ಆ್ಯಪ್ನಗರ

ಕಷ್ಟದ ಟೈಮ್‌ನಲ್ಲಿ ಸಾಧನೆ ಮಾಡಿದ 'ಮಿಥುನ ರಾಶಿ' ಧಾರಾವಾಹಿ; ಏನದು?

ಲಾಕ್‌ಡೌನ್ ಟೈಮ್‌ನಲ್ಲಿ ಸಾಲು ಸಾಲು ಧಾರಾವಾಹಿಗಳು ಅಂತ್ಯವಾಗಿದೆ. ಹೀಗಾಗಿ ಡಬ್ಬಿಂಗ್ ಧಾರಾವಾಹಿಗಳು ಕನ್ನಡ ಕಿರುತೆರೆ ಲೋಕದಲ್ಲಿ ರಾರಾಜಿಸುತ್ತಿವೆ, ಇಂತಹ ಕಷ್ಟದ ಸಮಯದಲ್ಲೂ 'ಮಿಥುನ ರಾಶಿ' ಧಾರಾವಾಹಿ ಸಾಧನೆ ಮಾಡಿದೆ. ಏನದು?

Vijaya Karnataka Web 7 Jul 2020, 2:32 pm
2019ರಲ್ಲಿ 'ಮಿಥುನ ರಾಶಿ' ಧಾರಾವಾಹಿ ಪ್ರಸಾರವಾಗಿತ್ತು. ಈಗ ಈ ಸೀರಿಯಲ್ 400 ಎಪಿಸೋಡ್ ಪೂರೈಸಿದೆ. ಮಿಥುನ್ ಮತ್ತು ರಾಶಿ, ಸುರಕ್ಷಾ, ಸಮರ್ಥ್ ಪಾತ್ರಗಳ ಮೇಲೆ ಈ ಧಾರಾವಾಹಿ ಕಥೆ ಸಾಗುತ್ತದೆ. ರಾಶಿ ಮತ್ತು ಸುರಕ್ಷಾ ಸಹೋದರಿಯರು.
Vijaya Karnataka Web mithuna raashi kannada serial completes 400 episodes
ಕಷ್ಟದ ಟೈಮ್‌ನಲ್ಲಿ ಸಾಧನೆ ಮಾಡಿದ 'ಮಿಥುನ ರಾಶಿ' ಧಾರಾವಾಹಿ; ಏನದು?


ರಿಕ್ಷಾ ಓಡಿಸುವ ಮನೆಯ ಜವಾಬ್ದಾರಿ ನಿಭಾಯಿಸುವ ರಾಶಿಯನ್ನು ಕಂಡರೆ ಮಿಥುನ್ ತಾಯಿಗೆ ತುಂಬ ಇಷ್ಟ. ಅಚಾನಕ್ ಆಗಿ ರಾಶಿ ಮನೆಯವರ ಒತ್ತಾಯದ ಮೇಲೆ ಮಿಥುನ್‌ಳನ್ನು ಮದುವೆಯಾಗಿ ಶ್ರೀಮಂತ ಮನೆಯ ಸೊಸೆಯಾಗುತ್ತಾಳೆ. ಸುರಕ್ಷಾ, ಸಮರ್ಥ್ ಪ್ರೀತಿ ಮಾಡುವ ನಾಟಕವಾಡುತ್ತಾಳೆ. ಆಕೆಗೆ ದುಡ್ಡು, ಆಸ್ತಿ ಮೇಲೆಯೇ ಕಣ್ಣು. ಯಾರಿಗೆ ಏನೇ ಆದರೂ ಚಿಂತೆಯಿಲ್ಲ, ತಾನು ಚೆನ್ನಾಗಿರಬೇಕು ಎಂದು ಅಂದುಕೊಳ್ಳುವ ಸ್ವಾರ್ಥಿ ಸುರಕ್ಷಾ ಆದರೆ ತನಗೇನಾದರೂ ಸಮಸ್ಯೆಯಿಲ್ಲ, ಅಕ್ಕ ಚೆನ್ನಾಗಿಬೇಕು, ಮನೆಯವರು ಚೆನ್ನಾಗಿರಬೇಕು ಅಂತ ರಾಶಿ ಬಯಸುತ್ತಾಳೆ. ಅಪ್ಪನನ್ನು ಕಳೆದುಕೊಂಡ ದುಃಖದಲ್ಲಿರುವ ಮಿಥುನ್‌ ಯಾವಾಗಲೂ ಕೋಪ ಮಾಡಿಕೊಳ್ಳುತ್ತಾನೆ.

ರಾಶಿಯನ್ನು ಸಿಕ್ಕಾಪಟ್ಟೆ ದ್ವೇಷ ಮಾಡುತ್ತಿದ್ದ ಮಿಥುನ್ ಈಗ ಅವಳನ್ನು ಗೊತ್ತೋ ಗೊತ್ತಿಲ್ಲದೆ ಪ್ರೀತಿಸಲು ಆರಂಭಿಸಿದ್ದಾನೆ. ರಾಶಿಗೂ ಕೂಡ ಮಿಥುನ್ ಕೋಪಿಷ್ಠನಾದರೂ ಒಳ್ಳೆಯವನು ಎಂದು ತಿಳಿದಿದೆ. ಈ ಜೋಡಿ ಒಂದಾಗಿ ನೂರು ಕಾಲ ಸುಖವಾಗಿ ಬಾಳಲಿ ಎಂದು ಮಿಥುನ್ ಮತ್ತು ರಾಶಿ ತಾಯಿ ಬಯಸುತ್ತಿದ್ದಾರೆ. ಆದರೆ ಸುರಕ್ಷಾ, ಕವಿತಾ ಮಾತ್ರ ಇವರೆಲ್ಲ ಮಿಥುನ್ ಮತ್ತು ರಾಶಿ ದೂರ ಮಾಡಿ ಆಸ್ತಿ ಹೊಡೆಯಲು ಪ್ಲ್ಯಾನ್ ಮಾಡಿದ್ದಾರೆ. ಯಾರ ಕುತಂತ್ರದ ಬಗ್ಗೆಯೂ ಅರಿವಿಲ್ಲದ ರಾಶಿ ಎಲ್ಲರನ್ನು ನಂಬಿದ್ದಾಳೆ. ಈಗ ರಾಶಿಗೆ ಏನೇ ಸಮಸ್ಯೆ ಆದರೂ ಕೂಡ ಮಿಥುನ್ ಅವಳಿಗೆ ಕಾಳಜಿ ತೋರಿಸುತ್ತಾನೆ, ಆರೈಕೆ ಮಾಡುತ್ತಾನೆ.

Also Read-ಅಗತ್ಯವಿದ್ದವರಿಗೆ ಸಹಾಯ ಮಾಡಲು ಮುಂದಾದ 'ಕನ್ನಡತಿ' ಧಾರಾವಾಹಿ ನಟ ಕಿರಣ್ ರಾಜ್‌!

ಮುಂದಿನ ದಿನಗಳಲ್ಲಿ ಸಮರ್ಥ್ ತನ್ನ ತಮ್ಮ ಎಂದು ಮಿಥುನ್‌ಗೆ ಗೊತ್ತಾದರೆ ಮಿಥುನ್ ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದು ಗೊತ್ತಿಲ್ಲ. ಮಿಥುನ್ ತಾಯಿ ಮಾತ್ರ ತನ್ನ ಎರಡನೇ ಮಗನ ಬರುವಿಕೆಗಾಗಿ ಕಾಯುತ್ತಿದ್ದಾಳೆ. ರಾಶಿ ಮತ್ತು ಮಿಥುನ್ ಒಂದಾಗುತ್ತಾರಾ? ಸಮರ್ಥ್ ತನ್ನ ಕುಟುಂಬವನ್ನು ಸೇರುತ್ತಾನಾ? ಸುರಕ್ಷಾ ಮತ್ತು ಕವಿತಾ ಕುತಂತ್ರ ಏನಾಗತ್ತೆ ಎಂಬುದೇ 'ಮಿಥುನ ರಾಶಿ' ಧಾರಾವಾಹಿಯ ಕಥೆ. ಈ ಧಾರಾವಾಹಿಯಲ್ಲಿ ರಾಶಿ ಪಾತ್ರಧಾರಿಗೆ ಶಂಕರ್ ನಾಗ್ ಕಂಡರೆ ತುಂಬ ಇಷ್ಟವಿರುತ್ತದೆ.

Also Read-ಜನಪ್ರಿಯ ಧಾರಾವಾಹಿ 'ಇವಳು ಸುಜಾತಾ' ಮುಕ್ತಾಯ! 'ಮಿಸ್ ಯೂ ಟೀಮ್' ಎಂದ ನಟಿ ಮೇಘಶ್ರೀ

ಸ್ವಾಮಿನಾಥನ್ ಅನಂತರಾಮನ್, ವೈಷ್ಣವಿ, ಹರಿಣಿ, ಕೋಳಿ ರಮ್ಯಾ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಕೋಳಿ ರಮ್ಯಾ 'ಮಿಥುನ ರಾಶಿ'ಯಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Also Read-ಇಂಥ ಕಷ್ಟದ ಟೈಮ್‌ನಲ್ಲೂ ಹೊಸ ಮೈಲಿಗಲ್ಲು ಸೃಷ್ಟಿಸಿದ 'ಬ್ರಹ್ಮಗಂಟು' ಧಾರಾವಾಹಿ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ