ಆ್ಯಪ್ನಗರ

ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ 'ಮಹಾಭಾರತ' ಧಾರಾವಾಹಿಯ ಅರ್ಜುನ ಪಾತ್ರಧಾರಿ ಶಾಹೀರ್ ಶೇಖ್!

'ಮಹಾಭಾರತ' ಧಾರಾವಾಹಿಯಲ್ಲಿ ಅರ್ಜುನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ನಟ ಶಾಹೀರ್ ಶೇಖ್ ಅವರು ಪ್ರಿಯತಮೆ ಜೊತೆ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. ಈ ಬಗ್ಗೆ ಅವರೇ ಟೈಮ್ಸ್ ಆಫ್ ಇಂಡಿಯಾಕ್ಕೆ ಮಾಹಿತಿ ನೀಡಿದ್ದಾರೆ.

THE TIMES OF INDIA NEWS SERVICE 27 Nov 2020, 2:12 pm
'ಮಹಾಭಾರತ' ಧಾರಾವಾಹಿಯಲ್ಲಿ ಅರ್ಜುನ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಶಾಹೀರ್ ಶೇಖ್ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ನಿರ್ಮಾಪಕಿ ಏಕ್ತಾ ಕಪೂರ್ ಅವರ ಪ್ರೊಡಕ್ಷನ್ ಹೌಸ್‌ನಲ್ಲಿ ಕೆಲಸ ಮಾಡುತ್ತಿರುವ ರುಚಿಕಾ ಕಪೂರ್ ಜೊತೆ ಶಾಹೀರ್ ಮದುವೆ ನಡೆದಿದೆ. ಕೆಲ ದಿನಗಳ ಹಿಂದೆ ರುಚಿಕಾ ಹಾಗೂ ಶಾಹೀರ್ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದಾರೆ.
Vijaya Karnataka Web mahabharat serial shaheer sheikh court marriage with ruchika kapoor
ರಿಜಿಸ್ಟರ್ ಮ್ಯಾರೇಜ್ ಮಾಡಿಕೊಂಡ 'ಮಹಾಭಾರತ' ಧಾರಾವಾಹಿಯ ಅರ್ಜುನ ಪಾತ್ರಧಾರಿ ಶಾಹೀರ್ ಶೇಖ್!


ಜೂನ್ ತಿಂಗಳಲ್ಲಿ ಸಾಂಪ್ರದಾಯಿಕ ಮದುವೆ!

2021ರ ಜೂನ್ ತಿಂಗಳಲ್ಲಿ ಸಾಂಪ್ರದಾಯಿಕವಾಗಿ ಇವರಿಬ್ಬರ ಮದುವೆ ನಡೆಯಲಿದೆ. ಶಾಹೀರ್ ಮನೆ ಜಮ್ಮುವಿನಲ್ಲಿ ಮದುವೆ ನಡೆಯಲಿದೆ. ಮುಂಬೈನ ರುಚಿಕಾ ಮನೆಯಲ್ಲಿ ಕೂಡ ಕೆಲ ಮದುವೆ ಶಾಸ್ತ್ರಗಳು ನಡೆಯಲಿದೆ. ಇತ್ತೀಚೆಗೆ ರುಚಿಕಾ ಜೊತೆಗಿನ ಫೋಟೋವನ್ನು ಶಾಹೀರ್ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ರುಚಿಕಾ ಬಗ್ಗೆ ಶಾಹೀರ್ ಮಾತು!

'ರುಚಿಕಾ ತುಂಬ ಪ್ರಾಮಾಣಿಕಳು. ನಾವು ಮೊದಲು ಸ್ನೇಹಿತೆರಾಗಿದ್ದೆವು ಅನ್ನೋದು ಒಳ್ಳೆಯ ವಿಷಯ. ನಟನಾಗಿ ಕ್ಯಾಮರಾ ಮುಂದೆ ಎಲ್ಲ ಸಮಯದಲ್ಲೂ ನಟಿಸುತ್ತೇನೆ. ನಿಜ ಜೀವನದಲ್ಲಿ ನನಗೆ ಇಷ್ಟವಾಗುವ ಸಂಗಾತಿ ಸಿಕ್ಕಿರೋದು ಖುಷಿ ವಿಷಯ. ನನಗೆ ಕೊನೆಗೂ ಸರಿಯಾದ ಸಂಗಾತಿ ಸಿಕ್ಕಿರೋದು ತುಂಬ ಸಂತಸ ತರುತ್ತದೆ. ಅವಳ ಜೊತೆ ಮುಂದಿನ ಜೀವನ ನಡೆಸಲು ಉತ್ಸುಕದಿಂದಿದ್ದೇನೆ' ಎಂದು ಶಾಹೀರ್ ಶೇಖ್ ಅವರು 'ಟೈಮ್ಸ್ ಆಫ್ ಇಂಡಿಯಾ'ಕ್ಕೆ ಹೇಳಿದ್ದಾರೆ.

ಶಾಹೀರ್ ಶೇಖ್ ಬಗ್ಗೆ ರುಚಿಕಾ ಹೇಳಿದ್ದೇನು?

'ಶಾಹೀರ್ ಶೇಖ್ ಅವರ ಸರಳತೆ, ಮಾನವೀಯತೆ ನನಗೆ ತುಂಬ ಇಷ್ಟ ಆಯ್ತು. ಜನರಲ್ಲಿ ಈ ರೀತಿಯ ಒಳ್ಳೆಯ ಗುಣ ಸಿಗೋದು ತುಂಬ ಅಪರೂಪ. ನಾವಿಬ್ಬರೂ ಬೇರೆ ಬೇರೆ ಹಿನ್ನಲೆಯಿಂದ ಬಂದವರು. ನಮ್ಮಲ್ಲಿರುವ ವ್ಯತ್ಯಾಸಗಳ ಕಡೆಗೆ ಗಮನ ಕೊಡುವುದನ್ನು ಬಿಟ್ಟು ಅದನ್ನು ಆಚರಣೆಗೆ ತರುವುದು ಸೂಕ್ತ ಅಂತ ನಿರ್ಧಾರಕ್ಕೆ ಬಂದೆವು' ಎಂದು ಶಾಹೀರ್ ಶೇಖ್ ಹೇಳಿದ್ದಾರೆ.

Also Read-ಪ್ರೇಯಸಿ ಪರಿಚಯ ಮಾಡಿಕೊಟ್ಟ 'ಮಹಾಭಾರತ' ಧಾರಾವಾಹಿ ಅರ್ಜುನ ಪಾತ್ರಧಾರಿ ಶಾಹೀರ್ ಶೇಖ್!

ರುಚಿಕಾ ಯಾರು?

ಏಕ್ತಾ ಕಪೂರ್ ಪ್ರೊಡಕ್ಷನ್ ಹೌಸ್‌ನಲ್ಲಿ ರುಚಿಕಾ ಕಪೂರ್ ಕ್ರಿಯೇಟಿವ್ ಪ್ರೊಡ್ಯುಸರ್, ಎಕ್ಸಿಕ್ಯೂಟಿವ್ ವಾಯ್ಸ್ ಪ್ರೆಸಿಡೆಂಟ್ ಆಗಿ ಕೆಲಸ ಮಾಡುತ್ತಿದ್ದಾರೆ. ಶಾಹೀರ್ ಶೇಕ್ ಹಾಗೂ ರುಚಿತಾ ಅನೇಕ ಪ್ರಾಜೆಕ್ಟ್‌ಗಳಲ್ಲಿ ಒಟ್ಟಾಗಿ ಕೆಲಸ ಮಾಡಿದ್ದಾರೆ. ಇನ್ನು ಏಕ್ತಾ ಕಪೂರ್ ಅವರ ಬಹುಮುಖ್ಯವಾದ ಶೋಗಳಲ್ಲಿ ರುಚಿಕಾ ಕೆಲಸ ಮಾಡಿದ್ದರು.

Also Read-'ಮಹಾಭಾರತ' ಧಾರಾವಾಹಿ ವೀಕ್ಷಕರಿಗೊಂದು ಬೇಸರದ ಸುದ್ದಿ: ಏನದು?

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ