ಆ್ಯಪ್ನಗರ

ತೀವ್ರ ಸಂಕಷ್ಟದಲ್ಲಿ 'ಮಹಾಭಾರತ'ದ ಇಂದ್ರ ಸತೀಶ್ ಕೌಲ್! ಈ ದುಸ್ಥಿತಿಗೆ ಕಾರಣ ಆದವರು ಯಾರು?

ಕಿರುತೆರೆಯಲ್ಲಿ ಮರು ಪ್ರಸಾರಗೊಂಡು ದಾಖಲೆ ಬರೆದ 'ಮಹಾಭಾರತ' ಧಾರಾವಾಹಿ ತಂಡಕ್ಕೆ ಖುಷಿಯ ನಡುವೆಯೇ ಒಂದು ಬ್ಯಾಡ್‌ ನ್ಯೂಸ್‌ ಕೇಳಿಬಂದಿದೆ. ಇದರಲ್ಲಿ ಇಂದ್ರನ ಪಾತ್ರ ಮಾಡಿದ್ದ ಕಲಾವಿದ ಈಗ ಒಂದು ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿಯಲ್ಲಿದ್ದಾರೆ.

Vijaya Karnataka Web 22 May 2020, 2:09 pm
ಮಹಾಭಾರತ ಧಾರಾವಾಹಿಯಲ್ಲಿ ಇಂದ್ರದೇವನ ಪಾತ್ರ ಮಾಡಿದ್ದರು ನಟ ಸತೀಶ್‌ ಕೌಲ್‌. ಒಂದು ಕಾಲದಲ್ಲಿ ಅಭಿಮಾನಿಗಳ ದಂಡು, ಅಪಾರ ಜನಪ್ರಿಯತೆ, ಐಷಾರಾಮಿ ಜೀವನ ಕೂಡ ಅವರದ್ದಾಗಿತ್ತು. ಪಂಜಾಬಿ ಸಿನಿಮಾ ಮತ್ತು ಕಿರುತೆರೆಯಲ್ಲಿ ಅವರು ಮಿಂಚಿದ್ದರು. ಆದರೆ ಈಗ ತೀವ್ರ ಸಂಕಷ್ಟಕ್ಕೆ ಒಳಗಾಗಿ ಆರ್ಥಿಕ ಸಹಾಯವನ್ನು ಎದುರು ನೋಡುತ್ತಿದ್ದಾರೆ.
Vijaya Karnataka Web ಮಹಾಭಾರತ ಧಾರಾವಾಹಿ ಸತೀಶ್‌ ಕೌಲ್‌


ಸತೀಶ್‌ ಕೌಲ್‌ ನಡೆಸುತ್ತಿದ್ದ ನಟನಾ ಶಾಲೆ ಮುಚ್ಚಿದ ಬಳಿಕ ಅವರಿಗೆ ಕಷ್ಟಗಳು ಶುರುವಾದವು. ಇತ್ತೀಚಿನ ವರ್ಷಗಳಲ್ಲಿ ವೃದ್ಧಾಶ್ರಮದಲ್ಲಿ ಅವರು ಕಾಲ ಕಳೆಯುತ್ತಿದ್ದರು ಎನ್ನಲಾಗಿತ್ತು. ಈಗ ಲೂಧಿಯಾನದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದಾರೆ. 'ನನ್ನ ಆರೋಗ್ಯ ಸುಧಾರಿಸುತ್ತಿದೆ. ಆದರೆ ದಿನ ನಿತ್ಯದ ಕರ್ಚುಗಳನ್ನು ನಿಭಾಯಿಸುವುದು ಕಷ್ಟ ಆಗಿದೆ. ದಿನಸಿ ಮತ್ತು ಔಷಧಿ ಖರೀದಿಸಲು ಸಾಧ್ಯವಾಗುತ್ತಿಲ್ಲ' ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಲಾಕ್ಡೌನ್‌ ಶುರುವಾಗುವುದಕ್ಕೂ ಮುನ್ನ ಸತೀಶ್‌ ಕೌಲ್ ಜೀವನ ಹೇಗೋ ನಡೆಯುತ್ತಿತ್ತು. ಆದರೆ ಈಗ ಪರಿಸ್ಥಿತಿ ಸಂಪೂರ್ಣ ಬಿಗಡಾಯಿಸಿದೆ. ಹಿಂದಿ ಮತ್ತು ಪಂಜಾಬಿ ಸೇರಿ 300ಕ್ಕೂ ಅಧಿಕ ಸಿನಿಮಾಗಳಲ್ಲಿ ಅವರು ಬಣ್ಣ ಹಚ್ಚಿದ್ದರು. ಈಗ ಚಿತ್ರರಂಗದವರಿಂದ ಏನಾದರೂ ಆರ್ಥಿಕ ಸಹಾಯ ಸಿಗಬಹುದು ಎಂಬ ನಿರೀಕ್ಷೆಯಲ್ಲಿದ್ದಾರೆ ಸತೀಶ್‌ ಕೌಲ್‌.

ಮಹಾಭಾರತ ಧಾರಾವಾಹಿ ಶೂಟಿಂಗ್‌ ಸೆಟ್‌ನಲ್ಲಿ ಬಿಕ್ಕಿ ಬಿಕ್ಕಿ ಅತ್ತಿದ್ದ ಕಲಾವಿದರು ಮತ್ತು ತಂತ್ರಜ್ಞರು!

2011ರಲ್ಲಿ ಸತೀಶ್‌ ಕೌಲ್‌ ನಟನಾ ಶಾಲೆ ಶುರುಮಾಡಿದ್ದರು. ಆದರೆ ಅದು ಯಶಸ್ವಿ ಆಗಲಿಲ್ಲ. 2015ರಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಿದ್ದ ಅವರಿಗೆ ಬೆನ್ನು ಮೂಳೆ ಮುರಿದಿತ್ತು. ಅದಕ್ಕಾಗಿ ಎರಡೂವರೆ ವರ್ಷ ಆಸ್ಪತ್ರೆಯಲ್ಲೇ ಚಿಕಿತ್ಸೆ ಪಡೆಯಬೇಕಾಯಿತು. ನಂತರ ಎರಡು ವರ್ಷ ವೃದ್ಧಾಶ್ರಮದಲ್ಲಿ ವಾಸವಾಗಿದ್ದರು. 73ರ ಪ್ರಾಯದ ಅವರು ಈಗಲೂ ನಟಿಸುವ ಉತ್ಸಾಹ ಹೊಂದಿದ್ದಾರಂತೆ.

'ಮಹಾಭಾರತ'ದ ದ್ರೌಪದಿ ಮೇಲೂ ಆಗಿತ್ತು ಗುಂಪು ಹಲ್ಲೆ! ಶಾಕಿಂಗ್‌ ಘಟನೆಯ ವಿವರ ಬಹಿರಂಗ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ