳ್ಳೆಯವಳಾಗಿರುತ್ತಾಳೆ, ನಾಯಕ ಕೆಲವೊಮ್ಮೆ ಕೆಟ್ಟವನಾಗಿರುತ್ತಾನೆ. ಹಾಗಾಗಿ ಇಲ್ಲಿ ಜಯಂತ್‌ಗೆ ಮೊದಲೇ ಮದುವೆ ಆಗಿದ್ದರೂ ಆಶ್ಚರ್ಯಪಡುವಂತಹದ್ದು ಏನೂ ಇಲ್ಲ.


ಸದ್ಯ ಜಾಹ್ನವಿಗೆ ತನ್ನ ಗಂಡ ಸೈಕೋ ಎನ್ನೋದು ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಅವಳು ಇದಕ್ಕೆ ಕಾರಣ ಏನು ಎಂದು ಹುಡುಕಿಕೊಂಡು ಹೋಗುವಾಗ ಅವಳಿಗೆ ಸತ್ಯದರ್ಶನ ಆಗಬಹುದು. ಜಯಂತ್‌ಗೆ ಮದುವೆಯಾಗಿರುವ ಥರ ಈ ಧಾರಾವಾಹಿ ನಿರ್ದೇಶಕರು ಸ್ಕ್ರಿಪ್ಟ್ ಡೆವಲಪ್ ಮಾಡಿಕೊಂಡು ಹೋದರೂ ಅಶ್ಚರ್ಯವಿಲ್ಲ. ಈಗತಾನೇ ಈ ಧಾರಾವಾಹಿ ಶುರುವಾಗಿದೆ, ಮುಂದಿನ ದಿನಗಳಲ್ಲಿ ಕಥೆಯೊಳಗಿನ ಸಂಕೀರ್ಣತೆ ಒಂದೊಂದಾಗಿ ತೆರೆದುಕೊಳ್ಳುತ್ತ ಹೋಗುತ್ತದೆ.



ಧಾರಾವಾಹಿ ಕಥೆ ಏನು?

ಜಯಂತ್‌ ಎನ್ನುವ ಅನಾಥ, ಶ್ರೀಮಂತನೊಬ್ಬ ಮಧ್ಯಮವರ್ಗದ ಜಾಹ್ನವಿಯನ್ನು ಮದುವೆ ಆಗಿದ್ದಾನೆ. ಜಯಂತ್ ಪಾತ್ರ ತುಂಬ ವಿಭಿನ್ನವಾಗಿದೆ. ಒಳ್ಳೆಯವನ ಥರ ಮುಖವಾಡ ಹಾಕಿಕೊಂಡಿರುವ ಜಯಂತ್ ಪತ್ನಿ ವಿಷಯದಲ್ಲಿ ಮಾತ್ರ ಮೃಗನ ಥರ ಆಡ್ತಾನೆ. ಜಯಂತ್ ಅಸಲಿ ಮುಖ ಏನು ಅಂತ ಇನ್ನೂ ಜಾನುಗೆ ಅರ್ಥ ಆಗಿಲ್ಲ.


ಪಾತ್ರಧಾರಿಗಳು

ಜಯಂತ್- ದೀಪಕ್ ಸುಬ್ರಹ್ಮಣ್ಯ

ಜಾಹ್ನವಿ-ಚಂದನಾ ಅನಂತಕೃಷ್ಣ
ಲೇಖಕರ ಬಗ್ಗೆ
ಪದ್ಮಶ್ರೀ ಭಟ್
ವಿಜಯ ಕರ್ನಾಟಕ' ವೆಬ್‌ನಲ್ಲಿ ಸಿನಿಮಾ ಪತ್ರಕರ್ತೆಯಾಗಿ 2019ರಿಂದ ಪದ್ಮಶ್ರೀ ಭಟ್ ಕಾರ್ಯನಿರ್ವಹಿಸುತ್ತಿದ್ದಾರೆ. ಇದಕ್ಕೂ ಮುನ್ನ ರಾಜ್ಯಮಟ್ಟದಲ್ಲಿ ಪತ್ರಿಕೆಯಲ್ಲಿ ಕೆಲಸ ಮಾಡಿದ ಅನುಭವ ಇವರಿಗೆ ಇದೆ. 'ವಿಜಯ ಕರ್ನಾಟಕ' ವೆಬ್‌ನಲ್ಲಿ ಲೇಖನಗಳನ್ನು ಬರೆಯುವುದರ ಜೊತೆಗೆ ಸೆಲೆಬ್ರಿಟಿಗಳ ಸಂದರ್ಶನಗಳನ್ನು ಮಾಡುತ್ತಿದ್ದಾರೆ. ಪುಸ್ತಕ ಓದುವುದು, ಪ್ರವಾಸ ಪದ್ಮಶ್ರೀ ಅವರ ಇಷ್ಟದ ಹವ್ಯಾಸಗಳು.... ಇನ್ನಷ್ಟು ಓದಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ