ಆ್ಯಪ್ನಗರ

'ಮುಕ್ತ' ಧಾರಾವಾಹಿ ನಟ ಅಜಯ್ ರಾಜ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ 'ಮಹಾದೇವಿ' ಸೀರಿಯಲ್ ನಟಿ ಪದ್ಮಿನಿ!

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ 'ಮಹಾದೇವಿ' ಧಾರಾವಾಹಿ ನಟಿ ಪದ್ಮಿನಿ ದೇವನಹಳ್ಳಿ ಅವರು ನಟ ಅಜಯ್ ರಾಜ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ಧಾರೆ. ಈ ಬಗ್ಗೆ ಈ ಲೇಖನದಲ್ಲಿ ಸಂಪೂರ್ಣ ಮಾಹಿತಿ ಇದೆ.

Authored byಟೀನಾ | Vijaya Karnataka Web 30 Oct 2020, 2:35 pm
ವರ್ಷಗಳ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ 'ಮಹಾದೇವಿ' ಎಂಬ ಭಕ್ತಿ ಪ್ರಧಾನ ಧಾರಾವಾಹಿ ಪ್ರಸಾರವಾಗುತ್ತಿತ್ತು. ಈ ಧಾರಾವಾಹಿಯಲ್ಲಿ ಜಾಜಿ ಪಾತ್ರ ಮಾಡಿ ಜನರ ಮನಸ್ಸು ಗೆದ್ದ ನಟಿ ಪದ್ಮಿನಿ ದೇವನಹಳ್ಳಿ ಅವರು ಈ ಪಾತ್ರದ ಮೂಲಕ ಮನೆ ಮಾತಾಗಿದ್ದರು. ಈಗ ಅವರು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
Vijaya Karnataka Web muktha serial actor ajay raj got married to mahadevi serial actress padmini
'ಮುಕ್ತ' ಧಾರಾವಾಹಿ ನಟ ಅಜಯ್ ರಾಜ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ 'ಮಹಾದೇವಿ' ಸೀರಿಯಲ್ ನಟಿ ಪದ್ಮಿನಿ!


ಪದ್ಮಿನಿ ದೇವನಹಳ್ಳಿ ಅವರ ಮದುವೆಯ ಬಗ್ಗೆ ಅಷ್ಟು ಮಾಹಿತಿಯಿಲ್ಲ. ಆದರೆ ಅವರು ನಟ ಅಜಯ್ ರಾಜ್ ಅವರನ್ನು ಮದುವೆಯಾಗಿದ್ದಾರೆ. ಇವರಿಬ್ಬರದು ಲವ್ ಮ್ಯಾರೇಜ್ ಅಥವಾ ಅರೇಂಜ್ ಮ್ಯಾರೇಜ್ ಬಗ್ಗೆ ಬಗ್ಗೆ ಕೂಡ ಮಾಹಿತಿಯಿಲ್ಲ. ಪದ್ಮಿನಿ ಪರಭಾಷೆಯಲ್ಲೂ ನಟಿಸಿದ್ದರು. ಕಳೆದ ವರ್ಷವೇ ಈ ಜೋಡಿಯ ನಿಶ್ಚಿತಾರ್ಥ ನಡೆದಿತ್ತು. ಕನ್ನಡ ಚಿತ್ರರಂಗದ ಕೆಲ ನಟ-ನಟಿಯರು ಈ ನಿಶ್ಚಿತಾರ್ಥದಲ್ಲಿ ಭಾಗಿಯಾಗಿದ್ದರು.

ಅಜಯ್‌ರಾಜ್‌ ಮುಕ್ತ ಧಾರಾವಾಹಿ ಮೂಲಕ ಗಮನ ಸೆಳೆದು, ಆಮೇಲೆ ತಮಿಳು ಮತ್ತು ಹಿಂದಿ ಚಿತ್ರರಂಗದಲ್ಲಿ ನಟರಾಗಿ ಗುರುತಿಸಿಕೊಂಡಿದ್ದಾರೆ. ಅಜಯ್ ರಾಜ್ ಕೂಡ ಕನ್ನಡದ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕೆಲ ತಿಂಗಳುಗಳ ಹಿಂದೆ ಅವರ ನಟನೆಯ 'ಮುಂದಿನ ನಿಲ್ದಾಣ' ಸಿನಿಮಾ ರಿಲೀಸ್ ಆಗಿತ್ತು. 'ಮುಂದುವರೆದ ಅಧ್ಯಾಯ' ಸಿನಿಮಾದಲ್ಲಿ ಅಜಯ್ ರಾಜ್ ಅವರು ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ.

Also Read-ಗಮನ ಸೆಳೆಯುತ್ತಿರುವ ಅಂಜಲಿ

ಪದ್ಮಿನಿ ತಂದೆ ಕೂಡ ನಾಟಕ ಮಾಡುತ್ತಿದ್ದರಿಂದ ಪದ್ಮಿನಿಗೂ ಕೂಡ ನಟನೆಗೆ ಕಡೆಗೆ ಒಲವು ಮೂಡಿತ್ತು. ಅವರ ತಂದೆಗೆ ಶ್ರುತಿ ನಾಯ್ಡು ಪರಿಚಯವಿದ್ದರಿಂದ ಪದ್ಮಿನಿ 'ಮಹಾದೇವಿ' ಧಾರಾವಾಹಿ ಆಡಿಶನ್‌ನಲ್ಲಿ ಭಾಗವಹಿಸಿದ್ದರು. ಇದರಲ್ಲಿ ಪದ್ಮಿನಿ ಆಯ್ಕೆಯಾಗಿ ಉತ್ತಮವಾಗಿ ನಟಿಸಿದ್ದರು. ಇನ್ನು ಪದ್ಮಿನಿ ಮನಃಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ. ಅಜಯ್ ರಾಜ್ ಹಾಗೂ ಪದ್ಮಿನಿ ಮದುವೆಗೆ ನಟಿ, ನಿರೂಪಕಿ ಕಾವ್ಯಾ ಶಾಸ್ತ್ರಿ ಆಗಮಿಸಿ, ನವಜೋಡಿಗೆ ಶುಭ ಹಾರೈಸಿದ್ದಾರೆ. ಈ ಜೋಡಿಯ ಮದುವೆಯ ಫೋಟೋವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

Also Read-ಗೊಂಬೆಗಳ ಲವ್‌ ನಂತರ ಆ್ಯಕ್ಷನ್‌ ಚಿತ್ರ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ