ಆ್ಯಪ್ನಗರ

​ಮುಗಿಯಿತು 'ಮಜಾ ಟಾಕೀಸ್‌' ಪಯಣ

ವೀಕೆಂಡ್‌ ಬಂದರೆ ಸಾಕು ಸೃಜನ್‌ ಲೋಕೇಶ್‌ ನಿರೂಪಣೆಯ 'ಮಜಾ ಟಾಕೀಸ್‌' ನೋಡಲು ಪ್ರೇಕ್ಷಕರು ಹೆಚ್ಚು ಆಸಕ್ತಿ ತೋರುತ್ತಿದ್ದರು.

Vijaya Karnataka Web 10 Oct 2017, 3:08 pm
ವೀಕೆಂಡ್‌ ಬಂದರೆ ಸಾಕು ಸೃಜನ್‌ ಲೋಕೇಶ್‌ ನಿರೂಪಣೆಯ 'ಮಜಾ ಟಾಕೀಸ್‌' ನೋಡಲು ಪ್ರೇಕ್ಷಕರು ಹೆಚ್ಚು ಆಸಕ್ತಿ ತೋರುತ್ತಿದ್ದರು. ಆದರೆ ಈಗ 'ಮಜಾ ಟಾಕೀಸ್‌' ಮುಕ್ತಾಯದ ಹಂತಕ್ಕೆ ತಲುಪಿದ್ದು, ಕನ್ನಡ ಪ್ರೇಕ್ಷಕರ ಬೇಸರಕ್ಕೆ ಕಾರಣವಾಗಿದೆ.
Vijaya Karnataka Web maja talkies comes to an end
​ಮುಗಿಯಿತು 'ಮಜಾ ಟಾಕೀಸ್‌' ಪಯಣ


ಕನ್ನಡದಲ್ಲಿ ಹೆಚ್ಚು ಜನಪ್ರಿಯತೆ ಪಡೆದ ಶೋಗಳಲ್ಲಿ 'ಮಜಾ ಟಾಕೀಸ್‌' ಸಹ ಒಂದು. ಅಪರ್ಣಾ, ವಿ.ಮನೋಹರ್‌ ಹಾಗೂ ಇಂದ್ರಜಿಲ್‌ ಲಂಕೇಶ್‌ರಂತಹ ಗಂಭೀರ ಸ್ವಭಾವದ ವ್ಯಕ್ತಿಗಳನ್ನು ಬೇರೆಯದೇ ರೀತಿಯಲ್ಲಿ ತೋರಿಸಿದ ಕಾರ್ಯಕ್ರಮ ಇದು. ಅದೇ ರೀತಿ ಕಿರುತೆರೆ ತಾರೆ ಶ್ವೇತಾ ಚೆಂಗಪ್ಪಾ, ದಯಾನಂದ್‌, ಪವನ್‌, ವಂದನ, ರೇಮೋ, ಮಂಡ್ಯ ರಮೇಶ್‌ ಮತ್ತು ಕುರಿ ಪ್ರತಾಪ್‌ ಅವರನ್ನೊಳಗೊಂಡ ಈ ಅಪರೂಪದ ತಂಡ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುವಲ್ಲಿ ಯಶಸ್ವಿಯಾಗಿದೆ.

ಪ್ರಾರಂಭದಲ್ಲಿ ಒಂದಿಷ್ಟು ಮಿಶ್ರ ಪ್ರತಿಕ್ರಿಯೆಗಳನ್ನು ಎದುರಿಸಿದ ಈ ತಂಡ ಕ್ರಮೇಣ ಎಲ್ಲರ ಮನಸ್ಸಿನಲ್ಲಿ ಜಾಗ ಪಡೆದಿದ್ದು ಪ್ರಶಂಸನೀಯ. ಈ ಕಾರ್ಯಕ್ರಮಕ್ಕೆ ಬರುವ ಎಲ್ಲ ಅತಿಥಿಗಳು ಸಖತ್‌ ಎಂಜಾಯ್‌ ಮಾಡಿ ಹೋಗಿದ್ದಂತೂ ಸುಳ್ಳಲ್ಲ. ಕಿಚ್ಚ ಸುದೀಪ್‌, ಪುನೀತ್‌ ರಾಜ್‌ಕುಮಾರ್‌, ದರ್ಶನ್‌, ಶಿವರಾಜಕುಮಾರ್‌ ಅವರಂತಹ ಸ್ಯಾಂಡಲ್‌ವುಡ್‌ ದಿಗ್ಗಜರನ್ನು ಸೃಜನ್‌ 'ಮಜಾ ಟಾಕೀಸ್‌'ಗೆ ಕರೆತಂದು ಭರ್ಜರಿ ಮನರಂಜನೆ ನೀಡಿದ್ದನ್ನು ಪ್ರೇಕ್ಷಕರು ಹೇಗೆ ತಾನೆ ಮರೆಯಲು ಸಾಧ್ಯ?



ಎರಡನೂರಕ್ಕು ಹೆಚ್ಚು ಎಪಿಸೋಡ್‌ಗಳನ್ನು ನೀಡಿದ ಒಂದು ಉತ್ತಮ ಶೋ ಇದೀಗ ಮುಕ್ತಾಯವಾಗುತ್ತಿರುವುದು ಪ್ರೇಕ್ಷಕರ ಬೇಸರಕ್ಕೆ ಕಾರಣವಾಗಿದೆ. ಈ ವಿಷಯ ಸುಮಾರು ಜನರಿಗೆ ಅಸಮಾಧಾನ ಉಂಟು ಮಾಡಿದ್ದು, ಶೋ ಮುಂದುವರೆಸಬೇಕು ಎಂಬ ಕೂಗು ಕೇಳಿಬರುತ್ತಿದೆ. 'ಮಜಾ ಟಾಕೀಸ್‌'ನ ಗ್ರ್ಯಾಂಡ್‌ ಫಿನಾಲೆ ಕಾರ್ಯಕ್ರಮ ಬೆಂಗಳೂರಿನ ನ್ಯಾಷನಲ್‌ ಕಾಲೇಜ್ ಗ್ರೌಂಡ್ಸ್‌ನಲ್ಲಿ ಅದ್ಧೂರಿಯಾಗಿ ಜರುಗಿದೆ.

ಇತ್ತ ಸೃಜನ್‌ ಲೋಕೇಶ್‌ ಸಹ ತಮ್ಮ ಫೇಸ್‌ಬುಕ್‌ ಪೇಜ್‌ನಲ್ಲಿ ಶೋ ಮುಕ್ತಾಯದ ಬಗ್ಗೆ ಬರೆದುಕೊಂಡಿದ್ದಾರೆ. ಎಲ್ಲರ ಪ್ರೋತ್ಸಾಹಕ್ಕೆ ಧನ್ಯವಾದ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ