ಆ್ಯಪ್ನಗರ

ಮನಸಾರೆ ಧಾರಾವಾಹಿ ಮೂಲಕ ಆಸೆ ಈಢೇರಿಸಿಕೊಂಡ ನಟಿ ಪ್ರಿಯಾಂಕಾ ಚಿಂಚೋಳಿ!

ಉದಯ ಟಿವಿಯಲ್ಲಿ 'ಮನಸಾರೆ' ಧಾರಾವಾಹಿಯಲ್ಲಿನ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ. ಇದರ ಜೊತೆಗೆ ಯುವ ಪ್ರೀತಿಯನ್ನು ಪ್ರಾರ್ಥನಾ ಒಪ್ಪಿಕೊಳ್ತಾಳಾ ಎಂಬುದು ಕೂಡ ಬಹಿರಂಗವಾಗಲಿದೆ. ಪ್ರಾರ್ಥನಾ ಪಾತ್ರಧಾರಿ ಬಿಳಿ ಗೌನ್ ತೊಟ್ಟು ಮಿಂಚಿದ್ದಾರೆ.

Vijaya Karnataka Web 7 Sep 2020, 8:27 pm
ಇಂದು ಉದಯ ಟಿವಿಯಲ್ಲಿ 'ಕಾವ್ಯಾಂಜಲಿ' ಹಾಗೂ 'ಮನಸಾರೆ' ಧಾರಾವಾಹಿಯ 'ಮಹಾಸಂಗಮ' ಪ್ರಸಾರವಾಗಲಿದೆ. ಈ ಧಾರಾವಾಹಿ ಒಟ್ಟಾಗಿ ಮೂಡಿಬರುತ್ತಿದ್ದುದನ್ನು ನೋಡಲು ಪ್ರೇಕ್ಷಕರು ಕಾಯುತ್ತಿದ್ದಾರೆ. ಇದರ ಬಗ್ಗೆ ನಟಿ ಪ್ರಿಯಾಂಕಾ ಚಿಂಚೋಳಿ 'ಟೈಮ್ಸ್ ಆಫ್ ಇಂಡಿಯಾ'ಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.
Vijaya Karnataka Web manasaare kannada serial update will prarthana accept yuvas love
ಮನಸಾರೆ ಧಾರಾವಾಹಿ ಮೂಲಕ ಆಸೆ ಈಢೇರಿಸಿಕೊಂಡ ನಟಿ ಪ್ರಿಯಾಂಕಾ ಚಿಂಚೋಳಿ!


ಕಾವ್ಯಾಂಜಲಿ ತಂಡದ ಬಗ್ಗೆ ಪ್ರಿಯಾಂಕಾ ಹೇಳುವುದೇನು?

'ನಾವು ಒಂದೇ ವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದರೂ ಕೂಡ ಬೇರೆ ಬೇರೆ ಧಾರಾವಾಹಿ ತಂಡದವರನ್ನು ಮೀಟ್ ಮಾಡಲಾಗೋದಿಲ್ಲ. 'ಕಾವ್ಯಾಂಜಲಿ' ಕಲಾವಿದರ ಜೊತೆಗೆ ನಟಿಸಿದ್ದು ನಿಜಕ್ಕೂ ಚೆನ್ನಾಗಿತ್ತು. 'ಕಾವ್ಯಾಂಜಲಿ' ತಂಡದ ಹೀರೋ ತಾಯಿ ವೇದಾ ಅವರ ಹುಟ್ಟುಹಬ್ಬವಿತ್ತು. ಹೀಗಾಗಿ ನಾವೆಲ್ಲರೂ ಹಾಡು ಹಾಡು, ಡಾನ್ಸ್ ಮಾಡಿ, ಆಟ ಆಡಿದೆವು. 'ಕಾವ್ಯಾಂಜಲಿ' ತಂಡದವರು ತುಂಬ ಒಳ್ಳೆಯವರು' ಎಂದು ಪ್ರಿಯಾಂಕಾ ಹೇಳಿದ್ದಾರೆ.

ಬಿಳಿ ಬಣ್ಣದ ಗೌನ್‌ನಲ್ಲಿ ಮಿಂಚಿದ್ದ ಪ್ರಿಯಾಂಕಾ

'ಬಿಳಿ ಬಣ್ಣದ ಉದ್ದದ ಗೌನ್ ಧರಿಸಿದ್ದ ನಾನು ತುಂಬ ಥ್ರಿಲ್ ಆಗಿದ್ದೆ. ಇದೊಂಥರ ಕಾಲ್ಪನಿಕ ಲುಕ್ ನೀಡುತ್ತಿತ್ತು. ಹೀಗೆ ರೆಡಿಯಾಗಬೇಕು ಎಂದು ನಾನು ಕೂಡ ಅಂದುಕೊಂಡಿದ್ದೆ. ನನಗಂತೂ ತುಂಬ ಖುಷಿಯಾಯಿತು. ಬಿಳಿ ಗೌನ್ ಹಾಕಿ ನಾನು ಚೆನ್ನಾಗಿ ರೆಡಿಯಾಗಿದ್ದೆ. ಚಿತ್ರೀಕರಣ ಕೂಡ ತುಂಬ ಚೆನ್ನಾಗಿ ನಡೆಯಿತು. ನಿರ್ದೇಶನ ಮಾಡುವುದು ಸ್ವಲ್ಪ ಡಿಫರೆಂಟ್ ಆಗಿತ್ತು. ಅಸೋಸಿಯೇಟ್ಸ್ ಕೂಡ ತುಂಬ ಸಹಕಾರದಿಂದಿದ್ದರು' ಎಂದು ಪ್ರಿಯಾಂಕಾ ಹೇಳಿದ್ದರು.

Also Read-ಕನ್ನಡದ ಯಶಸ್ವಿ ಟಾಪ್ ಧಾರಾವಾಹಿಗಳ ಕಲಾವಿದರು ಈಗ ಏನು ಮಾಡುತ್ತಿದ್ದಾರೆ?

'ಮನಸಾರೆ' ಧಾರಾವಾಹಿಯಲ್ಲಿ ರೋಚಕ ತಿರುವು?
'ಮನಸಾರೆ' ಧಾರಾವಾಹಿಯಲ್ಲಿ ಪ್ರಾರ್ಥನಾ, ಯುವನನ್ನು ಪ್ರೀತಿಸುತ್ತಿದ್ದಾಳೆ. ಹೀಗಾಗಿ ಮುಂದಿನ ಎಪಿಸೋಡ್‌ಗಳು ತುಂಬ ಕುತೂಹಲಕಾರಿಯಾಗಿ ಇರಲಿವೆ. ವೇದಾ ಹುಟ್ಟಿದ ಹಬ್ಬದಂದು ಮನೆಯವರೆಲ್ಲ ಸೇರಿ ಪ್ಲಾನ್ ಮಾಡಿ, ವೇದಾ ಗೆಳೆಯನಾದ ಮನಸಾರೆ ಧಾರಾವಾಹಿಯ ಆನಂದ್ ಮಹೇಂದ್ರ ಮತ್ತು ಕುಟುಂಬದವರನ್ನು ಕರೆಸಿ ವೇದಾಳಿಗೆ ಸರ್ಪೈಸ್ ಕೊಡುತ್ತಾರೆ. ಇದರ ಮಧ್ಯೆ ಕಾವ್ಯಾ ಹಠಕ್ಕೆ ಅಂಜಲಿಯೂ ಕೂಡ ವೇದಾ ಮನೆಗೆ ಬರುವ ಸನ್ನಿವೇಶ ಎದುರಾಗುತ್ತದೆ. ಹಾಗೆ ಇನ್ನೊಂದೆಡೆ ಪ್ರಾರ್ಥನಾ ಕುಟುಂಬದೊಂದಿಗೆ ಯುವ ಕೂಡ ಅಲ್ಲಿಗೆ ಬರುವಂತಾಗುತ್ತದೆ. ವೇದಾ ಮತ್ತು ಅಂಜಲಿಯ ನಡುವೆ ಇರುವ ಶೀತಲ ಸಮರ ತಾರಕಕ್ಕೇರುತ್ತಾ? ಸುಶಾಂತ್‌ ಮನಸಿನ ಒದ್ದಾಟ ಅಂಜಲಿಗೆ ತಿಳಿಯುತ್ತಾ? ಪ್ರಾರ್ಥನಾ ಪ್ರೀತಿಗೆ ಕಾಯುತ್ತಿರುವ ಯುವನಿಗೆ ಪ್ರೀತಿಯ ಸಹಿ ಸಿಗುತ್ತಾ? ಎಂಬುದು ಈ ಮಹಾಸಂಗಮದಲ್ಲಿ ಹೊರಬೀಳಲಿದೆ.

Also Read-ಉದಯ ಟಿವಿಯ'ಕಸ್ತೂರಿ ನಿವಾಸ'& 'ಸೇವಂತಿ', ಮನಸಾರೆ ಧಾರಾವಾಹಿ ವೀಕ್ಷಕರಿಗೆ ಸಿಹಿ ಸುದ್ದಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ