ನಟ ರಾಘವೇಂದ್ರ ಅವರು ಕನ್ನಡ ಕಿರುತೆರೆಯಲ್ಲಿ ಈಗಾಗಲೇ ಸಾಕಷ್ಟು ಜನಪ್ರಿಯತೆ ಪಡೆದಿದ್ದಾರೆ. 'ಮಿಸ್ಟರ್ & ಮಿಸ್ಸ್ ರಂಗೇಗೌಡ' ಧಾರಾವಾಹಿಯಲ್ಲಿ ಇವರು ಹೀರೋ ಆಗಿ ನಟಿಸಿದ್ದರು. ಪ್ರಸ್ತುತ ಅವರು ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುತ್ತಿರುವ 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಅದಕ್ಕೂ ಮೊದಲು ಇವರು 'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ನಟಿಸುತ್ತಿರುವ ವಿಚಾರ ಹಲವರಿಗೆ ಗೊತ್ತಿಲ್ಲ.
'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ನಟನೆ!
ರಂಗೇಗೌಡ ಪಾತ್ರದ ಮೂಲಕ ರಾಘವೇಂದ್ರ ಜನಪ್ರಿಯತೆ ಪಡೆದರು. ಇದಕ್ಕೂ ಮೊದಲು ಅವರು 'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಳೆಯ 'ರಾಧಾ ಕಲ್ಯಾಣ' ಸೀರಿಯಲ್ನಲ್ಲಿ ನಟ ಚಂದನ್ ಕುಮಾರ್, ಕೃತಿಕಾ ರವೀಂದ್ರ, ಚೈತ್ರಾ ರೈ, ಪ್ರವೀಣ್ ತೇಜ ಮುಂತಾದವರು ನಟಿಸಿದ್ದರು.
ಅಮೃತಾ ರಾಮಮೂರ್ತಿ ಮದುವೆಯಾಗಿರುವ ರಾಘವೇಂದ್ರ
'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ 25 ಎಪಿಸೋಡ್ ಪ್ರಸಾರವಾಗುತ್ತಿತ್ತು. ಇದರಿಂದಲೇ ಅವರು 'ಮಿಸ್ಟರ್ & ಮಿಸ್ಸ್' ಪ್ರಾಜೆಕ್ಟ್ ಗಳಿಸಿಕೊಂಡರು. ಈ ಸೀರಿಯಲ್ನಲ್ಲಿ ರಾಘವೇಂದ್ರಗೆ ಜೊತೆಯಾಗಿ ಅಮೃತಾ ರಾಮಮೂರ್ತಿ ನಟಿಸಿದ್ದರು. ಈ ರೀಲ್ ಲೈಫ್ ಜೋಡಿ ರಿಯಲ್ ಲೈಫ್ನಲ್ಲಿಯೂ ಕೂಡ ಒಂದಾಗಿದೆ. ಕೆಲ ತಿಂಗಳುಗಳ ಹಿಂದೆ ಇವರು ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ರಾಘವೇಂದ್ರ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
Also Read-ಜನರಿಗೆ ಈ ಟೈಮ್ನಲ್ಲಿ ತುಂಬ ಉಪಯುಕ್ತವಾದ ಮಾಹಿತಿ ನೀಡಿದ 'ಕುಲವಧು' ಧಾರಾವಾಹಿ ನಟಿ ಅಮೃತಾ
'ನಮ್ಮನೆ ಯುವರಾಣಿ'ಯಲ್ಲಿ ಸಾಕೇತ್ ಪಾತ್ರ ಮಾಡುತ್ತಿರುವ ರಾಘವೇಂದ್ರ
'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ರಾಘವೇಂದ್ರ ಅತ್ಯಂತ ಮಹತ್ವದ, ಜವಾಬ್ದಾರಿಯುತವಾದ ಪಾತ್ರ ನಿಭಾಯಿಸುತ್ತಿದ್ದಾರೆ. ಈಗ ಅವರು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಸಾಕೇತ್ ರಾಜಗುರು ಆಗಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. 'ಇಲ್ಲಿ ಮೀರಾ ಪಾತ್ರದ ಮೇಲೆ ಕಥೆ ಸಾಗುತ್ತದೆ. ಕುಟುಂಬದ ನಡುವೆ ಒಳ್ಳೆಯ ಸಾಮರಸ್ಯ, ಪ್ರೀತಿ, ಅನುಬಂಧ ಕಾಪಾಡಿಕೊಳ್ಳುವುದು ಮೀರಾ ಆಸೆ.
Also Read-'ಕುಲವಧು' ಧಾರಾವಾಹಿಯ ವಚನಾ ಖ್ಯಾತಿಯ ನಟಿ ಅಮೃತಾ ಗಂಡ ಕೂಡ ಜನಪ್ರಿಯ ನಟ: ಅವರಾರು?
'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ನಟನೆ!
ರಂಗೇಗೌಡ ಪಾತ್ರದ ಮೂಲಕ ರಾಘವೇಂದ್ರ ಜನಪ್ರಿಯತೆ ಪಡೆದರು. ಇದಕ್ಕೂ ಮೊದಲು ಅವರು 'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ ನೆಗೆಟಿವ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಹಳೆಯ 'ರಾಧಾ ಕಲ್ಯಾಣ' ಸೀರಿಯಲ್ನಲ್ಲಿ ನಟ ಚಂದನ್ ಕುಮಾರ್, ಕೃತಿಕಾ ರವೀಂದ್ರ, ಚೈತ್ರಾ ರೈ, ಪ್ರವೀಣ್ ತೇಜ ಮುಂತಾದವರು ನಟಿಸಿದ್ದರು.
ಅಮೃತಾ ರಾಮಮೂರ್ತಿ ಮದುವೆಯಾಗಿರುವ ರಾಘವೇಂದ್ರ
'ರಾಧಾ ಕಲ್ಯಾಣ' ಧಾರಾವಾಹಿಯಲ್ಲಿ 25 ಎಪಿಸೋಡ್ ಪ್ರಸಾರವಾಗುತ್ತಿತ್ತು. ಇದರಿಂದಲೇ ಅವರು 'ಮಿಸ್ಟರ್ & ಮಿಸ್ಸ್' ಪ್ರಾಜೆಕ್ಟ್ ಗಳಿಸಿಕೊಂಡರು. ಈ ಸೀರಿಯಲ್ನಲ್ಲಿ ರಾಘವೇಂದ್ರಗೆ ಜೊತೆಯಾಗಿ ಅಮೃತಾ ರಾಮಮೂರ್ತಿ ನಟಿಸಿದ್ದರು. ಈ ರೀಲ್ ಲೈಫ್ ಜೋಡಿ ರಿಯಲ್ ಲೈಫ್ನಲ್ಲಿಯೂ ಕೂಡ ಒಂದಾಗಿದೆ. ಕೆಲ ತಿಂಗಳುಗಳ ಹಿಂದೆ ಇವರು ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವ ಆಚರಿಸಿಕೊಂಡಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿರುವ ರಾಘವೇಂದ್ರ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.
Also Read-ಜನರಿಗೆ ಈ ಟೈಮ್ನಲ್ಲಿ ತುಂಬ ಉಪಯುಕ್ತವಾದ ಮಾಹಿತಿ ನೀಡಿದ 'ಕುಲವಧು' ಧಾರಾವಾಹಿ ನಟಿ ಅಮೃತಾ
'ನಮ್ಮನೆ ಯುವರಾಣಿ'ಯಲ್ಲಿ ಸಾಕೇತ್ ಪಾತ್ರ ಮಾಡುತ್ತಿರುವ ರಾಘವೇಂದ್ರ
'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ರಾಘವೇಂದ್ರ ಅತ್ಯಂತ ಮಹತ್ವದ, ಜವಾಬ್ದಾರಿಯುತವಾದ ಪಾತ್ರ ನಿಭಾಯಿಸುತ್ತಿದ್ದಾರೆ. ಈಗ ಅವರು 'ನಮ್ಮನೆ ಯುವರಾಣಿ' ಧಾರಾವಾಹಿಯಲ್ಲಿ ಸಾಕೇತ್ ರಾಜಗುರು ಆಗಿ ಕಿರುತೆರೆ ಪ್ರೇಕ್ಷಕರಿಗೆ ಹತ್ತಿರವಾಗಿದ್ದಾರೆ. 'ಇಲ್ಲಿ ಮೀರಾ ಪಾತ್ರದ ಮೇಲೆ ಕಥೆ ಸಾಗುತ್ತದೆ. ಕುಟುಂಬದ ನಡುವೆ ಒಳ್ಳೆಯ ಸಾಮರಸ್ಯ, ಪ್ರೀತಿ, ಅನುಬಂಧ ಕಾಪಾಡಿಕೊಳ್ಳುವುದು ಮೀರಾ ಆಸೆ.
Also Read-'ಕುಲವಧು' ಧಾರಾವಾಹಿಯ ವಚನಾ ಖ್ಯಾತಿಯ ನಟಿ ಅಮೃತಾ ಗಂಡ ಕೂಡ ಜನಪ್ರಿಯ ನಟ: ಅವರಾರು?