ಆ್ಯಪ್ನಗರ

ತಮಿಳುನಾಡಿಗೂ ಹಬ್ಬಿದ 'ಮಂಗಳಗೌರಿ ಮದುವೆ' ಧಾರಾವಾಹಿಯ ಹವಾ!

ಕಲರ್ಸ್ ಕನ್ನಡ ವಾಹಿನಿಯ 'ಮಂಗಳಗೌರಿ ಮದುವೆ' ಧಾರಾವಾಹಿ ಈಗಾಗಲೇ ಸಾಕಷ್ಟು ಜನಪ್ರಿಯತೆ ಪಡೆದಿದೆ. ಈ ನಡುವೆ ಈ ಸೀರಿಯಲ್ ಖ್ಯಾತಿ ತಮಿಳುನಾಡಿಗೂ ವ್ಯಾಪಿಸಿದೆ. ಹಾಗಾದರೆ ಏನದು ? ಇಲ್ಲಿದೆ ಮಾಹಿತಿ

Vijaya Karnataka Web 26 Nov 2020, 4:19 pm
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಮಂಗಳಗೌರಿ ಮದುವೆ' ಈಗಾಗಲೇ ಸಾಕಷ್ಟು ಪ್ರಖ್ಯಾತಿ ಪಡೆದಿದೆ. ಅದ್ದರದ್ದೇ ಆದ ಅಭಿಮಾನಿ ವರ್ಗವನ್ನು ಕೂಡ ಸಂಪಾದಿಸಿಕೊಂಡಿದೆ. ಇನ್ನು ಈ ಧಾರಾವಾಹಿ ತಮಿಳಿನಲ್ಲಿಯೂ ಆರಂಭವಾಗುತ್ತಲಿದೆ.
Vijaya Karnataka Web mangala gowri maduve kannada serial remade in tamil language
ತಮಿಳುನಾಡಿಗೂ ಹಬ್ಬಿದ 'ಮಂಗಳಗೌರಿ ಮದುವೆ' ಧಾರಾವಾಹಿಯ ಹವಾ!


ತಮಿಳು ಭಾಷೆಯಲ್ಲಿ 'ಮಂಗಳಗೌರಿ ಮದುವೆ'

'ಸಿಲು ಒರು ಕಾದಲ್' ಹೆಸರಿನಲ್ಲಿ 'ಮಂಗಳಗೌರಿ ಮದುವೆ' ಧಾರಾವಾಹಿ ತಯಾರಾಗಿ ಪ್ರಸಾರವಾಗಲಿದೆ. ನಟ ಸಮೀರ್ ಅಹಾಮತು ಅವರು ಐಪಿಎಸ್‌ ಅಧಿಕಾರಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. 'ಪುಟ್ಟಗೌರಿ ಮದುವೆ' ಧಾರಾವಾಹಿಯ ಮುಂದುವರಿದ ಭಾಗವೇ 'ಮಂಗಳಗೌರಿ ಮದುವೆ' ಆಗಿದೆ. ಈಗಾಗಲೇ ಇದಕ್ಕೆ ಒಳ್ಳೆಯ ಟಿಆರ್‌ಪಿ ಬರುತ್ತಿದೆ.

ಮಂಗಳಗೌರಿ ಮದುವೆ ಕಥೆಯೇನು?

ಅಕಸ್ಮಾತ್ ಆಗಿ ಐಪಿಎಸ್ ಅಧಿಕಾರಿ ರಾಜೀವ್‌ನನ್ನು ಮಂಗಳಗೌರಿ ಮದುವೆಯಾಗುತ್ತಾಳೆ. ಆದರೆ ಈ ವಿಷಯ ರಾಜೀವನ ಮನೆಯವರಿಗೆ ತಿಳಿದಿರೋದಿಲ್ಲ. ರಾಜೀವನ ಮನೆಯಲ್ಲಿ ಮನೆಗೆಲಸದವರ ರೀತಿ ಇದ್ದು ಗಂಡನ ಪ್ರೀತಿಯನ್ನು ಆಕೆ ಪಡೆಯುತ್ತಾಳೆ. ಈ ನಡುವೆ ರಾಜೀವನ ಮನೆಯವರು ಮಂಗಳಗೌರಿಗೆ ಸಾಕಷ್ಟು ತೊಂದರೆ ಕೂಡ ಕೊಡುತ್ತಾರೆ. ಸ್ನೇಹ ಮತ್ತು ರಾಜೀವ ಒಬ್ಬರನ್ನೊಬ್ಬರು ಪ್ರೀತಿಸುತ್ತಿರುತ್ತಾರೆ. ರಾಜೀವನಿಗೆ ಮದುವೆಯಾದ ವಿಷಯ ಸ್ನೇಹಾಳಿಗೆ ಗೊತ್ತಾದರೆ ಆಕೆ ಸಹಿಸೋದಿಲ್ಲ. ಹೀಗಿದ್ದಾಗ ರಾಜೀವನಿಗೆ ನೆನಪಿನ ಶಕ್ತಿ ಹೋಗಿ ಮಂಗಳಗೌರಿ ಯಾರು ಅನ್ನೋದನ್ನು ಮರೆಯುತ್ತಾನೆ. ಹೀಗೆ ಕಥೆ ಸಾಗುತ್ತಿದೆ.

Also Read-ಚರ್ಚೆಗೆ ಕಾರಣವಾಯ್ತು 'ಮಂಗಳಗೌರಿ ಮದುವೆ' ಧಾರಾವಾಹಿ ತಂಡದ ಜೊತೆ 'ಅಮೃತವರ್ಷಿಣಿ' ಸೀರಿಯಲ್ ನಟಿ ಫೋಟೋ!

ಕಾವ್ಯಶ್ರೀ ಗೌಡ, ಗಗನ್ ಚಿನ್ನಪ್ಪ ನಟನೆ!

'ಮಂಗಳಗೌರಿ ಮದುವೆ' ಧಾರಾವಾಹಿಯಲ್ಲಿ ನಟಿ ಕಾವ್ಯಶ್ರೀ ಗೌಡ, ಗಗನ್ ಚಿನ್ನಪ್ಪ ಮುಂತಾದವರು ನಟಿಸುತ್ತಿದ್ದಾರೆ. 'ಪುಟ್ಟಗೌರಿ ಮದುವೆ' ಧಾರಾವಾಹಿಯಲ್ಲಿ ಅಜ್ಜಮ್ಮನ ಪಾತ್ರ ನಿಧನದ ನಂತರ ಈ ಸೀರಿಯಲ್ ಮುಕ್ತಾಯವಾಗುತ್ತದೆ ಎಂದು ಹೇಳಲಾಗಿತ್ತಾದರೂ ಕೂಡ 'ಮಂಗಳಗೌರಿ ಮದುವೆ' ಧಾರಾವಾಹಿ ಮೂಲಕ ಮತ್ತೆ ಈ ಕಥೆಯನ್ನು ಸ್ವಲ್ಪ ಬೇರೆಯದ್ದಾಗಿಯೇ ಮುಂದುವರಿಸಲಾಗಿದೆ.

Also Read-ಹೆಣ್ಣು ಮಗುವಿಗೆ ಜನ್ಮ ನೀಡಿದ 'ಮಂಗಳಗೌರಿ ಮದುವೆ' ಧಾರಾವಾಹಿ ನಟಿ ರಾಧಿಕಾ ಶ್ರವಂತ್!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ